ನ್ಯೂಜ್ ಡೆಸ್ಕ್:ರಾಜಕೀಯ ಮುಖಂಡನಾಗಿ ಹೊರಹೊಮ್ಮಿರುವ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್, ಚುನಾವಣೆಗೆ ಸಲಹೆಗಾರನಾಗಿ ಫೀಜು ನೂರು ಕೋಟಿ ತೆಗೆದುಕೊಳ್ಳುತ್ತೆನೆ ಎಂದು ಹೇಳಿದ್ದಾರೆ.ಪ್ರಶಾಂತ್ ಕಿಶೋರ್ ಅವರ ಶುಲ್ಕದ ಬಗ್ಗೆ ಇದುವರೆಗೆ ಯಾರಿಗೂ ಸ್ಪಷ್ಟತೆ ಇಲ್ಲ. ಅವರ ಸೇವೆಯನ್ನು ತೆಗೆದುಕೊಂಡ ರಾಜಕೀಯ ಪಕ್ಷಗಳು ಈ ಬಗ್ಗೆ ಸ್ಪಷ್ಟವಾಗಿ ಘೋಷಿಸಿಲ್ಲ ಅವರು ಸ್ಥಾಪಿಸಿದ ಐ-ಪ್ಯಾಕ್ ಸಂಸ್ಥೆ ಕೂಡ ಹೇಳಲಿಲ್ಲ. ಆದರೆ ಅವರು ತುಂಬಾ ದುಬಾರಿ ತಂತ್ರಜ್ಞ ಎಂಬುದು ಎಲ್ಲರಿಗೂ ಗೊತ್ತು, ಈಗ ಅವರೆ ಹೇಳಿರುವಂತೆ ಅವರ ಸಲಹೆ ಮೌಲ್ಯ 100 ಕೋಟಿ ಎಂದು ಘೋಷಿಸಿದ್ದಾರೆ.
ಒಂದು ಪಕ್ಷಕ್ಕೆ ದುಡಿದರೆ ಎರಡು ವರ್ಷಗಳ ಕಾಲ ಪ್ರಚಾರದ ತಂತ್ರಗಾರಿಕೆಗೆ ಹಣ ಸರಿಹೋಗುತ್ತದೆ ಎನ್ನುತ್ತಾರೆ.ವಿವಿಧ ರಾಜ್ಯಗಳಲ್ಲಿ ಹತ್ತು ಸರ್ಕಾರಗಳು ನನ್ನ ಕಾರ್ಯತಂತ್ರಗಳ ಮೇಲೆ ಅಧಿಕಾರ ನದೆಸುತ್ತಿದೆ ಎನ್ನುತ್ತಾರೆ.
ಪ್ರಶಾಂತ್ ಕಿಶೋರ್ ದೇಶದ ನಂಬರ್ ಒನ್ ರಾಜಕೀಯ ರಣ ತಂತ್ರಗಾರ ಎನ್ನುವ ಬಗ್ಗೆ ಸಂದೇಹವಿಲ್ಲ. ಬಂಗಾಳ ಮತ್ತು ತಮಿಳುನಾಡಿನಲ್ಲಿ ಟಿಎಂಸಿ ಮತ್ತು ಡಿಎಂಕೆಗಾಗಿ ಕೆಲಸ ಮಾಡಿದ ನಂತರ ಅವರು ರಾಜಕೀಯಕ್ಕೆ ಹೋದರು. ಅವರೆ ಸ್ಥಾಪಿಸಿದ್ದ ಐ ಪ್ಯಾಕ್ ಸಂಸ್ಥೆಯಿಂದ ಸಹ ಹೊರಬಂದು ಬಿಹಾರದಲ್ಲಿ ಜನ ಸೂರಜ್ ಎಂಬ ಪಕ್ಷವನ್ನು ಸ್ಥಾಪಿಸಿದ್ದಾರೆ ಅಲ್ಲಿ ಪಾದಯಾತ್ರೆ ಮಾಡುತ್ತಿರುವ ಅವರು ಅಲ್ಲಿನ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಮುಂದಿನ ವರ್ಷ ಬಿಹಾರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರಂತೆ.
