ಬೆಂಗಳೂರು:ಬೆಂಗಳೂರಿನ ಪ್ರಖ್ಯಾತ ಹಳೇಯ ಕೋಆಪರೇಟಿವ್ ಬ್ಯಾಂಕ್ ಗಳಲ್ಲಿ ಒಂದಾದ ದಿ. ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ನಿಯಮಿತದ(The GRAIN MERCHANTS CO-OPERATIVE BANK LTD)ನೂತನ ಅಧ್ಯಕ್ಷರಾಗಿ ಶ್ರೀನಿವಾಸಪುರ ತಾಲೂಕು ಯಲ್ದೂರಿನ ವಕೀಲ ಆನಂದಬಾಬು ಆಯ್ಕೆಯಾಗಿದ್ದಾರೆ.
ಬೆಂಗಳೂರು ನಗರದ ಚಾಮರಾಜಪೇಟೆಯ ಪಂಪಮಹಾಕವಿ ರಸ್ತೆಯಲ್ಲಿರುವ ದಿ. ಗ್ರೈನ್ ಮರ್ಚೆಂಟ್ಸ್ ಕೋಆಪರೇಟಿವ್ ಬ್ಯಾಂಕ್ 1927 ರಲ್ಲಿ ತನ್ನ ವಹಿವಾಟು ಪ್ರಾರಂಭಿಸಿದ್ದು ಬೆಂಗಳೂರಿನಾದ್ಯಂತ ಮೂರು ಶಾಖೆಗಳನ್ನು ಹೊಂದಿದೆ. 98 ವರ್ಷಗಳ ಹಳೆಯದಾದ ಸಹಕಾರಿ ತತ್ವದ ಬ್ಯಾಂಕ್ ವಾರ್ಷಿಕ ಸುಮಾರು 300 ಕೋಟಿ ರೂಪಾಯಿ ವಹಿವಾಟು ನಡೆಸಲಿದ್ದು ಕಮರ್ಷಿಯಲ್ ಬ್ಯಾಂಕುಗಳಂತೆ ಗ್ರಾಹಕರಿಗೆ ಎಲ್ಲಾ ರಿತಿಯ ಅನ್ಲೈನ್ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಿದೆ.
ಮೂಲತಃ ಯಲ್ದೂರಿನ ವಕೀಲ ಆನಂದಬಾಬು
ಶ್ರೀನಿವಾಸಪುರ ತಾಲೂಕಿನ ಯಲ್ದೂರಿನವರಾದ ವಕೀಲ ಆನಂದಬಾಬು ಯಲ್ದೂರಿನ ಹಿರಿಯ ರಾಜಕಾರಣಿ ಹಾಗು ಸಹಕಾರಿ ಧುರೀಣರಾಗಿದ್ದ ದಿ.ರಾಮಕೃಷ್ಣಪ್ಪನವರ ಮಗ ಕೃಷಿಕ ಕುಟುಂಬದ ಹಿನ್ನಲೆಯವರಾಗಿದ್ದು ಯಲ್ದೂರಿನ ರೇಷ್ಮೆ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ತಮ್ಮ ಮಕ್ಕಳು ಸಹ ರಾಜಕಾರಣದಲ್ಲಿ ಉನ್ನತ ಸ್ಥಾನ ಪಡೆಯಬೇಕು ಎಂದು ಬಯಸಿದ್ದರು ಅದಕ್ಕಾಗಿ ಅನಂದಬಾಬು ಅವರನ್ನು ಬೆಂಗಳೂರಿನಲ್ಲಿ ಕಾನೂನು ಪದವಿ ಓದಿಸಿದ್ದರು.ಕಾನೂನ ಪದವಿ ಪಡೆದ ಅನಂದಬಾಬು ತಮ್ಮ ತಂದೆಯವರ ಆಶಯದಂತೆ ಹೈಕೋರ್ಟ್ ವಕೀಲರಾಗಿ ಸೇವೆ ಸಲ್ಲಿಸುತ್ತ ರಾಜಕೀಯ ಕ್ಷೇತ್ರದಲ್ಲೂ ಸಹ ಗುರುತಿಸಿಕೊಂಡಿದ್ದಾರೆ.
ಯಲ್ದೂರಿನ ವಕೀಲ ಆನಂದಬಾಬು ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾಗಿರುವುದಕ್ಕೆ ಶ್ರೀನಿವಾಸಪುರದ ಬೆರುಗಳು ಗೆಳೆಯರ ಬಳಗದ ವತಿಯಿಂದ ರಮೇಶ್ ಬಾಬು ಅಭಿನಂದನೆ ಸಲ್ಲಿಸಿದ್ದಾರೆ.
Trending
- ಕರ್ನಾಟಕ ಮಾವು ಆಂಧ್ರ ನಿಷೇದಿಸಿರುವುದು ಒಕ್ಕೂಟ ವ್ಯವಸ್ಥೆಗೆ ಪೆಟ್ಟು ಸಿದ್ದರಾಮಯ್ಯ!
- ಶ್ರೀನಿವಾಸಪುರ:ಮಾವು ದರ ಕುಸಿತ,ಆಂಧ್ರದವರು ಬೇಡ ಅಂದ್ರಾ ಕರ್ನಾಟಕ ಮಾವನ್ನು!
- SRINIVASPUR ಮಾರುಕಟ್ಟೆಯಲ್ಲಿ ಮೋಸ ರೈತರಿಂದ ಲೋಕಾಯುಕ್ತರಿಗೆ ದೂರು
- ಮುಳಬಾಗಿಲು:ದಾಳಿಕೊರರ ಅತಿಕ್ರಮಣ ಕೃಷಿ ಸಂಸ್ಕೃತಿ ಮೇಲೂ ಪರಿಣಾಮ!
- ಶ್ರೀನಿವಾಸಪುರ ಅಭಿವೃದ್ಧಿಗೆ ಕೈಗಾರಿಕೆಗಳು ಸಹಕಾರಿ ವೆಂಕಟಶಿವಾರೆಡ್ಡಿ
- ಶ್ರೀನಿವಾಸಪುರ:ಮಾವು ಬೆಂಬಲ ಬೆಲೆಗೆ ಅಗ್ರಹಿಸಿ ರೈತರಿಂದ ರಸ್ತೆ ತಡೆ! ಬಂದ್ ಎಚ್ಚರಿಕೆ
- ಟೀನೇಜ್ ಗೆಳೆಯ ಗೆಳತಿಯರ “ನ ಲಜ್ಜಾಃ ನ ಭಯಂ” ಬಸ್ಸಿನಲ್ಲೆ ಅತಿರೇಕ!
- ಚಿಂತಾಮಣಿಗೂ ವಕ್ಕರಿಸಿದ ಕೊರೋನಾ! ಆತಂಕ ಬೇಡ
Thursday, June 12