ಕೋಲಾರ:ಕೋಲಾರ ಕ್ಷೇತ್ರದ ಮುಖಂಡರು,ಕಾರ್ಯಕರ್ತರ ಪ್ರೀತಿ ಅಭಿಮಾನವನ್ನು ತಿರಸ್ಕರಿಸಲು ಸಾಧ್ಯವಿಲ್ಲ,ಹಾಗಾಗಿ ನಾನು ಮುಂಬರುವಂತ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಿಂದಲೇ ಸ್ಪರ್ಧೆಮಾಡುತ್ತೇನೆ,ಈ ಕುರಿತು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅನುಮೋದನೆ ತೆಗೆದುಕೊಳ್ಳಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ದೆ ಮಾಡುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದರು.ಅವರು ಕೋಲಾರ ನಗರದ ಜೂನಿಯರ್ ಕಾಲೇಜು ಮಿನಿ ಕ್ರೀಡಾಂಗಣದಲ್ಲಿ ಸೋಮವಾರ ಜರುಗಿದ ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ,ರಮೇಶ್ ಕುಮಾರ್, ಕೋಲಾರದ ಹಾಲಿ ಶಾಸಕ ಶ್ರೀನಿವಾಸಗೌಡ, ಕೃಷ್ಣಬೈರೇಗೌಡ ಸೇರಿದಂತೆ ಹಲವಾರು ಶಾಸಕರು ಮುಖಂಡರು ಸೇರಿದಂತೆ ಬಹುತೇಕ ಎಲ್ಲರೂ ಇಲ್ಲಿಯೇ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಆದರೆ ಕ್ಷೇತ್ರದ ಜನರು ಮುಖ್ಯ ನಂತರ ನಾಯಕರುಗಳು ಜನರ ಆಶೀರ್ವಾದ ಇದ್ದರೆ ನಾವು ಉಳಿಯಬಹುದು. ನಾನು ಕೆಲ ದಿನಗಳ ಹಿಂದೆ ಕೋಲಾರದ ದೇವಸ್ಥಾನ ಮಸೀದಿ ಚರ್ಚ್ಗೆ ಭೇಟಿ ಮಾಡಿದ್ದಾಗ ಇಲ್ಲಿನ ಜನತೆ ಸಹ ಇಲ್ಲಿಯೇ ಸ್ಪರ್ಧೆ ಮಾಡುವಂತೆ ಒತ್ತಾಯಿಸಿದರು…
Author: Srinivas_Murthy
ನ್ಯೂಜ್ ಡೆಸ್ಕ್: ಕೋಲಾರದಲ್ಲಿ ಸೋಮವಾರ ಆಯೋಜಿಸಿರುವ ಮಾಜಿ ಮುಖ್ಯಮಂತ್ರಿ,ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ದಿಸುವ ಕುರಿತಾಗಿ ಶಕ್ತಿ ಪ್ರದರ್ಶನದ ಸಭೆಗೆ ಮಾಜಿ ಸ್ಪೀಕರ್ ರಮೇಶಕುಮಾರ್ ಶ್ರೀನಿವಾಸಗೌಡ ನೇತೃತ್ವದಲ್ಲಿ ಭರದ ಸಿದ್ದತೆ ನಡೆಯುತ್ತಿದ್ದರೆ ಅತ್ತ ಕೋಲಾರದ ಸಭೆಗೆ ಬರವುದಕ್ಕೂ ಮುಂಚಿತವಾಗಿ ಸಿದ್ದರಾಮಯ್ಯ ಕೋಲಾರದ ಮಾಜಿ ಸಂಸದ ಮುನಿಯಪ್ಪ ಅವರ ಬೆಂಗಳೂರಿನ ಸಂಜಯ್ ನಗರದ ಮನೆಗೆ ತೆರಳಿ ಅವರನ್ನು ಭೇಟಿಮಾಡಿ ಮಾತುಕತೆ ನಡೆಸಿದರು.ಈ ಮೂಲಕ ಮಾಜಿ ಸಂಸದ ಮುನಿಯಪ್ಪನವರ ಮುನಿಸು ಶಮನ ಮಾಡುವ ಪ್ರಯತ್ನದ ಮೂಲಕ ಕೋಲಾರದ ಕಾಂಗ್ರೆಸ್ ಕಾರ್ಯಕರ್ತರಿಗೆ ಮುಖಂಡರ ನಡುವೆ ಯಾವುದೆ ಭಿನ್ನಮತ ಇಲ್ಲ ಎಂಬ ಸಂದೇಶ ರವಾನಿಸಿ ಕೋಲಾರಕ್ಕೆ ಬರುತ್ತಿರುವುದು ಸಿದ್ದರಾಮಯ್ಯ ಕೋಲಾರದಲ್ಲಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತ ಎನ್ನುವಂತಾಗಿದೆ.ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೋಲಾರದ ಮಾಜಿ ಸಂಸದ,ಕೇಂದ್ರದ ಮಾಜಿ ಸಚಿವ ಮುನಿಯಪ್ಪ ಅವರ ಬೆಂಗಳೂರಿನ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಮಾಜಿ ಸಚಿವ ಎಂ.ಆರ್. ಸೀತಾರಾಂ,ಮಾಜಿ ಸಂಸದ ಚಂದ್ರಪ್ಪ,ಮಾಜಿ ಶಾಸಕ ನಾರಾಯಣ ಸ್ವಾಮಿ,ವಿಧಾನಪರಿಷತ್ ಸದಸ್ಯ…
ಶ್ರೀನಿವಾಸಪುರ: ತಮಿಳುನಾಡಿನ ಮೆಲ್ ಮರವತ್ತೂರು ಓಂ ಶಕ್ತಿ ಅಮ್ಮನ ದೇವಾಲಯಕ್ಕೆ ತೆರಳಲು ಶ್ರೀನಿವಾಸಪುರದ ಓಂ ಶಕ್ತಿ ಮಾಲಧಾರಿ ಭಕ್ತರಿಗೆ ಸಮಾಜ ಸೇವಕ ಗುಂಜೂರು ಶ್ರೀನಿವಾಸರೆಡ್ದಿ ಬಸ್ಸುಗಳನ್ನು ವ್ಯವಸ್ಥೆ ಮಾಡಿರುತ್ತಾರೆ.ಇದುವರಿಗೂ ಸಾವಿರಾರು ಭಕ್ತರು ನೂರಾರು ಬಸ್ಸುಗಳಲ್ಲಿ ತಮಿಳುನಾಡಿನ ಮೆಲ್ ಮರವತ್ತೂರು ಓಂ ಶಕ್ತಿ ಅಮ್ಮನ ದೇವಾಲಯಕ್ಕೆ ಹೋಗಿಬರಲು ತಾಲೂಕಿನ ವಿವಿಧ ಭಾಗದ ಭಕ್ತಾಧಿಗಳಿಗೆ ಅವಕಾಶ ಕಲ್ಪಿಸಿರುವುದಾಗಿ ಗುಂಜೂರು ಶ್ರೀನಿವಾಸರೆಡ್ದಿ ಹೇಳಿದರು. ಭಕ್ತಾಧಿಗಳು ತಮಿಳುನಾಡಿನ ಮೆಲ್ ಮರವತ್ತೂರು ಓಂ ಶಕ್ತಿಅಮ್ಮನ ದೇವಾಲಯಕ್ಕೆ ತೆರಳುವ ಸಂದರ್ಭದಲ್ಲಿ ಶುಭಹಾರೈಸಿ ಮಾತನಾಡಿದ ಅವರು ಭಕ್ತರಿಗೆ ಅವಕಾಶ ಕಲ್ಪಿಸಲು ಜನರೆ ನನಗೆ ಪ್ರೇರಣೆ ಎಂದ ಅವರು ವ್ರತಾಚರಣೆ ನಮ್ಮ ಸಂಸೃತಿಯ ಪ್ರತಿಕ,ಓಂ ಶಕ್ತಿ ಮಾಲಧಾರಿ ವ್ರತಾಚರಣೆ ಮಾಡುವಂತ ಭಕ್ತರನ್ನು ಪಕ್ಷ ಜಾತಿ ಬೇದ ಇಲ್ಲದೆ ಲೋಕಕಲ್ಯಾಣಾರ್ಥವಾಗಿ ಎಲ್ಲರೀಗೂ ಉಚಿತವಾಗಿ ಬಸ್ ವ್ಯವಸ್ಥೆ ಮಾಡುತ್ತಿರುವುದಾಗಿ ಹೇಳಿದರು.ಜನವರಿ ಮುಂದಿನ ವಾರದ ತನಕ ಬಸ್ ವ್ಯವಸ್ಥೆ ಇರುವುದಾಗಿ ತಿಳಿಸಿದರು.ಈ ಸಂದರ್ಬದಲ್ಲಿ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಪೆದ್ದರೆಡ್ಡಿ ರಾಜೇಂದ್ರಪ್ರಸಾದ್,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅತ್ತಿಕುಂಟೆರಾಜಶೇಖರೆಡ್ದಿ ಶ್ರೀರಾಮ್,ಯಲ್ದೂರು…
ಶ್ರೀನಿವಾಸಪುರ: ಶ್ರೀನಿವಾಸಪುರ ಪಟ್ಟಣದ ಪ್ರಮುಖ ರಸ್ತೆಯಾಗಿರುವ ಎಂ.ಜಿ.ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಅವರೇಕಾಯಿ ಮಂಡಿಗಳ ವಹಿವಾಟು ನಡೆಸುತ್ತಿದ್ದು ವಾಹನಗಳು,ಅಂಬುಲೆನ್ಸ್ ಹಾಗೂ ಶಾಲಾ ವಾಹನಗಳು ಓಡಾಡಲು ತೊಂದರೆಯಾಗುತ್ತಿದ್ದು ಅವರೆಮಂಡಿ ವಹಿವಾಟನ್ನು ಎ ಪಿ ಎಂ ಸಿ ಮಾರುಕಟ್ಟೆಗೆ ವರ್ಗಾಯಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ವತಿಯಿಂದ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿರುತ್ತಾರೆ. ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಪುರಸಭೆ ಕಚೇರಿಯ ಮುಂದೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಕೋಲಾರ ಜಿಲ್ಲಾಧ್ಯಕ್ಷ ಸುಬ್ರಮಣಿ ಮಾತನಾಡಿ ಅವರೆ ಮಂಡಿ ವ್ಯಾಪರದಿಂದ ಮೂರನಾಲ್ಕು ಜನರಿಗೆ ಅನಕೂಲವಾಗಿದ್ದಾರೆ ನೂರಾರು ಜನರಿಗೆ ತೊಂದರೆ ಆಗಿದೆ ಎಂದು ದೂರಿದರು. ರಾಜಕೀಯ ಲಾಭಕ್ಕಾಗಿ ಅವರೆಮಂಡಿ ದಲ್ಲಾಲರಿಗೆ ರಸ್ತೆಯಲ್ಲಿ ವಹಿವಾಟು ನಡೆಡಸಲು ಅವಕಾಶ ನೀಡಿರುವಂತ ರಾಜಕೀಯ ವ್ಯವಸ್ಥೆ ವಿರುದ್ದ ತೀವ್ರಧಾಟಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಅವರು ಅಧಿಕಾರಿಗಳ ನಿರ್ಲಿಪ್ತತೆಯಿಂದ ವ್ಯವಸ್ಥೆ ಹಾಳಾಗುತ್ತಿರುವುದು ಪಟ್ಟಣದ ಅಭಿವೃದ್ಧಿಗೆ ಮಾರಕ ಎಂದರು.ಚಿಂತಾಮಣಿ ರಸ್ತೆ ವಿಳಂಬಕ್ಕೂ ಆಕ್ರೋಶಎಂ.ಜಿ.ರಸ್ತೆಯ ಇಂದಿರಾ ಭವನ್ ವೃತ್ತದಿಂದ ರಾಜಾಜಿ ರಸ್ತೆಯ…
ಶ್ರೀನಿವಾಸಪುರ:ಶ್ರೀನಿವಾಸಪುರ ತಾಲೂಕು ಕಚೇರಿಯಲ್ಲಿ ಕೆಲಸ ಆಗಬೇಕು ಎಂದರೆ ದಲ್ಲಾಳಿಗಳ ಮೂಲಕ ಸಾಧ್ಯವಾಗುತ್ತದೆ ದಲ್ಲಾಳಿಗಳು ಇಲ್ಲಾಂದ್ರೆ ಜನಸಾಮನ್ಯರ ಕೆಲಸ ಕಾರ್ಯಗಳು ಆಗುವುದಿಲ್ಲ ಎಂದು ರೈತರು ದೂರಿದರು ತಾಲೂಕಿನ ರೋಣೂರು ಹೋಬಳಿ ಅಲವಾಟ ಗ್ರಾಮದ ಕೆಲ ರೈತರು ತಾಲೂಕು ಆಫೀಸ್ ಭೂ ದಾಖಲೆಗಳ ಶಾಖೆಯಲ್ಲಿ.(ರೆಕಾರ್ಡ್ ಸೆಕ್ಷನ್)ದಾಖಲೆಗಳನ್ನು ಪಡೆದುಕೊಳ್ಳಲು ಕಳೆದ 7-8 ತಿಂಗಳಿನಿಂದ ತಿರುಗಾಡುತ್ತಿದ್ದರು ಇಲ್ಲಿ ಕಾರ್ಯನಿರ್ವಹಿಸುತ್ತಿರುವರು ಸ್ಪಂದಿಸುತ್ತಿಲ್ಲ ಎಂದು ದೂರಿದರು.ತಾಲ್ಲೂಕು ಕಚೇರಿಯಲ್ಲಿ ಕೆಲಸ ಮಾಡಿಸಿಕೊಳ್ಳಬೇಕು ಎಂದರೆ ಬಿಳಿ ಖದರ್ ಬಟ್ಟೆ ತೊಟ್ಟು ಬರಬೇಕು ಇಲ್ಲಾಂದ್ರೆ ದಲ್ಲಾಳಿಗಳ ಮೂಲಕ ಹಣ ನೀಡಿದರೆ ಮಾತ್ರ ಇಲ್ಲಿ ಕೆಲಸ ಕಾರ್ಯಗಳು ಸಲಿಸಾಗಿ ಆಗುತ್ತದೆ ಎಂದು ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ತಾಲೂಕು ಆಫೀಸ್ ನಲ್ಲಿ ಇಂತಹ ಸೇಕ್ಷನ್ ಗೆ ಅಂತ ವಿವಿಧ ರೀತಿಯ ದಲ್ಲಾಳಿಗಳು ಇರುತ್ತಾರೆ,ಅವರ ಮೂಲಕವೆ ಇಲ್ಲಿ ಎಲ್ಲವೂ ನಡೆಯುತ್ತದೆ ಎಂದು ಆರೋಪಿಸಿದ ರೈತರು ಇಲ್ಲಿನ ಅಧಿಕಾರಿಗಳು ತಾವೆ ಖುದ್ದು ದಲ್ಲಾಳಿಗಳನ್ನು ನೇಮಿಸಿಕೊಂಡಂತೆ ಇದೆ.ರೈತನ ಜೀವನ ಸಂಪೂರ್ಣವಾಗಿ ತಾಲೂಕು ಕಚೇರಿ ಮೇಲೆ ಅಧಾರವಾಗಿರುತ್ತದೆ ತಮ್ಮ ಜಮೀನುಗಳ ವಿಚಾರವಾಗಿ ಕಂದಾಯ…
ಶ್ರೀನಿವಾಸಪುರ:ರೈತರಿಗೆ ಯಾವುದೆ ಕಾರಣಕ್ಕೂ ಅನ್ಯಾಯ ಆಗಲು ಸರ್ಕಾರ ಬೀಡುವುದಿಲ್ಲ ಅವರ ಹಿತ ಕಾಯುತ್ತದೆ ಎಂದು ಜಿಲ್ಲಾಧಿಕಾರಿ ವೆಂಕಟರಾಜು ಭರವಸೆ ನೀಡಿದರು ಅವರು ಇಂದು ಸಂಜೆ ಶ್ರೀನಿವಾಸಪುರ ತಹಶೀಲ್ದಾರ್ ಕಚೇರಿ ಅವರಣದಲ್ಲಿ ಕಂದಾಯ ಇಲಾಖೆ ತೋಟಗಾರಿಕೆ ಇಲಾಖೆ ಬೆಳೆ ವಿಮೆ ಸಂಸ್ಥೆ ಹಾಗು ಮಾವು ಬೆಳೆಗಾರರು ಮತ್ತು ರೈತ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದರು.ಅನ್ನದಾತನ ಕಷಕ್ಕೆ ಜಿಲ್ಲಾಡಳಿತ ಸದಾ ಸ್ಪಂದಿಸುತ್ತದೆ ಕಾರಣಾಂತರಗಳಿಂದ ಬೆಳೆ ವಿಮಾ ಸಂಸ್ಥೆ ವತಿಯಿಂದ ನೀಡಬೇಕಿದ್ದ ಮಾವುಬೆಳೆಗಾರರ ಕ್ಲೈಮ್ ತಡವಾಗುತ್ತಿರುವ ಕುರಿತಂತೆ ವಿಮಾ ಸಂಸ್ಥೆ ಪ್ರತಿನಿಧಿ ಹೇಳುವಂತೆ ಸಂಸ್ಥೆಯ ನಿಯಮಗಳ ಅನ್ವಯ ತಾಂತ್ರಿಕ ಮಾನದಂಡಗಳನ್ನು ಇಟ್ಟುಕೊಂಡು ಫಸಲ್ ಭೀಮಾದಡಿ ಬೆಳೆ ವಿಮೆ ನೋಂದಣಿಮಾಡಿದ ಬೆಳೆಗಾರರಿಗೆ ಫಸಲು ನಷ್ಟದ ಕ್ಲೈಮ್ ಹಣ ಬಿಡುಗಡೆ ಮಾಡಿದೆ ಈ ಬಗ್ಗೆ ಸಂಸ್ಥೆಯ ಮಾನದಂಡಗಳ ಬದಲಾವಣೆ ಕುರಿತಂತೆ ಚರ್ಚಿಸುವುದಾಗಿ ತಿಳಿಸಿದರು.ತಹಶೀಲ್ದಾರ್ ಶೀರಿನ್ ತಾಜ್ ಮಾತನಾಡಿ ಕಳೆದ ವರ್ಷ ಬಿದ್ದ ಮಳೆಯಿಂದಾಗಿ ಮಾವು ಫಸಲು ಉದುರಿ ಹೋಗಿದ್ದ ಬೆಳೆ ನಷ್ಟದ ಹಣ ಬಿಡುಗಡೆ ಸಂಬಂದ ಹಣ ಬಾರದಿರುವ…
ಶ್ರೀನಿವಾಸಪುರ:ಶ್ರೀನಿವಾಸಪುರದ ಎನ್. ಪಿ. ಅಂಬುಜಾಕ್ಷಿ ಅವರು ಬೆಂಗಳೂರು ವಿವಿಯ ಸಸ್ಯಶಾಸ್ತ್ರದ ಪ್ರಾಧ್ಯಾಪಕ ಡಾ.ಹೆಚ್.ಆರ್. ರವೀಶ ಅವರ ಮಾರ್ಗದರ್ಶನದಲ್ಲಿ ಮೈಕ್ರೊಪ್ರೊಪಗೇಷನ್ ಅಂಡ್ ಆಪ್ಟಿಮೈಸೇಷನ್ ಆಫ್ ಎಲಿಸಿಟಾರಾಸ್ ಟು ಎನೆನಾನ್ಸ್ ದ ಸೆಕೆಂಡರಿ ಮೆಟಬೊಲೈಟ್ಸ ಇನ್ ಕೊನೇಮಾರ್ಫ ಫ್ರಾಗ್ರೆನ್ಸ್ – ಎನ್ ಇಂಪಾರ್ಟೆಂಟ್ ಮೆಡಿಸಿನಲ್ ಪ್ಲಾಂಟ್ ಎಂಬ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿಶ್ವ ವಿದ್ಯಾಲಯ ಪಿ.ಎಚ್.ಡಿ ಪದವಿ ಪ್ರಧಾನ ಮಾಡಿ ಗೌರವಿಸಿದೆ.ಬೆಂಗಳೂರು ವಿವಿಯ ಜ್ಞಾನಜ್ಯೋತಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 57 ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷರಾದ ಪ್ರೊ.ಎಂ.ಜಗದೇಶ್ ಕುಮಾರ್,ಸಚಿವ ಅಶ್ವತ್ಥನಾರಾಯಣ ಮತ್ತು ಉಪಕುಲಪತಿ ಪ್ರೊ.ಎಸ್.ಎಂ.ಜಯಕರ್ ಅವರು ಅಂಬುಜಾಕ್ಷಿ ಅವರಿಗೆ ಪಿ.ಎಚ್.ಡಿ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿದರು. ವೆಂಕಟೇಶ್ವರ ಬಡಾವಣೆ ನಿವಾಸಿ ಪುರುಷೋತ್ತಮಚಾರ್ ಪತ್ನಿ ನಿವೃತ್ತ ಶಿಕ್ಷಕಿ ಎಸ್. ಸಂಪೂರ್ಣಮ್ಮ ಅವರ ಪುತ್ರಿಯಾಗಿರುವ ಅಂಬುಜಾಕ್ಷಿ ಮಾನವ ಜನಾಂಗಕ್ಕೆ ಮಾರಕವಾಗಿರುವ ಕ್ಯಾನ್ಸರ್ ನಿವಾರಕ ಔಷಧಿ ಚಂದ್ರ ಹೂವಿನ ಬಳ್ಳಿಯಲ್ಲಿ ಇದೆ ಎಂದು ಅಧ್ಯಯನ ಮಾಡಿ ಮಹಾಪ್ರಭಂದ ಮಂಡಿಸಿರುವ ಅವರ ಸಾಧನೆ ಮಾನವ ಜನಾಂಗದ…
ನ್ಯೂಜ್ ಡೆಸ್ಕ್: ಕರ್ನಾಟಕ ರಾಜ್ಯದಲ್ಲೂ ತೆಲಂಗಾಣ ರಾಜ್ಯದ ಆಡಳಿತರೂಡ ಕೆ.ಸಿ.ಚಂದ್ರಶೇಖರ್ ರಾವ್ ನೇತೃತ್ವದ BRS ಪಕ್ಷದ ಕಾರ್ಯಚಟುವಟಿಕೆ ಶುರುವಾಗಿದೆ ಇತ್ತಿಚಿಗೆ 200ಕ್ಕೂ ಹೆಚ್ಚು ಕಾರ್ಯಕರ್ತರು BRS ಪಕ್ಷದ ಸದಸ್ಯತ್ವ ಪಡೆದು ಬಿ.ಆರ್.ಎಸ್ ಸೇರಿದ್ದಾರೆ.ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ಕೆಲ ಯುವ ಮುಖಂಡರು ಇತ್ತೀಚೆಗೆ ಬಿ.