ಕೋಲಾರ:ಕೋಲಾರ ಲೋಕಸಭಾ ವ್ಯಾಪ್ತಿಯಲ್ಲಿ ನೀರಾವರಿ ಯೋಜನೆ, ಯುಕವರಿಗೆ ಉದ್ಯೋಗ ಸೃಷ್ಟಿಸಿ ಕುರಿತಂತೆ ಯೋಜನೆಗಳನ್ನು ರೂಪಿಸಿ ಜಾರಿಗೆ ತರಲು ಮೊದಲ ಆಧ್ಯತೆಯನ್ನು ನೀಡುವುದಾಗಿ ಸಂಸದ ಮಲ್ಲೇಶ್ಬಾಬು ಹೇಳಿದರು.ಮೊದಲ ಬಾರಿಗೆ ಸಂಸತ್ ಪ್ರವೇಶಿಸಿರುವ ಅವರು ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕೋಲಾರ ಜನತೆ ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಗೌರ್ಹಾನಿತವಾಗಿ ನಿಭಾಯಿಸುತ್ತೇನೆ 5 ವರ್ಷದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಸಾಕಷ್ಟು ಅನುಭವವನ್ನು ಹೊಂದಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿದರೆ ಅವರ ಜೊತೆ ಇದ್ದು ಅವರ ಕಾರ್ಯಶೈಲಿಯಂತೆ ಜಿಲ್ಲೆಯ ಜನತೆಗೆ ನ್ಯಾಯ ಒದಗಿಸುವುದಾಗಿ ತಿಳಿಸಿದರು.ಕುಮಾರಸ್ವಾಮಿಯವರಿಗೆ ಯಾವ ಖಾತೆ ನೀಡುತ್ತಾರೆ ಎನ್ನುವುದು ಬಿಜೆಪಿ ಹೈಕಮಾಂಡ್ ಹಾಗೂ ಕುಮಾರಸ್ವಾಮಿ ಅವರಿಗೆ ಬಿಟ್ಟ ವಿಚಾರ ನೀರಾವರಿ ಯೋಜನೆಗಳು ಅನುಷ್ಠನಗೊಳಿಸಲು ಸೂಕ್ತವಾದ ಸಚಿವ ಸ್ಥಾನ ನೀಡಿದರೆ ಉತ್ತಮ ಎಂದು ತಿಳಿಸಿದರು.ಕಳೆದ 5 ವರ್ಷಗಳಲ್ಲಿ ಬಿಜೆಪಿ ಸಂಸದರಾಗಿದ್ದ ಎಸ್ ಮುನಸ್ವಾಮಿ ಅವರು ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ದಿ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ ಸಮಯದ ಅಭಾವದಿಂದ…
Author: Srinivas_Murthy
ಶ್ರೀನಿವಾಸಪುರ:ಮಳೆಯಿಲ್ಲದೇ, ಬಿಸಿಲಿನ ಝಳಕ್ಕೆ ಕಂಗಾಲಾಗಿದ್ದ ಶ್ರೀನಿವಾಸಪುರದ ಜನರ ಮೊಗದಲ್ಲಿ ಇದೀಗ ಸಂತಸ ಮೂಡಿದೆ.37 ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದ ಸೆಕೆಗೆ ಜನರು