ನ್ಯೂಜ್ ಡೆಸ್ಕ್:ಕ್ಷಮಿಸಿ ಅಪ್ಪ ಅಮ್ಮನನ್ನು ಕೊಂದು ಬಿಟ್ಟೆ ! ಅಪ್ಪನೊಂದಿಗೆ ಒರ್ವ ಮಗ ಹೀಗೆಂದು ಹೇಳಿದಾಗ ಯಾವ ತಂದೆ ಏನು ಮಾಡಲು ಸಾಧ್ಯ ವಿದೇಶಕ್ಕೆ ಹೋಗುವುನಿದ್ದ ಮಗನಿಗೆ ಬುದ್ಧಿ ಹೇಳಿದ ತಾಯಿಗೆ ಚಾಕು ಹಾಕಿದ ದುರುಳನ ಕಥೆಯಿದು.
ದೆಹಲಿಯ ಆಗ್ನೇಯ ಭಾಗಾದ ಬದರ್ಪುರದಲ್ಲಿ 50 ವರ್ಷದ ಮಹಿಳೆಯನ್ನು ಆಕೆಯ ಮಗ ಚಾಕುವಿನಿಂದ ಇರಿದು ಕೊಂದಿದ್ದಾನೆ ಈ ದುಷ್ಕೃತ್ಯ ಆತಂಕಕಾರಿಯಾಗಿದ್ದು ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಅಕೆಯ ಗಂಡ ಆಸ್ಪತ್ರೆ ಸೇರಿಸಿದರು ಆಕೆ ಉಳಿಯಲಿಲ್ಲ.
ಆಸ್ಪತ್ರೆ ಸಿಬ್ಬಂದಿ ಪರಿಸ್ಥಿತಿಯನ್ನು ಗಮನಿಸಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಅಲ್ಲಿಗೆ ಬಂದ ಪೊಲೀಸ್ ತಂಡ ಪ್ರಾಥಮಿಕ ಮಾಹಿತಿ ಪಡೆದು ಘಟನೆ ನಡೆದ ಜೈತ್ ಪುರಕ್ಕೆ ತೆರಳಿದ್ದಾರೆ ಅಲ್ಲಿ ಪರಿಸ್ಥಿತಿ ನೋಡಿದ ಪೊಲೀಸರಿಗೆ ಅಚ್ಚರಿಯ ವಿಷಯಗಳು ಬೆಳಕಿಗೆ ಬಂದಿವೆ. 31 ವರ್ಷದ ಕೃಷ್ಣಕಾಂತ್ ತನ್ನ ತಾಯಿಯನ್ನು ಚಾಕುವಿನಿಂದ ಹಲವಾರು ಬಾರಿ ಇರಿದು ಕೊಂದಿದ್ದಾನೆ ನಂತರ ತಂದೆ ಸುರ್ಜಿತ್ ಗೆ ಫೋನ್ ಮಾಡಿ ಮನೆಗೆ ಬರುವಂತೆ ಹೇಳಿದ್ದಾನೆ, ತಂದೆ ಬಂದಾಗ ಕೃಷ್ಣಕಾಂತ್ ಕ್ಷಮಿಸಿ ಅಪ್ಪಾ ಎಂದು ಬೇಡಿಕೊಂಡಿದ್ದಾನೆ ನಂತರ ಮೊದಲ ಮಹಡಿಗೆ ಕರೆದುಕೊಂಡು ಹೋಗಿದ್ದಾನೆ ತಂದೆ ಮನೆಯೊಳಗೆ ಹೋದಾಗ ಹೊರಗಡೆಯಿಂದ ಬೀಗ ಹಾಕಿಕೊಂಡು ಓಡಿ ಹೋಗಿದ್ದಾನೆ.ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿ ಗೀತಾಳನ್ನು ನೋಡಿ ಸುರ್ಜೀತ್ ಆಘಾತಗೊಂಡಿದ್ದಾರೆ. ಅಕ್ಕಪಕ್ಕದ ಮನೆಯವರ ಸಹಾಯದಿಂದ ಬಾಗಿಲು ತೆರೆದು ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಗಲೇ ಅಕೆಯ ಪ್ರಾಣ ಪಕ್ಷಿ ಹೋಗಿದೆ. ಸುರ್ಜಿತ್ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು ಕಿರಿಯ ಮಗ ಬ್ಯಾಂಕ್ ಉದ್ಯೋಗಿಯಾಗಿದ್ದು ಆರೋಪಿ ಕೃಷ್ಣಕಾಂತ್ ನಿರುದ್ಯೋಗಿಯಾಗಿ ಮತ್ತು ಮಾದಕ ವ್ಯಸನಿಯಾಗಿದ್ದಾನೆ ಕೆನಡಾಕ್ಕೆ ಹೋಗಿ ಅಲ್ಲಿ ಕೆಲಸ ಮಾಡುವುದು ಅವನ ಗುರಿಯಾಗಿತ್ತು ಇದಕ್ಕೆ ಅವನ ತಾಯಿ ಗೀತಾ ಇದಕ್ಕೆ ವಿರೋಧ ವ್ಯಕ್ತಪಡಿಸಿ ಮೊದಲು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದು ಕೊಲೆಯಾದ ದಿನ,ಕೃಷ್ಣಕಾಂತ್ ಮತ್ತು ಅವನ ತಾಯಿ ನಡುವೆ ಮತ್ತೆ ಜಗಳ ಉಂಟಾಗಿದೆ ತಾಯಿ ತನ್ನ ಕೆನಡಾ ಪ್ರವಾಸಕ್ಕೆ ಅಡ್ಡಗಾಲು ಹಾಕುತ್ತಿದ್ದಾಳೆ ಎಂದು ಕೆಲವು ದಿನಗಳ ಹಿಂದೆ ಖರೀದಿಸಿದ್ದ ಚಾಕುವಿನಿಂದ ಅಕೆಯನ್ನು ಇರಿದಿದ್ದಾನೆ, ಇದನ್ನು ಪೋಲಿಸರ ವಿಚಾರಣೆಯಲ್ಲಿ ಆರೋಪಿ ಬಾಯಿಬಿಟ್ಟಿದ್ದಾನೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27