ಶ್ರೀನಿವಾಸಪುರ:ತಾಲೂಕಿನ ಅಭಿವೃದ್ಧಿ ದೃಷ್ಠಿಯಿಂದ ಯದರೂರು ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ ಇದರಿಂದ ಯಾವ ರೈತರಿಗೂ ಅನ್ಯಾಯ ಆಗುವುದಿಲ್ಲ ಎಂದು ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು.
ಯದರೂರು ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆ ಕುರಿತಾಗಿ ರೈತರಿಂದ ಆಕ್ಷೇಪಣ ಅರ್ಜಿಗಳನ್ನು ಸ್ವೀಕರಿಸುವ ಮುನ್ನ ನಡೆದಂತ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ನಾನು ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ ಕೈಗಾರಿಕೆಗಳ ಸ್ಥಾಪನೆಯಿಂದ ಸ್ಥಳಿಯವಾಗಿ ಉದ್ಯೋಗಗಳ ಸೃಷ್ಟಿಯಾಗುತ್ತದೆ ಟೌನ್ ಶಿಪ್ ಬೆಳೆಯಲು ಸಹಕಾರಿಯಾಗುತ್ತದೆ ಇದೆಲ್ಲವು ಅಭಿವೃದ್ಧಿಗೆ ಪೂರಕ ವಾತವರಣ ಕಲ್ಪಿಸುತ್ತದೆ ಎಂದರು.
ಕೆಎಐಡಿಬಿ ವಿಶೇಷ ಭೂಸ್ವಾಧಿನಾಧಿಕಾರಿ ವೆಂಕಟಲಕ್ಷ್ಮಿ ಯವರು ಮಾತನಾಡಿ, ಕಂದಾಯ ವ್ಯಾಪ್ತಿಯಲ್ಲಿ ಗ್ರಾಮದ ಸಮೀಪ 1273 ಜಮೀನು ಕೈಗಾರಿಕೆಗಳಿಗೆ ಗುರುತಿಸಲಾಗಿದೆ ಈ ಪೈಕಿ 551 ಮಂದಿ ಖಾತೆದಾರರಿದ್ದಾರೆ, ಈ ಭಾಗದಲ್ಲಿ ಕೈಗಾರಿಕೆಗಳು ಸ್ಥಾಪನೆ ಆಗಬೇಕ, ಬೇಡವ ಎಂಬ ಬಗ್ಗೆ ರೈತರಿಂದ ಆಕ್ಷೇಪ ಸ್ವೀಕರಿಸಲು ನೋಟೀಸ್ ನೀಡಲಾಗಿತ್ತು. ಆದರಂತೆ ಕೆಎಐಡಿಬಿ ಇಲಾಖೆಯ ವಿಶೇಷ ಭೂ ಸ್ವಾಧಿನಾಧಿಕಾರಿ ಸಭೆ ನಡೆಸುತ್ತಿರುವುದಾಗಿ ಹೇಳಿದರು. ಶಾಸಕ ವೆಂಕಟಶಿವಾರೆಡ್ಡಿ ಅವರು ಕೈಗಾರಿಕೆಗಳ ಸ್ಥಾಪಿಸಿ ಅದರಿಂದ ಈ ಭಾಗದ ಜನರಿಗೆ ಏನೆಲ್ಲಾ ಅನಕೂಲ ಆಗಬೇಕು ಎಂಬ ವಿಚಾರದಲ್ಲಿ ಬಹಳ ಉತ್ಸುಕರರಾಗಿದ್ದಾರೆ ಇದಕ್ಕಾಗಿ ಪ್ರತಿ ಹಂತದಲ್ಲೂ ಒತ್ತಡ ಹೇರುತ್ತಿದ್ದಾರೆ.ಸರ್ಕಾರದ ನಿಯಮಾವಳಿಗಳಂತೆ ಕ್ರಮಕೈಗೊಳ್ಳಲಾಗಿದ್ದು, ಸ್ಥಳಿಯರ ಅಭಿಪ್ರಾಯ ಸಂಗ್ರಹಿಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ನೋಟಿಸ್ ಸಿಕ್ಕಿಲ್ಲ ಕಾಲವಕಾಶ ನೀಡಿ
ಭೂಸ್ವಾಧಿನಕ್ಕೆ ವಿರೋಧ ವ್ಯಕ್ತಪಡಿಸಿದ ಕರ್ನಾಟಕ ರೈತ ಸಂಘದ ಜಿಲ್ಲಾ ಮುಖಂಡ ಸೂರ್ಯನಾರ್ಯನಾರಾಯಣ, ಕಾಂಗ್ರೆಸ್ ಮುಖಂಡರಾದ ಕೆ.ಕೆ.ಮಂಜುನಾಥ್, ಬ್ಯಾಟಪ್ಪ, ನವೀನ್ ಕುಮಾರ್ ಸೇರದಂತೆ ಹಲವರು ವಿರೋಧ ವ್ಯಕ್ತಪಡಿಸಿ ಬಹುತೇಕ ರೈತರಿಗೆ ನೋಟೀಸ್ ಜಾರಿಯಾಗಿಲ್ಲ ಇನ್ನು 10 ದಿನಗಳ ಕಾಲ ಕಾಲಾವಕಾಶ ಬೇಕಿದೆ ಎಂದು ಒತ್ತಾಯಿಸಿ ಲಿಖಿತ ಮನವಿ ಸಲ್ಲಿಸಿದರು.
