ಶ್ರೀನಿವಾಸಪುರ:ತಾಲೂಕಿನ ಯಲ್ದೂರಿನಲ್ಲಿ ಶ್ರದ್ಧಾ ಭಕ್ತಿಯಿಂದ ಗಂಗಮ್ಮ ಜಾತ್ರೆಯ ದೀಪೋತ್ಸವ ನಡೆಸಲಾಯಿತು,ಗ್ರಾಮದ ಶಕ್ತಿ ದೇವತೆಗಳ ದೇವಾಲಯಗಳಲ್ಲಿ ದೀಪೋತ್ಸವ ಕಾರ್ಯಕ್ರಮ ಆಯೋಜಿಸಿ ನಂತರ ಗಂಗಮ್ಮ ದೇವಾಲಯದ ಪೂಜಾರಿ ದೀಪ ಹೋತ್ತು ದೇವಾಲಯ ಸುತ್ತುತ್ತಾರೆ. ಯಲ್ದೂರು ನಡುಬಿದಿಯಲ್ಲಿರುವ ಗಂಗಮ್ಮ ದೇವಾಲಯದಲ್ಲಿ ಆನಾದಿಕಾಲದಿಂದಲೂ ಗ್ರಾಮದ ಆಚಾರದಂತೆ ಹೊಸ ಸಂವತ್ಸರ ಯುಗಾದಿ ನಂತರ ಬರುವ ಮೊದಲ ಸೋಮವಾರ ಗಂಗಮ್ಮನ ಜಾತ್ರೆ ಆಚರಿಸಿಕೊಂಡು ಬರಲಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು. ಗಂಗಜಾತ್ರೆ ಎಂದು ಆಚರಿಸುವ ಗಂಗಮ್ಮ ದೇವರ ಮೂಲಮೂರ್ತಿಗೆ ಅಭಿಷೇಕ ವಿವಿಧ ರೀತಿಯ ಬಣ್ಣದ ಹೂಗಳಿಂದ ಅಲಂಕಾರ ನೈವೇದ್ಯ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಕಷ್ಟ ಇದೆ ನಿವಾರಿಸು ತಾಯಿ ಎಂದು ಗಂಗಮ್ಮ ನಲ್ಲಿ ನಿವೇದಿಸಿಕೊಂಡರೆ ಕಷ್ಟಗಳನ್ನು ಗಂಗಮ್ಮ ತಾಯಿ ನೀವಾರಿಸುತ್ತಾಳೆ ಎಂಬುದು ಇಲ್ಲಿನ ಜನರ ನಂಬಿಕೆ.
ಕಷ್ಟ ಇದೆ ನಿವಾರಿಸು ತಾಯಿ ಎಂದು ಗಂಗಮ್ಮ ನಲ್ಲಿ ನಿವೇದಿಸಿಕೊಂಡರೆ ಕಷ್ಟಗಳನ್ನು ಗಂಗಮ್ಮ ತಾಯಿ ನೀವಾರಿಸುತ್ತಾಳೆ ಎಂಬುದು ಇಲ್ಲಿನ ಜನರ ನಂಬಿಕೆ.ಉತ್ತಮ ಮಳೆ ಬೆಳೆಯಾಗುತ್ತದೆ,ಗ್ರಾಮದ ಜನರನ್ನು ಸುರಕ್ಷತೆಯಿಂದ ಕಾಪಾಡುತ್ತಾಳೆ ಎಂದು ನಂಬಿ ಹರಿಕೆ ಹೊತ್ತ ಗ್ರಾಮಸ್ಥರು ಭಕ್ತಿ ಭಾವದಿಂದ ಶಕ್ತಾನುಸಾರ ಗಂಗಮ್ಮ ದೇವರಿಗೆ ತಂಬಿಟ್ಟು ಹಾರತಿ ಸಮರ್ಪಿಸಿ ಧನ್ಯರಾಗುತ್ತಾರೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27