Author: Srinivas_Murthy

ನ್ಯೂಜ್ ಡೆಸ್ಕ್:ಅಧಿಕಾರಿಗಳ ಅಕ್ರಮಕ್ಕೆ ಕೊನೆ ಮೊದಲು ಇಲ್ಲದಂತಾಗಿದೆ ನರೇಗಾ ಯೊಜನೆಯ ಅಡಿಯಲ್ಲಿ ಪ್ರಕೃತಿಯಲ್ಲೂ ಹಣ ಲಪಟಾಯಿಸುವ ದಂದೆ ಚಾಮರಾಜನಗರದಲ್ಲಿ ನಡದಿದೆ ಎನ್ನಲಾಗಿದ್ದು ಪರಿಸರ ಪ್ರೇಮಿಯೊಬ್ಬ ಸ್ವಯಂ ಬೆಳಸಿದ್ದ ಗಿಡಗಳಿಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(MGNREGA)ಯಲ್ಲಿ 1.87 ಲಕ್ಷ ಹಣ ಮಾಡಿಕೊಂಡಿರುವ ಘಟನೆ ನಡೆದಿದೆ ಎನ್ನಲಾಗಿದೆ.ಪರಿಸರ ಪ್ರೇಮಿ ವೆಂಕಟೇಶ್ ಎನ್ನುವರು ಕಷ್ಟಪಟ್ಟು ಬಿಸಿಲಲ್ಲಿ ಬೆವರು ಸುರಿಸಿ ಸಸಿಗಳನ್ನು ನಟ್ಟಿದ್ದರು ಆದನ್ನು ಮನರೇಗಾದಡಿ ಅಧಿಕಾರಿಗಳು ಬಂಡವಾಳ ಮಾಡಿಕೊಂಡಿದ್ದಾರೆ. ಮನರೇಗಾದಡಿ ಅಕ್ರಮ ನಡೆಯಬಾರದೆಂದು ಹಲವು ಕಟ್ಟುಪಾಡುಗಳನ್ನು ರೂಪಿಸಲಾಗಿದೆ.ಇದರ ನಡುವೆಯೂ ಅಕ್ರಮ ನಡೆಯುತ್ತಿವೆ ಎಂಬುದಕ್ಕೆ ಈ ನಿದರ್ಶನವೇ ಸಾಕ್ಷಿಯಾಗಿದೆ.ಚಾಮರಾಜನಗರ ಹೊರ ವಲಯದ ಬೇಡರಪುರ ಬಳಿಯ ವಿಶ್ವವಿದ್ಯಾಲಯದ ಬಳಿಯ ರಸ್ತೆ ಬದಿ ಹಾಗೂ ಆವರಣದಲ್ಲಿ ಸುಮಾರು 400 ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪೋಷಣೆ ಮಾಡಿದ್ದರು ಇದನ್ನು ಸಾಮಾಜಿಕ ಅರಣ್ಯ ವಲಯದ ಅಧಿಕಾರಿಗಳು 2024-25 ರ ಸಾಲಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಎಂದು ತೋರಿಸಿ ನರೇಗಾ (MGNREGA) ಯೋಜನೆಯಲ್ಲಿ 1.87 ಲಕ್ಷ ರೂ ಎಂದು…