ಬಸವಳದಿದ್ದರು ಇದೀಗ, ಮಳೆಯಾಗಿರುವುದರಿಂದ ತಂಪಾದ ವಾತಾವರಣ ಮೂಡಿದೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಶ್ರೀನಿವಾಸಪುರ ಪಟ್ಟಣದಲ್ಲಿ ರಸ್ತೆಗಳು ಜಲಾವೃತಗೊಂಡು,ರಾಷ್ಟ್ರೀಯ ಹೆದ್ದಾರಿಯಲ್ಲಿನ ರೈಲ್ವೆ ಬ್ರೀಡ್ಜ್ ನೀರು ಆವರಿಸಿಕೊಂಡು ವಾಹನ ಸವಾರರು ಪರದಾಡುವಂತಾಯಿತು.ಮಳೆ ಮತ್ತು ಜಲಾವೃತದಿಂದಾಗಿ ಪಟ್ಟಣದ ಅಂಬೇಡ್ಕರ್ ಪಾಳ್ಯ,ನಗರೇಶ್ವರ ದೇವಾಲಯದ ಆವರಣ ಮುಂಬಾಗ ಶ್ರೀನಿವಾಸಪುರ-ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ರೈಲ್ವೆ ಸೇತುವೆ ಕೆಳಗಡೆ ಮತ್ತು ಇನ್ನಿತರೆಡೆ ಜನ ವ್ಯವಸ್ಥೆ ಅಸ್ಥವ್ಯಸ್ತ ಗೊಂಡು ಜನ ಪರದಾಡುವಂತಾಯಿತು.ಪಟ್ಟಣದ ಬಹುತೇಕ ಚರಂಡಿಗಳು ಹೂಳು ತುಂಬಿಕೊಂಡಿದ್ದು ನೀರು ಹರಿಯಲು ಸಾಧ್ಯವಾಗದೆ ಚರಂಡಿಯ ಕೊಳಚೆ ನೀರು ರಸ್ತೆಗಳ ಮೇಲೆ ಹರಿಯಿತು.ಆಜಾದ್ ರಸ್ತೆಯಲ್ಲಿರುವ ಮಾಂಸದ ಅಂಗಡಿಗಳ ತ್ಯಾಜ್ಯದ ನೀರು ಹರಿದು ಅಕ್ಬರ್ ರಸ್ತೆಯ ಕನ್ಸರ್ ವೇನ್ಸಿಯಲ್ಲಿನ ಮೊರಿ ಸೇರುತ್ತದೆ ತೀರಾ ಇತ್ತಿಚಿಗೆ ನಿರ್ಮಾಣ ಮಾಡಿರುವ ಅಕ್ಬರ್ ರಸ್ತೆ ಕನ್ಸರ್ ವೇನ್ಸಿಯಲ್ಲಿ ಮೊರಿ ತೀರಾ ಕಳಪೆ ಗುಣಮಟ್ಟದಾಗಿದೆ ಇಲ್ಲಿ ನೀರು ಸರಾಗವಾಗಿ…
ಶ್ರೀನಿವಾಸಪುರ:ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲವು ಸಾಧಿಸಿದ್ದು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ತಮ್ಮ ಸಮೀಪದ ಪ್ರತಿಸ್ಪರ್ದಿ ಕಾಂಗ್ರೆಸ್ ಗೌತಮ್ ಅವರಿಗಿಂತ ಸುಮಾರು ಒಂಬತ್ತು ಸಾವಿರ ಮತಗಳ ಅಂತರ ದೊರತಿದೆ.