ಶ್ರೀನಿವಾಸಪುರ:ರೈತರು ಬೆಳೆದಂತ ತರಕಾರಿ ಬೆಳೆಯನ್ನು ಕೊಯ್ಲು ಮಾಡಲು ಬಿಡದೆ ಅರಣ್ಯ ಇಲಾಖೆ ತೆರವು ಮಾಡುತ್ತಿರುವುದು ಅನ್ಯಾಯ ಅಕ್ರಮ ಎಂದು ಸಂಸದ ಮುನಿಸ್ವಾಮಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅವರು ಇಂದು ತಾಲೂಕಿನಲ್ಲಿ ಅರಣ್ಯ ಒತ್ತುವರಿ ತೆರವು ಗೊಳಿಸಿರುವ ಪ್ರದೇಶಗಳಿಗೆ ತೆರಳಿ ಅಲ್ಲಿನ ರೈತರನ್ನು ಭೇಟಿ ಮಾಡಿದ ನಂತರ ಅರಣ್ಯ ಇಲಾಖೆಯ ಕ್ರಮದ ವಿರುದ್ಧ ವಾಗ್ದಾಳಿ ನಡೆಸಿದ ಅವರು ತೋಟಗಾರಿಕೆ ಬೆಳೆಗಳನ್ನು ನಾಶಮಾಡಿರುವುದಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದರು.ಮುಖ್ಯಮಂತ್ರಿಗಳು ಸ್ವತಃ ರೈತನ ಮಗನಾಗಿದ್ದಾರೆ, ಕೃಷಿ ಸಚಿವ ಕೃಷ್ಣಬೈರೇಗೌಡ ಜಿಲ್ಲೆಯವರೆ ಆಗಿದ್ದರು ಇಲ್ಲಿನ ರೈತಾಪಿ ಜನರ ಸಮಸ್ಯೆ ನೋವು ಆಲಿಸುತ್ತಿಲ್ಲ ಎಂದು ದೂರಿದರು.
ಸಣ್ಣ-ಪುಟ್ಟ ರೈತರಿಗೆ ಕಂದಾಯ ಇಲಾಖೆಯಿಂದ ಭೂಮಿ ಮಂಜೂರಾಗಿರುವ ಬಗ್ಗೆ ದಾಖಲೆಗಳು ಇವೆ ಅದರ ಅಧಾರದಲ್ಲಿ ರೈತರು ಮಾವು,ತರಕಾರಿ ಬೆಳೆಗಳನ್ನು ಬೆಳೆಯುತ್ತ ಜೀವನ ಮಾಡುತ್ತಿದ್ದಾರೆ ಅಂತಹವರ ಜಮೀನುಗಳನ್ನು ಬೀಡದ ಅರಣ್ಯ ಇಲಾಖೆ ಅಧಿಕಾರಿಗಳು ತೆರವು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಸಿಬಿಗಳ ಮೇಲೆ ಕಲ್ಲುತೂರಾಟ
ಅರಣ್ಯ ಇಲಾಖೆ ಅರಣ್ಯ ಭೂಮಿ ಅಕ್ರಮವಾಗಿ ಒತ್ತುವರಿಯಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತೆರವು ಗೊಳಿಸಿ ಎರಡು ವಾರ ಕಳೆದ ನಂತರ ಕೋಲಾರ ಸಂಸದ ಮುನಿಸ್ವಾಮಿ ಧೀಡಿರ್ ಶ್ರೀನಿವಾಸಪುರ ತಾಲೂಕಿನ ಪಾಳ್ಯ,ಚಿರುವನಹಳ್ಳಿ,ಅವಲಕುಪ್ಪ ನಾರಮಾಕಲಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ಬೇಟಿ ನೀಡಿ ಭೂಮಿ ಕಳೆದು ಕೊಂಡ ರೈತರಿಗೆ ಸಾಂತ್ವಾನ ಹೇಳಿದರು ನಂತರ ದೂರವಾಣಿ ಮೂಲಕ ಜಿಲ್ಲಾ ಅರಣ್ಯಾಧಿಕಾರಿಗೆ ಕರೆ ಮಾಡಿದರಾದರು ಅಧಿಕಾರಿಗಳಿಂದ ಕರೆ ಸ್ವಿಕಾರ ಆಗದ ಹಿನ್ನಲೆಯಲ್ಲಿ ರೈತರೊಂದಿಗೆ ಮಾತನಾಡಿದ ಸಂಸದ ಈ ಬಗ್ಗೆ ಮುಂದಿನ ದಿನಗಳಲ್ಲಿ ಶ್ರೀನಿವಾಸಪುರ ಅರಣ್ಯ ಇಲಾಖೆ ವಿರುದ್ಧ ಎಲ್ಲಾ ರೈತರು ಒಗ್ಗಾಟ್ಟಾಗಿ ಹೋರಾಟ ಮಾಡೋಣ ಎಂದರು.