Read More

ಚಿಂತಾಮಣಿ:ಚಿಂತಾಮಣಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಸರ್ಕಾರಿ ನೌಕರರ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ರಾಜ್ಯಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿಶಿವಪ್ರಸಾದ್ ದೀಪ ಬೆಳಗಿಸಿ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಕನ್ನಡ ಭಾಷೆ ಸಮೃದ್ಧವಾದ ಭಾಷೆ ಸಾಹಿತ್ಯದಲ್ಲಿ ಆಳವಾಗಿ ಬೇರೂರಿದೆ,ತಾಲೂಕು ಕಸಾಪ ನೂತನ ಪದಾಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕನ್ನಡ ಕಟ್ಟುವ ಕೆಲಸ ಮಾಡುವಂತೆ ಕರೆ ಇತ್ತರು.ಚಿಕ್ಕಬಳ್ಳಾಪುರ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಕೋಡಿರಂಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಚಿಂತಾಮಣಿ ಸಾಹಿತ್ಯ ಲೋಕಕ್ಕೆ ಉತ್ತಮ ಸಾಹಿತಿಗಳು,ಬರಹಗಾರನ್ನು ನೀಡಿದೆ ಇದು ಹೀಗೆ ಮುಂದುವರಿಯಬೇಕು ಇದಕ್ಕಾಗಿ ಇಲ್ಲಿ ಇನ್ನೂ ಹೆಚ್ಚಿನ ರಿತಿಯಲ್ಲಿ ಕನ್ನಡದ ಕೆಲಸಗಳು ಆಗಬೇಕು ಇದಕ್ಕೆ ಶೈಕ್ಷಣಿಕ ವ್ಯವಸ್ಥೆಯ ಸಹಕಾರ ಪಡೆದು ಉತ್ತಮ ಕನ್ನಡ ಸೇವೆಯನ್ನು ನಾವೆಲ್ಲರೂ ಕೂಡಿ ಮಾಡೊಣ ಎಂದರು.ನಿಕಟ ಪೂರ್ವ ಅಧ್ಯಕ್ಷ ಎಂ ಎ ಪ್ರಕಾಶ್ ನೂತನ ಅಧ್ಯಕ್ಷ ಶ್ರೀನಿವಾಸನ್.ಎನ್.ವಿ ಅವರಿಗೆ ಕಸಾಪ ಧ್ವಜ ಹಸ್ತಾಂತರ ಮಾಡಿ ಶುಭ ಹಾರೈಸಿದರು.ಕನ್ನಡಾಂಬೆಯ ಸೇವೆಯನ್ನು ಎಲ್ಲರೂ ಸೇರಿ ಒಗ್ಗಟ್ಟಿನಿಂದ ಮಾಡೋಣ…

Read More

ನ್ಯೂಜ್ ಡೆಸ್ಕ್:ಪ್ರಪಂಚದ ಅತ್ಯಂತ ಶ್ರೀಮಂತ ದೇವಸ್ಥಾನ ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ವಿಶ್ವ ಪ್ರಸಿದ್ಧ, ಹಿಂದೆಲ್ಲ ತಿರುಪತಿ ಪ್ರಸಾದ ಎಂದರೆ ತುಪ್ಪದ ಘಮಲು ಅಸ್ವಾಧಿಸುತ್ತ ಕಣ್ಣಿಗೊತ್ತಿಕೊಂಡು ಸೇವನೆ ಮಾಡುವುದು ಆಸ್ತಿಕರ ಮಾತು.ಇಂತಹ ಲಡ್ಡುಗೆ ಬಳಸುತ್ತಿದ್ದ ತುಪ್ಪ ಕರ್ನಾಟಕದ ಹೆಮ್ಮೆಯ ರೈತಾಪಿ ಜನರು ಉತ್ಪಾಧಿಸುವ ಹಾಲಿನಿಂದ ತಯಾರಿಸುವ ನಂದಿನಿ ತುಪ್ಪ ಅಗಿತ್ತು ನಂತರದ ಬೆಳವಣಿಗೆಯಲ್ಲಿ ಕಡಿಮೆ ಮೊತ್ತಕ್ಕೆ TTD ಬೋರ್ಡ್ ಗೆ ತುಪ್ಪ ಮಾರಾಟ ಮಾಡಲು ಕರ್ನಾಟಕ ಹಾಲು ಮಹಾಮಂಡಲಿ ಒಪ್ಪಿರಲಿಲ್ಲ ಇದನ್ನೆ ನೆಪ ಮಾಡಿಕೊಂಡ ಅಂದಿನ ತಿರುಮಲ-ತಿರುಪತಿ ದೇವಾಲಯದ ಆಡಳಿತ ಮಂಡಳಿಯವರು ನಂದಿನಿ ತುಪ್ಪ ತಿರಸ್ಕರಿಸಿ ದೂರದ ಉತ್ತರಪ್ರದೇಶದ ಪ್ರೀಮಿಯರ್ L-1 ಮತ್ತು ಆಲ್ಫಾ ಕಂಪನಿ L-2 ಅಡಿಯಲ್ಲಿ ತುಪ್ಪವನ್ನು ಪೂರೈಸಲು ಒಪ್ಪಂದ ಮಾಡಿಕೊಂಡು ಟೆಂಡರ್ ಪ್ರಕ್ರಿಯೆಯಲ್ಲಿ ನಂದಿನಿ ಸಂಸ್ಥೆ ಪಾಲ್ಗೊಳ್ಳಲು ಅವಕಾಶ ನೀಡದೆ ಯೋಜಿತವಾಗಿ ಅಂದಿನ TTD ಬೋರ್ಡ್ ಅಧಿಕಾರಿಗಳು ನಂದಿನಿ ತುಪ್ಪವನ್ನು ದೂರ ಇಟ್ಟಿದ್ದರು.ಇದು ಮುಂದೆ ಆಂಧ್ರ ರಾಜಕೀಯದಲ್ಲೂ ಹಾಗು ಕರ್ನಾಟಕ ರಾಜಕೀಯದಲ್ಲೂ ದೊಡ್ದಮಟ್ಟದಲ್ಲಿ ಚರ್ಚೆಯಾಗಿ ಅರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿತ್ತು.ಸಾಮನ್ಯ…

