Author: Srinivas_Murthy

ಶ್ರೀನಿವಾಸಪುರ:ಪುರಸಭೆ ಮೀಸಲಾತಿ ಸೋಮವಾರ ಪ್ರಕಟವಾಗಿದ್ದು ಅಧ್ಯಕ್ಷ ಸ್ಥಾನ ಸಾಮನ್ಯ ಹಾಗು ಉಪಾಧ್ಯಕ್ಷ ಎಸ್ಸಿ ಮಹಿಳೆಗೆ ಒಲಿದಿದೆ. ಮಿಸಲಾತಿ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಸ್ಥಳೀಯ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿದೆ,ಸಾರ್ವಜನಿಕ ಲೆಕ್ಕಚಾರಗಳ ಕುರಿತಾಗಿ ಚರ್ಚೆಗಳು ಆರಂಭವಾಗಿದೆ, ಕಳೆದ ಹದಿನೈದು ತಿಂಗಳಿನಿಂದ ರಾಜಕೀಯ ಚಟುವಟಿಕೆ ಇಲ್ಲದೆ ಪುರಸಭೆಯಲ್ಲಿ ಅಧಿಕಾರಿಗಳಿದೆ ಕಾರ್ಯಕಲಾಪ ಸಾಗಿತ್ತು ಈಗ ಮೀಸಲಾತಿ ಪ್ರಕಟವಾಗಿರುವುದು ಸ್ಥಳೀಯ ಪುರಸಭೆ ಸದಸ್ಯರಲ್ಲಿ ರಾಜಕೀಯ ಗರಿಗೆದರಿದೆ ಒಟ್ಟು 23 ಸದಸ್ಯರ ಶ್ರೀನಿವಾಸಪುರ ಪುರಸಭೆಯಲ್ಲಿ ಜೆಡಿಎಸ್11 ಹಾಗು ಕಾಂಗ್ರೆಸ್ 12 ಸದಸ್ಯರನ್ನು ಹೊಂದಿದೆ, ರಾಜಕೀಯ ಲೆಕ್ಕಾಚಾರದಂತೆ ಸುಮಾರು 8 ವಾರ್ಡುಗಳಲ್ಲಿ ಮುಸ್ಲಿಂ ಸದಸ್ಯರಿದ್ದಾರೆ,ಎರಡು ಪಕ್ಷಗಳಿಗೆ ಅಧ್ಯಕ್ಷ ಸ್ಥಾನದ ಆಯ್ಕೆ ಅಷ್ಟು ಈಝಿಯಾಗಿ ಬಗೆಹರಿಸಲಾಗದ ಮಾತಾಗಿದೆ.

Read More

ಶ್ರೀನಿವಾಸಪುರ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಬದುಕು ಕಟ್ಟಿಕೊಳ್ಳಬೇಕು. ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡು ಬೆಳೆಯಬೇಕು ಎಂದು ಸಾಹಿತಿ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ ಹೇಳಿದರು.ಪಟ್ಟಣದ ಜಗದ್ಗುರು ಭಾರತೀತೀರ್ಥ ಸಭಾ ಭವನದಲ್ಲಿ, ದೆಹಲಿಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ತಾಲ್ಲೂಕು ಘಟಕ ಹಾಗೂ ಸ್ವಾಮಿ ವಿವೇಕಾನಂದ ಚಾರಿಟಿಬಲ್ ಟ್ರಸ್ಟ್ ಸಂಯೂಕ್ತವಾಗಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಾಕೃತಿಕ ಏರು ಪೇರಿಗಳಿಂದಾಗಿ ಕೃಷಿಕ ಸಮುದಾಯ ಆರ್ಥಿಕ ಸಂಕಷ್ಟದಲ್ಲಿದೆ ಮಳೆ ಹಾಗೂ ಅಂತರ್ಜಲ ಕೊರತೆಯಿಂದಾಗಿ ಬೇಸಾಯ ನಷ್ಟದ ಕಸುಬಾಗಿ ಮಾರ್ಪಟ್ಟಿದೆ ಇಂಥ ಪರಿಸ್ಥಿತಿಯಲ್ಲಿ ರೈತಾಪಿ ಜನತೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತಾಗಿದೆ ಜಿಲ್ಲೆಯ ನರಸಾಪುರ, ವೇಮಗಲ್ ಕೈಗಾರಿಕಾ ಪ್ರದೇಶಗಳು ನಿರ್ಮಾಣವಾಗಿದ್ದು ಅದರಂತೆ ಶ್ರೀನಿವಾಸಪುರದ ಹೊರವಲಯದಲ್ಲಿ ಕೈಗಾರಿಕಾ ಪ್ರದೇಶ ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ. ಅಲ್ಲಿ ಉದ್ಯಗಗಳನ್ನು ಪಡೆಯಬೇಕಾದರೆ ಕೌಶಲ್ಯದ ನೈಪುಣ್ಯ ಶಿಕ್ಷಣ ಪಡೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.ದೆಹಲಿಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ತಾಲ್ಲೂಕು ಘಟಕ ಹಾಗೂ ಸ್ವಾಮಿ…