ಇದಕ್ಕೆ ಉತ್ತರಿಸಿದ ಆಕ್ಷೇಪ ಸ್ವೀಕರಿಸುತ್ತಿದ್ದ ವಿಶೇಷ ಭೂಸ್ವಾಧಿನಾಧಿಕಾರಿ ವೆಂಕಟಲಕ್ಷ್ಮಿ ಯವರು ಈ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಜಾಗ ಗುರುತು ಮಾಡಲಾಗಿದೆ ಆದರೆ ಇನ್ನು ನೋಟೀಫಿಕೇಶನ್ ಆಗಿಲ್ಲ. ಈಗಾಗಲೇ ನೋಟೀಸ್ ನೀಡಲಾಗಿರುವ ರೈತರಿಂದ ಆಕ್ಷೇಪಣೆಗಳನ್ನು ಸ್ವೀಕರಿಸಿ ಅಭಿಪ್ರಾಯನ್ನು ಸಂಗ್ರಹಿಸಲಾಗುವುದು, ಯಾರಿಗೆ ನೋಟೀಸ್ ಸಿಕ್ಕಿಲ್ಲವೊ ಅವರಿಂದ 10 ದಿನಗಳ ನಂತರ ಆಕ್ಷೇಪಣೆ ಸ್ವೀಕರಿಸಲಾಗುವುದು ಎಂಬ ಭರವಸೆ ನೀಡಿದರು ಇದರಿಂದ ಪ್ರತಿಭಟಿಸುತ್ತಿದ್ದವರು ಸಮಾಧಾನದಿಂದ ವಾಪಸ್ ಹೋದರು.
ಹೊರಗಿನವರ ಒತ್ತಡಕ್ಕೆ ಮಣಿಯಬೇಡಿ
ರೈತರಿಂದ ಆಕ್ಷೇಪಣೆಗಳನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಹೊರಗಿನವರು ಬಂದು ವಿನಾಕಾರಣ ಗೊಂದಲ ಸೃಷ್ಠಿಸುತ್ತಿದ್ದಾರೆ ಅವರ ಒತ್ತಡಕ್ಕೆ ಮಣೀಯಬೇಡಿ ಎಂದು ಗ್ರಾಮದ ಕೆಲ ಯುವ ಮುಖಂಡರು ಅಗ್ರಹಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಗೌಡ ಇದು ನಮ್ಮೂರಿನ ಸಮಸ್ಯೆ ನಾವು ಬಗೆಹರಿಸಿಕೊಳ್ಳುತ್ತೆವೆ. ಹೊರಗಿನ ವ್ಯಕ್ತಿಗಳಿಗೇನು ಇಲ್ಲಿ ಕೆಲಸ ನಮಗೆ ಕೈಗಾರಿಕೆಗಳು ಬೇಕು, ಇದರಿಂದ ನಮ್ಮ ಯುವಕರಿಗೆ ಅವರ ವಿದ್ಯಾಹರ್ತೆಗೆ ಅನುಗುಣವಾಗಿ ಮನೆ ಹತ್ತಿರ ಕೆಲಸ ಸಿಗುತ್ತದೆ ನಮ್ಮ ಅಭಿಪ್ರಾಯಪಡೆದು ಕೈಗಾರಿಕೆಗಳನ್ನು ಸ್ಥಾಪನೆ ಮಾಡಬೇಕು ಎಂದು ಹೇಳಿದರು ಇದಕ್ಕೆ ಯದರೂರು ಗ್ರಾಮದ ಪ್ರದೀಪ್ ವೇಂಕಟೇಶ್ ಗೌಡ,ರಹಮತುಲ್ಲಾ ಮುಂತಾದವರು ಧ್ವನಿ ಗೂಡಿಸಿದರು ಇದಕ್ಕೆ ಸ್ಥಳದಲ್ಲಿ ಎರಡೂ ಗುಂಪುಗಳ ನಡುವೆ ವಾಗ್ವಾದ ನಡೆಯಿತು, ಎರಡೂ ಕಡೆಯವರು ಪರ ವಿರೋಧ ಘೋಷಣೆಗಳನ್ನು ಕೂಗಿದಾಗ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ರೈತರ ಮನವೊಲಿಸಿದ ಅಧಿಕಾರಿ
ಕೆಲವರು ಆಕ್ಷೇಪ ಸ್ವೀಕಾರ ಸಭೆಗೆ ಅವಕಾಶ ಅಡ್ಡಿಪಡಿಸಿ ಸಭೆ ಸ್ಥಗಿತಗೊಳಿಸಿದರು ಈ ಸಂದರ್ಭದಲ್ಲಿ ಪ್ರತಿಭಟಿಸುತ್ತಿದ್ದ ವ್ಯಕ್ತಿಗಳನ್ನು ಕೆಎಐಡಿಬಿ ವಿಶೇಷ ಭೂಸ್ವಾಧಿನಾಧಿಕಾರಿ ವೆಂಕಟಲಕ್ಷ್ಮಿ ಕರೆಯಿಸಿ, ಮನವೊಲಿಸಿದ ನಂತರ ರೈತರು ಅಭಿಪ್ರಾಯಗಳನ್ನು ಲಿಖಿತವಾಗಿ ನೀಡಿದರು