Read More

ಶ್ರೀನಿವಾಸಪುರ:ಏಳ ಬಳಕೆ ಪ್ಲಾಸ್ಟಿಕ್ ಸಾಮಾಗ್ರಿಗಳನ್ನು ನೀರಾಕರಿಸಿ ಶ್ರೀನಿವಾಸಪುರ ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಪುರಸಭೆ ಅಧ್ಯಕ್ಷ ಬಿ.ಆರ್. ಭಾಸ್ಕರ್ ಕೋರಿದರುಅವರು ಪುರಸಭಾ ಸಭಾಂಗಣದಲ್ಲಿ ಶ್ರೀನಿವಾಸಪುರ ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ಕಡಿಮೆ ಉಪಯುಕ್ತತೆ ಮತ್ತು ಪರಿಸರ ಮೇಲೆ ಹೆಚ್ಚಿನ ಪ್ರತಿಕೂಲ ಪರಿಣಾಮ ಬೀರುತ್ತಿರುವ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಕುರಿತು ಸರ್ಕಾರ ಅದೇಶಿಸಿದ್ದು ಈ ನಿಯಮ ಎಲ್ಲರೂ ಪಾಲಿಸುವ ಮೂಲಕ ಪ್ಲಾಸ್ಟಿಕ್ ಮುಕ್ತ ಜೀವನ ಸಾಗಿಸಲು ಮುಂದಾಗೋಣ ಪ್ಲಾಸ್ಟಿಕ್‌ನಿಂದ ಆಗುತ್ತಿರುವ ದುಷ್ಪರಿಣಾಮಗಳು ಮುಂದಿನ ಪೀಳಿಗೆ ಅನುಭವಿಸುವ ಸಮಸ್ಯೆಗಳ ಕುರಿತಂತೆ ಹೇಳಿದ ಅವರು ಪುರಸಭೆ ಅಧಿಕಾರಿಗಳು ಪ್ಲಾಸ್ಟಿಕ್ ಮಾರಾಟ ಮಾಡುವ ಅಂಗಡಿ ಮಾಲೀಕರಿಗೆ ಅನೇಕ ಬಾರಿ ದಂಡವನ್ನು ವಿಧಿಸಿದರೂ ಸಹ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಸಭೆಯಲ್ಲಿದ್ದ ವ್ಯಾಪಾರಸ್ಥರ ಬಳಗ ತಮ್ಮ ಬಳಿ ಇರುವ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡಲು ದಿನಾಂಕ ಸೆಪ್ಟಂಬರ್ 5 ತನಕ ಕಾಲಾವಕಾಶ ನೀಡಬೇಕೆಂದು…

