ಬ್ಯಾಟಪ್ಪ ನೇತೃತ್ವದಲ್ಲಿ ರೈತರ ಸಭೆ ಶ್ಯಾಗತ್ತೂರು ಸುಧಾಕರ್ ಭಾಗಿ ಕೈಗಾರಿಕೆ ಸ್ಥಾಪನೆಯಿಂದ ಅನಾನುಕೂಲ ಶ್ರೀನಿವಾಸಪುರ:ಖಾಸಗಿ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲ ಮಾಡಿಕೊಡಲು ಕರ್ನಾಟಕ ಕೈಗಾರಿಕ ಪ್ರದೇಶಾಭಿವೃದ್ಧಿ ಮಂಡಳಿ ರೈತರ ಜಮೀನು ಭೂಸ್ವಾಧೀನ ಮಾಡಿಕೊಳ್ಳಲು ನಾವು ಬಿಡುವುದಿಲ್ಲ ಎಂದು ಕೋಚಿಮುಲ್ ಮಾಜಿ ಅಧ್ಯಕ್ಷ ಎನ್.ಜಿ.ಬೇಟಪ್ಪ ಹೇಳಿದರು.ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶ್ಯಾಗತ್ತೂರು ಸುಧಾಕರ್ ಹಾಗು ಶ್ರೀನಿವಾಸಪುರ ತಾಲೂಕಿನ ಯದರೂರು ಭಾಗದ ರೈತರೊಂದಿಗೆ ಬುಧವಾರ ಸಮಾಲೋಚನೆ ಸಭೆ ನಡೆಸಿ ಮಾತನಾಡಿದ ಅವರು ಖಾಸಗಿ ಕೈಗಾರಿಕೆಗಳಿಗೆ ಕೃಷಿ ಜಮೀನು ಬಿಟ್ಟುಕೊಟ್ಟರೆ ರೈತ ಸಂಸ್ಕೃತಿ ನಾಶವಾಗುತ್ತದೆ ರೈತರು ಬೆಳೆದಿರುವಂತ ಮಾವು, ರೇಷ್ಮೆ,ಹೈನುಗಾರಿಕೆ ಕ್ಷೇತ್ರದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಇದರಿಂದ ರೈತರು ಆರ್ಥಿಕವಾಗಿ ಹಾಗು ಸಾಮಾಜಿಕವಾಗಿ ಕುಂಠಿತರಾಗಿ ಕೃಷಿ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದರು.ಕೈಗಾರಿಕೆ ಸ್ಥಾಪನೆಯಿಂದ ಅನಾನುಕೂಲ ಹೆಚ್ಚುತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶ್ಯಾಗತ್ತೂರು ಸುಧಾಕರ್ ಮಾತನಾಡಿ ಕೈಗಾರಿಕೆಗಳ ಸ್ಥಾಪನೆಯಿಂದ ಅನುಕೂಲಗಳಿಗಿಂತ ಅನಾನುಕೂಲಗಲೇ ಹೆಚ್ಚಾಗಿದ್ದು ಸರ್ಕಾರ ಒಂದು ಸಲ ಈ ಭಾಗದ ಜಮೀನುಗಳನ್ನು ಭೂ ಸ್ವಾಧೀನ…
Author: Srinivas_Murthy
ಶ್ರೀನಿವಾಸಪುರ: ಯಲ್ದೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಗಳಾಂಭ ವರ್ಗಾವಣೆಗೆ ಅಗ್ರಹಿಸಿ ಗ್ರಾಮ ಪಂಚಾಯಿತಿಯ ಸದಸ್ಯರು ಹಾಗು ಸಾರ್ವಜನಿಕರು ಎರಡು ದಿನಗಳ ಕಾಲ ನಡೆಸಿದ ಪ್ರತಿಭಟನೆ ಹಿನ್ನಲೆಯಲ್ಲಿ ಅವರನ್ನು ವರ್ಗಾವಣೆ ಮಾಡಲು ಮೇಲಧಿಕಾರಿಗಳಿಗೆ ಶಿಫಾರಸ್ಸು ಮಾಡುವುದಾಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಎ.ಎನ್ ರವಿ ಭರವಸೆ ನೀಡಿರುತ್ತಾರೆ.ಶ್ರೀನಿವಾಸಪುರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರವಾಗಿ ಭೌಗೋಳಿಕವಾಗಿ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಗುರುತಿಸಿರುವ ಯಲ್ದೂರು ಗ್ರಾಮ ಪಂಚಾಯಿತಿ, ಅಲ್ಲಿನ ಪಂಚಾಯಿತಿ ಸದಸ್ಯರು ಹೇಳುವಂತೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯಾಗಿರುವ ಮಂಗಳಾಂಭ ವರ್ಗಾವಣೆಯಾಗಿ ಬಂದಾಗಿನಿಂದಲೂ ಪಂಚಾಯಿತಿ ಸದಸ್ಯರೊಂದಿಗೆ ಸೌಹಾರ್ದತೆ ಕಾಪಾಡಿಕೊಳ್ಳದ ಕಾರಣ ಪಂಚಾಯಿತಿ ಅಭಿವೃದ್ಧಿ ವಿಚಾರವಾಗಿ ನಿತ್ಯವೂ ಕಿತ್ತಾಟ ಸಾಮಾನ್ಯವಾಗಿತ್ತು ಇದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಸಮಸ್ಯಯಾಗಿತ್ತು ಈಗ ಇದು ಪಂಚಾಯಿತಿ ಅಭಿವೃದ್ಧಿ ವರ್ಗಾವಣೆಯಾದರೆ ಮಾತ್ರ ಸಮಸ್ಯೆ ನೀವಾರಣೆಯಾಗುತ್ತದೆ ಎಂದು ಸಾರ್ವಜನಿಕರು ಅಗ್ರಹಿಸುವವರಿಗೆ ಬಂದು ತಲುಪಿದೆ.ಕಳೆದ ಎರಡು ದಿನಗಳಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾದ್ಯಕ್ಷ ಹಾಗು ಸದಸ್ಯರು ಮತ್ತು ಸಾರ್ವಜನಿಕರು ಪಂಚಾಯಿತಿ ಕಚೇರಿ ಮುಂಬಾಗದಲ್ಲಿ ಪೆಂಡಾಲ್ ಹಾಕಿಕೊಂಡು…
ನ್ಯೂಜ್ ಡೆಸ್ಕ್:ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದ ಪ್ರತಿ 30 ಸೆಕೆಂಡಿಗೆ ಒಬ್ಬರು ಸಾವನ್ನಪ್ಪುತ್ತಿದ್ದಾರೆ ಎಂದು ಸಮೀಕ್ಷೆಗಳು ಹೇಳಿತ್ತಿವೆ ಕಣ್ಣಿಗೆ ಕಾಣದ ಅಗೋಚರ ರೂಪದಲ್ಲಿ ಪ್ಲಾಸ್ಟಿಕ್ ಮನುಷ್ಯರ ದೇಹವನ್ನು ಪ್ರವೇಶಿಸುತ್ತಿದ್ದು ಇದನ್ನು ತಡೆಯಲು ವಿಫಲವಾಗುತ್ತಿದ್ದೇವೆ, ಒಮ್ಮೆ ಬಳಸಿ ಬಿಸಾಡಬಹುದಾದ ರೇಜರ್ಗಳು ಈಗ ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಲಭ್ಯವಿವೆ. ಪದೇ ಪದೇ ತೊಳೆದು ಉಪಯೋಗಿಸಲು ಸಮಯವಿಲ್ಲದವರು ಇಂತಹ ರೇಜರ್ ಗಳನ್ನು ಖರೀದಿಸುತ್ತಿದ್ದಾರೆ. ವಾಸ್ತವವಾಗಿ, ಈ ವಸ್ತುಗಳ ತಯಾರಿಕೆ ಮತ್ತು ಪ್ಯಾಕಿಂಗ್ ಗಾಗಿ ಹೆಚ್ಚು ಪ್ಲಾಸ್ಟಿಕ್ ಅನ್ನು ಬಳಸಲಾಗುತ್ತದೆ. ಪ್ಲ್ಯಾಸ್ಟಿಕ್ ಹೊದಿಕೆ ಮತ್ತು ಪ್ಲಾಸ್ಟಿಕ್ ಕೇಸ್ ಅನ್ನು ಹೆಚ್ಚುವರಿಯಾಗಿ ರೇಜರ್ ಪ್ಯಾಕಿಂಗ್ ಸಂದರ್ಭದಲ್ಲಿ ಬಳಸಲಾಗುತ್ತದೆ. ರೇಜರ್ ಸಂಪೂರ್ಣವಾಗಿ ಪ್ಲಾಸ್ಟಿಕ್ನಿಂದ ಮಾಡಲ್ಪಟ್ಟಿದೆ. ಬದಲಿಗೆ ಲೋಹದಿಂದ ಮಾಡಲ್ಪಟ್ಟ ರೇಜರ್ ಬಳಸಿದರೆ ಅದಕ್ಕೆ ಬ್ಲೇಡ್ ಅನ್ನು ಮಾತ್ರ ಬದಲಾಯಿಸಬಹುದಾಗಿರುತ್ತದೆ ಲೋಹದ ರೇಜರ್ ಪ್ಲಾಸ್ಟಿಕ್ ಬಳಸಿ ಬಿಸಾಡಬಹುದಾದ ರೇಜರ್ಗಿಂತ ತುಸು ದುಬಾರಿ ಅನಿಸಬಹುದು ಆದರೆ ಒಮ್ಮೆ ಖರೀದಿಸಿದ ನಂತರ ಬ್ಲೇಡ್ಗಳು ಕಡಿಮೆ ವೆಚ್ಚಕ್ಕೆ ಸಿಗುತ್ತದೆ.ಅಡುಗೆ ಮಾಡಲು ಸಮಯವಿಲ್ಲದ ಸೋಮಾರಿ ಜನರು ರೆಡಿಮೇಡ್ ಆಹಾರವನ್ನು…
ನ್ಯೂಜ್ ಡೆಸ್ಕ್:’ಜೂನಿಯರ್ ಎನ್.ಟಿ.ಆರ್ ನಟನೆಯ “ದೇವರ” ಸಿನಿಮಾ ರೀಲಿಜ್ ಗಾಗಿ ನಂದಮೂರಿ ಅಭಿಮಾನಿಗಳು ಕಾತುರದಿಂದ ಕಾಯುತ್ತ ಕೂತಿದ್ದಾರೆ ಎರಡು ವರ್ಷಗಳಕಾಲ ಯಾವುದೆ ಎನ್.ಟಿ.ಆರ್ ಸಿನಿಮಾ ಇರಲಿಲ್ಲ 2022 ರಲ್ಲಿ ಬಿಡುಗಡೆಯಾದ RRR ನಂತರ ದೇವರ ಸಿನಿಮಾ ಬರುತ್ತಿದೆ.ಈಗಾಗಲೆ ಬಿಡುಗಡೆಯಾಗಿರುವ ಒಕ್ಕೆ ಮತ್ತು ಚುಡುಮಲ್ಲೆ ಹಾಡುಗಳು ದಾಖಲೆ ಮಟ್ಟದಲ್ಲಿ ವಿಕ್ಷಕರನ್ನು ತಲುಪಿದ್ದು ಅಭಿಮಾನಿಗಳು ಫೀದಾ ಆಗಿದ್ದು ಮೂರನೇಯ ಹಾಡಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.ಸೆಪ್ಟೆಂಬರ್ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ಧಿ ಹೊರಬಿದ್ದಿದೆ.ದೇವರ ಸಿನಿಮಾ ಕೊರಟಾಲ ಶಿವ ಬರೆದು ನಿರ್ದೇಶಿಸಿದ್ದು ರೊಮ್ಯಾಂಟಿಕ್ ಆಕ್ಷನ್ ಎಂಟರ್ಟೈನರ್ ಮತ್ತು ಸುಧಾಕರ್ ಮಿಕ್ಕಿಲಿನೇನಿ ಮತ್ತು ನಂದಮೂರಿ ಕಲ್ಯಾಣ್ ರಾಮ್ ಜಂಟಿಯಾಗಿ ನಿರ್ಮಿಸಿರುವಂತ ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್, ಜಾನ್ವಿ ಕಪೂರ್(ಶ್ರೀದೇವಿ ಮಗಳು), ಸೈಫ್ ಅಲಿ ಖಾನ್, ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ.
