ಶ್ರೀನಿವಾಸಪುರ:ಮಾವಿನ ದರ ಕುಸಿತದಿಂದ ಮಾವು ಬೆಳೆಗಾರರು ಕಂಗಾಲಾಗಿದ್ದಾರೆ.ತೋತಾಪುರಿ ಸೇಂದೂರಾ (ರಾಜಗಿರಾ) ರಸಪುರಿ ದರ ತೀವ್ರವಾಗಿ ಕುಸಿದಿದೆ ಮಾವು ಸಗಟು ವ್ಯಾಪಾರಸ್ಥರು ಮಾರುಕಟ್ಟೆಯತ್ತ ಮುಖ ಮಾಡುತ್ತಿಲ್ಲ.ಇದರ ಜೊತೆಗೆ ಆಂಧ್ರ ತಮಿಳುನಾಡು ರಾಮನಗರ ಭಾಗಗಳಲ್ಲೂ ಏಕಕಾಲಕ್ಕೆ ಎಲ್ಲಾ ಕಡೆ ಮಾವು ಮಾರುಕಟ್ಟೆಗೆ ಬಂದಿರುವುದರಿಂದ ಮಾವಿನ ದರ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಹವಾಮಾನ ಏರುಪೇರಾಗಿ ಫೆಬ್ರವರಿ ತಿಂಗಳಲ್ಲಿನ ಬಿಸಿಲಿನ ತೀವ್ರತೆ ಇದ್ದ ಪರಿಣಾಮ ಶೇ.70ರಷ್ಟು ಮಾವಿನ ಬೆಳೆ ಬಿಸಿಲಿನ ಆಘಾತಕ್ಕೆ ಹಾನಿಯಾಗಿ ಶೇ.30ರಿಂದ 40ರಷ್ಟು ಫಸಲು ಬಂದಿದೆ.
ಜೊತೆಗೆ ಬೆಲೆ ಕುಸಿತ ಇರುವುದು ಈ ಬಾರಿ ಮಾವು ಬೆಳೆಗಾರನ ಕೈ ಹಿಡಿಯುವಲ್ಲಿ ವಿಫಲವಾಗಿದೆ ಎನ್ನಬಹುದು. ಶ್ರೀನಿವಾಸಪುರ ಕೇಂದ್ರಿಕೃತವಾಗಿ ವಿಭಜಿತ ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಳೆಯುವ ತೋತಾಪುರಿ ಮಾವಿನಕಾಯಿ ಈ ಬಾರಿ ಬೆಳೆಗಾರರಿಗೆ ಕಹಿಯಾಗಿದೆ. ಕಾಯಿ ಬೆಲೆ ಕೆಜಿಗೆ 7-8 ರುಪಾಯಿ ಗಡಿ ದಾಟಿಲ್ಲ.


ಚಿಲ್ಲರೆ ಧಾರಣೆ ಚನ್ನಾಗಿದೆ
ಚಿಲ್ಲರೆ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಬೆಲೆ ದುಬಾರಿಯಾಗಿದೆ ಅಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ ಆದರೆ ಸಗಟು ಧಾರಣೆ ಇಲ್ಲದ ಕಾರಣ ಮಾವು ಬೆಳೆಗಾರನಿಗೆ ಹಣ ಸಿಗುತ್ತಿಲ್ಲ.
