ಶ್ರೀನಿವಾಸಪುರ:ಸಂತೆಯಲ್ಲಿ ಟೆಂಪೋ ನಿಲ್ಲಿಸಿದ ವಿಚಾರವಾಗಿ ನಡೆದಂತ ರಗಳೆ ದೊಡ್ಡದಾಗಿ ಮೂತ್ರ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಗಲಾಟೆ ಮಾಡಿಕೊಂಡು ವ್ಯಕ್ತಿಯೊಬ್ಬ ಸಾವನಪ್ಪಿರುವ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ನಡೆದಿರುತ್ತದೆ ಮೃತ ವ್ಯಕ್ತಿಯನ್ನು ವೆಂಕಟ್ರಾಯಪ್ಪ (55) ಎಂದು ಗುರುತಿಸಲಾಗಿದೆ.
ತಾಲೂಕಿನ ಗೌನಿಪಲ್ಲಿ ಸಂತೆ ತಾಲೂಕಿನಲ್ಲೆ ಅತಿ ದೊಡ್ಡ ಸಂತೆಯಾಗಿದ್ದು ಇಲ್ಲಿ ಆಂಧ್ರ ಸೇರಿದಂತೆ ಇತರಡೆಯಿಂದ ಸಂತೆ ವ್ಯಾಪಾರ ಮಾಡಲು ಸೇರುವುದು ಸಾಮಾನ್ಯ ಎಂದಿನಂತೆ ಮಂಗಳವಾರ ಸಂತೆ ಮೈದಾನದಲ್ಲಿ ವಾರದ ಸಂತೆ ನಡೆದಿದೆ ನಂತರದಲ್ಲಿ ವ್ಯಾಪರಸ್ಥರು ಸಂತೆ ಮುಗಿಸಿ ಉಳಿದ ಸರಕು ವಾಪಸ್ಸು ತಗೆದುಕೊಂಡು ಹೋಗುವುದು ಸಾಮನ್ಯ ಅದರಂತೆ ಸಂತೆಯಲ್ಲಿ ವ್ಯಾಪರ ಮಾಡಲು ಬಂದಿದ್ದ ಗೌವನಪಲ್ಲಿ ಗ್ರಾಮದ ವೆಂಕಟ್ರಾಯಪ್ಪನ ಮಗ ಮನೋಹರ್ ಸಂತೆಯಲ್ಲಿ ಉಳಿದ ಸರಕನ್ನು ಮೂಟೆಗೆ ಹಾಕಿ ಕಟ್ಟಿಕೊಂಡು ಅದನ್ನು ತಗೆದುಕೊಂಡು ಹೋಗಲು ಟೆಂಪೋ ತಂದಿರುತ್ತಾನೆ ಅದನ್ನು ರಸ್ತೆಯಲ್ಲಿ ನಿಲ್ಲಿಸಿ ಅಂಗಡಿ ಸರಕನ್ನು ತುಂಬಿಕೊಂಡು ವಾಪಸ್ಸು ಹೋಗುವಾಗ ರಸ್ತೆಯಲ್ಲಿ ಮತ್ತೊಂದು ಟೆಂಪೋ ಅಡ್ದ ಇರುತ್ತದೆ ಯಾರದು ಎಂದು ತಿಳಿಯದೆ ಅಲ್ಲೆ ಕುಳತಿದ್ದ ಚಾಲಕ ಅದೆ ಊರಿನ ಶಂಕರಪ್ಪನದೆ ಇರಬಹುದು ಎಂದು ಊಹಿಸಿಕೊಂಡು ಟೆಂಪೋ ಯಾಕೆ ರಸ್ತೆಗೆ ಅಡ್ಡ ನಿಲ್ಲಿಸಿರುವುದು ಎಂದು ಮನೋಹರ್ ಹಾಗು ಅವರ ತಂದೆ ವೆಂಕಟ್ರಾಯಪ್ಪ ದಬಾವಣೆ ಮಾಡಿದಾಗ ಶಂಕರಪ್ಪ ಹಾಗು ಮನೋಹರ್ ನಡುವೆ ಮಾತಿನ ಚಕಮಕಿ ನಡೆದಿದೆ ನಂತರ ಇಬ್ಬರು ಹೋರಟು ಹೋಗಿದ್ದಾರೆ ನಂತರದಲ್ಲಿ ಮನೋಹರ್ ತಂದೆ ವೆಂಕಟ್ರಾಯಪ್ಪನಿಗೆ ಮೂತ್ರಕ್ಕೆ ಅವಸರವಾಗಿ ಸಂತೆ ಮೈದಾನದ ಬಳಿ ಕೂಗಳತೆ ದೂರದ ಬಯಲಿನಲ್ಲಿ ಮೂತ್ರ ವಿಸರ್ಜನೆಗೆ ಹೋಗಿರುತ್ತಾನೆ ಅಲ್ಲಿಗೆ ಬಂದ ಶಂಕರಪ್ಪ ವೆಂಕಟ್ರಾಯಪ್ಪ ಹಿಗ್ಗಾ ಮುಗ್ಗ ಬದಿರುತ್ತಾನೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮೀಲಾಸಿಕೊಂಡಿದ್ದಾರೆ ಅಲ್ಲಿದ್ದವರು ಇಬ್ಬರನ್ನು ಸಮಾಧಾನ ಪಡಿಸಿ ಕಳಿಸಿದ್ದಾರೆ ಇದೆಲ್ಲ ನಡೆದಾದ ನಂತರ ತಡರಾತ್ರಿ ಶಂಕರಪ್ಪ ಮತ್ತೆ ಮನೋಹರ್ ಮನೆ ಬಳಿ ಕೂಗಾಡಿ ಗಲಭೆ ಎಬ್ಬಿಸಿದ್ದಾನೆ ಈ ಸಂದರ್ಭದಲ್ಲಿ ಮನೋಹರ್ ಮನೆಯಲ್ಲಿ ಇಲ್ಲದೆ ಅವರ ತಂದೆ ವೆಂಕಟ್ರಾಯಪ್ಪ ಮನೆಯಲ್ಲಿದ್ದು ಶಂಕರಪ್ಪನನ್ನು ಸಮಾಧಾನ ಪಡಿಸಲು ಯತ್ನಿಸಿದಾಗ ಶಂಕರಪ್ಪನನ್ನು ತಳ್ಳಾಡಿದ್ದಾನೆ ಈ ಸಂದರ್ಭದಲ್ಲಿ ವೆಂಕಟ್ರಾಯಪ್ಪ ಅಯಾತಪ್ಪಿ ಬಿದ್ದು ಪ್ರಜ್ನೆ ಕಳೆದುಕೊಂಡಿರುತ್ತಾನೆ ನಂತರದಲ್ಲಿ ವೆಂಕಟ್ರಾಯಪ್ಪನ ಕುಟುಂಬದವರು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದ್ಕೊಂಡು ಹೋಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಶ್ರೀನಿವಾಸಪುರ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮದ್ಯದಲ್ಲಿ ವೆಂಕಟ್ರಾಯಪ್ಪ ಮೃತ ಪಟ್ಟಿರುತ್ತಾನೆ, ಶಂಕರಪ್ಪ ಹೊಡೆದಿರುವುದರಿಂದ ವೆಂಕಟ್ರಾಯಪ್ಪ ಸಾವನಪ್ಪಿದ್ದಾನೆ ಎಂದು ಮನೋಹರ್ ಗೌವನಪಲ್ಲಿ ಠಾಣೆಯಲ್ಲಿ ದೂರುದಾಖಲಿಸಿರುತ್ತಾರೆ.ದೂರಿನನ್ವಯ ಶಂಕರಪ್ಪನನ್ನು ವಶಕ್ಕೆ ಪಡೆದ ಪೋಲಿಸರು ನ್ಯಾಯಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.
Trending
- ಕರ್ನಾಟಕ ಮಾವು ಆಂಧ್ರ ನಿಷೇದಿಸಿರುವುದು ಒಕ್ಕೂಟ ವ್ಯವಸ್ಥೆಗೆ ಪೆಟ್ಟು ಸಿದ್ದರಾಮಯ್ಯ!
- ಶ್ರೀನಿವಾಸಪುರ:ಮಾವು ದರ ಕುಸಿತ,ಆಂಧ್ರದವರು ಬೇಡ ಅಂದ್ರಾ ಕರ್ನಾಟಕ ಮಾವನ್ನು!
- SRINIVASPUR ಮಾರುಕಟ್ಟೆಯಲ್ಲಿ ಮೋಸ ರೈತರಿಂದ ಲೋಕಾಯುಕ್ತರಿಗೆ ದೂರು
- ಮುಳಬಾಗಿಲು:ದಾಳಿಕೊರರ ಅತಿಕ್ರಮಣ ಕೃಷಿ ಸಂಸ್ಕೃತಿ ಮೇಲೂ ಪರಿಣಾಮ!
- ಶ್ರೀನಿವಾಸಪುರ ಅಭಿವೃದ್ಧಿಗೆ ಕೈಗಾರಿಕೆಗಳು ಸಹಕಾರಿ ವೆಂಕಟಶಿವಾರೆಡ್ಡಿ
- ಶ್ರೀನಿವಾಸಪುರ:ಮಾವು ಬೆಂಬಲ ಬೆಲೆಗೆ ಅಗ್ರಹಿಸಿ ರೈತರಿಂದ ರಸ್ತೆ ತಡೆ! ಬಂದ್ ಎಚ್ಚರಿಕೆ
- ಟೀನೇಜ್ ಗೆಳೆಯ ಗೆಳತಿಯರ “ನ ಲಜ್ಜಾಃ ನ ಭಯಂ” ಬಸ್ಸಿನಲ್ಲೆ ಅತಿರೇಕ!
- ಚಿಂತಾಮಣಿಗೂ ವಕ್ಕರಿಸಿದ ಕೊರೋನಾ! ಆತಂಕ ಬೇಡ
Monday, June 16