Read More

ಚಿಂತಾಮಣಿ:ಮುಡಾ ಹಗರಣದಲ್ಲಿ ಸರ್ಕಾರ ಪತನವಾಗುವುದು ಗ್ಯಾರೆಂಟಿ ಎಂದು ಶ್ರೀನಿವಾಸಪುರ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು ಅವರು ಚಿಂತಾಮಣಿ ನಗರದ ಹೊರವಲಯದಲ್ಲಿ ಜೆಕೆ ಭವನದಲ್ಲಿ ನಡೆದಂತ ಕೋಲಾರ ಹಾಗು ಚಿಕ್ಕಬಳ್ಳಾಪುರ ಸಂಸದರ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.ಚಿಂತಾಮಣಿ ಮಾಜಿ ಶಾಸಕ ಕೃಷ್ಣಾರೆಡ್ಡಿ ತಮ್ಮ ಸಾರ್ವಜನಿಕ ಕಚೇರಿ ಜೆಕೆ ಭವನದಲ್ಲಿ ಆಯೋಜಿಸಿದ್ದ ಕೋಲಾರ-ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ ವಿಜೇತರಾದ ಕೋಲಾರ ಸಂಸದ ಮಲ್ಲೇಶ್ ಬಾಬು ಹಾಗು ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ ಅವರುಗಳಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ವೆಂಕಟಶಿವಾರೆಡ್ಡಿ ನಾನು 5 ಬಾರೀ ಶಾಸಕನಾಗಿರುವೆ ನನ್ನ 45 ವರ್ಷದ ರಾಜಕೀಯ ಜೀವನದಲ್ಲಿ ಇತಂಹ ಕೆಟ್ಟ ಹಾಗು ಭ್ರಷ್ಟ ಸರ್ಕಾರವನ್ನು ‌ನಾನು ನೋಡಿಲ್ಲಾ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ತೀವ್ರ ಬೇಸರವನ್ನು ಹೊರಹಾಕಿದರು.ಅಭಿವೃದ್ಧಿ ಶ್ಯೂನ್ಯ ಸರ್ಕಾರದಲ್ಲಿ ಬಿಟ್ಟಿ ಭಾಗ್ಯಗಳನ್ನು ಕೊಟ್ಟು ರಾಜ್ಯವನ್ನು ಶ್ರೀಲಂಕಾ ಪಾಕಿಸ್ತಾನದ ಪರಿಸ್ಥಿತಿಗೆ ತಳ್ಳಲಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರವನ್ನು ಜರಿದರು.ಲೋಕಸಭಾ ಚುನಾವಣೆಯಲ್ಲಿ ಕೋಲಾರ-ಚಿಕ್ಕಬಳ್ಳಾಪುರ…

