ಶ್ರೀನಿವಾಸಪುರ:ದೇವರ ಪೂಜೆ ಹವನ ಹೋಮ ನಮ್ಮ ಹಿರಿಕರು ಹಾಕಿಕೊಟ್ಟ ಸಂಸ್ಕೃತಿ ಎಂದು ಶ್ರೀ ಅನ್ನುಪೂರ್ಣೆಶ್ವರಿ ಮಹಿಳಾ ಮಂಡಳಿ ಪ್ರತಿನಿಧಿಗಳು ಹೇಳುತ್ತಾರೆ ಅವರು ನವರಾತ್ರಿ ಅಂಗವಾಗಿ ತಮ್ಮ ಮಂಡಳಿಯಲ್ಲಿ ದಸರ ಬೊಂಬೆ ಕೂರಿಸಿ ದುರ್ಗಾದೇವಿಯನ್ನು ಪ್ರತಿಷ್ಠಾಪಿಸಿ ಒಂಬತ್ತು ದಿನಗಳ ಕಾಲ ಸಂಪ್ರದಾಯದಂತೆ ನವದುರ್ಗೆ ವೈಭವ ಎನ್ನುವ ರಿತಿಯಲ್ಲಿ ಪ್ರತಿದಿನ ವೈಶಿಷ್ಠವಾಗಿ ವಿವಿಧ ರೂಪದಲ್ಲಿ ಅಲಂಕರಿಸಿ ಪೂಜೆ ಸಲ್ಲಿಸುತ್ತಾರೆ ಅದರಂತೆ ಬಾಲತ್ರಿಪುರ ಸುಂದರಿ ದೇವಿ ರೂಪದಲ್ಲೂ ಪೂಜೆ ಸಲ್ಲಿಸುವುದು ಪದ್ದತಿ ಎಂದು ಮಹಿಳಾ ಮಂಡಳಿ ಪ್ರತಿನಿಧಿ ವಿನಿತಾಶ್ರೀನಿವಾಸನ್ ಹೇಳುತ್ತಾರೆ.
ದುರ್ಗಾದೇವಿಯನ್ನು ತ್ರಿಪುರಸುಂದರಿ, ಬಾಲಾತ್ರಿಪುರ ಸುಂದರಿ, ಮತ್ತು ತ್ರಿಪುರ ಭೈರವಿ ಎಂಬ ಮೂರು ರೂಪಗಳಲ್ಲಿ ಪೂಜಿಸಲಾಗುತ್ತದೆ ತ್ರಿಪುರ ಬಾಲಾ ಸುಂದರಿ ಯುವ ಕನ್ಯೆಯ ದೇವತೆಯ ಪ್ರತಿನಿಧಿಯಾಗಿ ಸಣ್ಣ ವೈಯಸ್ಸಿನ ಹೆಣ್ಮಕ್ಕಳನ್ನು ಕೂರಿಸಿ ಅಲಂಕಾರ ಮಾಡಿ ಬಾಲ ತ್ರಿಪುರ ಸುಂದರಿ ಪ್ರತೀಕ ಎಂದು ಪೂಜೆ ಸಲ್ಲಿಸುವುದು ಹಿರಿಯರು ಹಾಕಿಕೊಟ್ಟಂತ ಆದ್ಯಾತ್ಮಿಕ ಸಂಪ್ರದಾಯ ಎಂದು ವಿವರಿಸುತ್ತಾರೆ.ಅದರಂತೆ ವೈಶಿಷ್ಠತೆಯಿಂದ ಅಲಂಕಾರ ಮಾಡಿದ ಹೆಣ್ಮಗುವನ್ನು ಕೂರಿಸಿ ಆಕೆಯನ್ನು ದೇವರೆಂದು ಪೂಜಿಸಲಾಗುತ್ತದೆ ಹಿರಿಯರಾದಿಯಾಗಿ ಆಕೆಗೆ ಪೂಜೆ ಸಲ್ಲಿಸಿ ಆಶಿರ್ವಾದ ಪಡೆಯುವುದು ವಾಡಿಕೆ.ಪೂಜಾ ಕಾರ್ಯಕ್ರಮದಲ್ಲಿ ಮಹಿಳಾ ಮಂಡಳಿ ಸದಸ್ಯರಾದ ವನಜಾಕ್ಷ್ಮಮ್ಮ,ಮಾಲಿನಿಸುರೇಶ್,ಸಹನಾಶಿವಕುಮಾರ್,ಧನಲಕ್ಷ್ಮಿ ಮುಂತಾದವರು ಇದ್ದರು.
Trending
- ಕರ್ನಾಟಕ ಮಾವು ಆಂಧ್ರ ನಿಷೇದಿಸಿರುವುದು ಒಕ್ಕೂಟ ವ್ಯವಸ್ಥೆಗೆ ಪೆಟ್ಟು ಸಿದ್ದರಾಮಯ್ಯ!
- ಶ್ರೀನಿವಾಸಪುರ:ಮಾವು ದರ ಕುಸಿತ,ಆಂಧ್ರದವರು ಬೇಡ ಅಂದ್ರಾ ಕರ್ನಾಟಕ ಮಾವನ್ನು!
- SRINIVASPUR ಮಾರುಕಟ್ಟೆಯಲ್ಲಿ ಮೋಸ ರೈತರಿಂದ ಲೋಕಾಯುಕ್ತರಿಗೆ ದೂರು
- ಮುಳಬಾಗಿಲು:ದಾಳಿಕೊರರ ಅತಿಕ್ರಮಣ ಕೃಷಿ ಸಂಸ್ಕೃತಿ ಮೇಲೂ ಪರಿಣಾಮ!
- ಶ್ರೀನಿವಾಸಪುರ ಅಭಿವೃದ್ಧಿಗೆ ಕೈಗಾರಿಕೆಗಳು ಸಹಕಾರಿ ವೆಂಕಟಶಿವಾರೆಡ್ಡಿ
- ಶ್ರೀನಿವಾಸಪುರ:ಮಾವು ಬೆಂಬಲ ಬೆಲೆಗೆ ಅಗ್ರಹಿಸಿ ರೈತರಿಂದ ರಸ್ತೆ ತಡೆ! ಬಂದ್ ಎಚ್ಚರಿಕೆ
- ಟೀನೇಜ್ ಗೆಳೆಯ ಗೆಳತಿಯರ “ನ ಲಜ್ಜಾಃ ನ ಭಯಂ” ಬಸ್ಸಿನಲ್ಲೆ ಅತಿರೇಕ!
- ಚಿಂತಾಮಣಿಗೂ ವಕ್ಕರಿಸಿದ ಕೊರೋನಾ! ಆತಂಕ ಬೇಡ
Saturday, June 14