ಶ್ರೀನಿವಾಸಪುರ: ಕಾಂಗ್ರೆಸ್ ಮುಖಂಡ ದಲಿತ ನಾಯಕ ಶ್ರೀನಿವಾಸನ್ ಕೊಲೆ ಆರೋಪದಲ್ಲಿ ಬಂದಿತರಾಗಿರುವಂತ ವ್ಯಕ್ತಿಗಳ ಸಂಬಂಧಿಕರು ಜಗಜೀವನ ಪಾಳ್ಯದಲ್ಲಿ ನಮ್ಮೊಂದಿಗೆ ವಾಸಿಸುವುದು ಬೇಡ ಎಂದು ಜಗಜೀವನ ಪಾಳ್ಯ ಮತ್ತು ದಯಾನಂದ ರಸ್ತೆ ನಿವಾಸಿಗರು ಪೋಲಿಸರಿಗೆ ಮನವಿ ಪತ್ರ ನೀಡಿ ಒತ್ತಾಯಿಸಿರುತ್ತಾರೆ.
ಶ್ರೀನಿವಾಸನ್ ಅವರ ಕೊಲೆ ಆರೋಪದಲ್ಲಿ ಬಂದಿತರಾಗಿರುವ ವ್ಯಕ್ತಿಗಳ ಕುಟುಂಬಗಳ ಸದಸ್ಯರು ಹಾಗು ಬಂಧುಗಳು ಕೊಲೆಯಾದ ನಂತರದಲ್ಲಿ ಪರಾರಿಯಾಗಿದ್ದರು ದಿನಗಳದಂತೆ ಇತ್ತಿಚಿಗೆ ಕೆಲವರು ಒಬ್ಬೊಬ್ಬರಾಗಿ ಬರುತ್ತಿದ್ದು ಅವರಿಂದ ವಾರ್ಡ್ ನಂ 20 ರ ಜಗಜೀವನ ಪಾಳ್ಯ ಮತ್ತು ದಯಾನಂದ ರಸ್ತೆಯ ಜನರ ನಡುವೆ ಸೌಹಾರ್ದತೆ ಕದಡುತ್ತದೆ ಮತ್ತು ಕೊಲೆ ಕುರಿತಂತೆ ಪ್ರತ್ಯಕ್ಷ ಸಾಕ್ಷಿ ಗಳಿಗೆ ಮತ್ತು ಅವರ ಸಂಬಂಧಿಕರಿಗೆ ಅಪಾಯ ಆಗುವಂತ ಆತಂಕದ ಪರಿಸ್ಥಿತಿ ಏರ್ಪಡುತ್ತಿದ್ದು ಕೊಲೆ ಆರೋಪಿಯ ಸಂಬಂದಿಕರು ಜಗಜೀವನ ಪಾಳ್ಯ ಹಾಗೂ ದಯಾನಂದ ಭಾಗದಲ್ಲಿ ಬರುವುದು ಒಡಾಡುವುದು ಬೇಡ ಮತ್ತು ಅವರು ಇಲ್ಲಿ ಇರಲು ಅವಕಾಶ ಮಾಡಿಕೊಡಬಾರದು ಈ ಬಗ್ಗೆ ಪೋಲಿಸರು ಮದ್ಯಸ್ಥಿಕೆ ವಹಿಸಿ ಅವರಿಗೆ ತಿಳುವಳಿಕೆ ಮೂಡಿಸಬೇಕು ಎಂದು ಒತ್ತಾಯಿಸಿ ಶ್ರೀನಿವಾಸಪುರ ಪಟ್ಟಣದ ಪೊಲೀಸ್ ಠಾಣೆಯ ಮುಂದೆ ವಾರ್ಡ್ ನಂ 20 ಭಾಗದ ನಿವಾಸಿಗಳು ಮನವಿ ಪತ್ರವನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ವಾರ್ಡ್ ನಿವಾಸಿಗಳಾದ ಅಮರ್, ರಾಜೇಶ್, ಸುಬ್ರಮಣಿ, ಚೆನ್ನಪ್ಪ, ಮುಳಿಯಗಳಪ್ಪ, ತಿಪ್ಪಣ್ಣ, ನಾಗರಾಜ, ನಾಗೇಶ್, ಅಂಬರೀಶ್, ಪದ್ಮ, ರೂಪಶ್ರೀ,ಮಣಿಮಾಲ,ಸೀತಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Monday, April 28