ತಾಲೂಕಿನ ನಾರಮಾಕನಹಳ್ಳಿ ಗ್ರಾಮದ ಬಳಿ ಸಂಸದ ಮುನಿಸ್ವಾಮಿ ಸ್ಥಳದಲ್ಲಿದ್ದಂತೆ ಜೆಸಿಬಿ ಗಳ ಮೇಲೆ ರೈತರು ಕಲ್ಲು ತೂರಾಟ ನಡೆಸಿದಾಗ 5 ಜೆಸಿಬಿಗಳ ಗಾಜು ಪುಡಿಪುಡಿಯಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು ತಕ್ಷಣ ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಆಗಮಿಸಿ ವಾತವರಣ ತಿಳಿಗೊಳಿದರು ಈ ಸಂದರ್ಭದಲ್ಲಿ ಸಂಸದ ಮುನಿಸ್ವಾಮಿ ರೈತರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡಿದರು.
ಸಂಸದರೊಂದಿಗೆ ಕೋಲಾರ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್,ರೈತ ಮೊರ್ಚಾ ಜಿಲ್ಲಾಧ್ಯಕ್ಷ ಚಿರುವುನಹಳ್ಳಿಲಕ್ಷ್ಮಣಗೌಡ, ರೋಣೂರುಚಂದ್ರು,ನಾಗದೇನಹಳ್ಳಿ ಚಂದ್ರಶೇಖರ್, ಮುಂತಾದವರು ಇದ್ದರು.
Trending
- ಕರ್ನಾಟಕ ಮಾವು ಆಂಧ್ರ ನಿಷೇದಿಸಿರುವುದು ಒಕ್ಕೂಟ ವ್ಯವಸ್ಥೆಗೆ ಪೆಟ್ಟು ಸಿದ್ದರಾಮಯ್ಯ!
- ಶ್ರೀನಿವಾಸಪುರ:ಮಾವು ದರ ಕುಸಿತ,ಆಂಧ್ರದವರು ಬೇಡ ಅಂದ್ರಾ ಕರ್ನಾಟಕ ಮಾವನ್ನು!
- SRINIVASPUR ಮಾರುಕಟ್ಟೆಯಲ್ಲಿ ಮೋಸ ರೈತರಿಂದ ಲೋಕಾಯುಕ್ತರಿಗೆ ದೂರು
- ಮುಳಬಾಗಿಲು:ದಾಳಿಕೊರರ ಅತಿಕ್ರಮಣ ಕೃಷಿ ಸಂಸ್ಕೃತಿ ಮೇಲೂ ಪರಿಣಾಮ!
- ಶ್ರೀನಿವಾಸಪುರ ಅಭಿವೃದ್ಧಿಗೆ ಕೈಗಾರಿಕೆಗಳು ಸಹಕಾರಿ ವೆಂಕಟಶಿವಾರೆಡ್ಡಿ
- ಶ್ರೀನಿವಾಸಪುರ:ಮಾವು ಬೆಂಬಲ ಬೆಲೆಗೆ ಅಗ್ರಹಿಸಿ ರೈತರಿಂದ ರಸ್ತೆ ತಡೆ! ಬಂದ್ ಎಚ್ಚರಿಕೆ
- ಟೀನೇಜ್ ಗೆಳೆಯ ಗೆಳತಿಯರ “ನ ಲಜ್ಜಾಃ ನ ಭಯಂ” ಬಸ್ಸಿನಲ್ಲೆ ಅತಿರೇಕ!
- ಚಿಂತಾಮಣಿಗೂ ವಕ್ಕರಿಸಿದ ಕೊರೋನಾ! ಆತಂಕ ಬೇಡ
Saturday, June 14