ಶ್ರೀನಿವಾಸಪುರ: ರಥಸಪ್ತಮಿ ದಿನದಂದು ಸೂರ್ಯೋದಯಕ್ಕೂ ಮುನ್ನ ಶೂಚಿರಭೂತರಾಗಿ ಸೂರ್ಯ ನಮಸ್ಕಾರ ಮಾಡಿದರೆ ಮಾನಸಿಕ ನೆಮ್ಮದಿ ಮಾನಸಿಕ ದೈಹಿಕ ಸಮತೋಲನ ವೃದ್ಧಿಯಾಗುತ್ತದೆ ಕಾಯಿಲೆಗಳಿಂದ ದೂರವಾಗಿರುತ್ತಾರೆ ಎಂದು ಯೋಗಗುರು ಚೌಡಪ್ಪ ಹೇಳಿದರು.
ಅವರು ಪಟ್ಟಣದ ತ್ಯಾಗರಾಜ ಬಡಾವಣೆಯಲ್ಲಿನ ಯೋಗ ಮಂದಿರದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ರಥಸಪ್ತಮಿ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರದಲ್ಲಿ ಪಾಲ್ಗೊಂಡು ಮಾತನಾಡಿದರು.
ಸೂರ್ಯ ಭಗವಾನನ ಜನುದಿನವಾಗಿ ರಥಸಪ್ತಮಿಯನ್ನು ಆಚರಿಸುವುದು ನಮ್ಮ ಸಂಪ್ರದಾಯ ಸಂಕ್ರಾಂತಿಗೆ ದಕ್ಷಿಣಾಯನದಿಂದ ಉತ್ತರಾಯಣ ಕಡೆ ಪ್ರಯಾಣಿಸುವ ಸೂರ್ಯ ಸಂಪೂರ್ಣ ಉತ್ತರ ದಿಕ್ಕಿಗೆ ತಿರುಗುತ್ತಾನೆ. ಕೊಟ್ಯಾನು ಕೋಟಿ ದೇವತೆಗಳು ಸೂರ್ಯನ ಪತ ಸಂಚಲನಕ್ಕೆ ಸಾಕ್ಷೀಭೂತರಾಗಿರುತ್ತಾರೆಂದು ಪ್ರಕೃತಿ ಪರಂಪರೆ ಸಾರುತ್ತದೆ.
ಪತ ಸಂಚಲನ ಬದಲಾವಣೆಯಿಂದ ಕೇವಲ ಆಧ್ಯಾತ್ಮಿಕವಾದವಷ್ಟೆ ಅಲ್ಲ ಪ್ರಾಕೃತಿಕವಾಗಿ ಪರಿಸರಸದ ಮೇಲು ಬದಲಾವಣೆ ಕಾಣಬಹುದಾಗಿದೆ ಸೂರ್ಯನ ಪ್ರಖರತೆ ಹೆಚ್ಚುತ್ತದೆ ಮರಗಿಡ ಸಸ್ಯ ಶ್ಯಾಮಲದ ಮೇಲೆ ಪರಿಣಾಮ ಬೀರುತ್ತದೆ ಪ್ರಕೃತಿಯಲ್ಲಿ ಹಲವಾರು ರೀತಿಯ ಬದಲಾವಣೆಗಳನ್ನು ಕಾಣಸಿಗುತ್ತದೆ ಜೊತೆಗೆ ಮನುಷ್ಯರಿಗೆ ದೈಹಿಕ ಕಾಯಿಲೆಗಳು ದೂರವಾಗಲು ಸೂರ್ಯಕಿರಣಗಳು ಶಕ್ತಿ ನೀಡುತ್ತದೆ. ಬೀಜ ಮಂತ್ರಗಳೊಂದಿಗೆ 108 ಸೂರ್ಯ ನಮಸ್ಕಾರ ಮಾಡುವುದರಿಂದ ಆಧ್ಯಾತ್ಮಿಕವಾಗಿ ದೈಹಿಕ ಬದಲಾವಣೆ ಕಾಣಬಹುದಾಗಿರುತ್ತದೆ ಮಾನಸಿಕ ಸ್ಮರಣೆಯ ಶಕ್ತಿ ಹಾಗು ದೇಹಕ್ಕೆ ರೋಗ ನಿರೂದಕ ಶಕ್ತಿ ಹೆಚ್ಚುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೋಗ ಶಿಕ್ಷಕ ರವಿಕುಮಾರ್ ಮಾತನಾಡಿ ತಂತ್ರಜ್ಞಾನ ಬೆಳೆದಂತೆ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತಿದೆ ಒತ್ತಡಗಳಿಂದ ನಲುಗುತ್ತಿರುವ ಜನತೆಗೆ ಸೂರ್ಯ ನಮಸ್ಕಾರ, ಯೋಗಾಭ್ಯಾಸ ಪ್ರಾಣಾಯಾಮ ಕಲಿತು ಮಾನಸಿಕ ದೈಹಿಕ ಒತ್ತಡಗಳು ದೂರ ಮಾಡಿಕೊಂಡು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಒತ್ತು ಕೊಡಬೇಕೆಂದರು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷೆ ವರಲಕ್ಷ್ಮಿ, ಯೋಗ ಶಿಕ್ಷಕ ವೆಂಕಟರವಣಪ್ಪ ಬಾಬುರೆಡ್ಡಿ,ಉಪೇಂದ್ರ,ರಮೇಶರೆಡ್ಡಿ, ಕುಬೇರಗೌಡ, ವಾಸವಿರವಿಕುಮಾರ್,ಉಷಾದೇವಿ ಮುಂತಾದವರಿ ಇದ್ದರು.
Trending
- ಕರ್ನಾಟಕ ಮಾವು ಆಂಧ್ರ ನಿಷೇದಿಸಿರುವುದು ಒಕ್ಕೂಟ ವ್ಯವಸ್ಥೆಗೆ ಪೆಟ್ಟು ಸಿದ್ದರಾಮಯ್ಯ!
- ಶ್ರೀನಿವಾಸಪುರ:ಮಾವು ದರ ಕುಸಿತ,ಆಂಧ್ರದವರು ಬೇಡ ಅಂದ್ರಾ ಕರ್ನಾಟಕ ಮಾವನ್ನು!
- SRINIVASPUR ಮಾರುಕಟ್ಟೆಯಲ್ಲಿ ಮೋಸ ರೈತರಿಂದ ಲೋಕಾಯುಕ್ತರಿಗೆ ದೂರು
- ಮುಳಬಾಗಿಲು:ದಾಳಿಕೊರರ ಅತಿಕ್ರಮಣ ಕೃಷಿ ಸಂಸ್ಕೃತಿ ಮೇಲೂ ಪರಿಣಾಮ!
- ಶ್ರೀನಿವಾಸಪುರ ಅಭಿವೃದ್ಧಿಗೆ ಕೈಗಾರಿಕೆಗಳು ಸಹಕಾರಿ ವೆಂಕಟಶಿವಾರೆಡ್ಡಿ
- ಶ್ರೀನಿವಾಸಪುರ:ಮಾವು ಬೆಂಬಲ ಬೆಲೆಗೆ ಅಗ್ರಹಿಸಿ ರೈತರಿಂದ ರಸ್ತೆ ತಡೆ! ಬಂದ್ ಎಚ್ಚರಿಕೆ
- ಟೀನೇಜ್ ಗೆಳೆಯ ಗೆಳತಿಯರ “ನ ಲಜ್ಜಾಃ ನ ಭಯಂ” ಬಸ್ಸಿನಲ್ಲೆ ಅತಿರೇಕ!
- ಚಿಂತಾಮಣಿಗೂ ವಕ್ಕರಿಸಿದ ಕೊರೋನಾ! ಆತಂಕ ಬೇಡ
Sunday, June 15