ಇತ್ತೀಚೆಗೆ ನಡೆದಂತ ಲೋಕಸಭಾ ಚುನಾವಣೆಯ ವೇಳೆ ಯಾವ ರಾಜಕೀಯ ಪಕ್ಷಕ್ಕೂ ತಂತ್ರ ರೂಪಿಸುವ ಕಾರ್ಯ ಮಾಡದೆ ದೂರ ಇದ್ದ ಅವರು ತಾವು ಹೊರಬಂದ ಐ-ಪ್ಯಾಕ್ ಸಂಸ್ಥೆ ಆಂಧ್ರಪ್ರದೇಶದ YCP ಪಕ್ಷಕ್ಕಾಗಿ ಕೆಲಸ ಮಾಡಿತು.ಆದರೆ ಪ್ರಶಾಂತ್ ಕಿಶೋರ್ ಟಿಡಿಪಿಗೆ ಸಲಹೆ ನೀಡಿದ್ದಾರೆ ಎಂಬ ಮಾತು ಕೇಳಿಬಂದಿತ್ತು ಅಆರ್ಆ ಸಲಹೆ ಕೊಟ್ಟರೂ ಕೊಡದಿದ್ದರೂ ಚುನಾವಣೆಗೂ ಮುನ್ನ ತಮ್ಮ ನಿರೀಕ್ಷೆಗಳನ್ನು ಪದೇ ಪದೇ ಹೇಳುತ್ತಿದ್ದ ಅವರು. ಜಗನ್ಮೋಹನ್ ರೆಡ್ಡಿ ಭಾರೀ ಸೋಲು ಕಾಣಲಿದ್ದಾರೆ ಎಂದು ಭವಿಷ್ಯ ನುಡಿದಿದ್ದು ಪ್ರಶಾಂತ್ ಕಿಶೋರ್ ಮಾತಿಗೆ ಕನಿಷ್ಠ ರೂ. ನೂರು ಕೋಟಿ ಎಂದು ಅರ್ಥ ಆಗಿರುತ್ತದೆ.
Trending
- ಕರ್ನಾಟಕ ಮಾವು ಆಂಧ್ರ ನಿಷೇದಿಸಿರುವುದು ಒಕ್ಕೂಟ ವ್ಯವಸ್ಥೆಗೆ ಪೆಟ್ಟು ಸಿದ್ದರಾಮಯ್ಯ!
- ಶ್ರೀನಿವಾಸಪುರ:ಮಾವು ದರ ಕುಸಿತ,ಆಂಧ್ರದವರು ಬೇಡ ಅಂದ್ರಾ ಕರ್ನಾಟಕ ಮಾವನ್ನು!
- SRINIVASPUR ಮಾರುಕಟ್ಟೆಯಲ್ಲಿ ಮೋಸ ರೈತರಿಂದ ಲೋಕಾಯುಕ್ತರಿಗೆ ದೂರು
- ಮುಳಬಾಗಿಲು:ದಾಳಿಕೊರರ ಅತಿಕ್ರಮಣ ಕೃಷಿ ಸಂಸ್ಕೃತಿ ಮೇಲೂ ಪರಿಣಾಮ!
- ಶ್ರೀನಿವಾಸಪುರ ಅಭಿವೃದ್ಧಿಗೆ ಕೈಗಾರಿಕೆಗಳು ಸಹಕಾರಿ ವೆಂಕಟಶಿವಾರೆಡ್ಡಿ
- ಶ್ರೀನಿವಾಸಪುರ:ಮಾವು ಬೆಂಬಲ ಬೆಲೆಗೆ ಅಗ್ರಹಿಸಿ ರೈತರಿಂದ ರಸ್ತೆ ತಡೆ! ಬಂದ್ ಎಚ್ಚರಿಕೆ
- ಟೀನೇಜ್ ಗೆಳೆಯ ಗೆಳತಿಯರ “ನ ಲಜ್ಜಾಃ ನ ಭಯಂ” ಬಸ್ಸಿನಲ್ಲೆ ಅತಿರೇಕ!
- ಚಿಂತಾಮಣಿಗೂ ವಕ್ಕರಿಸಿದ ಕೊರೋನಾ! ಆತಂಕ ಬೇಡ
Saturday, June 14