ಉಳಿದಂತೆ ಜೆಡಿಎಸ್ ಅಭ್ಯರ್ಥಿ ಲೋಕಸಭಾ ಕ್ಷೇತ್ರದಾದ್ಯಂತ ಉತ್ತಮ ಮತ ಗಳಿಸಿದ್ದು ತಮ್ಮ ಸ್ವಕ್ಷೇತ್ರ ಬಂಗಾರುಪೇಟೆಯಲ್ಲಿ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಮತ ಗಳಿಸಿದ್ದಾರೆ ಉಳಿದಂತೆ ಶಿಡ್ಲಘಟ್ಟಕ್ಷೇತ್ರದಲ್ಲಿ 411 ಕಾಂಗ್ರೇಸ್ ಹೆಚ್ಚುಮತಗಳ ಅಂತರ,ಚಿಂತಾಮಣಿಕ್ಷೇತ್ರದಲ್ಲಿ 7250 ಜೆಡಿಎಸ್ ಹೆಚ್ಚು ಮತ ಗಳಿಕೆ, ಶ್ರೀನಿವಾಸಪುರಕ್ಷೇತ್ರದಲ್ಲಿ 9492 ಜೆಡಿಎಸ್ ಹೆಚ್ಚು ಮತ ಗಳಿಕೆ, ಮುಳಬಾಗಿಲಿನ ಮೀಸಲು ವಿಧಾನ ಸಭಾ ಕ್ಷೇತ್ರದಲ್ಲಿ 32529 ಜೆಡಿಎಸ್ ಹೆಚ್ಚು ಮತ ಗಳಿಕೆ, ಕೆ.ಜಿ.ಎಫ್.ಮೀಸಲು ವಿಧಾನ ಸಭಾ ಕ್ಷೇತ್ರದಲ್ಲಿ 34431 ಕಾಂಗ್ರೇಸ್ ಹೆಚ್ಚುಮತಗಳ ಅಂತರ, ಬಂಗಾರುಪೇಟೆಮೀಸಲು ವಿಧಾನ ಸಭಾ ಕ್ಷೇತ್ರದಲ್ಲಿ 28134 ಜೆಡಿಎಸ್ ಹೆಚ್ಚು ಮತಗಳ ಅಂತರ,ಕೋಲಾರ ಕ್ಷೇತ್ರದಲ್ಲಿ 8940 ಜೆಡಿಎಸ್ ಮತಗಳ ಅಂತರ,ಮಾಲೂರು ಕ್ಷೇತ್ರದಲ್ಲಿ 13300 ಜೆಡಿಎಸ್ ಹೆಚ್ಚು ಮತಗಳ ಅಂತರ.ಪಡೆದಿರುವ ಎನ್ಡಿಯೆ ಮೈತ್ರಿ…
ಶ್ರೀನಿವಾಸಪುರ:ನಡೆದಿದ್ದು ಶಿಕ್ಷಕರ ಚುನಾವಣೆ ಅದರೆ ನಡೆದ ರೀತಿ ಯಾವ ಸಾರ್ವತ್ರಿಕ ಚುನಾವಣೆಗೂ ಕಡಿಮೆ ಇಲ್ಲದಂತೆ ಎಲ್ಲವೂ ಖುಲ್ಲಂ ಖುಲ್ಲಾ ಎನ್ನುವಂತಿತ್ತು. ಇಂದು ನಡೆದಂತ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಶೈಲಿ ಸಾರ್ವಜನಿಕರನ್ನು ಗಾಭರಿ ಪಡಿಸಿದೆ ಚುನಾವಣೆಗೂ ಒಂದು ವಾರದ ಮುಂಚಿನಿಂದಲೂ ಮತದಾರರನ್ನು ಓಲೈಸಿಕೊಳ್ಳಲು ಪಾನಕ ಪನ್ಯಾರ ಪ್ಯಾಕೆಜ್ ಗಿಫ್ಟ್ ಸೀರೆ ಇನ್ನಿತರೆ ವ್ಯವಹಾರವಾಗಿ ವ್ಯವಸ್ಥಿತವಾಗಿ ಸರಬರಾಜು ಮಾಡುವ ಮೂಲಕ ಪಟ್ಟಭದ್ರರಾದ ಮತದಾರ ಶಿಕ್ಷಕರನ್ನು ಒಲಸಿಕೊಳ್ಳುವ ಕಾರ್ಯ ಭರದಿಂದ ನಡೆದಿದೆ ಎನ್ನಲಾಗುತ್ತಿದ್ದು ಇಂದು ಚುನಾವಣೆ ದಿನ ಕೊಸರು ಎನ್ನುವಂತೆ ಪೆಟ್ರೊಲ್ ಗಾದರು ಇರಲಿ ಎಂಬ ಗೊಜಾಟದ ವ್ಯವಹಾರ ನಾಚಿಕೆ ಗಿಚಿಗೆ ಊರಿಂದಾಚಗೆ ಎನ್ನುವಂತೆ ನಡಿತಿತ್ತು. ಮತದಾನ ಕೇಂದ್ರ ಇದ್ದ ತಹಶೀಲ್ದಾರ್ ಕಚೇರಿ ಬಳಿಯ ಸುತ್ತಮುತ್ತಲ ಪ್ರದೇಶದಲ್ಲಿ ಹಾಕಲಾಗಿದ್ದ ರಾಜಕೀಯ ಪೆಂಡಾಲ ಕೆಳಗೆ ಹೋಗಿಬರುತ್ತಿದ್ದವರು ಕೈ ಬೆಚ್ಚಗೆ ಮಾಡಿಕೊಂಡು ಪುನಿತರಾಗುತ್ತಿದ್ದರು.