ನ್ಯೂಜ್ ಡೆಸ್ಕ್: ಮದುವೆಯ ಅಹ್ವಾನ ಪತ್ರಿಕೆ ವಿನೂತನವಾಗಿ ಇರಬೇಕು ಸಾಕಷ್ಟು ಪ್ರಚಾರವಾಗಬೇಕು ಎಂದೆಲ್ಲಾ ಕಸರತ್ತು ಮಾಡಿ ಅಹ್ವಾನಪತ್ರಿಕೆ ಮುದ್ರಿಸುತ್ತಾರೆ. ಇಲ್ಲೊಬ್ಬ ಶಿಕ್ಷಕಿ ತನ್ನ ವೃತ್ತಿಗೆ ಅನುಗುಣವಾಗಿ ಪ್ರಶ್ನಾವಳಿಯ ರೂಪದಲ್ಲಿ ಮದುವೆ ಆಹ್ವಾನ ಪತ್ರಿಕೆಯನ್ನು ಮುದ್ರಿಸಿದ್ದು, ಮದುವೆ ಅಹ್ವಾನ ಪತ್ರಿಕೆಯಲ್ಲಿ ಒಂದೇ ಉತ್ತರ ಬಹು ಆಯ್ಕೆಯೊಂದಿಗೆ 8 ಪ್ರಶ್ನೆಗಳಾಗಿ ವಿಂಗಡಿಸಲಾಗಿದೆ ಅದರಲ್ಲಿ ವರ, ವಧು, ಮದುವೆ ದಿನಾಂಕ, ಸಮಯ, ಮಂಟಪ, ಭೋಜನದ ವಿವರಗಳಿಂದ ತುಂಬಿದೆ. ಇದು ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಪೆನುಮಂತ್ರ ಮಂಡಲದ ಮರ್ಟೇರುವಿನ ಶಿಕ್ಷಕಿ ಪ್ರತ್ಯೂಷಾ ಅವರ ವಿವಾಹ ಪತ್ರಿಕೆಯಾಗಿದ್ದು ಈ ತಿಂಗಳ 23ರಂದು ಮದುವೆ ನಡೆಯಲಿದೆ.
ನ್ಯೂಜ್ ಡೆಸ್ಕ್:ಆಂಧ್ರ ಪ್ರದೇಶದ ಪುಂಗನೂರಿನ ಚೌಡೇಪಲ್ಲಿ ಮಂಡಲದ ಕಾಟಿಪೇರಿಯ ಮೌನಿಕಾ ಮದನಪಲ್ಲಿ ಅಬಕಾರಿ ಇಲಾಖೆ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಭಾನುವಾರ ರಜೆ ಇದ್ದ ಹಿನ್ನೆಲೆಯಲ್ಲಿ ಮಕ್ಕಳಾದ ಅನಿಶಾ ರೆಡ್ಡಿ ಮತ್ತು ತನೀಷ್ ರೆಡ್ಡಿ ಅವರೊಂದಿಗೆ ಸ್ವಗ್ರಾಮದಲ್ಲಿ ಹೊಲ ಹಾಗು ಹಸುಗಳನ್ನು ನೋಡಿ ಬರಲು ಹೋಗಿದ್ದು ಮಗಳು ಅನಿಶಾ ರೆಡ್ಡಿ ಹಸುವಿನ ಹಗ್ಗವನ್ನು ಹಿಡಿದು ಆಟವಾಡುಲು ಹೋದಾಗ ಹಸು ಗಾಬಾರಿಗೊಂಡು ಓಡಲು ಪ್ರಾರಂಭಿಸಿ ನೀರಿನ ಹಳ್ಳಕ್ಕೆ ಇಳದಿದೆ ಹಗ್ಗ ಹಿಡದಿದ್ದ ಮಗು ಸಹ ಹಸುವಿನೊಂದಿಗೆ ಹೋಗಿ ನಿರಿನಲ್ಲಿ ಬಿದ್ದಿದ್ದಾಳೆ ಇದನ್ನು ಗಮನಿಸಿ ಮಗುವನ್ನು ರಕ್ಷಿಸಲು ತಾಯಿ ಕೂಡ ನೀರಿನಲ್ಲಿ ಇಳಿದ್ದಾಳೆ ನೀರಿನಕೊಳ ಆಳ ಇದ್ದು ತಾಯಿ ಮಗು ಇಬ್ಬರೂ ಈಜು ಬಾರದೆ ಮುಳಗಿ ಸಾವನ್ನಪ್ಪಿದ್ದಾರೆ.