Read More

ಶ್ರೀನಿವಾಸಪುರ:ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ವಿದ್ಯಾರ್ಥಿಯೊಬ್ಬ ಬಸ್ಸಿಗೆ ಡಿಕ್ಕಿ ಹೋಡೆದು ಮೃತ ಪಟ್ಟಿರುತ್ತಾನೆ.ಮೃತ ವಿದ್ಯಾರ್ಥಿಯನ್ನು ತಾಲೂಕಿನ ತಮಟಂಪಲ್ಲಿ ಗ್ರಾಮದ ನಿವಾಸಿ ಹಾಗು ಚಿಂತಾಮಣಿ ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿ ಭಾರ್ಗವ್ ರೆಡ್ಡಿ (18) ಎಂದು ಗುರುತಿಸಲಾಗಿದೆ.ಮೃತ ವಿದ್ಯಾರ್ಥಿ ಕಾಲೇಜಿಗೆ ಹೋಗಲು ಬೆಳ್ಳಂ ಬೆಳಿಗ್ಗೆ ತಮ್ಮ ಮನೆಯಿಂದ ಹೋಗಿದ್ದಾನೆ,ಆದರೆ ಬಸ್ಸು ತಪ್ಪಿಹೋಗಿದೆ, ಬಸ್ಸು ಹಿಡಿಯಲು ಅಡ್ಡಗಲ್ ಗೆ ಹೋಗುವುದಕ್ಕಾಗಿ ಮನೆಯಲ್ಲಿದ್ದ ದ್ವಿಚಕ್ರವಾಹನ ತಗೆದುಕೊಂಡು ಹೋರಟಿದ್ದಾನೆ ದಾರಿಯಲ್ಲಿ ಇಕ್ಕಾಟ್ಟಾದ ರಸ್ತೆಯಲ್ಲಿ ವಾಹನ ಚಲಾಯಿಸುತ್ತಿದ್ದಾಗ ಎದುರಿನಿಂದ ಬಂದಂತ ಸರ್ಕಾರಿ ಬಸ್ಸಿ ಗೆ ಡಿಕ್ಕಿ ಹೋಡೆದಿರುತ್ತಾನೆ ಡಿಕ್ಕಿ ಹೋಡೆದ ರಭಸಕ್ಕೆ ದ್ವಿಚಕ್ರವಾಹನದಿಂದ ಕೆಳಕ್ಕೆ ಬಿದ್ದ ವಿದ್ಯಾರ್ಥಿ ತಲೆಗೆ ತೀವ್ರಪೆಟ್ಟಾಗಿದೆ ಕಾಲಿಗೆ ಗಾಯವಾಗಿ ರಕ್ತಸಾವ್ರವಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ. ವಿದ್ಯಾರ್ಥಿಯ ಮೃತ ದೇಹ ಕಂಡೋಡನೆ ಹೆತ್ತವರು ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ,ಘಟನಾ ಸ್ಥಳಕ್ಕೆ ಗೌನಿಪಲ್ಲಿ ಪೊಲೀಸ್ ಠಾಣಾ ವೃತ್ತ ನೀರಿಕ್ಷಕ ಜಯಾನಂದ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಚಿಂತಾಮಣಿ:ಈ ಶೈಕ್ಷಣಿಕ ವರ್ಷದಿಂದಲೆ ಚಿಂತಾಮಣಿಯಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾರ್ಯರಂಭವಾಗಲಿದೆ. ದಶಕಗಳ ಕನಸಿಗೆ ಈಗ ಜೀವಬಂದಿದೆ ಎನ್ನಬಹುದು, ಪ್ರಸಕ್ತ ಸಾಲಿನಿಂದಲೆ ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯದ ಸಂಯೋಜಿತ ಇಂಜನಿಯರಿಂಗ್ ಕಾಲೆಜು ಆರಂಭಗೊಳ್ಳಲಿದ್ದು ಈ ಶೈಕ್ಷಣಿಕ ವರ್ಷದ ಸಿಇಟಿ ಕೌನ್ಸಲಿಂಗ್ ಸೀಟ್ ಮ್ಯಾಟ್ರಿಕ್ಸ್ ಗೆ ಸೇರಿಸಲಾಗಿದ್ದು ಮುಂದೆ ನಡೆಯುವಂತ ಸಿಇಟಿ ಕೌನ್ಸಲಿಂಗ್ ನಲ್ಲಿ ವಿದ್ಯಾರ್ಥಿಗಳು ಸೀಟುಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.ಆರಂಭಿಕ ನಾಲ್ಕು ಕೋರ್ಸುಗಳುಸರಕಾರಿ ಪಾಲಿಟೆಕ್ನಿಕ್‌ನಲ್ಲಿ ತಾತ್ಕಾಲಿಕವಾಗಿ ತರಗತಿಗಳು ಪ್ರಾರಂಭವಾಗಲಿದ್ದು ನೂತನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ ಕಂಪ್ಯೂಟರ್ ಸೈನ್ಸ್, ಬಿ.ಇ. ಕಂಪ್ಯೂ ಟರ್ ಸೈನ್ಸ್ (AIML)Artificial Intelligence Markup Language, ಬಿ.ಇ. ಇನ್ ಎಲೆಕ್ಟಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಎಂಜನಿಯರಿಂಗ್ ಹಾಗೂ ಬಿ.ಇ. ಎಲೆಕ್ಟಿಲ್ ಹಾಗೂ ಎಲೆಕ್ಟ್ರಾನಿಕ್ಸ್ ಸೇರಿದಂತೆ ನಾಲ್ಕು ಕೋರ್ಸುಹಳನ್ನು ಆರಂಭಿಸಲಾಗುತ್ತದೆ ಬರುವಂತ ವರ್ಷಗಳಲ್ಲಿ ಇನ್ನಷ್ಟು ಹೊಸ ಕೋರ್ಸುಗಳ ಸೇರ್ಪಡೆ ಆಗಲಿದೆ. ಇಂಜಿನಿಯರಿಂಗ್ ಕಾಲೇಜಿಗೆ ಅವಶ್ಯಕವಾಗಿರುವ ಬೋಧಕ ಸಿಬ್ಬಂದಿಯನ್ನು ರಾಜ್ಯದ ವಿವಿಧ ಸರ್ಕಾರಿ ತಾಂತ್ರಿಕ ಮಹಾ ವಿದ್ಯಾಲಯಗಳಲ್ಲಿ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುತ್ತಿರುವ ಆಧ್ಯಾಪಕರನ್ನು ಚಿಂತಾಮಣಿ ನೂತನ ಕಾಲೇಜಿಗೆ ನಿಯೋಜಿಸಲು…

Read More

ಕರ್ನಾಟಕದ ಸಚಿವ ಸಂತೋಷ್ ಲಾಡ್ ರಕ್ಷಣಾ ಕಾರ್ಯದಲ್ಲಿ ಪಾಲ್ಗೋಂಡಿದ್ದಾರೆ ಸಿದ್ದರಾಮಯ್ಯ ಮೇಲ್ವಿಚಾರಣೆ ನಡೆತ್ತಿದ್ದಾರೆ ನ್ಯೂಜ್ ಡೆಸ್ಕ್: ವಯನಾಡಿನಲ್ಲಿ ಸುರಿದ ರಣ ಭೀಕರ ಮಳೆಯಿಂದಾಗಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ಸಿಲುಕಿ ಮೃತಪಟ್ಟವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ,ಈ ಸಂದಿಗ್ದಸ್ಥಿಯಲ್ಲಿ ಕನ್ನಡಿಗರು ಸಿಲುಕಿಕೊಂಡಿರುವ ಬಗ್ಗೆ ಪ್ರಾಥಮಿಕ ಮಾಹಿತಿ ದೊರೆತ ಹಿನ್ನಲೆಯಲ್ಲಿ ಅವರನ್ನು ರಕ್ಷಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೂರವಾಣಿ ಮೂಲಕ ಸೂಚನೆ ನೀಡಿದ ಮೇರೆಗೆ ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಪ್ರವಾಹ ಪೀಡಿತ ವಯನಾಡಿಗೆ ತೆರಳಿದ್ದಾರೆ. ಕೇರಳ ಸರ್ಕಾರದ ಜೊತೆ ಕೈ ಜೋಡಿಸಿ ಜನರ ಜೀವ,ಆರೋಗ್ಯ ರಕ್ಷಣೆಗೆ ನೆರವಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದು ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯಗಳು, ಸಂತ್ರಸ್ಥರ ರಕ್ಷಣೆ ಸೇರಿದಂತೆ ತೊಡಗಿಸಿಕೊಂಡಿದ್ದಾರೆ.ವಯನಾಡಿಗೆ ಹೋಗಿರುವ ಸಚಿವ ಸಂತೋಷ್ ಲಾಡ್ ಸದ್ಯ ಕೇರಳ ರಾಜ್ಯದ ಮುಖ್ಯಮಂತ್ರಿ ಕಚೇರಿ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ದುರಂತದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ತುರ್ತು ಮತ್ತು ಕ್ಷಿಪ್ರ ಕ್ರಮಗಳನ್ನು…