Read More

ನೂಜ್ ಡೆಸ್ಕ್:ಮೇಘಸ್ಪೋಟದ ಮಳೆಯಿಂದಾಗಿ ಗುಜರಾತ್ ರಾಜ್ಯ ತತ್ತರಿಸಿದೆ ಜನಜೀವನ ಅಸ್ತವ್ಯಸ್ತವಾಗಿದ್ದು ಸುಮಾರು ಮೂವತ್ತು ಮಂದಿ ಕಣ್ಮರೆಯಾಗಿದ್ದು ಹಲವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.ಗುಜರಾತ್​ನ ಅನೇಕ ಭಾಗದಲ್ಲಿ ಭಾರೀ ಮಳೆ ಆಗುತ್ತಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅಲ್ಲದೆ, ಮುಂದಿನ ಎರಡು ದಿನ ಕೂಡ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಮಾಣದ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ತಿಳಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಗುಜಾರತ್​ನ ನವಸಾರಿ ಮತ್ತು ವಲ್ಸದ್​ ಜಿಲ್ಲೆಗಳಲ್ಲಿ ತಗ್ಗು ಪ್ರದೇಶದಲ್ಲಿ ಜನರನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಲಾಗುತ್ತದೆ 18 ಸಾವಿರಕ್ಕೂ ಅಧಿಕ ಮಂದಿಯನ್ನು ಪ್ರವಾಹ ಪೀಡಿತ ಸ್ಥಳದಿಂದ ಸುರಕ್ಷಿತ ತಾಣಕ್ಕೆ ರವಾನಿಸಲಾಗಿದ್ದು, ಸುಮಾರು 11 ಜಿಲ್ಲೆಗಳಲ್ಲಿ ವರುಣನ ಅಬ್ಬರ ಮುಂದುವರಿಯುವ ಲಕ್ಷಣ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.ಊರುಗಳಲ್ಲಿ ನೀರು ನುಗ್ಗಿದ್ದು ರಸ್ತೆಗಳು ನದಿ ನಾಲೆಗಳಂತಾಗಿದೆ ಮೋರ್ಬಿ, ವಡೋದರಾ, ಭರೂಚ್, ಜಾಮ್‌ ನಗರ, ಅರಾವಳಿ, ಪಂಚಮಹಲ್, ದ್ವಾರಕಾ ಮತ್ತು ದಂಗ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.ಆನಂದ್‌ ಜಿಲ್ಲೆಯಲ್ಲಿ ಆರು, ಅಹಮದಾಬಾದ್‌ನಲ್ಲಿ…

Read More

ಬೆಂಗಳೂರು:ಯುವಕನೊಬ್ಬ ತನ್ನ ಪ್ರೇಮಿಯನ್ನು ದ್ವಿಚಕ್ರವಾಹನದ ಪೆಟ್ರೋಲ್ ಟ್ಯಾಂಕ್ ಮೇಲೆ ಕುರಿಸಿಕೊಂಡು ವಾಹನ ಚಲಾಯಿಸುತ್ತ ಅಸಹ್ಯಕರವಾಗಿ ಜಾಲಿ ರೈಡ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಇದು ನಡೆದಿರುವುದು ಬೆಂಗಳೂರಿನ ಯಲಹಂಕ ರೇವಾ ಕಾಲೇಜು ಕ್ಯಾಂಪಸ್ ರಸ್ತೆಯಲ್ಲಿ ಘಟನೆ ನಡೆದಿದ್ದು ಪ್ರೇಮಿಗಳ ಜಾಲಿರೈಡನ್ನು ಹಿಂಬದಿ ಬೈಕ್ ಸವಾರ ಮೊಬೈಲ್ನಲ್ಲಿ ಸೆರೆಹಿಡಿದು ನಂತರ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ.ರೇವಾ ಕಾಲೇಜು ಕ್ಯಾಂಪಸ್ ರಸ್ತೆಯಲ್ಲಿ ನಡೆದಿರುವ ರೈಡ್ ನಲ್ಲಿ ಯುವಕ ತನ್ನ ಪ್ರೇಮಿಯನ್ನು ಹಿಂದುಮುಂದಾಗಿ ಕುರಿಸಿಕೊಂಡು ಮತ್ತಿನಲ್ಲಿ ತೆಲಾಡುತ್ತ ರೋಮಾ೦ಚನಕಾರಿಯಾಗಿ ಪ್ರಣಯ ಚೇಷ್ಟೆಗಳನ್ನು ಮಾಡಿಕೊಂಡು ಅಪಾಯಕರವಾಗಿ ಬೈಕ್ ರೈಡ್ ಮಾಡಿದ್ದಾಗಿ ಹೇಳಲಾಗುತ್ತಿದೆ.ಘಟನೆ ಯಲಹಂಕ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದಾಗಿ ಈ ಹಿಂದೆ ಹೆಬ್ಬಾಳದಲ್ಲೂ ಇಂತಹದೆ ಘಟನೆಯ ನಂತರವು ಪ್ರೇಮಿಗಳು ಅಸಭ್ಯಕರವಾಗಿ ಜಾಲಿ ರೈಡ್ ಮಾಡಿದ್ದು ಆ ಯುವಕನನ್ನು ಅರೆಸ್ಟ್ ಮಾಡಲಾಗಿತ್ತು.