ಕೈ ಕೆಲಸ ಅಗದಿದ್ದರೆ ಶ್ರೀಲಕ್ಷ್ಮೀನರಸಿಂಹ ಸ್ವಾಮಿಯೇನ ನಮಃ ಎಂದು ಎದುರುಗಿದ್ದ ನರಸಿಂಹ ಸ್ವಾಮಿ ದೇವಾಲಯದ ಆವರಣದಲ್ಲಿ ಮುಖ ಊದಿಸಿಕೊಂಡು ಕುಳತಿದ್ದವರನ್ನು ಮರಿ ನಾಯಕರು ಯಾರದ್ರೂ…
ತುಮಕೂರು: ತುಮಕೂರು ಜಿಲ್ಲೆ ಕುಣಿಗಲ್ ನಲ್ಲಿ ನರರೂಪ ರಾಕ್ಷಸನಂತೆ ವರ್ತಿಸಿರುವ ಪತಿ ತನ್ನ ಪತ್ನಿಯನ್ನು ರಣ ಭೀಕರವಾಗಿ ಹತ್ಯೆಮಾಡಿದ್ದಾನೆ.ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ತನ್ನ ಪತ್ನಿಯ ತಲೆ ಕಡಿದು ರುಂಡ-ಮುಂಡವನ್ನು ಬೇರ್ಪಡಿಸಿದ್ದೆ ಅಲ್ಲದೆ ಚರ್ಮ ಸುಲಿದು ರಾಕ್ಷಸನಂತೆ ವರ್ತಿಸಿದ್ದಾನೆ.ದಾರುಣವಾಗಿ ಕೊಲೆಯಾದ ಮಹಿಳೆಯನ್ನು ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಪುಷ್ಪ (38) ಎಂದು ಗುರುತಿಸಲಾಗಿದ್ದು ಮೃತ ಮಹಿಳೆ ಕೆಲ ವರ್ಷದ ಹಿಂದೆ ಸುಗ್ಗನಹಳ್ಳಿ ಶಿವರಾಮ್ (45) ಎಂಬಾತನೊಂದಿಗೆ ಪ್ರೀತಿಸಿ ಮದುವೆಯಾಗಿದ್ದಳು,ಇಬ್ಬರು ಅಂತರ್ಜಾತಿ ಮದುವೆಯಾಗಿ ಜೀವನ ನಡೆಸುತ್ತಿದ್ದರು ಇವರಿಗೆ ಎಂಟು ವರ್ಷದ ಮಗನಿದ್ದಾನೆ.ಕಳೆದ ಕೆಲ ತಿಂಗಳ ಹಿಂದೆ ದಂಪತಿ ಹುಲಿಯೂರು ದುರ್ಗದ ಹೊಸಪೇಟೆಯ ಶಾಂತಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಪುಷ್ಪ ಕೆಲ ಮನೆಗಳಲ್ಲಿ ಮೆನ ಕೆಲಸ ಮಾಡುತ್ತಿದ್ದು, ಗಂಡ ಶಿವರಾಮ್ ಸ್ಥಳೀಯ ಸಾಮಿಲ್ನಲ್ಲಿ ಹೆಲ್ಪರ್ ಕೆಲಸ ಮಾಡುತ್ತಿದ್ದ.ಪತಿ-ಪತ್ನಿ ನಡುವೆ ಹೊಂದಾವಣಿಕೆ ಇಲ್ಲದೆ ಜಗಳ ನಡೆಯುತ್ತಿತ್ತು, ಕೃತ್ಯ ನಡೆದ ದಿನ ರಾತ್ರಿ ಪತಿ ಊಟ ಬಡಿಸುವಂತೆ ಪತ್ನಿಗೆ ಹೇಳಿದ್ದು…
