ಮುಳಬಾಗಿಲು: ರಸ್ತೆಯಲ್ಲಿ ಒಕ್ಕಣೆಗೆ ಹಾಕಿದ್ದ ಉರಳಿ ಫಸಲಿನ ಒಣಗಿದ ಸತ್ತೆ(ಹೊಟ್ಟು)ಕಾರಿನ ಚಕ್ರಕ್ಕೆ ಸಿಲುಕಿ ಕಾರು ಹೊತ್ತಿದಿರುವ ಘಟನೆ ಮುಳಬಾಗಿಲು ತಾಲೂಕು ನಂಗಲಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು ನೊಂದಣಿಯ ಮಾರುತಿ ಡಿಝೈರ್ ಕಾರು ಮುಳಬಾಗಿಲು ತಾಲೂಕಿನ ನಂಗಲಿಯಿಂದ ಹೆಬ್ಬಣಿ ರಸ್ತೆಯಲ್ಲಿ ಹೋಗುವಾಗ ಸುನಪಕುಂಟೆ ಬಳಿ ರಸ್ತೆಯಲ್ಲಿ Farmers ಒಕ್ಕಣೆಗೆ ಹರಡಿದ್ದ ಹುರಳಿ ಬೆಳೆ ಮೇಲೆ ಕಾರು ಹೋಗುತ್ತಿದ್ದಾಗ ಕಾರಿನ ಚಕ್ರಕ್ಕೆ ಉರಳಿ ಹೊಟ್ಟು ಸುತ್ತಿಕೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ ತಕ್ಷಣ ಕಾರಿನಲ್ಲಿದ್ದ ತಮ್ಮ ಲಗ್ಗೇಜು ಸಮೇತ ಕಾರಿನಿಂದ ಇಳಿದು ಪ್ರಣಾಪಯದಿಂದ ಪಾರಾಗಿದ್ದಾರೆ.ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಬೆಂಕಿಯನ್ನು ನಂದಿಸಲು ಸಾಧ್ಯವಾಗಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ರಸ್ತೆ ಒಕ್ಕಣೆಗೆ ಜಿಲ್ಲಾಡಿಳಿತ ಕಡಿವಾಣ ಹಾಕಲಿ
ಕೋಲಾರ ಜಿಲ್ಲೆಯಲ್ಲಿ ರಸ್ತೆ ಒಕ್ಕಣೆ ನಿಷೇದ ಇದ್ದರೂ ಕೆಲವರು ರಾಷ್ಟ್ರೀಯ ಹೆದ್ದಾರಿಯಲ್ಲೆ ಉದ್ದಟ ತನದಿಂದ ಒಕ್ಕಣೆ ಮಾಡುತ್ತಿದ್ದಾರೆ ಬೆಸಿಗೆ ಆರಂಭವಾಗಿದೆ ಕಳೆದ ಮೂರ್ನಾಲ್ಕು ದಿನಗಳಿಂದ ಬಿಸಿಲು ತೀವ್ರವಾಗಿದೆ.ರಸ್ತೆ ಒಕ್ಕಣೆ ದ್ವಿಚಕ್ರ ವಾಹನ ಸವಾರರಿಗೂ ಮಾರಕ ಇದಕ್ಕಾಗಿ ಜಿಲ್ಲಾಡಳಿತ ಎಚ್ಚೆತ್ತುಕೊಂಡು ರಸ್ತೆ ಮೇಲೆ ಒಕ್ಕಣೆಯನ್ನು ಕಟ್ಟುನಿಟ್ಟಾಗಿ ನಿಷೇದಕ್ಕೆ ಮುಂದಾಗುವಂತೆ ವಾಹನ ಸವಾರರು ಒತ್ತಾಯಿಸಿದ್ದಾರೆ.
Trending
- ಕರ್ನಾಟಕ ಮಾವು ಆಂಧ್ರ ನಿಷೇದಿಸಿರುವುದು ಒಕ್ಕೂಟ ವ್ಯವಸ್ಥೆಗೆ ಪೆಟ್ಟು ಸಿದ್ದರಾಮಯ್ಯ!
- ಶ್ರೀನಿವಾಸಪುರ:ಮಾವು ದರ ಕುಸಿತ,ಆಂಧ್ರದವರು ಬೇಡ ಅಂದ್ರಾ ಕರ್ನಾಟಕ ಮಾವನ್ನು!
- SRINIVASPUR ಮಾರುಕಟ್ಟೆಯಲ್ಲಿ ಮೋಸ ರೈತರಿಂದ ಲೋಕಾಯುಕ್ತರಿಗೆ ದೂರು
- ಮುಳಬಾಗಿಲು:ದಾಳಿಕೊರರ ಅತಿಕ್ರಮಣ ಕೃಷಿ ಸಂಸ್ಕೃತಿ ಮೇಲೂ ಪರಿಣಾಮ!
- ಶ್ರೀನಿವಾಸಪುರ ಅಭಿವೃದ್ಧಿಗೆ ಕೈಗಾರಿಕೆಗಳು ಸಹಕಾರಿ ವೆಂಕಟಶಿವಾರೆಡ್ಡಿ
- ಶ್ರೀನಿವಾಸಪುರ:ಮಾವು ಬೆಂಬಲ ಬೆಲೆಗೆ ಅಗ್ರಹಿಸಿ ರೈತರಿಂದ ರಸ್ತೆ ತಡೆ! ಬಂದ್ ಎಚ್ಚರಿಕೆ
- ಟೀನೇಜ್ ಗೆಳೆಯ ಗೆಳತಿಯರ “ನ ಲಜ್ಜಾಃ ನ ಭಯಂ” ಬಸ್ಸಿನಲ್ಲೆ ಅತಿರೇಕ!
- ಚಿಂತಾಮಣಿಗೂ ವಕ್ಕರಿಸಿದ ಕೊರೋನಾ! ಆತಂಕ ಬೇಡ
Friday, June 13