ಶ್ರೀನಿವಾಸಪುರ:ಕಿಡಿಗೇಡಿಗಳು ಹಾಕಿದ ಬೆಂಕಿಗೆ ಮೊಬೈಲ್ ಅಂಗಡಿಗಳ ಸೈನ್ ಬೋರ್ಡ್ ಸೇರಿದಂತೆ ನಾಮಫಲಕಳು ವಿದ್ಯತ್ ತಂತಿಗಳು ಸುಟ್ಟು ಕರಕಲಾಗಿರುವ ಘಟನೆ ಶ್ರೀನಿವಾಸಪುರ ಪಟ್ಟಣದ ಜೆ.ಸಿ.ರಸ್ತೆಯ ಪುರಸಭೆ ವಾಣಿಜ್ಯ ಮಳಿಗೆಗಳಲ್ಲಿರುವ ರಜನಿ ಮೋಬೈಲ್ ಅಂಗಡಿಯಲ್ಲಿ ನಡೆದಿದ್ದು ಅದೃಷವತ್ ಪ್ರಾಣ ಹಾನಿಯಂತಹವು ನಡೆದಿಲ್ಲ ಸಮಯಕ್ಕೆ ಅಗ್ನಿ ಶಾಮಕ ದಳ ಕಾರ್ಯಚರಣೆ ನಡೆಸಿದ ಪರಿಣಾಮ ದೊಡ್ದ ಮಟ್ಟದ ನಷ್ಟ ಸಹ ಆಗಿರುವುದಿಲ್ಲ.
ಜೆ.ಸಿ.ರಸ್ತೆಯಲ್ಲಿರುವ ಪುರಸಭೆ ವಾಣಿಜ್ಯ ಮಳಿಗೆಗಳಲ್ಲಿ ಮಹಡಿ ಏರಲು ಇರುವಂತ ಮೆಟ್ಟಿಲ ಕೆಳಗೆ ಹಣ್ಣುಗಳ ಅಂಗಡಿಯ ಮರದ ಟೆಬಲ್ ಕೆಳಗೆ ಕೂತಿರುವ ಕಿಡಿಗೇಡಿಗಳು ಶನಿವಾರ ತಡ ರಾತ್ರಿ ಚಳಿಕಾಯಿಸಲು ಬೆಂಕಿಹಾಕಿದ್ದು ನಂತರ ಅದನ್ನು ನಿರ್ಲಕ್ಷಿಸಿ ಹೋಗಿದ್ದಾರೆ ಉರಿಯುತ್ತಿದ್ದ ಬೆಂಕಿ ರಜನಿ ಮೊಬೈಲ್ ಅಂಗಡಿಯ ಪ್ಲಾಸ್ಟಿಕ್ ಸೈನ್ ಬೋರ್ಡ್ ಗೆ ತಾಕಿ ಅಂಗಡಿ ಮುಂದಿನ ಎಲ್ಲಾ ಪ್ಲಾಸಟಿಕ್ ಬೋರ್ಡ್ ಗಳು ಸುಟ್ಟಿದೆ ಅಲ್ಲೆ ಹಾದು ಹೋಗಿರುವ ಬೆಸ್ಕಾಂ ಮೈನ್ ವಿದ್ಯತ್ ತಂತಿಗೂ ಹೊತ್ತಿಕೊಂಡು ಸುಟ್ಟಿದೆ ಎಂದು ಹೇಳಲಾಗಿದ್ದು ತಡ ರಾತ್ರಿಯಲ್ಲಿ ಬೆಂಕಿ ದೃಶ್ಯ ಕಂಡವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಪರಿಣಾಮ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿರುತ್ತಾರೆ ಇದರಿಂದಾಗಿ ದೊಡ್ಡ ಮಟ್ಟದ ಅನಾಹುತ ತಪ್ಪಿರುತ್ತದೆ ಈ ಬಗ್ಗೆ ಶ್ರೀನಿವಾಸಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Trending
- ಕರ್ನಾಟಕ ಮಾವು ಆಂಧ್ರ ನಿಷೇದಿಸಿರುವುದು ಒಕ್ಕೂಟ ವ್ಯವಸ್ಥೆಗೆ ಪೆಟ್ಟು ಸಿದ್ದರಾಮಯ್ಯ!
- ಶ್ರೀನಿವಾಸಪುರ:ಮಾವು ದರ ಕುಸಿತ,ಆಂಧ್ರದವರು ಬೇಡ ಅಂದ್ರಾ ಕರ್ನಾಟಕ ಮಾವನ್ನು!
- SRINIVASPUR ಮಾರುಕಟ್ಟೆಯಲ್ಲಿ ಮೋಸ ರೈತರಿಂದ ಲೋಕಾಯುಕ್ತರಿಗೆ ದೂರು
- ಮುಳಬಾಗಿಲು:ದಾಳಿಕೊರರ ಅತಿಕ್ರಮಣ ಕೃಷಿ ಸಂಸ್ಕೃತಿ ಮೇಲೂ ಪರಿಣಾಮ!
- ಶ್ರೀನಿವಾಸಪುರ ಅಭಿವೃದ್ಧಿಗೆ ಕೈಗಾರಿಕೆಗಳು ಸಹಕಾರಿ ವೆಂಕಟಶಿವಾರೆಡ್ಡಿ
- ಶ್ರೀನಿವಾಸಪುರ:ಮಾವು ಬೆಂಬಲ ಬೆಲೆಗೆ ಅಗ್ರಹಿಸಿ ರೈತರಿಂದ ರಸ್ತೆ ತಡೆ! ಬಂದ್ ಎಚ್ಚರಿಕೆ
- ಟೀನೇಜ್ ಗೆಳೆಯ ಗೆಳತಿಯರ “ನ ಲಜ್ಜಾಃ ನ ಭಯಂ” ಬಸ್ಸಿನಲ್ಲೆ ಅತಿರೇಕ!
- ಚಿಂತಾಮಣಿಗೂ ವಕ್ಕರಿಸಿದ ಕೊರೋನಾ! ಆತಂಕ ಬೇಡ
Saturday, June 14