ನ್ಯೂಜ್ ಡೆಸ್ಕ್: ಮೇ 25 ರಿಂದ ಸೂರ್ಯನು ತನ್ನ ನಕ್ಷತ್ರವನ್ನು ಬದಲಾಯಿಸಿದ್ದು ಕೃತಿಕಾ ನಕ್ಷತ್ರದಿಂದ ರೋಹಿಣಿ ನಕ್ಷತ್ರದತ್ತ ಪ್ರಯಾಣ ಆರಂಭಿಸಿದ್ದು ಅಂದಿನಿಂದ ರೋಹಿಣಿ ಕಾರ್ತೆ ಆರಂಭವಾಗುತ್ತದೆ. ಸೂರ್ಯನು ರೋಹಿಣಿ ನಕ್ಷತ್ರದಲ್ಲಿರುವ ಸಮಯವನ್ನು ರೋಹಿಣಿ ಕಾರ್ತೆ ಎಂದು ಪರಿಗಣಿಸಲಾಗುತ್ತದೆ.ಇದರಿಂದ ಸೂರ್ಯನ ಶಾಖದ ಪ್ರಭಾವ ಅತಿ ಹೆಚ್ಚಾಗಿರುವ ಹಿನ್ನಲೆಯಲ್ಲಿ ಬೇಸಿಗೆಯ ಬಿಸಿ ಇನ್ನಷ್ಟು ಏರಿಕೆಯಾಗುತ್ತದೆ ಎನ್ನಲಾಗುತ್ತಿದ್ದು ತೀವ್ರವಾದ ಶಾಖವನ್ನು ಅನುಭವಿಸುವ ಅನಿವಾರ್ಯತೆ ಇದಿಯಂತೆ ತಾಪಮಾನವು ಏರುತ್ತಲೇ ಇರುತ್ತದೆ. ಉತ್ತರ ಭಾರತದಲ್ಲಿ ಬಹುತೇಕ ರಾಜ್ಯಗಳಲ್ಲಿ ಸುಮಾರು 50 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ಏರಿಕೆಯಾಗಿದೆ ಏರುತ್ತಿರುವ ಬಿಸಿಲಿನ ತಾಪಕ್ಕೆ ಜನ ತತ್ತರಗೊಂಡಿದ್ದಾರೆ ಸಾವು ನೋವುಗಳಿಗೆ ಕಾರಣವಾಗುತ್ತಿದೆ ಬಿಸಿಲ ಧಗೆ.ಭಾರತೀಯ ಹವಾಮಾನ ಇಲಾಖೆ ಹಲವು ಭಾಗಗಳಿಗೆ ರೆಡ್ ಅಲರ್ಟ್ ಘೋಷಿಸಿದೆ.ಜೋತ್ಯಿಷ್ಯ ವಿಜ್ಞಾನದಲ್ಲೂ ಹಲವು ಬದಲಾವಣೆಸೂರ್ಯ ನಕ್ಷತ್ರವನ್ನು ಬದಲಾವಣೆಯಿಂದ ಜೋತ್ಯಿಷ್ಯ ವಿಜ್ಞಾನದ ಪ್ರಕಾರ ಕೆಲವು ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ ಎಂದು ಶಾಸ್ತ್ರತಜ್ಞರು ಹೇಳುತ್ತಾರೆ.ಮೇಷ,ಮಿಥುನ,ಸಿಂಹ,ಕನ್ಯಾ ಹಾಗು ಧನುಷ್ಯ ರಾಶಿಗಳವರಿಗೆ ಉತ್ತಮ ಫಲಿತಾಂಶ ಸಿಗಲಿದಿಯಂತೆ.ಸುಟ್ಟುಕರಕಲಾದ ಬೈಕುಗಳುಈ ನಡುವೆ ತೆಲಂಗಾಣ ರಾಜ್ಯದ ಜಗಿತ್ಯಾಲ…
