ಶ್ರೀನಿವಾಸಪುರ:ಕೌಟುಂಬಿಕ ಕಲಹದಿಂದ ಬೆಸೆತ್ತ ಗೃಹಣಿಯುಬ್ಬಳು ಕೃಷಿಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟಣೆ ತಾಲೂಕಿನ ಕಸಬಾ ಹೋಬಳಿ ಕೊಡಿಚೆರುವು ಗ್ರಾಮದಲ್ಲಿ ಇಂದು ನಡೆದಿದೆ.
ಮೃತ ಮಹಿಳೆ ಕೊಡಿಚೆರುವು ಗ್ರಾಮದ ವರಲಕ್ಷ್ಮಿ (35) ಎಂದು ಗುರತಿಸಲಾಗಿದೆ.ಮೃತ ಮಹಿಳೆ ತನ್ನ ಸಹೋದರ ಸಂಬಂದಿಯ ಗೃಹ ಉದ್ಯಮದಮಕ್ಕೆ ಬೆನ್ನುಲುಬಾಗಿ ಇದ್ದಳು.ವರಲಕ್ಷ್ಮಿ ಗ್ರಾಮದಲ್ಲಿ ಅಂಗಡಿ ಇಟ್ಟುಕೊಂಡಿರುವ ತನ್ನ ಪತಿ ರವಿ ಹಾಗು ಮಕ್ಕಳೊಂದಿಗೆ ವಾಸವಾಗಿದ್ದಳು ಪತಿ-ಪತ್ನಿ ನಡಿವೆ ಆಗಾಗ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ಆಗುತಿತ್ತು ಮಂಗಳವಾರ ತಡ ರಾತ್ರಿ ಪತಿ-ಪತ್ನಿ ನಡುವೆ ಸಣ್ಣ ಮಟ್ಟದಲ್ಲಿ ಜಗಳ ಆಗಿದೆ ತಡರಾತ್ರಿ ಕುಟುಂಬದ ಸದಸ್ಯರು ಕೂಡಿ ಇಬ್ಬರನ್ನು ಸಮಾಧಾನ ಪಡಿಸಿ ಬುದ್ದಿ ಹೇಳಿ ಹೋಗಿದ್ದಾರೆ ಇದಾದ ನಂತರ ಅಂದಾಜು ಮದ್ಯರಾತ್ರಿ ಸಮಯದಲ್ಲಿ ಇದ್ದಕ್ಕಿದ್ದಂತೆ ಸಹೋದರ ಸಂಬಂದಿ ಹಾಗು ಕುಟುಂಬದ ಸದಸ್ಯರಿಗೆ ವರಲಕ್ಷ್ಮಿ ಫೋನ್ ಮಾಡಿ ಅಪ್ಪಯ್ಯ ಮಕ್ಕಳನ್ನು ಚನ್ನಾಗಿ ನೋಡಿಕೊಳ್ರೋ ಎಂದು ಹೇಳಿ ಮೊಬೈಲ್ ಸ್ವೀಚ್ ಆಫ್ ಮಾಡಿದ್ದಾಳೆ ಕೊರೆವ ಚಳಿಯಲ್ಲಿ ಬೆಚ್ಚಗೆ ಮಲಗಿದ್ದ ಕುಟುಂಬದ ಸದಸ್ಯರು ಏಕಾಏಕಿ ಬೆವತು ಹೋಗಿದ್ದಾರೆ ತಕ್ಷಣ ಎಚ್ಚೆತ್ತ ಕುಟುಂಬಿಕರು ಎದ್ದು ನೋಡಿದಾಗ ವರಲಕ್ಷ್ಮಿ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ ಅನುಮಾನ ಗೊಂಡ ಅವರು ಗ್ರಾಮವನ್ನೆಲ್ಲ ಹುಡುಕಾಡಿದ್ದಾರೆ ಗ್ರಾಮಕ್ಕೆ ಹೊಂದಿಕೊಂಡು ಇರುವ ಕೃಷಿಹೊಂಡಗಳ ಬಳಿ ಬ್ಯಾಟರಿ ಸಹಾಯದೊಂದಿಗೆ ನೋಡಿದ್ದಾರೆ ಎಲ್ಲೂ ಕಾಣಸಿಗದಿದ್ದಾಗ ವಾಪಸ್ಸಾಗಿದ್ದಾರೆ ಬೆಳಿಗ್ಗೆ ಗ್ರಾಮದ ಹೊರಲವಲಯದ ಕೃಷಿಹೊಂಡದಲ್ಲಿ ಮಹಿಳೆ ಶವ ಪತ್ತೆಯಾಗಿದೆ ಗ್ರಾಮದಲ್ಲಿ ಸುದ್ಧಿ ಹರಿದಾಡಿ ನೋಡಿದಾಗ ಅಲ್ಲಿ ವರಲಕ್ಷ್ಮಿ ಶವವಾಗಿ ತೆಲಿದ್ದಾಳೆ,ಸಣ್ಣ ವೈಮನಸ್ಸಿಗೆ ಆತ್ಮಹತ್ಯೆಯೇ ಪರಿಹಾರನಾ ಎಂಬ ಮಾತು ಗ್ರಾಮದೆಲ್ಲಡೆ ಕೇಳಿ ಬಂದ ಮಾತಾಗಿತ್ತು.
ಆತ್ಮಹತ್ಯೆ ಘಟನೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Trending
- ಕರ್ನಾಟಕ ಮಾವು ಆಂಧ್ರ ನಿಷೇದಿಸಿರುವುದು ಒಕ್ಕೂಟ ವ್ಯವಸ್ಥೆಗೆ ಪೆಟ್ಟು ಸಿದ್ದರಾಮಯ್ಯ!
- ಶ್ರೀನಿವಾಸಪುರ:ಮಾವು ದರ ಕುಸಿತ,ಆಂಧ್ರದವರು ಬೇಡ ಅಂದ್ರಾ ಕರ್ನಾಟಕ ಮಾವನ್ನು!
- SRINIVASPUR ಮಾರುಕಟ್ಟೆಯಲ್ಲಿ ಮೋಸ ರೈತರಿಂದ ಲೋಕಾಯುಕ್ತರಿಗೆ ದೂರು
- ಮುಳಬಾಗಿಲು:ದಾಳಿಕೊರರ ಅತಿಕ್ರಮಣ ಕೃಷಿ ಸಂಸ್ಕೃತಿ ಮೇಲೂ ಪರಿಣಾಮ!
- ಶ್ರೀನಿವಾಸಪುರ ಅಭಿವೃದ್ಧಿಗೆ ಕೈಗಾರಿಕೆಗಳು ಸಹಕಾರಿ ವೆಂಕಟಶಿವಾರೆಡ್ಡಿ
- ಶ್ರೀನಿವಾಸಪುರ:ಮಾವು ಬೆಂಬಲ ಬೆಲೆಗೆ ಅಗ್ರಹಿಸಿ ರೈತರಿಂದ ರಸ್ತೆ ತಡೆ! ಬಂದ್ ಎಚ್ಚರಿಕೆ
- ಟೀನೇಜ್ ಗೆಳೆಯ ಗೆಳತಿಯರ “ನ ಲಜ್ಜಾಃ ನ ಭಯಂ” ಬಸ್ಸಿನಲ್ಲೆ ಅತಿರೇಕ!
- ಚಿಂತಾಮಣಿಗೂ ವಕ್ಕರಿಸಿದ ಕೊರೋನಾ! ಆತಂಕ ಬೇಡ
Saturday, June 14