Read More

ಶ್ರೀನಿವಾಸಪುರ:ಟೆಂಪೋ ಟ್ರಾವಲರ್ ಹಾಗು ಕಾರಿನ ನಡುವೆ ನಡೆದ ಬೀಕರ ರಸ್ತೆ ಅಪಘಾತದಲ್ಲಿ ಮೂರು ಮಂದಿ ಸಾವನಪ್ಪಿದ್ದು ಟೆಂಪೋ ಟ್ರಾವಲರ್ ನಲ್ಲಿದ್ದ 12 ಮಂದಿ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.ಅಪಘಾತ ಬೆಂಗಳೂರು-ಮದನಪಲ್ಲಿ ರಸ್ತೆಯಲ್ಲಿ ದಂಡುಪಾಳ್ಯ ಗೇಟ್ ಬಳಿ ಶ್ರೀನಿವಾಸಪುರ ತಾಲೂಕಿನ ಗಡಿಯಂಚಿನಲ್ಲಿ ಬುಧವಾರ ಸಂಜೆ ನಡೆದಿದ್ದು ಆಂಧಪ್ರದೇಶದ ಬಾಯಿಕೊಂಡದಲ್ಲಿ ಪೂಜೆ ಮುಗಿಸಿ ಚಿಂತಾಮಣಿ ಕಡೆಗೆ ಬರುತ್ತಿದ್ದ ಟೆಂಪೋ ಟ್ರಾವಲರ್ ಹಾಗು ಮದನಪಲ್ಲಿಗೆ ಹೋರಟಿದ್ದ ಸ್ಯಾಂಟ್ರೊ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ ಕಾರಿನಲ್ಲಿದ್ದ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಶ್ರೀಕಾಂತ್, ಶ್ರೀನಿವಾಸಲು, ಪುಷ್ಪ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಅಪಘಾತ ಪ್ರಕರಣ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಅಪಘಾತ ಬೀಕರತೆ ಕೀ.ಮಿ ಗಟ್ಟಲೆ ಟ್ರಾಫಿಕ್ ಜಾಮ್ವಾಹನಗಳ ಮುಖಾಮುಖಿ ಡಿಕ್ಕಿಯಾದ ಬೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಶವಗಳನ್ನು ಹೊರತಗೆಯಲು ಸಾಧ್ಯವಾಗದ ಹಿನ್ನಲೆಯಲ್ಲಿ ಜೆಸಿಬಿ ತರಸಿ ನುಜ್ಜುಗುಜ್ಜಾಗಿದ್ದ ಕಾರಿನ ಬಾಗಿಲುಗಳನ್ನು ಕಿತ್ತು ಹರಸಾಹಸ ಪಟ್ಟು ಮೃತ ದೇಹಗಳನ್ನು ಹೊರಗೆ ತಗೆದಿದ್ದು, ಇದರಿಂದಾಗಿ ಮದನಪಲ್ಲಿ ಹೈವೆ ರಸ್ತೆಯಲ್ಲಿ…

