ಶ್ರೀನಿವಾಸಪುರ:ನೀತಿ ಸಂಹಿತೆ ಜಾರಿಯಾಗಿರುವ ಹಿನ್ನಲೆಯಲ್ಲಿ ಗ್ರಾಮದಲ್ಲಿ ಕಟ್ಟಿದ್ದ ಕೇಸರಿ ಧ್ವಜ,ಫ್ಲೆಕ್ಸ್ ಬಂಟಿಕ್ಸ್ ಗಳನ್ನು ಪಂಚಾಯತಿ ಸಿಬ್ಬಂದಿ ತೆರವು ಗೊಳಿಸಿ ಅವುಗಳನ್ನು ಗ್ರಾಮದ ಸ್ಮಶಾನದಲ್ಲಿ ಎಸೆದು ಉದ್ದಟತನ ಮೆರೆದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅಯೋಧ್ಯೆ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಗ್ರಾಮದ ಮನೆಗಳ ಮೇಲೆ ಕಟ್ಟಿದ್ದ ಕೇಸರಿ ಧ್ವಜ ರಾಮನ ಭಾವಚಿತ್ರದ ಪ್ಲೆಕ್ಸ್ಗಳನ್ನು ನೀತಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿ ಶನಿವಾರ ತರಾತುರಿಯಲ್ಲಿ ತೆರವು ಮಾಡಿದ ಪಂಚಾಯಿತಿ ಸಿಬ್ಬಂದಿ ಸ್ಮಶಾನಕ್ಕೆ ಎಸೆದಿದ್ದಾರೆ ಎಂದು ತಾಲೂಕಿನ ಅಡ್ಡಗಲ್ ಪಂಚಾಯತಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದಲ್ಲಿ ಕೇಸರಿ ಧ್ವಜ,ಫ್ಲೆಕ್ಸ್ ಬಂಟಿಕ್ಸ್ ತೆರವು ವಿಚಾರ ರಾದ್ದಾಂತವಾಗುತ್ತಿದ್ದಂತೆ ಗೌವನಪಲ್ಲಿ ಠಾಣ ಪೋಲಿಸರು ತಕ್ಷಣ ಗ್ರಾಮಕ್ಕೆ ಆಗಮಿಸಿ ಪಂಚಾಯಿತಿ ಅಧಿಕಾರಿ ಹಾಗು ಸಿಬ್ಬಂದಿ ಮತ್ತು ಸಾರ್ವಜನಿಕರನ್ನು ಕೂರಿಸಿ ಮಾತನಾಡಿ ಸ್ಮಶಾನಕ್ಕೆ ಎಸೆದಿದ್ದ ಧ್ವಜ,ಫ್ಲೆಕ್ಸ್ ಬಂಟಿಕ್ಸ್ ಗಳನ್ನು ಅಲ್ಲಿಂದ ತೆರವು ಮಾಡಿ ಗ್ರಾಮಸ್ಥರ ಸಲಹೆಯಂತೆ ನೀರಿನಲ್ಲಿ ವಿಸರ್ಜಿಸಲು ಸೂಚಿಸಿದ್ದಾಗಿ ಪೋಲಿಸರು ಹೇಳುತ್ತಾರೆ.
ತೆರುವಿಗೆ ಎರಡು ತಿಂಗಳು ಬೇಕಾಯಿತ?
ಇವುಗಳನ್ನು ತೆರವು ಮಾಡಲು ಗ್ರಾಮ ಪಂಚಾಯತಿ ಸಿಬ್ಬಂದಿಗೆ ಎರಡು ತಿಂಗಳು ಬೇಕಾಯಿತ ಎಂದು ಪ್ರಶ್ನಿಸುವ ಗ್ರಾಮದ ಯುವಕರು ಇದು ಇಲ್ಲಿನ ಪಂಚಾಯಿತಿ ಅಧಿಕಾರಿ ಹಾಗು ಸಿಬ್ಬಂದಿ ಬೇಜವಬ್ದಾರಿ ನಡವಳಿಕೆಯ ಪರಿಣಾಮ ಗ್ರಾಮದಲ್ಲಿ ಸೌಹಾರ್ದತೆಗೆ ಧಕ್ಕೆ ಉಂಟುಮಾಡುವಂತಿದೆ ಎನ್ನುತ್ತಾರೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27