ಶ್ರೀನಿವಾಸಪುರ: ಪಟ್ಟಣದ ವೆಂಕಟೇಶ್ವರ ಬಡಾವಣೆಯಲ್ಲಿ ಆಚರಿಸಲಾಗಿತ್ತಿದ್ದ ಗಣೇಶೋತ್ಸವಕ್ಕೆ ಈ ವರ್ಷ 25 ನೇ ವರ್ಷದ ಸಂಭ್ರಮ,ನಿನ್ನೆ ಮೊನ್ನೆ ಕಾಲಿ ನಿವೇಶನಗಳಲ್ಲಿ ಶ್ರೀ ವಿನಾಯಕ ಸೇವಾ ಸಮಿತಿ ಹೆಸರಿನಲ್ಲಿ ಗಣೇಶ ಕೂರಿಸಿ ಉತ್ಸವ ಆಚರಿಸುತ್ತಿದ್ದ ಮಾಜಿ ಪುರಸಭೆ ಸದಸ್ಯ ಕೆ.ವಿ.ಮಂಜು ಮತ್ತು ಯುವ ಸ್ನೇಹಿತರ ತಂಡ ಕಾರ್ಯಕ್ಕೆ ಇವತ್ತು ಇಪ್ಪತೈದು ವಸಂತಗಳ ಬೆಳ್ಳಿಹಬ್ಬದ ಸಂಭ್ರದಲ್ಲಿ ರಜತ ಮಹೋತ್ಸವ ಆಚರಿಸುತ್ತಿದೆ, ಈ ಬಾರಿ ಸುಮಾರು 14 ಅಡಿ ಎತ್ತರದ ಬಾರಿ ಗಾತ್ರದ ದರ್ಬಾರ್ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
ಅಂದು ಯುವಕರಷ್ಟೆ ಒಗ್ಗೂಡಿ ಪ್ರಾರಂಭಿಸಿದ ಬೆಳ್ಳಿಹಬ್ಬದ ಸಂಭ್ರಮದ ಗಣೇಶೋತ್ಸವದ ಬಹುತೇಕ ಮುಂದಾಳುಗಳು ಇಂದು ಮದ್ಯವಯಸ್ಕರಾಗಿದ್ದಾರೆ, ಇಂದಿನ ಪೀಳಿಗೆಯ ಯುವಕರ ಜೊತೆಗೂಡಿ ಮದ್ಯವಯಸ್ಕ ಮುಖಂಡರು ಆಗಸ್ಟ್ 31 ಬುಧವಾರ ಗಣೇಶ ಹಬ್ಬದ ದಿನದಂದು ಸಂಜೆ 25 ನೇ ವರ್ಷದ ಗಣೇಶೋತ್ಸವಕ್ಕೆ ಚಾಲನೆ ನೀಡಿದರು.
ಐದು ದಿನಗಳ ಗಣೇಶೋತ್ಸವ ಭಾನುವಾರ ವಿಸರ್ಜನೆ
ಐದು ದಿನಗಳ ಕಾಲ ನಡೆಯುವ ವೆಂಕಟೇಶ್ವರ ಬಡಾವಣೆ ಗಣೇಶೋತ್ಸವದಲ್ಲಿ ಪ್ರತಿದಿನ ಸಂಜೆ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ವಿಶೇಷವಾಗಿ ಎರಡನೇಯ ದಿನವಾದ ಸೆಪ್ಟೆಂಬರ್ 1 ಗುರುವಾರ ವೆಂಕಟೇಶ್ವರ ಬಡಾವಣೆಯ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗು ಹಿರಿಯ ನಾಗರಿಗೆ ಗೌರವ ಸಮರ್ಪಣೆ ಏರ್ಪಡಿಸಿದೆ ನಾಲ್ಕನೇ ದಿನವಾದ ಶನಿವಾರ ಕಳೆದ ಇಪತೈದು ವರ್ಷಗಳಿಂದ ಗಣೇಶೋತ್ಸವದಲ್ಲಿ ಸೇವಾಬಾವನೆಯಿಂದ ಪೂಜಾ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವ ಅರ್ಚಕ ದಿನೇಶ್ ಕುಮಾರ್ ಅವರಿಗೆ ಸನ್ಮಾನ ಮತ್ತು ಐದನೇಯ ದಿನವಾದ ಭಾನುವಾರ ಗಣೇಶಮೊರ್ತಿಯ ಭವ್ಯ ಶೋಭಾಯಾತ್ರೆಯೊಂದಿಗೆ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಪ್ರಮುಖ ರೂವಾರಿ ಮಾಜಿ ಪುರಸಭೆ ಸದಸ್ಯ ಕೆ.ವಿ.ಮಂಜು ತಿಳಿಸಿದ್ದಾರೆ.
25 ನೇ ವರ್ಷದ ಗಣೇಶೋತ್ಸವಕ್ಕೆ ಸ್ಥಳೀಯವಾಗಿ ಪ್ರಮುಖದಾನಿಗಳಾದ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಆಶೋಕ್,ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್,ವೆಂಕಟೇಶ್ವರ ನರ್ಸಿಂಗ್ ಹೋಂ ಡಾ.ವೆಂಕಟಾಚಲ,ಕೃಷ್ಣಾ ಸೀಡ್ಸ್ ಮಾಲಿಕ ಕೋಟೇಶ್,ಬಿಂದು ಟ್ರೆಡರ್ಸ್ ಮಾಲಿಕ ಹನುಮಂತರೆಡ್ಡಿ ಮಕ್ಕಳು,ಸುಗುಣ ಸೀಡ್ಸ್ ಮಾಲಿಕ ಎಂ.ಚಂದ್ರಣ್ಣ,ಇವರೊಂದಿಗೆ ಚಿರಾಗ್ ರಸ್ಟೋರಂಟ್ ಮಾಲಿಕ ಚಿರಾಗ್,ಪಿ.ವಿ.ವಿನೋದ್, ನಿವೃತ್ತ ಕಂದಾಯಧಿಕಾರಿ ಮಗ ಉಪಾದ್ಯಾಯ ಪದ್ಮನಾಭಾಚಾರಿ, ಯುವ ಮುಖಂಡ ದಿಂಬಾಲಹರ್ಷ,ಚೌಡೇಶ್ವರಿ ಎಲೆಕ್ಟ್ರಿಕಲ್ಸ್ ಮಾಲಿಕ ಬಾಬುರೆಡ್ದಿ,ಯುವ ಮುಖಂಡ ಗೊಲ್ಲಪಲ್ಲಿ ಪ್ರಸನ್ನಕುಮಾರ್, ವರುಣ್ ಲೋಕನಾಥ್, ವಿನಯ್ ಪ್ರಶಾಂತ್ ಸಹಕಾರ ನೀಡಿರುವ ಬಗ್ಗೆ ಪ್ರಕಟಿಸಲಾಗಿದೆ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