Read More

ಶ್ರೀನಿವಾಸಪುರ:ಸೇವೆಯಲ್ಲಿ ಕರ್ತವ್ಯನಿಷ್ಠೆಯೊಂದಿಗೆ ಕಾರ್ಯನಿರ್ವಹಿಸಿ ಸರಳ ವ್ಯಕ್ತಿತ್ವದಲ್ಲಿ ಸಾರ್ಥಕತೆ ಕಂಡುಕೊಂಡು ನಿವೃತ್ತಿ ಹೊಂದುತ್ತಿರುವ ನೌಕರರ ಜೀವನ ಸುಖಮಯವಾಗಿರಲಿ ಎಂದು ಪುರಸಭೆ ಮುಖ್ಯಾಧಿಕಾರಿ ಸತ್ಯನಾರಯಣ ಶುಭಹಾರೈಸಿದರು.ಪುರಸಭೆಯಲ್ಲಿ ನೌಕರರಾಗಿ ಕಾರ್ಯನಿರ್ವಹಿಸಿ ವಯೋಸಹಜ ನಿವೃತ್ತರಾದ ಕಚೇರಿ ಸಹಾಯಕಿ ಶಾಂತಮ್ಮ ಹಾಗು ನೀರು ಸರಬರಾಜು ವಿಭಾಗದ ಕೃಷ್ಣ ಅವರನ್ನು ಗೌರವಿಸಿ ಬಿಳ್ಕೊಡುಗೆ ಕೊಟ್ಟು ಮಾತನಾಡಿದರು. ಸೇವಾವಧಿಯಲ್ಲಿ ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಪ್ರಾಮಾಣಿಕವಾದ ಸೇವೆ ಸಲ್ಲಿಸಿ ಸೌಹಾರ್ದತೆಯಿಂದ ನಡೆದುಕೊಂಡಿದ್ದರೆ ನಿವೃತ್ತಿ ನಂತರವೂ ಸಮಾಜದಲ್ಲಿ ಹೆಚ್ಚಿನ ಗೌರವ ಸಿಕ್ಕುತ್ತದೆ ಎಂದರು.ಪರಿಸರ ಇಂಜನೀಯರ್ ಲಕ್ಷ್ಮೀಶ ಮಾತನಾಡಿ ಸರ್ಕಾರಿ ಸೇವೆಯಲ್ಲಿ ನಿವೃತ್ತಿ ಸಹಜ ಆದರೆ ಅವರು ಕಾರ್ಯನಿರ್ವಹಣೆ ಸಮಯದಲ್ಲಿ ಎಲ್ಲರೊಂದಿಗೆ ಸೌಹಾರ್ದತೆಯಿಂದ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದುವುದು ಅತ್ಯಂತ ಹೆಮ್ಮೆಯ ವಿಚಾರ ಈ ವಿಚಾರದಲ್ಲಿ ಶಾಂತಮ್ಮ ಮತ್ತು ಕೃಷ್ಣ ಯಶ್ವಸಿಯಾಗಿದ್ದಾರೆ ಎಂದರು.ಹಿರಿಯ ಲೆಕ್ಕಾಧಿಕಾರಿ ನಾಗೇಶ ಮಾತನಾಡಿ ಸರ್ಕಾರಿ ಸೇವೆಯಲ್ಲಿ ಏಳುಬಿಳುಗಳು ಸಹಜ ಕಚೇರಿಯಲ್ಲಿ ಸಹಾಯರಾಗಿದ್ದ ಶಾಂತಮ್ಮ ಎಲ್ಲರಿಗೂ ಹಿರಿಕ್ಕನಾಗಿ ಸಿಬ್ಬಂದಿಯೊಂದಿಗೆ ಸೌಹಾರ್ದತೆಯಿಂದ ಕಾರ್ಯನಿರ್ವಹಣೆ ಮಾಡುತ್ತಿದ್ದರು,ನೀರು ಸರಬರಾಜು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ ಕೃಷ್ಣ ಪ್ರಾಮಾಣಿಕವಾಗಿ ವಿಶ್ವಾಸಾರ್ಹತೆಯಿಂದ ಕೆಲಸ…

