ಶ್ರೀನಿವಾಸಪುರ: ಪಾಲ್ಗುಣ ಮಾಸದ ಹುಣ್ಣಿಮೆಯಂದು ತಾಲೂಕಿನ ಬಹುತೇಕ ಕಡೆ ರಟೋತ್ಸವಗಳು ನಡೆಯುವುದು ಇಲ್ಲಿನ ಆಚರಣೆ ಪ್ರಮುಖವಾಗಿ ಶ್ರೀನಿವಾಸಪುರದ ಪಟ್ಟಣದ ಪ್ರಸಿದ್ದ ಶ್ರೀ ವರದ ಬಾಲಾಂಜನೇಯ ಕ್ಷೇತ್ರದಲ್ಲಿ ಸಂಭ್ರಮದಿಂದ ರಥೋತ್ಸವ ನಡೆಯಿತು.ಕಳೆದ ಎರಡು ವರ್ಷಗಳಿಂದ ರಥೋತ್ಸವ ನಡೆದಿರಲಿಲ್ಲ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ರಥೋತ್ಸವದಲ್ಲಿ ಪಾಲ್ಗೋಂಡಿದ್ದು ವಿಶೇಷವಾಗಿತ್ತು. ವೈಖಾನಸ ಆಗಮ ಶಾಸ್ತ್ರಙ್ಞ ಶೇಷಾದ್ರಿ ಅವರ ನೇತೃತ್ವದಲ್ಲಿ ಕಲ್ಯಾಣೋತ್ಸವ,ರಥೋತ್ಸವ ಕಾರ್ಯಕ್ರಮಗಳು ನಡೆಯಿತು.
ರಥೋತ್ಸವ ಕಾರ್ಯಕ್ರಮದಲ್ಲಿ ಶ್ರೀ ವರದ ಬಾಲಾಂಜನೇಯ ಕ್ಷೇತ್ರದ ಸಂಚಾಲಕ ಗೋಫಿನಾಥರಾವ್ ಶಾಸಕ ರಮೇಶ್ ಕುಮಾರ್,ಮಾಜಿ ಶಾಸಕ ವೆಂಕಟಶಿವಾರೆಡ್ಡಿ, ಇತಿಹಾಸ ತಜ್ಞ ಪ್ರೊ.ನರಸಿಂಹನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿನಾರಯಣಸ್ವಾಮಿ, ಹಳೇಪೇಟೆ ಮಂಜು ಮುಂತಾದವರು ಪಾಲ್ಗೋಂಡಿದ್ದರು.
ನಂಬಿಹಳ್ಳಿ ರಥೋತ್ಸವ
ತಾಲೂಕಿನ ನಂಬಿಹಳ್ಳಿಯ ಕೇಂದ್ರವಾಗಿ ಸುತ್ತಲಿನ ಐದು ಗ್ರಾಮಗಳಲ್ಲಿ ಪಂಚಲಿಂಗ ಕ್ಷೇತ್ರಗಳು ಇಲ್ಲಿದ್ದು ಶ್ರೀ ಪ್ರಸನ್ನ ಸೋಮೇಶ್ವರ ಈ ಭಾಗದಲ್ಲಿ ವಿಶೇಷ ಖ್ಯಾತಿ.ಐತಿಹಾಸಿಕ ಶ್ರೀ ಪ್ರಸನ್ನ ಸೋಮೇಶ್ವರ ದೇವರ ರಥೋತ್ಸವ ನಡೆಯಿತು ಇದರ ಅಂಗವಾಗಿ ಜನ ಜಾತ್ರೆ ನಡೆಯಿತು
ತಾಲೂಕಿನ ಕೋಟಬಲ್ಲಪಲ್ಲಿ ಶ್ರೀಲಕ್ಷ್ಮೀನರಸಿಂಹ ದೇವರ ರಥೋತ್ಸವ ನಡೆಯಿತು ಅರ್ಚಕ ಅರುಣ್ ಕುಮಾರ್, ರಥೋತ್ಸವ ಕಾರ್ಯಕ್ರಮ ನಡೆಸಿಕೊಟ್ಟರು.
Trending
- ದ್ವೇಷ ಬೇಡ,ಎಲ್ಲರಿಗೂ ಬಾಗಿಲು ತೆರೆದಿದೆ.ಜೆಡಿಎಸ್ ಕಾರ್ಯಕರ್ತರಿಗೆ CM ಡಿಕೆಶಿ ಆಹ್ವಾನ!
- ಕರ್ನಾಟಕದಿಂದ ರಾಜ್ಯಸಭೆಗೆ ಆಂಧ್ರದ ಶರ್ಮಿಳಾ ಹೆಸರು ಪರಿಗಣನೆಗೆ!
- ಶ್ರೀನಿವಾಸಪುರ:ಹೈವೇ ರಸ್ತೆಯಲ್ಲಿ ಬಾರಿ ವಾಹನಗಳ ಅಪಾಯಕಾರಿ ಪಾರ್ಕಿಂಗ್!
- ಶ್ರೀನಿವಾಸಪುರ:ಟಾಟಾ ಇಂಡಿಕಾ ಕಾರು ಡಿಕ್ಕಿ ದ್ವಿಚಕ್ರ ವಾಹನ ಸವಾರರ ಸಾವು!
- social media ದಲ್ಲಿ ಫೇಮಸ್ ಆಯಿತು ಯುವಕನ ಗಹಗಹಿಸಿ ನಗು!
- ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ”ಬೈಕ್ ಟ್ಯಾಕ್ಸಿ”ವಿರುದ್ದ ಕ್ರಮ ಜರುಗಿಸಿ!
- ಶ್ರೀನಿವಾಸಪುರ:ಎಂ.ಜಿ.ರಸ್ತೆ ಅತಿವೇಗದ ಬೈಕ್ ಚಾಲನೆ ಅಪಘಾತ ನಾಲ್ವರಿಗೆ ಗಾಯ!
- ಅಗ್ರಿಗೋಲ್ಡ್ ಸಂತ್ರಸ್ತರಿಗೆ ಆರು ತಿಂಗಳೊಳಗೆ ನ್ಯಾಯ ಒದಗಿಸುವಂತೆ AP ಸಿಎಂ ಸೂಚನೆ!
Sunday, June 7



