ಶ್ರೀನಿವಾಸಪುರ :ಶ್ರೀನಿವಾಸಪುರ ಕಸಬಾ ಸೊಸೈಟಿಯ ಅಧ್ಯಕ್ಷ ಗಾದಿಗೆ ಇಬ್ಬರು ಕಾಂಗ್ರೆಸ್ ನಿರ್ದೇಶಕರ ನಡುವೆ ಚುನಾವಣೆ ನಡೆದಂತ ಸ್ವಾರಸ್ಯಕರ ಘಟನೆ ನಡೆದಿದೆ. ತಾಲ್ಲೂಕಿನ ಸಹಕಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರ ನಡುವೆ ಒಮ್ಮತ ಇಲ್ಲವಾ ಎಂಬ ಅನುಮಾನ ಸಾರ್ವಜನಿಕರಲ್ಲಿ ಹುಟ್ಟುಹಾಕಿದೆ . ತಾಲ್ಲೂಕು ಸಹಕಾರ ಕ್ಷೇತ್ರದಲ್ಲಿ ಮೊದಲಿನಿಂದಲೂ ಇಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಅನುಯಾಯಿಗಳದೆ ಪಾರುಪತ್ಯ ಯಾವುದೇ ಸಹಕಾರ ಸಂಘ ಇರಲಿ ಒಮ್ಮೆ ಹೈಕಮಾಂಡ್ ಸಮ್ಮುಖದಲ್ಲಿ ನಿರ್ಧರವಾದರೆ ಮುಗಿಯಿತು ಒಮ್ಮತದ ಅಭ್ಯರ್ಥಿ ಕಣದಲ್ಲಿ ಸ್ಪರ್ಧಿಸಿ ಅವಿರೋಧವಾಗಿ ಆಯ್ಕೆಯಾಗುವುದು ಇಲ್ಲಿ ಬಹುವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ.
ಆದರೆ ಕಸಬಾ ಸೊಸೈಟಿ ಅಧ್ಯಕ್ಷ ಚುನಾವಣೆಯಲ್ಲಿ ಹಳೆಯ ಸಂಪ್ರದಾಯ ಮೂಲೆಗುಂಪಾಗಿದೆ! ಕಸಬಾ ಸೊಸೈಟಿ ಅಧ್ಯಕ್ಷರಾಗಿದ್ದ ಅಲಂಬಗಿರಿಅಯ್ಯಪ್ಪ ನಿಧನರಾದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ನಡೆದ ಅಧ್ಯಕ್ಷಗಾದಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಇಬ್ಬರು ನಿರ್ದೇಶಕರು ಉಮೇದುವಾರಿಕೆ ಸಲ್ಲಿಸಿ ಚುನಾವಣೆ ಎದುರಿಸಿದ್ದಾರೆ ಇದರ ಪರಿಣಾಮ ಹಿರಿಯ ಸಹಕಾರಿ ಧುರೀಣರಾದ ಶೆಟ್ಟಿಹಳ್ಳಿರಾಮಚಂದ್ರಪ್ಪ ತಮ್ಮ ಪ್ರತಿಸ್ಪರ್ಧಿ ಯಾಗಿದ್ದ ಯಲವಕುಂಟೆ ಬೈರಾರೆಡ್ಡಿ ವಿರುದ್ಧ 5 ಮತಗಳ ಅಂತರದಲ್ಲಿ ಸೋಲು ಒಪ್ಪಿಕೊಂಡಿದ್ದಾರೆ.
ಕಸಬಾ ಸೊಸೈಟಿ@ಕಸಬಾ ರೇಷ್ಮೆ ಬೆಳೆಗಾರರ ಹಾಗು ರೈತಸೇವಾ ಸಹಕಾರ ಸಂಘ ನಿಯಮಿತ ಸಹಕಾರ ಸಂಘದಲ್ಲಿ ಒಟ್ಟು 13 ಮಂದಿ ನಿದೇರ್ಶಕರಿದ್ದು ಅದರಲ್ಲಿ ಯಲವಕುಂಟೆ ಬೈರಾರೆಡ್ಡಿ ಅವರಿಗೆ ಪ್ರತಿಸ್ಪರ್ಧಿಯಾಗಿ ಶೆಟ್ಟಿಹಳ್ಳಿ ರಾಮಚಂದ್ರಪ್ಪ ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ ಯಲವಕುಂಟೆ ಬೈರಾರೆಡ್ಡಿ ರವರು 8 ಮತಗಳನ್ನು ಪಡೆದು , ರಾಮಚಂದ್ರಪ್ಪ 5 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.ಚುನಾವಣೆ ಅಧಿಕಾರಿಯಾಗಿದ್ದ ಎಂ.ಐ.ಅಬೀಬ್ಹುಸೇನ್ ವಿಜೇತ ಅಭ್ಯರ್ಥಿ ಘೋಷಣೆ ಮಾಡಿದ್ದಾರೆ.ಈ ಸಂದರ್ಭದಲ್ಲಿ ಸೊಸೈಟಿ ಕಾರ್ಯನಿರ್ವಹಣಾಧಿಕಾರಿ ಶಿವಾರೆಡ್ಡಿ, ನಿದೇರ್ಶಕರಾದ ಬೈರಪಲ್ಲಿ ವೆಂಕಟರೆಡ್ಡಿ, ಮೊಗಿಲಹಳ್ಳಿ ಶಾಂತಮ್ಮ, ದ್ವಾರಸಂದ್ರ ನಾರಾಯಣಸ್ವಾಮಿ, ದ್ವಾರಸಂದ್ರ ಮುನಿವೆಂಕಟಪ್ಪ, ಹೆಬ್ಬಟ ಮುನಿಯಪ್ಪ, ಚೌಡಹಳ್ಳಿ ಮುನಿಶಾಮಿ, ಶಿವಪುರ ಸಿ.ಗರ್ರಪ್ಪ, ಆಲಂಬಗಿರಿ ಎ.ವಿ.ಮನೋಹರ, ಶ್ರೀನಿವಾಸಪುರ ಶಬ್ಬೀರ್ ಅಹ್ಮದ್, ಆವುಲಕುಪ್ಪ ಭಾಗ್ಯಮ್ಮ, ವೇಣು ಇದ್ದರು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Saturday, April 26