ಶ್ರೀನಿವಾಸಪುರ:ಶ್ರೀನಿವಾಸಪುರ ತಾಲ್ಲೂಕು ಬಯಲು ಸೀಮೆ ಪ್ರದೇಶವಾಗಿದ್ದು ಇಲ್ಲಿ ಶಾಶ್ವತ ನೀರಾವರಿ ಸೌಲಭ್ಯವಿಲ್ಲದೆ ರೈತರು ತಮ್ಮ ಸ್ವಾಭಿಮಾನದ ಬದುಕಿಗಾಗಿ ಮಳೆಯಾಧಾರಿತ ಕೃಷಿಯನ್ನು ಮಾಡುತ್ತ ಎಣಗಾಡುತ್ತಿದ್ದಾರೆ ಇಂತಹ ಪರಿಸ್ಥಿತಿಯಲ್ಲಿ ಗ್ರಾಮೀಣ ಜನರ ಜೀವನಕ್ಕೆ ಅಧಾರವಾಗಿರಲು ಉದ್ಯೋಗ ಸೃಷ್ಠಿಸಲು ಶ್ರೀನಿವಾಸಪುರ ತಾಲೂಕಿನ ಎರಡು ಕಡೆ ಕೈಗಾರಿಕಾ ವಸಾಹತುಗಳನ್ನು ಸ್ಥಾಪಿಸಲು ಉದ್ದೇಶಿಸಿರುವುದಾಗಿ ಶಾಸಕ ವೆಂಕಟಶಿವಾರೆಡ್ಡಿ ಪತ್ರಿಕಾ ಪ್ರಕಟಣೆ ಮೂಲಕ ಹೇಳಿದ್ದಾರೆ.ಶ್ರೀನಿವಾಸಪುರ-ಮುಳಬಾಗಲು ರಸ್ತೆಯ ಯದರೂರು ಭಾಗದಲ್ಲಿ 2000 ಎಕರೆ ಹಾಗೂ ಮದನಪಲ್ಲಿ ರಸ್ತೆಯ ಲಕ್ಷ್ಮಿಪುರ ಭಾಗದಲ್ಲಿ 3000 ಎಕರೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಕೈಗಾರಿಕಾ ಪ್ರದೇಶಗಳಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಇಟ್ಟುಕೊಂಡು ಯೋಜನೆ ರೂಪಿಸಿದ್ದು ಕಾರ್ಯೋನ್ಮುಖವಾಗಿದೆ ಶ್ರೀನಿವಾಸಪುರ-ಮುಳಬಾಗಿಲು ರಸ್ತೆಯ ಎದುರೂರು ಗ್ರಾಮದ ಆಸುಪಾಸಿನಲ್ಲಿ 2,000 ಎಕರೆ ಕೈಗಾರಿಕಾ ಅಭಿವೃದ್ಧಿಗೆ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ ಈಗಾಗಲೆ ಅನುಮೋದನೆ ಸಹ ನೀಡಿದೆ ಜಮೀನು ಸ್ವಾಧೀನ ಪ್ರಕ್ರಿಯೆಗಾಗಿ ಪ್ರಾಥಮಿಕ ನೋಟಿಫಿಕೇಶನನ್ನು ನೀಡಿದ್ದು ಇಲ್ಲಿ ಕೆಲ ಸಣ್ಣ-ಪುಟ್ಟ ಸಮಸ್ಯೆಗಳು ಇದೆ ಆದನ್ನು ನಿವಾರಿಸುವ ಪ್ರಯತ್ನ ಮಾಡಲಾಗುತ್ತಿದ್ದು ಅಷ್ಟರಲ್ಲಿ ಜಮೀನು ಸ್ವಾಧೀನ ಪಡಿಸಿಕೊಳ್ಳುವ ವಿಚಾರವನ್ನು ದುರ್ಭಳಕೆ ಮಾಡಿಕೊಂಡ…
ನ್ಯೂಜ್ ಡೆಸ್ಕ್: ಬೈಕ್ ವೀಲಿಂಗ್ ಪುಂಡರ ಹಾವಳಿ ದಿನೆ ದಿನೆ ಮಿತಿ ಮೀರುತ್ತಿದ್ದು ಅದರಲ್ಲೂ ಹೆದ್ದಾರಿಗಳಲ್ಲಿ ಸಂಚಾರ ದಟ್ಟಣೆ ನಡುವೆಯೇ ಡೊಂಟ್ ಕೇರ್ ಎಂದು ಪುಂಡರು ವೀಲಿಂಗ್ ಮಾಡುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವುದು ಸಾಮಾನ್ಯವಾಗಿಬಿಟ್ಟಿದೆ ಇದು