Read More

ನ್ಯೂಜ್ ಡೆಸ್ಕ್:ಅಮೆರಿಕದಲ್ಲಿ ಸೊಳ್ಳೆ ಕಡಿತದಿಂದ ‘ಈಸ್ಟರ್ನ್ ಎಕ್ವೈನ್ ಎನ್ಸೆಫಾಲಿಟಿಸ್’ ಎಂಬ ವೈರಸ್ ಸೋಂಕಿಗೆ ಒಳಗಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ದೇಶದ ಆಡಳಿತವು ಎಚ್ಚೆತ್ತುಕೊಂಡಿದ್ದು ಮ್ಯಾಸಚೂಸೆಟ್ಸ್, ವರ್ಮೊಂಟ್ ಮತ್ತು ಇತರ ಪ್ರದೇಶಗಳಲ್ಲಿ ಸರ್ಕಾರ ಹೈ ಅಲರ್ಟ್‌ ಘೋಷಿಸಿದೆ,ಸೊಳ್ಳೆಗಳಿಂದ ಈ ಸೋಂಕು ಹರಡುವ ಹಿನ್ನೆಲೆಯಲ್ಲಿ ಜನರಿಗೆ ಸ್ಪ್ರೇಗಳನ್ನು ನೀಡುತ್ತಿದ್ದು, ಟ್ರಕ್‌ಗಳ ಮೂಲಕವೂ ಸ್ಪ್ರೇ ಸಿಂಪಡಣೆ ಮಾಡಲಾಗುತ್ತಿದೆ. ಪ್ಲೇಮೌತ್ ಸೇರಿದಂತೆ ಹಲವು ಕೌಂಟಿಗಳಲ್ಲಿ ಈಗಾಗಲೇ ಸ್ಪ್ರೇ ಸಿಂಪಡಣೆ ಮಾಡಲಾಗಿದೆ.ಅನಧಿಕೃತ ಲಾಕ್‌ಡೌನ್ ಅನ್ನು ಜಾರಿಗೊಳಿಸಲಾಗುತ್ತಿದೆ. ಉದ್ಯಾನವನಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಹೆಲಿಕಾಪ್ಟರ್ ಮೂಲಕ ಔಷಧ ಸಿಂಪಡಿಸಲಾಗುತ್ತಿದೆ. ಈ ವೈರಸ್ ಸೋಂಕಿತರಲ್ಲಿ ಜ್ವರ, ಅತಿಸಾರ ಮತ್ತು ತಲೆನೋವಿನಂತಹ ಲಕ್ಷಣಗಳು ಕಂಡುಬರುತ್ತವೆ. ಅದಕ್ಕೆ ಸದ್ಯಕ್ಕೆ ಲಸಿಕೆ ಇಲ್ಲ ಎನ್ನಲಾಗಿದೆ.

Read More

ಬೆಂಗಳೂರು:ರಾಜಕೀಯ ಚುನುವಾಣೆಗಷ್ಟೆ ಮೀಸಲು ಉಳಿದಂತೆ ನಂಟಸ್ಥನ ಮಾಡಲು ರಾಜಕೀಯ ಪಕ್ಷಗಳ ಮುಖಂಡರ ನಡುವಿನ ಪಕ್ಷ ರಾಜಕೀಯ ಅಡ್ಡಿಯಾಗಲಾರದು ಎಂಬುದಕ್ಕೆ ಬೇರೆ-ಬೇರೆ ಪಕ್ಷಗಳಲ್ಲಿ ಇರುವಂತ ಕರ್ನಾಟಕದ ಬಹಳಷ್ಟು ರಾಜಕಾರಣಿಗಳು ನಂಟಸ್ಥನ ಬೆಳೆಸಿಕೊಂಡಿದ್ದಾರೆ ಆ ಸಾಲಿಗೆ ಈಗ ಹೊಸ ಸೇರ್ಪಡೆ ಕೋಲಾರದ ಉಸ್ತುವಾರಿ ಸಚಿವ ಹಾಗು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾನಸ ಪುತ್ರ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಹಾಗು ಬಿಜೆಪಿ ಪಕ್ಷದ ಪ್ರಭಾವಿ ಮುಖಂಡ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪರಮಾಪ್ತ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಆರ್. ವಿಶ್ವನಾಥ್ ನಂಟರಾತ್ತಿದ್ದಾರೆ.ಎಸ್. ಆರ್. ವಿಶ್ವನಾಥ್ ಅವರ ಪುತ್ರಿ ಅಪೂರ್ವ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರ ಪುತ್ರ ಸಂಜಯ್ ನಿಶ್ಚಿತಾರ್ಥ ಕಾರ್ಯಕ್ರಮ ಬೆಂಗಳೂರು ನಗರದ ಖಾಸಗಿ ಹೋಟೆಲ್‌ನಲ್ಲಿ ಇಂದು ನಡೆಯಿತು.ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸೇರಿದಂತೆ ಸಿದ್ದರಾಮಯ್ಯ ಸಂಪುಟದ ಬಹುತೇಕ ಸಚಿವರು,ಶಾಸಕರು ಹಲವಾರು ರಾಜಕೀಯ ನಾಯಕರು,ಗಣ್ಯರು ಹಾಗು ವಿಶೇಷವಾಗಿ ಅವಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿ…

