ಚಿಂತಾಮಣಿ:ಶ್ರೀನಿವಾಸಪುರದ ಕಟ್ಟೆಮನೆ ಶೆಟ್ಟಿಯಜಮಾನ್ರ ಕುಟುಂಬಕ್ಕೆ ತನ್ನದೆ ಅದ ಇತಿಹಾಸ ಇದೆ ಪ್ರಭಲವಾಗಿ ಬ್ರಿಟಿಷ್ ಆಳ್ವಿಕೆಯನ್ನು ವಿರೋಧಿಸುತ್ತ ತಮ್ಮದೆ ಆದ ವ್ಯಾಪಾರ ವಹಿವಾಟು ನಡೆಸಿಕೊಂಡು ಬರುವುದರ ಜೊತೆಗೆ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದ ಶೆಟ್ಟಿಯಜಮಾನ್ರ ಕುಟುಂಬ ಶ್ರೀನಿವಾಸಪುರ ಪಟ್ಟಣದ ಆರಂಭಂದಿದಲೂ ಇಲ್ಲಿನ ವಾಸಿಗಳಾಗಿದ್ದು ಈಗ ಬದುಕು ಆರಿಸಿ ದೇಶ-ವಿದೇಶಗಳಲ್ಲಿ ನೆಲೆಸಿದ್ದಾರೆ.
ಆ ಕುಟುಂಬದ ಎಲ್ಲಾ ಸದಸ್ಯರು ಒಂದಡೆ ಕೂಡಿದ್ದು, ಚಿಂತಾಮಣಿಯ ಅಲಂಬಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ಕಲ್ಕಿವೆಂಕಟರಮಣಸ್ವಾಮಿ ದೇವಾಲಯದಲ್ಲಿ ಇಲ್ಲಿ ಕಟ್ಟೆಮನೆ ಶೆಟ್ಟಿಯಜಮಾನ್ರ ಕುಟುಂಬದವರಿಂದ ಶ್ರೀ ಶ್ರೀನಿವಾಸಕಲ್ಯಾಣೋತ್ಸವ ಕಾರ್ಯಕ್ರಮ ನಡೆಯಿತು.ಕಲ್ಯಾಣೋತ್ಸವದ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ವೇದಪಂಡಿತ ಶ್ರೀನಿವಾಸಚಾರ್ಯರು ಕಲ್ಯಾಣೋತ್ಸವದ ಪರಿಕಲ್ಪನೆ ಕುರಿತಂತೆ ವಿವರಿಸಿ ಸಪ್ತಪದಿ ಹಾಗು ವಿವಾಹದ ಮಹತ್ವ ಕುರಿತಾಗಿ ವಿವರಿಸಿದರು.ಶೆಟ್ಟಿಯಜಮಾನ್ರ ಕುಟುಂಬದವರು ಹಾಗು ವಿವಿಧಡೆಯಿಂದ ಆಗಮಿಸಿದ್ದ ಭಕ್ತಾದಿಗಳು ಕಲ್ಯಾಣೋತ್ಸವವನ್ನು ಕಣ್ತುಂಬ ನೋಡಿ ಪುನೀತರಾದರು. ಈ ಸಂದರ್ಭದಲ್ಲಿ ಶೆಟ್ಟಿಯಜಮಾನ್ರ ಕುಟುಂಬದ ಹಿರಿಯ ಸದಸ್ಯರಾದ ಕಲ್ಯಾಣೋತ್ಸವದ ಪ್ರಮುಖ ರೂವಾರಿ ನಿವೃತ್ತ ಬ್ಯಾಂಕ್ ಅಧಿಕಾರಿ ರಘುಪ್ರಕಾಶ್,ಹಿರಿಯ ಸದಸ್ಯ ಕೇಂದ್ರ ಸರ್ಕಾರದ ಅಂಕಿಅಂಶಗಳ ನಿವೃತ್ತ ಅಧಿಕಾರಿ ತಿಪ್ಪಶೆಟ್ಟಿ,ಸ್ವಾತಂತ್ಯ ಹೋರಾಟಗಾರ ಚಂದ್ರಯ್ಯಶೆಟ್ಟಿ ಪತ್ನಿ ವನಜಾಕ್ಷಮ್ಮ,ನಿವೃತ್ತ ತಹಶೀಲ್ದಾರ್ ರಾಮನಾಥ್,ಕ್ರೀಡಾಪಟು ಹಾಗು ನಿವೃತ್ತ ಪೋಲಿಸ್ ಇನ್ಸಪೇಕ್ಟರ್ ವೆಂಕಟೇಶ್,ನಿವೃತ್ತ ಬ್ಯಾಂಕ್ ಅಧಿಕಾರಿ ಅಮರನಾಥ್,ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧಿಕಾರಿ ರವೀಂದ್ರ,ಕೇಂದ್ರೀಯ ಅಬಕಾರಿ ಮತ್ತು ಕಸ್ಟಮ್ಸ್ ಮಂಡಳಿ ಅಧಿಕಾರಿ ಕೃಷ್ಣವೇಣಿ,ಸ್ಯಾನ್ ಫ್ರಾನ್ಸಿಸ್ಕೊ ನಿವಾಸಿ ವಿನುತರಮೇಶ್,ಆರೋಗ್ಯ ಇಲಾಖೆ ನಿವೃತ್ತ ಅಧಿಕಾರಿ ವೆಂಕಟಾಚಲ,ಖ್ಯಾತ ಛಾಯಗ್ರಾಹಕ ವಾಸು ನೂರಾರು ಸಂಖ್ಯೆಯಲ್ಲಿ ಕುಟುಂಬದ ಸದಸ್ಯರು ಮುಂತಾದವರು ಇದ್ದರು.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