Read More

ರಣ ಭೀಕರ ಮಳೆಯ ರುದ್ರ ನರ್ತನಕ್ಕೆ ವಯನಾಡಿನ ಭಾಗದಲ್ಲಿ ಭೂಕುಸಿತ ಮಣ್ಣಿನಡಿಯಲ್ಲಿ ನೂರಾರು ಶವಗಳು ನ್ಯೂಜ್ ಡೆಸ್ಕ್:ಸೋಮವಾರ ಎಲ್ಲವೂ ಚನ್ನಾಗಿತ್ತು ರಾತ್ರಿ ಊಟ ಮಾಡಿ ಮಲಗಿದವರು ಮದ್ಯರಾತ್ರಿಯಲ್ಲಿ ಎನಾಗುತ್ತಿದೆ ಅನ್ನುವಷ್ಟರಲ್ಲಿ ಕೇಳಿಸಿದ್ದು ಜನರ ಆಕ್ರಂದನ. ರಾತ್ರಿ ಬೆಳಗಾಗುವುದರೊಳಗೆ ಇಡೀ ಭೂಪ್ರದೇಶವೇ ಮಣ್ಣಿನಡಿಯಲ್ಲಿದೆ ಯಾರನ್ನು ಯಾರು ಕಾಪಾಡಿಕೊಳ್ಳಲು ಆಗದೆ ಕಾರ್ಗತ್ತಲ ಕರಾಳರಾತ್ರಿಯಲ್ಲಿ ಪ್ರಳಯವೆ ನಡೆದು ಹೋಗಿದೆ. ದೊಡ್ಡದೊಂದು ಬೆಟ್ಟವೆ ಊರಿನ ಮೇಲೆ ಬಂದು ಬಿದ್ದಿದೆ ಏಳೆಂಟು ಅಡಿ ಎತ್ತರದಲ್ಲಿ ನೀರುಹರಿದ ಪರಿಣಾಮ ಅದೇಷ್ಟೊ ಮನೆಗಳು ಕುಸಿದು ನೀರಿನಲ್ಲಿ ಕೊಚ್ಚಿಹೋಗಿದೆ ಆ ಮನೆಗಳಲ್ಲಿದ್ದವರು ಬದುಕಿದ್ದಾರೋ ಮೃತಪಟ್ಟಿದ್ದಾರೋ ಆನ್ನುವ ಸುಳಿವೆ ಇಲ್ಲ, ಸಿಕ್ಕ ಹೆಣಗಳು ಯಾರದು ಎಂದು ಹೇಳಲಾರದಷ್ಟು ವಿಕಾರವಾಗಿದೆ, ಬಾರಿ ಗಾತ್ರದ ಬೆಟ್ಟದ ಗುಂಡುಕಲ್ಲುಗಳು ಉರಳಿಕೊಂಡು ಜನವಸತಿ ಪ್ರದೇಶಗಳಲ್ಲಿ ಬಂದು ಬಿದ್ದಿವೆ. ಬಾರಿ ಗಾತ್ರದ ಮರದದಿಮ್ಮೆಗಳು ಮುರಿದು ಬಂದಿವೆ, ಕಾರು ದ್ವಿಚಕ್ರವಾಹನಗಳು ಅಡ್ಡಾ ದಿಡ್ಡಿಯಾಗಿ ಎಲ್ಲಂದರಲ್ಲಿ ಎಸೆದು ಬಿಸಾಕಿದಂತೆ ಬಿದ್ದಿವೆ ಕರಾಳವಾದ ವರುಣನ ರುದ್ರ ನರ್ತನದ ಪರಿಣಾಮ ಕಾಣಸಿದ್ದು ಮಣ್ಣಿನ ಕೆಸರು,ಕೊಚ್ಚಿ ಹೋಗುತ್ತಿದ್ದ ಮೃತದೇಹಗಳು…

