ಶ್ರೀನಿವಾಸಪುರ: ವಿಧಾನ ಪರಿಷತ್ ಚುನಾವಣೆಗೂ ಮುಂಚೆ ತಾಲೂಕು ಪ್ರಭಾವಿ ಕಾಂಗ್ರೆಸ್ ಮುಖಂಡ ಯು ಟರ್ನ್ ಹೊಡೆದಿರುವ ಹಿಂದಿನ ಮರ್ಮವೇನು? ಈಗ ಜನಸಾಮನ್ಯನ ಬಾಯಲ್ಲಿ ಕೇಳಿಬರುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ, ಸ್ವಾಭಿಮಾನದ ಮಾತುಗಳನ್ನಾಡಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಿಂದ ದೂರವೆ ಉಳಿದಿದ್ದ ವ್ಯಕ್ತಿ ಏಕಾಏಕಿ ಸುದ್ಧಿಗೊಷ್ಠಿ ಕರೆದು ನಾನು ಪಕ್ಷಕ್ಕೆ ದ್ರೋಹ ಬಗೆಯಲ್ಲ ನಾನು ನನ್ನ ಕುಟುಂಬ ಕಾಂಗ್ರೆಸ್ ನಿಷ್ಠಾವಂತರು ನಾನು ವಿಧಾನಪರಿಷತ್ ಚುನಾವಣೆಯಲ್ಲಿ ನನ್ನ ಬೆಂಬಲ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಕುಮಾರ್ ಅವರಿಗೆ ಎಂದು ಹೇಳಿಕೆ ನೀಡುವ ಮೂಲಕ ತಾಲೂಕಿನ ರಾಜಕೀಯ ಪಡಸಾಲೆಯಲ್ಲಿ ಚರ್ಚೆಯ ವಿಷಯವಾಗಿದೆ.
ಶ್ರೀನಿವಾಸಪುರ ತಾಲೂಕಿನ ಪ್ರಭಾವಿ ಕಾಂಗ್ರೆಸ್ ಮುಖಂಡ ಮಾವು ಮಂಡಳಿ ಮಾಜಿ ಅಧ್ಯಕ್ಷ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ದಳಸನೂರು ಗೋಪಾಲಕೃಷ್ಣ ಅವರು ಸುದ್ಧಿಗೊಷ್ಠಿಯಲ್ಲಿ ಪಕ್ಷ ದ್ರೋಹದ ಕೆಲಸ ಮಾಡಲಾರೆ ನನ್ನ ಬಗ್ಗೆ ಬಂದಿರುವಂತ ಉಹಾಪೋಹಗಳು ಕೆವಲ ಉಹಾಪೊಹಗಳಷ್ಟೆ ಇದರಲ್ಲಿ ಯಾವುದೇ ಸತ್ಯ ಇಲ್ಲ ಎಂದು ವಿಧಾನಪರಿಷತ್ ಚುನಾವಣೆಗೆ ಎರಡು ದಿನ ಇರುವ ಸಮಯದಲ್ಲಿ ನೀಡಿರುವ ಹೇಳಿಕೆ ಜನಸಾಮನ್ಯರಲ್ಲಿ ಅಲ್ಲ ಕಾಂಗ್ರೆಸ್ ಕಾರ್ಯಕರ್ತರಲ್ಲಿಯೇ ಅಚ್ಚರಿ ಮೂಡಿಸಿದೆ.
ಏನಿದು ಅಚ್ಚರಿಯ ನಡೆ?
ಲೋಕಸಭೆ ಚುನಾವಣೆ ನಂತರ ಗೋಪಾಲಕೃಷ್ಣ ತಾಲೂಕಿನಲ್ಲಿ ನಡೆದಂತ ಪಕ್ಷ ಚಟುವಟಿಕೆಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ದೂರವೆ ಉಳದಿದ್ದರು,ಇದು ಸಾರ್ವಜನಿಕವಾಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು ರಾಜಕೀಯವಾಗಿ ಅವರು ಕಾಂಗ್ರೆಸ್ ತೊರೆಯುತ್ತಾರೆ ಎನ್ನುವ ಮಾತು ಸಹ ಕೇಳಿಬಂದಿತ್ತು ಮುಂದಿನ ದಿನಗಳಲ್ಲಿ ಬಿಜೆಪಿ ಸೇರಬಹುದು ಎನ್ನುವಂತ ಸುದ್ಧಿ ಹರಿದಾಡುತಿತ್ತು ಯಾವುದಕ್ಕೂ ಯಾವುದೇ ನಿಖರವಾದ ಮಾಹಿತಿ ಇರಲಿಲ್ಲವಾದರು ಅವರ ಆಪ್ತರು ಸಹ ಕಾಂಗ್ರೆಸ್ ನಿಂದ ಅಂತರ ಕಾದುಕೊಂಡಿದ್ದರು.ಈ ಬೆಳವಣಿಗೆಗಳಿಂದ ಸಾರ್ವಜನಿಕವಾಗಿ ಕೇಳಿಬರುತ್ತಿದ್ದ ಮಾತುಗಳೇ ನಿಜ ಇರಬಹುದಾ ಎನ್ನುವಂತಾಗಿತ್ತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗುತ್ತಾರ!
ಹರಿದಾಡುತ್ತಿರುವ ಉಹಾಪೋಹಗಳ ನಡೆವೆ ಮತ್ತೊಂದು ಅಚ್ಚರಿಯ ಎನ್ನುವಂತ ಸುದ್ಧಿ ಹೊರಬಂದಿದೆ ಇತ್ತಿಚಿಗೆ ಬಿಜೆಪಿ ಸೇರಿರುವ ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಚಂದ್ರಾರೆಡ್ಡಿ ಸ್ಥಾನ ಕಾಲಿಯಾಗಿದ್ದು ಆ ಸ್ಥಾನದಲ್ಲಿ ಗೋಪಾಲಕೃಷ್ಣ ಸೀಟು ಅಲಂಕರಿಸುತ್ತಾರೆ ಎಂದು ಕೇಳಿಬರುತ್ತಿದೆ ಅದಕ್ಕಾಗಿಯೇ ಕಾಂಗ್ರೆಸ್ ನಿಂದ ದೂರ ಇದ್ದ ಗೋಪಾಲಕೃಷ್ಣ ಕಾಂಗ್ರೆಸ್ ನೊಂದಿಗಿನ ಮುನಿಸು ಮರೆತು ವಿಧಾನಪರಿಷತ್ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಘೋಷಿಸುವ ಮೂಲಕ ಉಹಾಪೋಹಗಳಿಗೆ ಇತಿಶ್ರೀ ಹಾಡಿದ್ದಾರೆ ಎನ್ನಲಾಗುತ್ತಿದೆ, ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರು ಯಾರಗಬೇಕು ಎನ್ನುವುದನ್ನು ಅಧಿಕೃತವಾಗಿ ದೃಡಪಡಿಸಬೇಕಾದವರು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರು,
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