ಕೆಲವೊಮ್ಮೆ ಅಪಘಾತಕ್ಕೂ ಕಾರಣವಾಗುತ್ತಿದ್ದು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ರು ಕ್ರಮ ಕೈಗೊಳ್ಳದ ಕಾರಣ ಜನರು ಸಹ ವೀಲಿಂಗ್ ಪುಂಡರ ವಿರುದ್ದ ರೋಸಿಹೋಗಿದ್ದು ಸಾರ್ವಜನಿಕರೆ ವೀಲಿಂಗ್ ಮಾಡುತ್ತಿದ್ದ ಪುಂಡರಿಗೆ ತಕ್ಕ ಪಾಠ ಕಲಿಸಿದ ಘಟನೆ ನಡದಿದೆ.ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯ ನೆಲಮಂಗಲ ಫ್ಲೈಓವರ್ ಅಡಕಮಾರನಹಳ್ಳಿ ಬಳಿ ವೀಲಿಂಗ್ ಮಾಡುತ್ತಿದ್ದ ಪುಂಡರು ಅಪಘಾತ ಮಾಡಿದ್ದಾರೆ. ವೀಲಿಂಗ್ ಮಾಡುತ್ತಿದ್ದ ಯುವಕನೊಬ್ಬ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಘಟನೆ ಬಳಿಕ ಇತರ ವಾಹನಗಳ ಸವಾರರು ಆಕ್ರೋಶ ಭರಿತರಾಗಿ ವೀಲಿಂಗ್ ಮಾಡುತ್ತಿದ್ದ ಬೈಕ್ಗಳನ್ನು ತಡೆದಿದ್ದಾರೆ ಇದರಿಂದ ಅಪಘಾತವಾದ ಬೈಕ್ ನ್ನು ಅಲ್ಲೆ ಬಿಟು ಪುಂಡರು ಹೋಡಿ ಹೋಗಿದ್ದಾರೆ ಅಲ್ಲಿದ್ದ ಜನರ ಗುಂಪು ಬೈಕ್ ಅನ್ನು ಫ್ಲೈಒವರ್ ನಿಂದ ಕೆಳಗೆ ಎಸೆದು ತಮ್ಮ…
ಶ್ರೀನಿವಾಸಪುರ:ಕೋಲ್ಕತಾದ ಕೀರಿಯ ವೈದ್ಯೆ ಮೇಲೆ ಅತ್ಯಾಚಾರ ಎಸಗಿ ಪೈಶಾಚಿಕವಾಗಿ ಹತ್ಯೆ ಮಾಡಿದ ರಾಕ್ಷಸೀಯ ಘಟನೆ ಖಂಡಿಸಿ ಇಂದು ಶ್ರೀನಿವಾಸಪುರದ ವೈದ್ಯರು ಪ್ರತಿಭಟನೆ ನಡೆಸಿದರು.ಪಶ್ಚಿಮ ಬಂಗಾಳದ ಕೋಲ್ಕತಾ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿರುವ ಟ್ರೈನಿ ವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಬರ್ಬರ ಕೊಲೆಯನ್ನು ಖಂಡಿಸಿ ಇಂದು ತಾಲೂಕು ಭಾರತೀಯ ವೈದ್ಯಕೀಯ ಸಂಘ ಮುಷ್ಕರ ನಡೆಸಿತು ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಭಾನುವಾರ ಬೆಳಿಗ್ಗೆ 6 ಗಂಟೆವರೆಗೆ 24 ಗಂಟೆಗಳ ಕಾಲ ತುರ್ತು ವೈದ್ಯಕೀಯ ಸೇವೆಯನ್ನು ಹೊರತುಪಡಿಸಿ ಉಳಿದೆಲ್ಲ ಸೇವೆಗಳನ್ನು ಬಂದ್ ಮಾಡಿದ ಶ್ರೀನಿವಾಸಪುರ ತಾಲೂಕಿನ ಖಾಸಗಿ ಹಾಗು ಸರ್ಕಾರಿ ಆಸ್ಪತ್ರೆಗಳವರು ಆರೋಗ್ಯಸಿಬ್ಬಂದಿ ಮತ್ತು ವೈದ್ಯರು ಪ್ರತಿಭಟನೆಯಲ್ಲಿ ಪಾಲ್ಗೋಂಡಿದ್ದರು.