ಶ್ರೀನಿವಾಸಪುರ:ನಾಲ್ಕೈದು ಮಂದಿ ಯುವಕರ ಗುಂಪು ದ್ವಿಚಕ್ರ ವಾಹನಗಳಲ್ಲಿ ಬಂದು ಶ್ರೀನಿವಾಸಪುರ ಬಸ್ ನಿಲ್ದಾಣ ಬಳಿಯ ಹಾಫ್ ಕಾಮ್ಸ್ ಮುಂಬಾಗ ಪೋಲಿಸ್ ಠಾಣೆಗೆ ಕೂಗಳತೆ ದೂರದಲ್ಲಿ ನಡುರಸ್ತೆಯಲ್ಲಿ ಸಾರ್ವಜನಿಕವಾಗಿ ಮದ್ಯದ ಬಾಟಿಲ್ ಹಾಗು ರಸ್ತೆಯಲ್ಲಿ ಸ್ಥಾಪಿಸಿದ್ದ ಪ್ಲಾಸ್ಟಿಕ್ ರಸ್ತೆ ವಿಭಜಕಗಳನ್ನು ಹಿಡಿದು ಬಡಿದಾಡಿಕೊಂಡಿದ್ದಾರೆ.ಬಡಿದಾಟದ ದೃಶ್ಯಗಳನ್ನು ನೋಡಿದವರು ಬೆಚ್ಚಿಬಿದ್ದಿದ್ದಾರೆ.ಘಟನೆ ನಡೆದು ಎರಡು ದಿನವಾದರು ಪೋಲಿಸರು ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.ಯುವಕರು ರೌಡಿ ಗ್ಯಾಂಗುಗಳಂತೆ ಸಾರ್ವಜನಿಕವಾಗಿ ಮದ್ಯದ ಬಾಟಲಗಳಲ್ಲಿ ಬಡೆದಾಡಿಕೊಂಡು ಸಾರ್ವಜನಿಕವಾಗಿ ಭಿಕರತೆಯಿಂದ ನಡೆದುಕೊಂಡಿದ್ದನ್ನು ಜನ ನೋಡಿದ್ದಾರೆ ದಾರಿ ಹೊಕರು ಘಟನೆಯನ್ನು ತಮ್ಮ ಮೊಬೈಲ್ ಗಳಲ್ಲಿ ಚಿತ್ರಿಸಿಕೊಂಡಿದ್ದು ಎನ್ನಲಾದ ಬಿದಿಕಾಳಗದ ವಿಡಿಯೋ ಈಗ ಎಲ್ಲಡೆ ವೈರಲ್ ಆಗಿದೆ.ಅದರ ಅಧಾರದಲ್ಲಿ,ವಿಡಿಯೋದಲ್ಲಿ ಇರುವ ದ್ವಿಚಕ್ರ ವಾಹನದ ನಂಬರ್ ಅಧಾರದಲ್ಲಿ ಘಟನೆಯಲ್ಲಿ ಪಾಲ್ಗೋಂಡವರನ್ನು ಹುಡುಕಿ ಹೆಡೆ ಮುರಿ ಕಟ್ಟಲು ಪೋಲಿಸರಿಗೆ ಸಾಧ್ಯ ಇಲ್ಲವ ಎಂದು ಜನತೆ ಪ್ರಶ್ನಿಸಿದ್ದಾರೆ.ಸಿನಿಮಾ ವಿಲಗಳ ರಿತಿ ಫೊಸುಜನ ನೋಡು ನೋಡುತ್ತಿದ್ದಂತೆ ಬಡಿದಾಡಿಕೊಂಡು ಯುವಕರು ಪ್ಲಾಸ್ಟಿಕ್ ವಿಭಜಕಗಳನ್ನು ಗದೆಯಂತೆ ಎತ್ತಿಕೊಂಡು ಸಿನಿಮಾಗಳಲ್ಲಿನ…
ಚಿಂತಾಮಣಿ: ಪ್ರಪಂಚದಾದ್ಯಂತ ರೋಟರಿ ಸಂಸ್ಥೆ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ ಎಂದು ರೋಟರಿ ಸಂಸ್ಥೆ ಬೆಂಗಳೂರು ಉತ್ತರ ಭಾಗದ ಸದಸ್ಯತ್ವ ಯೋಜನಾ ಮುಖ್ಯಸ್ಥರಾದ ತಿರುಮುರುಗಮನ್ ಹೇಳಿದರು.ಅವರು ಚಿಂತಾಮಣಿ ನಗರದಲ್ಲಿ ರೋಟರಿ ಸಂಸ್ಥೆ ಸ್ಥಾಪನೆ ಮಾಡುವ ಸಲುವಾಗಿ ರಿವಾರ್ಡ್ ಸಂಸ್ಥೆ ಕಚೇರಿಯಲ್ಲಿ ಆಸಕ್ತರಿಂದ ಸಂವಾದ ನಡೆಸಿ ಮಾತನಾಡಿದರು.