ಶ್ರೀನಿವಾಸಪುರ:ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪನವರು ತಾಲೂಕಿನ ನಂಬಿಹಳ್ಳಿ ಪಂಚಾಯಿತಿ ಭೇಟಿ ಸಂದರ್ಭದಲ್ಲಿ ಮೊಬೈಲ್ ಸ್ವೀಚ್ ಆಫ್ ಮಾಡಿ ಬೇಜವಬ್ದಾರಿಯಿಂದ ನಾಪತ್ತೆಯಾಗಿದ್ದ ನಂಬಿಹಳ್ಳಿ ಪಿಡಿಓ ಮಂಜುನಾಥರೆಡ್ಡಿಯನ್ನು ಜಿಲ್ಲಾಪಂಚಾಯಿತಿ ಸಿಇಒ ಸಸ್ಪೆಂಡ್ ಮಾಡಿರುತ್ತಾರೆ.
ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪನವರು ಶ್ರೀನಿವಾಸಪುರ ಭೇಟಿ ಸಂದರ್ಭದಲ್ಲಿ ಅಧಿಕಾರಿಗಳ ಸಭೆ ನಡೆಸಿ ವಿಶೇಷವಾಗಿ ಪಂಚಾಯಿತಿ ಕಚೇರಿಗಳಿಗೆ ಭೇಟಿ ನೀಡುವುದಾಗಿ ತಿಳಿಸಿದ್ದರು ಅದರಂತೆ ನಂಬಿಹಳ್ಳಿ ಪಂಚಾಯಿತಿಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪನವರು ಭೇಟಿ ನೀಡಿದಾಗ, ನಂಬಿಹಳ್ಳಿ ಪಿಡಿಓ ಮಂಜುನಾಥರೆಡ್ಡಿ ಪಂಚಾಯಿತಿ ಕಚೇರಿಯಲ್ಲಿ ಇಲ್ಲದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದರು,ಇದಕ್ಕೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪನವರು ಕೆಂಡಾಮಂಡಲರಾಗಿ ಸಭೆಯಲ್ಲಿ ಭಾಗವಹಿಸಿದ್ದ ಪಿಡಿಒ ಮಂಜುನಾಥರೆಡ್ಡಿ ನಂತರ ಕಚೇರಿಗೆ ಆಗಮಿಸದೆ ನಾಪತ್ತೆಯಾಗಿದ್ದು ಇದನ್ನು ತೀವ್ರವಾಗಿ ಪರಿಗಣಿಸಿದ ಉಪಲೋಕಾಯುಕ್ತ ನ್ಯಾಯಮೂರ್ತಿಗಳು ಪಿಡಿಒ ಮಂಜುನಾಥರೆಡ್ಡಿ ಯನ್ನು ತಕ್ಷಣವೇ ಸಸ್ಪೆಂಡ್ ಮಾಡುವಂತೆ ಸ್ಥಳದಲ್ಲಿದ್ದ ತಾಲೂಕು ಪಂಚಾಯಿತಿ ಇಒ ಶಿವಕುಮಾರಿ ಅವರಿಗೆ ಸೂಚಿಸಿದರು.
ಈ ಹಿನ್ನಲೆಯಲ್ಲಿ ತಾಲೂಕು ಪಂಚಾಯಿತಿ ಇಒ ಶಿವಕುಮಾರಿ ಅವರು ಕೋಲಾರ ಜಿಲ್ಲಾಪಂಚಾಯಿತಿ ಸಿಇಒ ಅವರಿಗೆ ಪಿಡಿಒ ಮೇಲಿನ ಆರೋಪ ವಿವರಿಸಿ ಕರ್ತವ್ಯ ಲೋಪದ ಆರೋಪದಡಿ ಉಪಲೋಕಾಯುಕ್ತ ನ್ಯಾಯಮೂರ್ತಿಗಳ ಆದೇಶದಂತೆ ಅಮಾನತ್ತು ಮಾಡಲು ಶಿಫಾರಸ್ಸು ಮಾಡಿದ್ದರು ಅದರಂತೆ ಕೋಲಾರ ಜಿಲ್ಲಾಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕರ್ನಾಟಕ ನಾಗರೀಕ ಸೇವಾ(ವರ್ಗೀಕರಣ ನಿಯಂತ್ರಣ ಮತ್ತು ಅಪೀಲು) ನಿಯಮ 1957 ಅಡಿಯಲ್ಲಿ ಪಿಡಿಒ ಮಂಜುನಾಥರೆಡ್ಡಿಯನ್ನು ಅಮಾನತ್ತು ಮಾಡಿರುತ್ತಾರೆ.
Breaking News
- ಶ್ರೀನಿವಾಸಪುರ:ಲೋಕಾಕಾಯುಕ್ತ ಭೇಟಿ ಸಂದರ್ಭದಲ್ಲಿ ನಾಪತ್ತೆ PDO ಸಸ್ಪೆಂಡ್!
- ಪಾಕಿಸ್ತಾನಕ್ಕೆ ನುಗ್ಗಿದ ಭಾರತದ ಸೈನ್ಯ ಯುದ್ಧದ ಕಾರ್ಮೋಡ!
- ಶ್ರೀನಿವಾಸಪುರ:ಲೋಕಾಯುಕ್ತ ಭೇಟಿ ಮೊಬೈಲ್ ಆಪ್,ನಾಪತ್ತೆಯಾದ PDO!
- ಸ್ವಾತಂತ್ರ್ಯ ನಂತರ 10ನೇ ತರಗತಿ ಪಾಸ್ ಆದ ಗ್ರಾಮದ ಮೊದಲ ಯುವಕ!
- 65 ಸಾವಿರ ಶಿಕ್ಷಕರ ನೇರವಿನಿಂದ ಒಳಮೀಸಲಾತಿ ಸಮೀಕ್ಷೆ CM ಸಿದ್ದರಾಮಯ್ಯ
- ಶ್ರೀನಿವಾಸಪುರ:ಬಳಸದೆ ಹಳೆಯದಾಗುತ್ತಿದೆ ksrtc ಬಸ್ ನಿಲ್ದಾಣ!
- ಶ್ರೀನಿವಾಸಪುರ:ಅರ್ಥಪೂರ್ಣ ಬಸವ ಜಯಂತಿ ಆಚರಣೆ
- ಶ್ರೀನಿವಾಸಪುರ:ಪ್ರಾಥಮಿಕ ಶಾಲಾ ಶಿಕ್ಷಕರ ನೂತನ ಅಧ್ಯಕ್ಷ ರೆಡ್ಡಪ್ಪ
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
Friday, May 16