Read More

ಶ್ರೀನಿವಾಸಪುರ:ವರ್ಗಾವಣೆ ಆಗಿರುವ ಮುಖ್ಯ ಶಿಕ್ಷಕನ ವರ್ಗಾವಣೆ ರದ್ದು ಮಾಡಿ ಅವರನ್ನು ಇದೆ ಶಾಲೆಯಲ್ಲಿಯೇ ಸೇವೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಮತ್ತು ಪೊಷಕರು ಪ್ರತಿಭಟನೆ ನಡೆಸಿದ ಘಟನೆ ಶ್ರೀನಿವಾಸಪುರ ಪಟ್ಟಣದ ತ್ಯಾಗರಾಜ ಬಡಾವಣೆಯಲ್ಲಿರುವ ಉನ್ನತಿಕೃತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅವರಣದಲ್ಲಿ ನಡೆಯಿತು.ಮುಖ್ಯ ಶಿಕ್ಷಕ ಭೈರೇಗೌಡ ಇದೆ ಶಾಲೆಯಲ್ಲಿ ಮುಂದುವರಿಯಬೇಕು ಎಂದು ಸುಮಾರು 400 ಕ್ಕೂ ಹೆಚ್ಚು ಮಕ್ಕಳು ಹಾಗೂ ನೂರಾರು ಪೋಷಕರು ಶಾಲೆಯ ಕೊಠಡಿಗೆ ತೆರಳದೆ ಆವರಣದಲ್ಲೇ ಪ್ರತಿಭಟನೆ ನಡೆಸಿ ಅವರನ್ನು ಇಲ್ಲಿ ಮುಂದುವರೆಸಿದಿದ್ದರೆ ನಮಗೆ ವರ್ಗಾವಣೆ ಪತ್ರ(ಟಿಸಿ) ಕೊಡಿ ಎಂದು ಅಗ್ರಹಿಸಿದರು.ಸರ್ಕಾರಿ ಶಾಲೆಯನ್ನು ಹೀಗೂ ಅಭಿವೃದ್ಧಿ ಮಾಡಬಹುದು ಎಂದು ಮಾಡಿ ತೋರಿಸಿದ ಮುಖ್ಯ ಶಿಕ್ಷಕ ಭೈರೇಗೌಡ ಸ್ವಯಂ ಪ್ರೇರಿತರಾಗಿ ವರ್ಗಾವಣೆ ಮಾಡಿಕೊಂಡಿರಬಹುದು,ಅದು ಅವರು ಇತ್ತಿಚಿಗೆ ಮಾನಸಿಕವಾಗಿ ಒತ್ತಡ ಹೇರಿ ಸನ್ನಿವೇಶ ಸೃಷ್ಠಿಮಾಡಿರುವುದು ಖಂಡನೀಯ ವಿದ್ಯಾರ್ಥಿಗಳು ಪರಿತಪಿಸುತ್ತಿದ್ದಾರೆ ಇಂತಹ ಪರಿಸ್ಥಿತಿಯಲ್ಲಿ ಮುಖ್ಯ ಶಿಕ್ಷರ ವರ್ಗಾವಣೆ ಮಕ್ಕಳಿಗೆ ಅನ್ಯಾಯ ಮಾಡಿದಂತಾಗುತ್ತದೆ ಅವರನ್ನು ಇಲ್ಲೆ ಮುಂದುವರೆಸಲು ಶಿಕ್ಷಣ…