ಮಾವು ಖರಿದಿ ಮಾಡದ ಸಂಸ್ಕ್ರರಣ ಘಟಕಗಳು
ಮಾವು ಸಂಸ್ಕ್ರರಣ ಘಟಕಗಳವರು ಮಾವು ಖರಿದಿಗೆ ಇದುವರಿಗೂ ಮುಂದಾಗಿಲ್ಲ, ಕಳೆದ ವರ್ಷದ ಮಾವು ಪಲ್ಪ್ ಖರ್ಚಾಗದೆ ಸಂಸ್ಕ್ರರಣ ಘಟಕಗಳ ಗೋದಾಮುಗಳಲ್ಲಿ ಹಾಗೆ ಉಳಿದಿರುವ ಕಾರಣ ಈ ವರ್ಷ ಮಾವು ಖರಿದಿ ಮಾಡಬೇಕ ಬೇಡ್ವಾ ಪಲ್ಪ್ ತಯಾರಿಸುವ ಸಂಸ್ಕ್ರರಣ ಘಟಕಗಳವರು ಮೀನಾ ಮೇಷ ಎಣಿಸುತ್ತಿರುವುದು ದರ ಕುಸಿತಕ್ಕೆ ಮತ್ತೊಂದು ಕಾರಣ ಎನ್ನಲಾಗುತ್ತಿದೆ.

ಮಾವು ಬೆಂಬಲ ಬೆಲೆ ಘೋಷಣೆಗೆ ಅಗ್ರಹ
ಶ್ರೀನಿವಾಸಪುರ ಕೇಂದ್ರಿಕೃತವಾಗಿ ಕೋಲಾರ ಜಿಲ್ಲೆಯಲ್ಲಿ ಮಾವು ಜೀವನಾಡಿ ಬೆಳೆಯಾಗಿದ್ದು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಜನರ ಬದಿಕಿಗೆ ಆಸರೆಯಾಗಿತ್ತು ಈ ವರ್ಷ ಬೆಳೆ ಇದ್ದು ಇಲ್ಲದಂತಾಗಿದೆ ಎಂದು ಕೋಲಾರ ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಿಲಟೂರುಚಿನ್ನಪ್ಪರೆಡ್ಡಿ ಹೇಳುತ್ತಾರೆ.
ಯಾವುದೆ ನದಿ ನಾಲೆಗಳು ಇಲ್ಲದ ಇಲ್ಲಿ ಮಳೆ ನಂಬಿ ಜೀವನ ಕಟ್ಟಿಕೊಂಡಿರುವ ಸಾಮಾನ್ಯ ಮಾವು ಬೆಳೆಗಾರರು ವರ್ಷಕ್ಕೊಮ್ಮೆ ಬರುವಂತ ಮಾವುಬೆಳೆಯನ್ನು ನಂಬಿ ಮನೆ ಕಟ್ಟಿಕೊಳ್ಳಲೊ ಅಥಾವ ಮನೆಯಲ್ಲಿ ಮದುವೆ ಕಾರ್ಯಕ್ಕೆ ಉಪಯೋಗಕ್ಕೆ ಆಸರೆಯಾಗುತ್ತದೆ ಎಂದು ಅದೇಷ್ಟೊ ಕುಟುಂಬಗಳು ಕಾಯುತ್ತಿದ್ದರು ಇಂತಹವರ ಜೀವನದಲ್ಲಿ ಮಾವುಬೆಳೆ ಇಲ್ಲದೆ ನಮಗೆ ದೊಡ್ಡ ಹೊಡೆತ ಬಿದ್ದಿದೆ ಎನ್ನುತ್ತಾರೆ.
ಮಾವು ಬೆಳೆದ ರೈತ ಕೆಂಗೆಟ್ಟಿದ್ದಾನೆ ಅವನ ಬದುಕಿಗೆ ಆಸರೆಯಾಗುವಂತೆ ಮಾವು ಬೆಳೆಗಾರರಿಗೆ ಅನಕೂಲವಾಗಲು ಮಾವು ಬೆಂಬಲ ಬೆಲೆ ಘೋಷಣೆ ಮಾಡುವಂತೆ ಸರ್ಕಾರವನ್ನು ಅಗ್ರಹಿಸಿದ್ದಾರೆ.ಇದರ ಜೋತೆಗೆ ಕೃಷಿ ಆಧಾರಿತ ಕೈಗಾರಿಕೆಗಳನ್ನು ಶ್ರೀನಿವಾಸಪುರ ತಾಲೂಕಿಗೆ ತರುವಂತೆ ಒತ್ತಾಯಿಸಿದ್ದಾರೆ.