ಶ್ರೀನಿವಾಸಪುರ:ಶಂಕಿತ ಡೆಂಘೀ ಜ್ವರಕ್ಕೆ ಮಗುವೊಂದು ಬಲಿಯಾಗಿದೆ ಎಂದು ಜಾಕೀರ್ ಹುಸೇನ್ ಮೊಹಲ್ಲಾದ ನಿವಾಸಿಯೊಬ್ಬರು ಹೇಳಿದ್ದು ಕಳೆದ 20 ದಿನಗಳಿಂದ ಜ್ವರದಿಂದ ಬಳಲುತ್ತಿದ್ದ 8 ತಿಂಗಳ ಹಸುಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದೆ ಎಂದು ಕುಟುಂಬಿಕರು ಹೇಳುತ್ತಾರೆ ವಿಷಮ ಜ್ವರ ಇದ್ದ ಮಗುವಿಗೆ ಪೋಷಕರು ಕೋಲಾರ ಚಿಕಿತ್ಸೆಗೆ ಕರೆದೊಯಿದಿದ್ದು ಅಲ್ಲಿ ಫಲಕಾರಿಯಾಗದೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದರು ಫಲ ನೀಡದೆ ಮಗು ಮೃತಪಟ್ಟಿರುವುದಾಗಿ ಪೋಷಕರು ಅಲವತ್ತುಕೊಳ್ಳುತ್ತಾರೆ.
ಜಾಕೀರ್ ಹುಸೆನ್ ಮೊಹಲ್ಲಾದಲ್ಲಿ ಡೆಂಘೀ ಜ್ವರದಿಂದ ಮಗು ಸಾವನ್ನಪ್ಪಲು ಸ್ಥಳಿಯವಾಗಿ ಸ್ವಚ್ಚತೆ ಇಲ್ಲದ್ದೆ ಕಾರಣವಾಗಿದ್ದು ಇಲ್ಲಿ ಇನ್ನೂ 15 ರಿಂದ 20 ಮಕ್ಕಳು ವಿಷಮ ಜ್ವರದಿಂದ ಬಳಲುತ್ತಿರುವುದಾಗಿ ಜನ ಹೇಳುತ್ತಾರೆ.
ಹರಿಯದ ಕೊಳಚೆ ನೀರಿನಿಂದ ವಿಷಮ ಜ್ವರ ಹರಡಲು ಕಾರಣ
ವಿಷಮ ಜ್ವರಗಳ ಕುರಿತಾಗಿ ಸಾರ್ವಜನಿಕವಾಗಿ ಸಾಕಷ್ಟು ಮಟ್ಟದಲ್ಲಿ ಅರಿವು ಮೂಡಿಸಲಾಗಿತ್ತಿದೆ ಇಂದ್ರಧನುಷ್ ಕಾರ್ಯಕ್ರಮ ಮಾಡಿದಾಗಲೂ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಜನತೆಗೆ ಜಾಗೃತಿ ಮೂಡಿಸಲಾಗುತ್ತಿದೆ ಶಾಲಾಕಾಲೇಜುಗಳಲ್ಲಿ ಸಹ ವಿಷಮ ಜ್ವರಗಳ ಕುರಿತಾಗಿ ಜನಜಾಗೃತಿ ಮೂಡಿಸಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಮೊಹಮದ್ ಷರೀಫ್ ತಿಳಿದರು ಪಟ್ಟಣದಲ್ಲಿ ನಡೆದಿರುವ ಡೇಂಘಿ ಪ್ರಕರಣ ಕುರಿತಾಗಿ ಮಾಹಿತಿ ನೀಡಿದ ಅವರು ಪ್ರತಿ ಗ್ರಾಮ ಹಾಗು ವಾರ್ಡಗಳಲ್ಲೂ ಆಶಾ ಕಾರ್ಯಕರ್ತರಿಂದ ವಿಶೆಷವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು ಎಲ್ಲೆಲ್ಲಿ ವಿಷಮ ಜ್ವರಗಳು ಇದಿಯೊ ಅಲ್ಲಿ ವಿಶೇಷವಾಗಿ ಗಮನ ಹರಸುತ್ತಿರುವುದಾಗಿ ಹೇಳಿದರು,ಜನತೆ ವೈಯುಕ್ತಿಕ ಸ್ವಚ್ಚತೆಗೂ ಆದ್ಯತೆ ನೀಡಬೇಕು ಮನೆಗಳ ಬಳಿ ನೀರುನಿಲ್ಲದಂತೆ ಎಚ್ಚರಿಕೆ ವಹಿಸಬೇಕಿದ್ದು ಈಗಿನ ಪರಿಸ್ಥಿಯಲ್ಲಿ ಸೊಳ್ಳೆಯಿಂದ ಬಚಾವಾಗಲು ಅಗತ್ಯಕ್ರಮಗಳನ್ನು ತಗೆದುಕೊಳ್ಳುವಂತೆ ಸೂಚಿಸಿದ ಅವರು ಸೊಳ್ಳೆ ನಿವಾರಣೆಗೆ ಸೊಳ್ಳೆಬತ್ತಿ ಬಳಸುವುದು ಸೊಳ್ಳೆಪರದೆ ಬಳಸುವುದು ಹಾಗೆ ಮಕ್ಕಳ ವಿಚಾರದಲ್ಲಿ ಹೆಚ್ಚು ಜಾಗ್ರತೆ ವಹಿಸುವ ಮೂಲಕ ಮಕ್ಕಳನ್ನು ಸೊಳ್ಳೆಗಳಿಂದ ರಕ್ಷಿಸಲು ಪೋಷಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದರು.
Trending
- ಶ್ರೀನಿವಾಸಪುರ:ಸೂರ್ಯನ ಪ್ರತಾಪಕ್ಕೆ ತತ್ತರಿಸುತ್ತಿರುವ ಜನ!
- ಆಂಧ್ರದ ಅಮರಾವತಿ ದೇಶದ ಮೊದಲ ‘Quantum Valley’!
- ಭಾರತೀಯ ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ! ಪ್ರತಿಭಟನೆ ವ್ಯಕ್ತಪಡಿಸಿದ ಭಾರತ.
- ಪ್ರೊಫೆಷನಲ್ ಕೊರಿಯರ್ಸ್ ವತಿಯಿಂದ “ಪ್ರೊ ಇಎಕ್ಸ್ ಅಲ್ಟ್ರಾ”ಸೇವೆ ಆರಂಭ!
- ಶ್ರೀನಿವಾಸಪುರ:ನಿವೃತ್ತ ಸೈನಿಕನನ್ನು ಸನ್ಮಾನಿಸಿದ ಸಚಿವ ಮುನಿಯಪ್ಪ
- ಆಂಧ್ರದ ರಾಜಧಾನಿ “ಅಮರಾವತಿ” ಕೇಂದ್ರ ಸರ್ಕಾರ ಗೆಜೆಟ್ ಘೋಷಣೆ.
- ಶ್ರೀನಿವಾಸಪುರ:ಜಗಜೀವನರಾಮ್ ಜಯಂತಿ ಮೆರವಣಿಗೆ ಶಾಸಕ ವೆಂಕಟಶಿವಾರೆಡ್ಡಿ ಭಾಗಿ.
- ಶ್ರೀನಿವಾಸಪುರ:ಮಹಿಳಾ ಉದ್ಯಮಿ ರತ್ನಮ್ಮಗೆ ರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ!
Thursday, April 23