Read More

ಶ್ರೀನಿವಾಸಪುರ: ಶ್ರೀನಿವಾಸಪುರದ ಗ್ರಾಮ ದೇವತೆ ಶ್ರೀಚೌಡೇಶ್ವರಿ ದೇವಾಲಯಕ್ಕೆ ತನ್ನದೆ ಆದ ಐತಿಹ್ಯ ಇದೆ ಇದರ ಕಲ್ಯಾಣಿ ಭೃಹದಕಾರವಾಗಿದ್ದು ನಿರ್ವಹಣೆ ಇಲ್ಲದೆ ಸೋರಗಿದೆ ಇಂತಹ ಕಲ್ಯಾಣಿಯನ್ನು ಇಂದು ಬೆಂಗಳೂರಿನ ಶಿವಭಕ್ತರ ತಂಡವೊಂದು ಭಾನುವಾರ ಇಲ್ಲಿಗೆ ಆಗಮಿಸಿ ಸ್ವಚ್ಚಮಾಡಿದ್ದು ಹೆಮ್ಮೆಯ ವಿಚಾರವಾಗಿದೆ.ಊರಿನ ಕಲ್ಯಾಣಿ ಸ್ವಚ್ಚಮಾಡುವ ವಿಚಾರದಲ್ಲಿ ಸ್ಥಳೀಯವಾಗಿ ನೂರೆಂಟು ವಿಘ್ನಗಳು ಎಪ್ಪಾತ್ತಾರು ಅಡ್ಡಿಆತಂಕಗಳು ಇವೆಲ್ಲವೂ ಸಾಮನ್ಯವೆ ಸರಿ ಆದರೆ ಊರಿನ ಶ್ರೀಚೌಡೇಶ್ವರಿ ಕಲ್ಯಾಣಿ ಕ್ಲೀನ್ ಮಾಡಲು ಬೆಂಗಳೂರಿನ ಹಲಸೂರಿನಲ್ಲಿರುವ ಅಂಡರಸು ಉಳವರಪಾಣಿ ತಿರು ಕೂಟಂನ ಆರವತ್ತಕ್ಕೂ ಹೆಚ್ಚು ಸದಸ್ಯರು ಶ್ರೀನಿವಾಸಪುರಕ್ಕೆ ಆಗಮಿಸಿ ಕಲ್ಯಾಣಿಯಲ್ಲಿ ಹೂಳೆತ್ತುವುದು ಸೇರಿದಂತೆ ಬೆಳದಿದ್ದ ಗಿಡಗಂಟಿಗಳನ್ನು ಕಿತ್ತು ಕಸಕಡ್ದಿ ತಗೆದು ಹೋರಹಾಕಿದ್ದಾರೆ.ಅರವತ್ತುಕ್ಕೂ ಹೆಚ್ಚು ಸದಸ್ಯರು ಆಗಮಿಸಿದ ತಂಡದಲ್ಲಿ ಯುವಕರು ಯುವತಿಯರು ಮದ್ಯವಯಸ್ಕ ಮಹಿಳೆಯರು ಪುರುಷರು ಹಿರಿಯರು ನಿವೃತ್ತ ಅಧಿಕಾರಿಗಳು ವಿವಿಧ ಹುದ್ದೆಗಳನ್ನು ಕಾರ್ಯನಿರ್ವಹಿಸುವರು ಇದ್ದು ಇವರೆಲ್ಲ ರಾಜ್ಯ ಸಾರಿಗೆ ಬಸ್ ಮಾಡಿಕೊಂಡು ಬೆಂಗಳೂರಿನಿಂದ ಅಗಮಿಸಿದ್ದು ಅವರೆಲ್ಲರು ಪಿಕಾಸಿ,ಸನಿಕೆ,ಹಾರೆ,ಗುದ್ದಲಿ,ಕೈಯಲ್ಲಿ ಹಿಡಿದುಕೊಂಡು ಕಲ್ಯಾಣಿಯಲ್ಲಿ ಬಿದ್ದಿದ್ದ ಕಸಕಡ್ಡಿ, ಬೆಳೆದಿದ್ದ ಮುಳ್ಳುಗಿಡ,ಪೊದೆಯನ್ನು ಕತ್ತರಿಸಿ ಸಂಪೂರ್ಣ ತೆರವು ಮಾಡಿ…

Read More