ಶ್ರೀನಿವಾಸಪುರ:ಪೋಲಿಸರೆಂದು ನಂಬಿಸಿ ವೃದ್ಧೆಯ ಮಾಂಗಲ್ಯ ಸರ ಅಪಹರಿಸಿರುವ ಘಟನೆ ಪಟ್ಟಣದ ಜನಬಿಡದಿ ವೃತ್ತ ಆಗಿರುವ ಪವನ್ ಆಸ್ಪತ್ರೆ ಬಳಿ ನಡೆದಿದೆ.
ಕಲ್ಲೂರು ಗ್ರಾಮದ ವೃದ್ದೆ ವೆಂಕಟಲಕ್ಷ್ಮಮ್ಮ ಮನೆಗೆ ಸರಕು ಖರೀದಿಸಲು ಆಸ್ಪತ್ರೆ ವೃತ್ತದ ಬಳಿ ನಡೆದು ಹೋಗುತ್ತಿರುವಾಗ ಅಪರಿಚಿತರು ವೆಂಕಟಲಕ್ಷ್ಮಮ್ಮನನ್ನು ಪರಿಚಿತರಂತೆ ಮಾತನಾಡಿ ಕಳ್ಳತನಗಳು ಹೆಚ್ಚಾಗುತ್ತಿವೆ ಮಾಂಗಲ್ಯ ಸರ ತೆಗೆದು ಬ್ಯಾಗ್ ನಲ್ಲಿ ಇಟ್ಟು ಕೊಳ್ಳಿ ಎಂದು ವೃದ್ದೆ ಕತ್ತಿನಲ್ಲಿದ್ದ ಬಂಗಾರದ ಸರವನ್ನು ತೆಗಿಸಿ ಬ್ಯಾಗ್ ನಲ್ಲಿ ಇಡಿಸಲು ಸಹಾಯ ಮಾಡುವರಂತೆ ಮಾಡಿ ಸರವನ್ನು ಎಗರಿಸಿದ್ದಾರೆ, ಇದಾದ ನಂತರ ಬ್ಯಾಗಲ್ಲಿ ಬಂಗಾರದ ಸರ ಇರುವುದನ್ನು ಖಾತ್ರಿ ಪಡಿಸಿಕೊಳ್ಳಲು ವೃದ್ದೆ ಪರಿಚಯಸ್ಥರ ಅಂಗಡಿ ಬಳಿ ಹೋಗಿ ಬ್ಯಾಗ್ ತಗೆದು ನೋಡಿದಾಗ ಮಾಂಗಲ್ಯ ಸರ ಇಲ್ಲದನ್ನು ನೋಡಿ ಗಾಭರಿಯಾಗಿದ್ದಾರೆ ಕೂಡಲೆ ಪರಿಚಯಸ್ಥರ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶ್ರೀನಿವಾಸಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ವೃದ್ದೆ ಹೇಳುವಂತೆ ಪೊಲೀಸರೆಂದು ನಂಬಿಸಿ ಪರಿಚಯಸ್ಥರಂತೆ ನಟಿಸಿ ನಾನು ಧರಿಸಿದ್ದ 40ಗ್ರಾಂ ಮಾಂಗಲ್ಯ ಚೈನು 6.5 ಗ್ರಾಂ ತಾಳಿ ಬಟ್ಟುಗಳ ಅಂದಾಜು 3ಲಕ್ಷ ಮೌಲ್ಯದ ಸರವನ್ನು ನಂಬಿಸಿ ಮೋಸಮಾಡಿ ಯಾಮಾರಿಸಿದ್ದಾರೆ ಎಂದು ಅಲವತ್ತುಕೊಳ್ಳುತ್ತಾರೆ.
Trending
- ಕರ್ನಾಟಕ ಮಾವು ಆಂಧ್ರ ನಿಷೇದಿಸಿರುವುದು ಒಕ್ಕೂಟ ವ್ಯವಸ್ಥೆಗೆ ಪೆಟ್ಟು ಸಿದ್ದರಾಮಯ್ಯ!
- ಶ್ರೀನಿವಾಸಪುರ:ಮಾವು ದರ ಕುಸಿತ,ಆಂಧ್ರದವರು ಬೇಡ ಅಂದ್ರಾ ಕರ್ನಾಟಕ ಮಾವನ್ನು!
- SRINIVASPUR ಮಾರುಕಟ್ಟೆಯಲ್ಲಿ ಮೋಸ ರೈತರಿಂದ ಲೋಕಾಯುಕ್ತರಿಗೆ ದೂರು
- ಮುಳಬಾಗಿಲು:ದಾಳಿಕೊರರ ಅತಿಕ್ರಮಣ ಕೃಷಿ ಸಂಸ್ಕೃತಿ ಮೇಲೂ ಪರಿಣಾಮ!
- ಶ್ರೀನಿವಾಸಪುರ ಅಭಿವೃದ್ಧಿಗೆ ಕೈಗಾರಿಕೆಗಳು ಸಹಕಾರಿ ವೆಂಕಟಶಿವಾರೆಡ್ಡಿ
- ಶ್ರೀನಿವಾಸಪುರ:ಮಾವು ಬೆಂಬಲ ಬೆಲೆಗೆ ಅಗ್ರಹಿಸಿ ರೈತರಿಂದ ರಸ್ತೆ ತಡೆ! ಬಂದ್ ಎಚ್ಚರಿಕೆ
- ಟೀನೇಜ್ ಗೆಳೆಯ ಗೆಳತಿಯರ “ನ ಲಜ್ಜಾಃ ನ ಭಯಂ” ಬಸ್ಸಿನಲ್ಲೆ ಅತಿರೇಕ!
- ಚಿಂತಾಮಣಿಗೂ ವಕ್ಕರಿಸಿದ ಕೊರೋನಾ! ಆತಂಕ ಬೇಡ
Sunday, June 15