ಶ್ರೀನಿವಾಸಪುರ:ಮಾವಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಮಾವು ಬೆಳೆಗಾರ ಸಂಘ ಹಾಗು ರೈತ ಸಂಘದ ಕಾರ್ಯಕರ್ತರು, ಬೆಳೆಗಾರರು ಮಾವು ವ್ಯಾಪರಸ್ಥರು,ಮಾವು ಮಂಡಿ ಮಾಲಿಕರು ರಸ್ತೆ ತಡೆ ಪ್ರತಿಭಟನೆ ನಡೆಸಿದರು.
ಪಟ್ಟಣದ ಇಂದಿರಾಭವನ್ ವೃತ್ತದಲ್ಲಿ ಮಾವು ಬೆಳೆಗಾರರು ಆಕ್ರೋಶ ಭರಿತರಾಗಿ ಪ್ರತಿಭಟನೆ ನಡೆಸಿ ಮಾವು ಬೆಲೆ ಪಾತಾಳಾಕ್ಕೆ ಕುಸಿದಿದ್ದು ಬೆಳೆಗಾರರು ವ್ಯಾಪರಸ್ಥರು ಕಂಗಾಲಾಗಿದ್ದಾರೆ ಸರ್ಕಾರ ಈ ಕೂಡಲೇ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಅಗ್ರಹಿಸಿದರು.ಬೆಳೆದಂತ ಮಾವು ಬೆಳೆಗೆ ಸೂಕ್ತ ಬೆಲೆ ಸಿಗದೆ ಮಾವು ಬೆಳೆಗಾರ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಯಾಕತೆ ವ್ಯಕ್ತಪಡಿಸಿದರು.
ಬೆಳೆಗಾರರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರಬೇಕು ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಿ ಸರ್ಕಾರದಿಂದ ಬೆಂಬಲ ಬೆಲೆ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾವು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ನಿಲಟೂರುಚಿನ್ನಪ್ಪರೆಡ್ಡಿ,ಕಾರ್ಯದರ್ಶಿ ಪಾತಕೋಟೆ ನವೀನ್ ಕುಮಾರ್,ರೈತ ಸಂಘದ ನಂಬಿಹಳ್ಳಿಶ್ರೀರಾಮರೆಡ್ಡಿ,ನಿಲಟೂರುಚಂದ್ರಾರೆಡ್ಡಿ,ರೈತ ಕಾರ್ಮಿಕ ಮುಖಂಡ ಫಾರೂಕ್, ಅಸ್ಲಾಂ,ಮಂಡಿ ಮಾಲಿಕರಾದ ಶ್ರೀರಾಮ್,ಜಾವಿದ್ ಅನ್ಸಾರಿ, ಪೊಬ್ಬತಿಹರಿ ಮುಂತಾದವರು ಭಾಗವಹಿಸಿದ್ದರು. ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡುತ್ತಿದ್ದರೆ ಪಟ್ಟಣದಲ್ಲಿ ಕೀ.ಮಿ ಗಟ್ಟಲೆ ಟ್ರಾಫಿಕ್ ಜಾಮ್ಏರ್ಪಟ್ಟಿತ್ತು

ಅನಿರ್ದಿಷ್ಟಾವಧಿ ಬಂದ್ ಎಚ್ಚರಿಕೆ
ಜಿಲ್ಲಾಧಿಕಾರಿಗಳು ಬುಧವಾರ ಶ್ರೀನಿವಾಸಪುರಕ್ಕೆ ಬಂದು ಮಾವು ಬೆಳೆಗಾರರ ಸಭೆ ನಡೆಸಿ ಬೆಡಿಕೆ ಪರಿಗಣಿಸಿ ಸರ್ಕಾರಕ್ಕೆ ಮಾಹಿತಿ ನೀಡಿ ಬೆಂಬಲ ಬೆಲೆ ಕೊಡಿಸುವ ಭರವಸೆ ನೀಡಬೇಕು ಇಲ್ಲವಾದರೆ ಗುರುವಾರ ಶ್ರೀನಿವಾಸಪುರ ತಾಲೂಕು ಅನ್ನು ಅನಿರ್ದಿಷ್ಟಾವಧಿ ಬಂದ್ ಮಾಡುವುದಾಗಿ ಬೆಳೆಗಾರರ ಸಂಘದ ಅಧ್ಯಕ್ಷ ನಿಲಟೂರುಚಿನ್ನಪ್ಪರೆಡ್ಡಿ ಎಚ್ಚರಿಸಿದ್ದಾರೆ