ಸಮಾಜದ ವಿವಿಧ ಹುದ್ದೆಗಳಲ್ಲಿರುವ ಮುಖ್ಯಸ್ಥರು ಕೂಡಿ ರೋಟರಿ ಸಂಸ್ಥೆಯನ್ನು ಸೇವಾಭಾವನೆಯಿಂದ ಸ್ಥಾಪಿಸಿದ್ದು ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ.ಪ್ರಪಂಚದಾದ್ಯಂತ 36911 ರೋಟರಿ ಕ್ಲಬ್ ಗಳು ಸ್ಥಾಪನೆಯಾಗಿವೆ, ಪ್ರಮುಖವಾಗಿ ಆರೋಗ್ಯಸೇವಾ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿರುವ ರೋಟರಿ ಸಂಸ್ಥೆ ಹೊಸ ಮುನ್ನಡಿ ಬರೆದ ಹೆಮ್ಮೆ ಇದೆ ಪೊಲಿಯೋಗೆ ಮೊಟ್ಟಮೊದಲಬಾರಿಗೆ ಔಷದ ಕಂಡು ಹಿಡಿದು ಪ್ರಪಂಚ ಆರೋಗ್ಯ ಸಂಸ್ಥೆಗೆ ಹಕ್ಕುಸ್ವಾಮ್ಯ ಪಡೆಯದೆ ಫಾರ್ಮುಲಾವನ್ನು ಉಚಿತವಾಗಿ ನೀಡಿದಷ್ಟೆ ಅಲ್ಲದೆ ಅದರ ಡ್ರಾಪ್ಸ್ ತಯಾರಿಕೆಗೆ ಅರ್ಥಿಕ ಸಂಪನ್ಮೂಲ ಒದಗಿಸಿದೆ ಕೀರ್ತಿ ರೋಟರಿ ಸಂಸ್ಥೆಗೆ ಸಲ್ಲುತ್ತದೆ, ಪ್ರಪಂಚದಾದ್ಯಂತ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೋಡುವ ದೃಷ್ಟಿಯಿಂದ ರೋಟರಿ ಸಂಸ್ಥೆ ತಾಲೂಕು ಮಟ್ಟದಲ್ಲೆ ಅಲ್ಲ ಹೋಬಳಿ ಮಟ್ಟದಲ್ಲೂ ಸ್ಥಾಪನೆಯಾಗಬೇಕಿದೆ…
ನ್ಯೂಜ್ ಡೆಸ್ಕ್:ಕಲಿಯುಗ ವೈಕುಂಠ ತಿರುಮಲ ಶ್ರೀನಿವಾಸನ ದರ್ಶನಕ್ಕೆ ತೆರಳುತ್ತಿರುವ ಭಕ್ತರಿಗೆ ದೇವರ ದರ್ಶನ ಮೂವತ್ತು ಗಂಟೆಗಳ ಸಮಯ ಹಿಡಿಯುತ್ತಿದೆ, ದಿನೆ ದಿನೆ ತಿರುಮಲದಲ್ಲಿ ಭಕ್ತರ ದಟ್ಟಣೆ ಹೆಚ್ಚುತ್ತಿದೆ ಕಳೆದ 20 ದಿನಗಳಿಂದ ತಿರುಮಲ ಜನಸಾಗರವಾಗಿ ಮಾರ್ಪಟ್ಟಿದೆ,ಸರ್ವದರ್ಶನ(ಉಚಿತದರ್ಶನ)ಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದೆ ಜನದಟ್ಟಣೆ ಹೆಚ್ಚಾಗಲು ಕಾರಣ ಎನ್ನುವ ಮಾತು ಕೇಳಿಬರುತ್ತಿದೆ,ಬೆಳಗ್ಗೆ ವಾಹನ ದಟ್ಟಣೆ ಸ್ವಲ್ಪ ಕಡಿಮೆಯಾಗುತ್ತಿದ್ದಂತೆ ಸಂಜೆ ವೇಳೆಗೆ ಮತ್ತೆ ಭಕ್ತರು ಬರುವ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ವಾಹನಗಳ ದಟ್ಟನೆ ಸಹ ಹೆಚ್ಚಾಗುತ್ತಿವೆ.