ಶ್ರೀನಿವಾಸಪುರ:ಕೋಲಾರ ಜಿಲ್ಲೆಯಲ್ಲಿ ಇತ್ತಿಚಿಗೆ ಹೆಚ್ಚುತ್ತಿರುವ ಕ್ರೈಮ್ ಕುರಿತಂತೆ ಕೋಲಾರ ಜಿಲ್ಲಾ ಪೊಲೀಸರು ಎಚ್ಚೆತ್ತುಕೊಂಡಂತಿದೆ ಇತ್ತಿಚಿಗೆ ನಡೆದಂತ ನಾಲ್ಕೈದು ಕೊಲೆ ಕೆಸುಗಳ ವಿಚಾರವಾಗಿ ಕೋಲಾರ ಜಿಲ್ಲಾ ಪೋಲಿಸ್ ಇಲಾಖೆ ವಿರುದ್ದ ಸಾರ್ವಜನಿಕರಿಂದ ತೀವ್ರ ವಿಮರ್ಶೆಗಳು ಕೇಳಿ ಬಂದ ಹಿನ್ನಲೆಯಲ್ಲಿ ಪೋಲಿಸ್ ಅಧಿಕಾರಿಗಳು ಸಡನ್ ಆಗಿ ಅಲರ್ಟ್ ಆಗಿದ್ದಾರೆ ಪೋಕರಿಗಳು ಪಟಾಲಂಗಳು ಕೂರುವ ಅಡ್ದೆಗಳ ಮೇಲೆ ಏಕಾಏಕಿ ದಾಳಿ ಮಾಡಿರುವ ಪೋಲಿಸರು ಬೀಡಾಡಿ ಪೋಕರಿಗಳಿಗೆ ತಕ್ಕ ಪಾಠಾ ಕಲಿಸಿದ್ದಾರೆ ಇಂದು ಶ್ರೀನಿವಾಸಪುರದ ಹಳೆ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಕ್ಕೆ ಜೀಪ್ ನುಗ್ಗಿಸಿದ ಪೋಲಿಸರು ನಂದಿನಿ ಪಾರ್ಲರ್ ಹಿಂಬಾಗದಲ್ಲಿ ಅರಾಮಾಗಿ ಸಿಗರೇಟ್ ಹೊಡೆಯುತ್ತಿದ್ದ ಬಿಲ್ಡ್ ಪ ಕೊಡುತ್ತ ಕೂತು ಹರಟೆ ಹೊಡೆಯುತ್ತಿದ್ದ ಕಾಲೇಜು ಹುಡುಗರಿಗೆ ಬೆತ್ತ ಬೀಸಿ ಅಲ್ಲಿಂದ ಓಡಿಸಿದ್ದಾರೆ ಬಾಲಕಿಯರ ಕಾಲೇಜು ಆವರಣದಲ್ಲಿ ಗುಂಪುಗಳು ಕಟ್ಟಿಕೊಂಡು ಅಡ್ಡಾಡುತ್ತಿದ್ದ ಯುವಕರಿಗೆ ಇನ್ನೊಮ್ಮೆ ಇತ್ತ ಬರಬಾರದು ಎಂದು ಎಚ್ಚರಿಸಿ ಕಳಿಸಿದ್ದಾರೆ.
ಶ್ರೀನಿವಾಸಪುರ ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸಪೇಕ್ಟರ್ ಗಳಾದ ಜೈರಾಮ್ ಹಾಗೂ ನಂಜುಂಡಪ್ಪ ರವರು ಬಾಲಕೀಯರ ಕಾಲೇಜಿಗೆ ಹೋಗಿ ಹೆಣ್ಮಕ್ಕಳಿಗೆ ಧೈರ್ಯ ತುಂಬಿದ್ದಾರೆ ಆತಂಕವಿಲ್ಲದೆ ಕಾಲೇಜುಗಳಿಗೆ ಬಂದು ವಿದ್ಯಾಭ್ಯಾಸವನ್ನು ಮಾಡಿ ಹೆತ್ತವರಿಗೆ ಗೌರವ ತರುವ ನಿಟ್ಟಿನಲ್ಲಿ ಕಷ್ಟಪಟ್ಟು ಓದುವ ಮೂಲಕ ಉತ್ತಮ ಸಾಧನೆ ಮಾಡಿ ಪುಂಡು ಪೋಕರಿಗಳಿಗೆ ಹೆದರಬೇಡಿ ನಿಮಿಗ್ಯಾರಿಗಾದರು ತೊಂದರೆ ಆದರೆ ನೇರವಾಗಿ ಪೋಲಿಸ್ ಅಧಿಕಾರಿಗಳಿಗೆ ದೂರು ನೀಡುವಂತೆ ಹೇಳಿದರು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27