ಈ ಸಂದರ್ಬದಲ್ಲಿ ತಾಲೂಕು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ವೆಂಕಟಾಚಲ ಮಾತನಾಡಿ ಕೊಲ್ಕತ್ತಾದಲ್ಲಿ ವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಹತ್ಯೆಮಾಡಿರುವುದು ಅತ್ಯಂತ ಹೇಯ ಕೃತ್ಯ ಮುಂದಿನ ದಿನಗಳಲ್ಲಿ ಆಸ್ಪತ್ರೆ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಮಹಿಳೆಯರಿಗೆ ರಕ್ಷಣೆ ನೀಡಬೇಕು,ವೈದ್ಯಕೀಯ ಕ್ಷೇತ್ರದಲ್ಲೂ ರಕ್ಷಣೆ…
ಕೋಲಾರ : ಕೋಲಾರ ಜಿಲ್ಲೆಯಾದ್ಯಂತ ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಲು ಜಿಲ್ಲಾಧಿಕಾರಿ ಅಕ್ರಂ ಪಾಷ ಕಠಣ ಕ್ರಮಕ್ಕೆ ಸೂಚಿಸಿದ್ದಾರೆ ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ಮಾರಾಟ ಮಾಡುತ್ತಿರುವವರ ವಿರುದ್ಧ ಕಾಯ್ದೆಯನುಸಾರ ಕ್ರಮ ತಗೆದುಕೊಳ್ಳಲು ಪ್ರತಿ ತಾಲ್ಲೂಕುವಾರು ಸಮಿತಿ ರಚಿಸಲು ಸೂಚಿಸಿದ್ದಾರೆ. ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳ ಬಳಕೆ ಕುರಿತಾಗಿ ಅರಿವು ಮೂಡಿಸುವ ನಿಟ್ಟಿನಲ್ಲಿ ಹಾಗೂ ಪರಿಸರ ಸ್ನೇಹಿ ಪರ್ಯಾಯ ವಸ್ತುಗಳನ್ನು ಉಪಯೋಗಿಸುವ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳಾದ ಕ್ಯಾರಿಬ್ಯಾಗ್, ಚಮಚ, ತಟ್ಟೆ, ಲೋಟ ಇತ್ಯಾದಿ ತಯಾರಿಕ ಘಟಕಗಳು, ಗೋದಾಮು ಮತ್ತು ಮಾರಾಟ ಮಳಿಗೆಗಳ ಮೇಲೆ ನಿಗಾ ಇಟ್ಟು, ದಾಳಿ ನಡೆಸಿ ಅಂತವರ ವಿರುದ್ಧ ದಂಡ ಹಾಗೂ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಬೇಕೆಂದು ಸಂಬಂಧಪಟ್ಟ ಪುರಸಭೆ ಪಟ್ಟಣಪಂಚಾಯಿತಿ ನಗರ ಸಭೆಗಳು ಹಾಗು ಗ್ರಾಮ ಪಂಚಾಯಿತಿಗಳಿಗೆ ನಿರ್ದೇಶನ ನೀಡಿದ್ದಾರೆ.ಜಿಲ್ಲಾಡಳಿತ ವತಿಯಿಂದ ಸಾರ್ವಜನಿಕರೆಗೆ ಹೆಚ್ಚಿನ ರೀತಿಯಲ್ಲಿ ತಲುಪುವ ಹಾಗೆ ಜಾಗೃತಿ ಫಲಕಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಬೇಕು…