ತುಮಕೂರು: ತುಮಕೂರು ಜಿಲ್ಲೆ ಕುಣಿಗಲ್ ನಲ್ಲಿ ನರರೂಪ ರಾಕ್ಷಸನಂತೆ ವರ್ತಿಸಿರುವ ಪತಿ ತನ್ನ ಪತ್ನಿಯನ್ನು ರಣ ಭೀಕರವಾಗಿ ಹತ್ಯೆಮಾಡಿದ್ದಾನೆ.
ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ತನ್ನ ಪತ್ನಿಯ ತಲೆ ಕಡಿದು ರುಂಡ-ಮುಂಡವನ್ನು ಬೇರ್ಪಡಿಸಿದ್ದೆ ಅಲ್ಲದೆ ಚರ್ಮ ಸುಲಿದು ರಾಕ್ಷಸನಂತೆ ವರ್ತಿಸಿದ್ದಾನೆ.
ದಾರುಣವಾಗಿ ಕೊಲೆಯಾದ ಮಹಿಳೆಯನ್ನು ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಪುಷ್ಪ (38) ಎಂದು ಗುರುತಿಸಲಾಗಿದ್ದು ಮೃತ ಮಹಿಳೆ ಕೆಲ ವರ್ಷದ ಹಿಂದೆ ಸುಗ್ಗನಹಳ್ಳಿ ಶಿವರಾಮ್ (45) ಎಂಬಾತನೊಂದಿಗೆ ಪ್ರೀತಿಸಿ ಮದುವೆಯಾಗಿದ್ದಳು,ಇಬ್ಬರು ಅಂತರ್ಜಾತಿ ಮದುವೆಯಾಗಿ ಜೀವನ ನಡೆಸುತ್ತಿದ್ದರು ಇವರಿಗೆ ಎಂಟು ವರ್ಷದ ಮಗನಿದ್ದಾನೆ.ಕಳೆದ ಕೆಲ ತಿಂಗಳ ಹಿಂದೆ ದಂಪತಿ ಹುಲಿಯೂರು ದುರ್ಗದ ಹೊಸಪೇಟೆಯ ಶಾಂತಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಪುಷ್ಪ ಕೆಲ ಮನೆಗಳಲ್ಲಿ ಮೆನ ಕೆಲಸ ಮಾಡುತ್ತಿದ್ದು, ಗಂಡ ಶಿವರಾಮ್ ಸ್ಥಳೀಯ ಸಾಮಿಲ್ನಲ್ಲಿ ಹೆಲ್ಪರ್ ಕೆಲಸ ಮಾಡುತ್ತಿದ್ದ.
ಪತಿ-ಪತ್ನಿ ನಡುವೆ ಹೊಂದಾವಣಿಕೆ ಇಲ್ಲದೆ ಜಗಳ ನಡೆಯುತ್ತಿತ್ತು, ಕೃತ್ಯ ನಡೆದ ದಿನ ರಾತ್ರಿ ಪತಿ ಊಟ ಬಡಿಸುವಂತೆ ಪತ್ನಿಗೆ ಹೇಳಿದ್ದು ಪತ್ನಿ ಯಾರೊಂದಿಗೊ ಫೋನಿನಲ್ಲಿ ಮಾತನಾಡುತ್ತ ಇರುವುದನ್ನು ಸಹಿಸದ ಪತಿ ಹಾಗು ಪತ್ನಿ ನಡುವೆ ಜಗಳ ನಡೆದು ಹತ್ಯೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಬೆಳಗ್ಗೆ ಪತಿಯೆ ಸಾಮಿಲ್ ಮಾಲೀಕರ ಮಗ ಪ್ರದೀಪ್ ಅವರಿಗೆ ತಾನು ನಡೆಸಿದ ಕೃತ್ಯದ ಮಾಹಿತಿ ನೀಡಿದ್ದಾನೆ. ಅವರು ತಕ್ಷಣ ವಿಚಾರವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ದೃಶ್ಯ ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ದುರ್ಮಾರ್ಗ ಶಿವರಾಮ್ ತನ್ನ ಪತ್ನಿಯ ತಲೆ ಕತ್ತರಿಸಿ, ದೇಹವನ್ನು ತುಂಡು ತುಂಡು ಮಾಡಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ದೇಹದ ಪ್ರತಿಭಾಗವನ್ನು ಪ್ರತ್ಯಕವಾಗಿ ಕತ್ತರಿಸಿದ್ದಾನೆ ದೇಹದ ಎಲ್ಲಾ ಭಾಗದ ಚರ್ಮಾ ಸುಲಿದಿದ್ದಾನೆ ಚಾಕುವಿನಿಂದ ಎದೆ ಹಾಗು ಗುಪ್ತಾಂಗದ ಭಾಗಗಳನ್ನು ಬಗೆದುಹಾಕಿದ್ದಾನೆ ಕೋಠಡಿಯಲ್ಲಿ ರಕ್ತಧಾರಕಾರವಾಗಿ ಹರಿದಿದೆ ಕರಳು ಹಾಗು ಇನ್ನಿತರೆ ಭಾಗಗಳು ಚಲ್ಲಾಪಿಲ್ಲಿಯಾಗಿ ಬಿದ್ದಿವೆ ಇದನೆಲ್ಲಾ ನೋಡಿದ ಪೋಲಿಸರು ತತ್ತರಿಸಿಹೋಗಿದ್ದಾರೆ
ಸಿಪಿಐ ಎಂ.ನಾಯಕ್, ಡಿವೈಎಸ್ಪಿ ಓಂಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ನಡೆದಾಗ ಮಗ ನಿದ್ದೆಗೆ ಜಾರಿದ್ದ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಅದೆ ಊರಿನಲ್ಲಿರುವ ಪುಷ್ಪಳ ಸಂಬಂಧಿ ಶಿವಶಂಕರ್ ನೀಡಿದ ದೂರಿನ ಮೇರೆಗೆ ಹುಲಿಯೂರು ದುರ್ಗ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಅರೋಪಿಯನ್ನು ಹಾಗು ಮಗುವನ್ನು ವಶಕ್ಕೆ ಪಡೆದಿದ್ದು ನಂತರದಲ್ಲಿ ಮಗುವನ್ನು ಬಿಟ್ಟುಕಳಿಸಿದ್ದಾರೆ
Trending
- ಕರ್ನಾಟಕ ಮಾವು ಆಂಧ್ರ ನಿಷೇದಿಸಿರುವುದು ಒಕ್ಕೂಟ ವ್ಯವಸ್ಥೆಗೆ ಪೆಟ್ಟು ಸಿದ್ದರಾಮಯ್ಯ!
- ಶ್ರೀನಿವಾಸಪುರ:ಮಾವು ದರ ಕುಸಿತ,ಆಂಧ್ರದವರು ಬೇಡ ಅಂದ್ರಾ ಕರ್ನಾಟಕ ಮಾವನ್ನು!
- SRINIVASPUR ಮಾರುಕಟ್ಟೆಯಲ್ಲಿ ಮೋಸ ರೈತರಿಂದ ಲೋಕಾಯುಕ್ತರಿಗೆ ದೂರು
- ಮುಳಬಾಗಿಲು:ದಾಳಿಕೊರರ ಅತಿಕ್ರಮಣ ಕೃಷಿ ಸಂಸ್ಕೃತಿ ಮೇಲೂ ಪರಿಣಾಮ!
- ಶ್ರೀನಿವಾಸಪುರ ಅಭಿವೃದ್ಧಿಗೆ ಕೈಗಾರಿಕೆಗಳು ಸಹಕಾರಿ ವೆಂಕಟಶಿವಾರೆಡ್ಡಿ
- ಶ್ರೀನಿವಾಸಪುರ:ಮಾವು ಬೆಂಬಲ ಬೆಲೆಗೆ ಅಗ್ರಹಿಸಿ ರೈತರಿಂದ ರಸ್ತೆ ತಡೆ! ಬಂದ್ ಎಚ್ಚರಿಕೆ
- ಟೀನೇಜ್ ಗೆಳೆಯ ಗೆಳತಿಯರ “ನ ಲಜ್ಜಾಃ ನ ಭಯಂ” ಬಸ್ಸಿನಲ್ಲೆ ಅತಿರೇಕ!
- ಚಿಂತಾಮಣಿಗೂ ವಕ್ಕರಿಸಿದ ಕೊರೋನಾ! ಆತಂಕ ಬೇಡ
Sunday, June 15