ಶ್ರೀನಿವಾಸಪುರ:ದೇವರ ಪೂಜೆ ಹವನ ಹೋಮ ನಮ್ಮ ಹಿರಿಕರು ಹಾಕಿಕೊಟ್ಟ ಸಂಸ್ಕೃತಿ ಎಂದು ಶ್ರೀ ಅನ್ನುಪೂರ್ಣೆಶ್ವರಿ ಮಹಿಳಾ ಮಂಡಳಿ ಪ್ರತಿನಿಧಿಗಳು ಹೇಳುತ್ತಾರೆ ಅವರು ನವರಾತ್ರಿ ಅಂಗವಾಗಿ ತಮ್ಮ ಮಂಡಳಿಯಲ್ಲಿ ದಸರ ಬೊಂಬೆ ಕೂರಿಸಿ ದುರ್ಗಾದೇವಿಯನ್ನು ಪ್ರತಿಷ್ಠಾಪಿಸಿ ಒಂಬತ್ತು ದಿನಗಳ ಕಾಲ ಸಂಪ್ರದಾಯದಂತೆ ನವದುರ್ಗೆ ವೈಭವ ಎನ್ನುವ ರಿತಿಯಲ್ಲಿ ಪ್ರತಿದಿನ ವೈಶಿಷ್ಠವಾಗಿ ವಿವಿಧ ರೂಪದಲ್ಲಿ ಅಲಂಕರಿಸಿ ಪೂಜೆ ಸಲ್ಲಿಸುತ್ತಾರೆ ಅದರಂತೆ ಬಾಲತ್ರಿಪುರ ಸುಂದರಿ ದೇವಿ ರೂಪದಲ್ಲೂ ಪೂಜೆ ಸಲ್ಲಿಸುವುದು ಪದ್ದತಿ ಎಂದು ಮಹಿಳಾ ಮಂಡಳಿ ಪ್ರತಿನಿಧಿ ವಿನಿತಾಶ್ರೀನಿವಾಸನ್ ಹೇಳುತ್ತಾರೆ.
ದುರ್ಗಾದೇವಿಯನ್ನು ತ್ರಿಪುರಸುಂದರಿ, ಬಾಲಾತ್ರಿಪುರ ಸುಂದರಿ, ಮತ್ತು ತ್ರಿಪುರ ಭೈರವಿ ಎಂಬ ಮೂರು ರೂಪಗಳಲ್ಲಿ ಪೂಜಿಸಲಾಗುತ್ತದೆ ತ್ರಿಪುರ ಬಾಲಾ ಸುಂದರಿ ಯುವ ಕನ್ಯೆಯ ದೇವತೆಯ ಪ್ರತಿನಿಧಿಯಾಗಿ ಸಣ್ಣ ವೈಯಸ್ಸಿನ ಹೆಣ್ಮಕ್ಕಳನ್ನು ಕೂರಿಸಿ ಅಲಂಕಾರ ಮಾಡಿ ಬಾಲ ತ್ರಿಪುರ ಸುಂದರಿ ಪ್ರತೀಕ ಎಂದು ಪೂಜೆ ಸಲ್ಲಿಸುವುದು ಹಿರಿಯರು ಹಾಕಿಕೊಟ್ಟಂತ ಆದ್ಯಾತ್ಮಿಕ ಸಂಪ್ರದಾಯ ಎಂದು ವಿವರಿಸುತ್ತಾರೆ.ಅದರಂತೆ ವೈಶಿಷ್ಠತೆಯಿಂದ ಅಲಂಕಾರ ಮಾಡಿದ ಹೆಣ್ಮಗುವನ್ನು ಕೂರಿಸಿ ಆಕೆಯನ್ನು ದೇವರೆಂದು ಪೂಜಿಸಲಾಗುತ್ತದೆ ಹಿರಿಯರಾದಿಯಾಗಿ ಆಕೆಗೆ ಪೂಜೆ ಸಲ್ಲಿಸಿ ಆಶಿರ್ವಾದ ಪಡೆಯುವುದು ವಾಡಿಕೆ.ಪೂಜಾ ಕಾರ್ಯಕ್ರಮದಲ್ಲಿ ಮಹಿಳಾ ಮಂಡಳಿ ಸದಸ್ಯರಾದ ವನಜಾಕ್ಷ್ಮಮ್ಮ,ಮಾಲಿನಿಸುರೇಶ್,ಸಹನಾಶಿವಕುಮಾರ್,ಧನಲಕ್ಷ್ಮಿ ಮುಂತಾದವರು ಇದ್ದರು.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