ಆರ್.ಎಸ್ ಪಕ್ಷದ ಹಿರಿಯ ಮುಖಂಡ ತೆಲಂಗಾಣ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ವಿನೋದ್ ಕುಮಾರ್ ಅವರನ್ನು ಭೇಟಿ ಮಾಡಿದ್ದ ಕರ್ನಾಟಕದ ವಿವಿಧ ಹಿಂದುಳಿದ ಸಮಾಜಗಳ ಮುಖಂಡರು BRS ಪಕ್ಷವನ್ನು ತಮ್ಮ ರಾಜ್ಯಗಳಿಗೆ ವಿಸ್ತರಿಸುವಂತೆ ಆಹ್ವಾನಿಸಿದ್ದರು. ಅದರಂತೆ ಪಕ್ಷದ ಕಾರ್ಯಚಟುವಟಿಕೆ ವಿಸ್ತರಣಾ ಕಾರ್ಯಕ್ರಮವನ್ನು BRS ಮುಖಂಡರು ಆರಂಭಿಸಿದ್ದಾರೆ.ಕರ್ನಾಟಕದ ಬೀದರ್ ತಾಲೂಕಿನ ಚಿಲ್ಲರಗಿ ಗ್ರಾಮದಲ್ಲಿ ತೆಲಂಗಾಣದ ನಾರಾಯಣಖೇಡ್ ಶಾಸಕ ಮಹಿರೆಡ್ಡಿ ಭೂಪಾಲರೆಡ್ಡಿ ನೇತೃತ್ವದಲ್ಲಿ ಕರ್ನಾಟಕದ ಕೆಲವರಿಗೆ ಬಿಆರ್ಎಸ್ ಪಕ್ಷದ ಸದಸ್ಯತ್ವ ನೀಡಿ ಪಕ್ಷ ಸೇರ್ಪಡೆ ಮಾಡಿಕೊಂಡಿದ್ದಾರೆ.ಈ ಸಂದರ್ಬದಲ್ಲಿ ಅವರು ಮಾತನಾಡಿ ತೆಲಂಗಾಣ ಸಿಎಂ ಕೆಸಿಆರ್ ತೆಲಂಗಾಣದಲ್ಲಿ ಜಾರಿಗೆ ತಂದಿರುವ ಜನರ ಕಲ್ಯಾಣ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಿಂದ ಜನತೆ ಆಕರ್ಷಿತರಾಗಿದ್ದು…
ಶ್ರೀನಿವಾಸಪುರ:ವೈಕುಂಠ ಏಕಾದಶಿ ಅಂಗವಾಗಿ ತಾಲೂಕಿನ ಬಹುತೇಕ ವೈಷ್ಣವ ದೇವಾಲಯಗಳಲ್ಲಿ ವೈಕುಂಠವಾಸ ಶ್ರೀನಿವಾಸನ ನಾಮಸ್ಮರಣೆ ಭಜನೆ ನಿರಂತರವಾಗಿ ನಡೆಯಿತು.ತಾಲೂಕಿನ ಪುರಾಣ ಪ್ರಸಿದ್ಧ ಗನಿಬಂಡೆ ಶ್ರೀನಿವಾಸ ದೇವಾಲಯ,ರೊಣೂರು ಶ್ರೀ ಲಕ್ಷ್ಮಿವೆಂಕಟೇಶ್ವರ ದೇವಾಲಯ,ಯಲ್ದೂರಿನ ಶ್ರೀ ಕೋದಂಡರಾಮ ದೇವಾಲಯ,ಅರಿಕೇರೆಯ ಶ್ರೀ ಕೋದಂಡರಾಮ ದೇವಾಲಯ, ಶ್ರೀನಿವಾಸಪುರ ಪಟ್ಟಣದ ಶ್ರೀ ಕೋದಂಡರಾಮಸ್ವಾಮಿ ದೇವಾಲಯ,ಬಳೆ ಅಂಜನೇಯನ ದೇವಾಲಯದ ಶ್ರೀ ಲಕ್ಷ್ಮಿನಾರಯಣ ದೇವಾಲಯ,ಹಳೇಪೇಟೆಯ ಶ್ರೀ ಲಕ್ಷ್ಮೀ ನಾರಸಿಂಹ ದೇವಾಲಯ,ಚೀರುವನ ಹಳ್ಳಿ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯ ಸಿ.ಹೊಸೂರು ಶ್ರೀ ವೇಂಕಟೇಶ್ವರ ದೇವಾಲಯ ದ್ವಾರಸಂದ್ರ ಶ್ರೀ ಲಕ್ಷ್ಮೀನಾರಸಿಂಹ ದೇವಾಲಯ. ತಾಡಿಗೋಳ್ ಶ್ರೀ ನಾರಸಿಂಹ ದೆವಾಲಯದಲ್ಲಿ ವಿಶೇಷ ಪೂಜೆ ಅಲಂಕಾರಗಳನ್ನು ಏರ್ಪಡಿಸಲಾಗಿತ್ತು
ಶ್ರೀನಿವಾಸಪುರ:ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಮಹಾನ್ ಗ್ರಂಥ ಭಾರತದ ಸಂವಿಧಾನದ ಶಕ್ತಿಯ ಫಲ ದೇಶವನ್ನು ಬಲಿಷ್ಠವಾಗಿ ಮುನ್ನಡೆಸಲು ಕಾರಣವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಹೇಳಿದರು ಅವರು ತಾಲೂಕಿನ ಆಂಧ್ರದ ಗಡಿಯಂಚಿನ ಕೊನೆಯ ಗ್ರಾಮ ಪುಲಗೂರಕೋಟೆ ಗ್ರಾಮದಲ್ಲಿ ದಲಿತ ಸೇನೆ ಮತ್ತು ವಿವಿಧ ದಲಿತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಪುತ್ತ್ತಳಿ ಅನಾವರಣ ಕಾರ್ಯಕ್ರದಲ್ಲಿ ಭಾಗವಹಿಸಿ ಮಾತನಾಡಿದರು. ಭಾರತದಲ್ಲಿ ಎಲ್ಲಾ ಸಮಾಜಗಳು ಸಮಾನತೆಯ ಬಾಳ್ವೆ ನಡೆಸಲು ಸಂವಿಧಾನ ಮುಖ್ಯ ಕಾರಣವಾಗಿದೆ ಅಂತಹ ಮಹನೀಯನ ಪುತ್ತಳಿಯ ಅನಾವರಣ ಕಾರ್ಯಕ್ಕೆ ನೆರವು ನೀಡಿರುವ ಈ ಭಾಗದ ಬುಲೆಟ್ ಗಂಗುಲಪ್ಪ ಕುಟುಂಬದ ಸದಸ್ಯರು,ಬೆಂಗಳೂರು ಆದಿತ್ಯಬಾಬು ಇತರೆ ಮುಖಂಡರ ಕಾರ್ಯ ಶ್ಲಾಘನೀಯ ಎಂದ ಅವರು ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಹೋಬಳಿಗೊಂದು ಡಾ.ಬಿ.ಆರ್.ಅಂಬೇಡ್ಕರ್ ಪುತ್ತಳಿ ಸ್ಥಾಪಿಸಲು ಯುವ ಸಮುದಾಯ ಮುಂದಾಗುವಂತೆ ಹೇಳಿದರು.ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನೀಲಟೂರುಚಿನ್ನಪ್ಪರೆಡ್ಡಿ ಮಾತನಾಡಿ, ಬಿ.ಆರ್. ಅಂಬೇಡ್ಕರ್ ಅವರು ಒಂದು ಸಮಾಜಕ್ಕೆ ಸೀಮಿತವಾದ ವ್ಯಕ್ತಿಯಲ್ಲ ದೇಶದ ಎಲ್ಲ…