Read More

ನ್ಯೂಜ್ ಡೆಸ್ಕ್:ವೈರಲ್‌ ಜ್ವರಗಳು ಹೆಚ್ಚಾಗುತ್ತಿದ್ದು, ರಸ್ತೆ ಬದಿಯ ಆಹಾರ ಪದಾರ್ಥಗಳಿಂದ ದೂರವಿರಿ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಪಾನಿಪುರಿ ಸಿರಿತಿಂಡಿಗಳು ಸೇರಿದಂತೆ ರಸ್ತೆ ಬದಿಯ ತಿಂಡಿಗಳನ್ನು ತಿನ್ನುವುದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಟೈಫಾಯಿಡ್,ಗಿಯಾರ್ಡಿಯಾಸಿಸ್ (ನೀರಿನ ಭೇದಿ), ಎಚ್ ಪೈಲೋರಿ (ಹೊಟ್ಟೆಯ ಉರಿಯೂತ, ಜೀರ್ಣಾಂಗದಲ್ಲಿ ಹುಣ್ಣುಗಳು), ಶಿಗೆಲ್ಲೋಸಿಸ್ (ಸ್ನಿಗ್ಧತೆಯ ರಕ್ತಸಿಕ್ತ ಅತಿಸಾರ), ಕಾಲರಾ, ಎಂಟಮೀಬಾ, ವೈರಲ್ ಅತಿಸಾರ ಮತ್ತು ವಾಂತಿ ಮುಂತಾದ ಸಾಂಕ್ರಾಮಿಕ ರೋಗಗಳು ಕಾಡುತ್ತದೆ ಎಂದಿರುತ್ತಾರೆ.ಸ್ವಯಂ ಚಿಕಿತ್ಸೆ ಅಪಾಯಕಾರಿಜ್ವರ ಬಂದಾಗ ಕೆಲವರು ವೈದ್ಯರ ಬಳಿ ಹೋಗದೆ ಸ್ವಯಂ ವೈದ್ಯರಾಗಿ ಆ್ಯಂಟಿಬಯಾಟಿಕ್ ಮಾತ್ರೆಗಳನ್ನು ಸೇವಿಸಿ ಸ್ವ-ಚಿಕಿತ್ಸೆಯಲ್ಲಿ ಆಸಕ್ತಿ ತೋರಿಸುತ್ತಾರೆ.ಇದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಸ್ವಯಂ-ಆಡಳಿತದ ಪ್ರತಿಜೀವಕಗಳು ವೈರಸ್ ಅನ್ನು ಕೊಲ್ಲಲು ಸಾಧ್ಯವಿಲ್ಲ. ಅನಾವಶ್ಯಕವಾಗಿ ಆ್ಯಂಟಿಬಯೋಟಿಕ್‌ಗಳನ್ನು ತೆಗೆದುಕೊಳ್ಳುವುದರಿಂದ ಹೊಟ್ಟೆ ಸಂಬಂದಿತ ಖಾಯಿಲೆಗಳು ಬರುತ್ತವೆ ಕರುಳಿನ ಬ್ಯಾಕ್ಟೀರಿಯಾವನ್ನು ನಾಶಪಡಿಸು ಅವಕಾಶ ಇರುತ್ತದೆ ಆಮ್ಲೀಯತೆಯನ್ನು ಉಂಟುಮಾಡಬಹುದು.ಒಮ್ಮೊಮ್ಮೆ ಲಿವರ್ ಮತ್ತು ಕಿಡ್ನಿಗಳಿಗೆ ಹಾನಿಯಾಗುತ್ತದೆ.

Read More