ದೇವರ ದರ್ಶನ ಪಡೆಯಲು ತೆರಳುವ ವೈಕುಂಠಂ ಕ್ಯೂ ಕಾಂಪ್ಲೆಕ್ಸ್ ಮತ್ತು ನಾರಾಯಣಗಿರಿ ಶೆಡ್ಗಳ ಎಲ್ಲಾ ಕೊಠಡಿಗಳು ಟೈಮ್ ಸ್ಲಾಟ್ ಟೋಕನ್ ಇಲ್ಲದೆ ತಿರುಮಲಕ್ಕೆ ಬಂದ ಭಕ್ತರಿಂದ ತುಂಬಿ ತುಳುಕುತ್ತಿದೆ ಕೊಠಡಿಗಳ ಹೊರಗೆ ಶಿಲಾ ತೋರಣಂ ತನಕ ಭಕ್ತರು ಕ್ಯೂ ಲೈನ್ ನಲ್ಲಿ ಕಾಯುತ್ತಿದ್ದಾರಂತೆ.ಟೊಕನ್ ಇಲ್ಲದ ಉಚಿತ ದರ್ಶನಕ್ಕೆ ಸುಮಾರು 30 ಗಂಟೆಗಳ ಕಾಲ ಕಾಯಬೇಕಿದೆ, ರೂ.300 ಟಿಕೆಟ್ ಪಡೆದ ವಿಶೇಷ ಪ್ರವೇಶ ಟಿಕೆಟ್ ಹೊಂದಿರುವ ಭಕ್ತರು ಮೂರು-ನಾಲ್ಕು ಗಂಟೆಗಳಲ್ಲಿ ದರ್ಶನ…
ಶ್ರೀನಿವಾಸಪುರ:ದನ ಕಾಯುತ್ತಿದ್ದ ವ್ಯಕ್ತಿಯ ಮೇಲೆ ಜೇನು ನೋಣ ದಾಳಿ ಮಾಡಿದ್ದು ವ್ಯಕ್ತಿ ತೀವ್ರವಾಗಿ ಅಸ್ವಸ್ಥಗೊಂಡು ಶ್ರೀನಿವಾಸಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಇಂದು ನಡೆದಿದೆ.ಜೇನು ನೋಣ ದಾಳಿಯಿಂದ ಗಾಯಗೊಂಡು ಅಸ್ವಸ್ಥನಾಗಿರುವ ವ್ಯಕ್ತಿಯನ್ನು ತಾಲೂಕಿನ ಸೋಮಯಾಜಹಳ್ಳಿ ಪಂಚಾಯಿತಿಯ ಕೂಳಗುರ್ಕಿ ಗ್ರಾಮದ ವೆಂಕಟರಮಣಪ್ಪ ಎಂದು ಗುರುತಿಸಲಾಗಿದೆ.ಎಂದಿನಂತೆ ಧನ ಕಾಯಲು ಜಾನುವಾರುಗಳನ್ನು ಹೊಡೆದುಕೊಂಡು ಊರಿನಿಂದ ಆಚೆ ಹೋಗಿರುವ ವೆಂಕಟರಮಣಪ್ಪ ಜಾನುವಾರುಗಳನ್ನು ಮೇಯಲು ಬಿಟ್ಟು ಮರದಡಿ ನಿದ್ರೆಗೆ ಜಾರಿದ್ದಾನೆ ನಂತರದಲ್ಲಿ ಏಕಾಏಕಿ ಅವರ ಮೇಲೆ ಜೇನುನೊಣಗಳ ಗುಂಪು ದಾಳಿ ನಡೆಸಿ ಕಚ್ಚಿದ್ದು ತೀವ್ರ ಅಸ್ವಸ್ಥಗೊಂಡಿದ್ದಾರೆ ಅವರನ್ನು ಚಿಕಿತ್ಸೆಗಾಗಿ ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿರುವುದಾಗಿ ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ.ಶ್ರೀನಿವಾಸಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.