ಶ್ರೀನಿವಾಸಪುರ:ಹಳ್ಳ ಕೊಳ್ಳಗಳಿಂದ ಕೂಡಿ ಹಾಳಾದ ರಸ್ತೆಗೆ ಮಣ್ಣು ಹಾಕಿ ಹಳ್ಳ ಮುಚ್ಚಿ ಮೆಲ್ನೋಟಕ್ಕೆ ಮೇಕಪ್ ಮಾಡಿದರೆ ಸಾಕ ಅಧಿಕಾರಿಗಳೆ ಹಿಗೇಂದು ಈ ರಸ್ತೆಯಲ್ಲಿ ಓಡಾಡುವ ದ್ವೀಚಕ್ರ ವಾಹನ ಸವಾರರ ಮಾತು.
ಈ ರಸ್ತೆ ಗ್ರಾಮವೊಂದರ ರಸ್ತೆಯಲ್ಲ ಬದಲಾಗಿ ಶ್ರೀನಿವಾಸಪುರ ತಾಲೂಕಿನ ಗಡಿಯಂಚಿನ ಆಂಧ್ರದ ಚಂಬಕೂರು,ರಾಮಸಮುದ್ರಂ ಮದನಪಲ್ಲಿ ಭಾಗಕ್ಕೆ ಹೊಂದಿಕೊಂಡಿರುವ ತಾಲೂಕಿನ ಸೋಮಯಾಜಲಹಳ್ಳಿ,ಪುಲಗೂರಕೋಟೆ ಲಕ್ಷ್ಮೀಪುರ ಭಾಗದ ಜನತೆ ಶ್ರೀನಿವಾಸಪುರ ಪಟ್ಟಣಕ್ಕೆ ಬರಲು ಈ ರಸ್ತೆಯನ್ನು ಬಳಸುತ್ತಾರೆ ಈಗ ರಸ್ತೆ ಹಳ್ಳಬಿದ್ದು ಹಾಳಾಗಿದೆ ಗುಂಡಿಗಳಿಂದ ತುಂಬಿದ್ದು ತಿರುವುಗಳಲ್ಲಿ ದ್ವಿಚಕ್ರವಾಹನ ಸವಾರ ಅನಾಮತ್ತು ಕೆಳಗೆ ಬೀಳುವಷ್ಟು ಡಾಂಬರು ಕಿತ್ತುಹೋಗಿದೆ.
ನನಬಾರ್ಡ್ ಯೋಜನೆಯಲ್ಲಿ ನಿರ್ಮಾಣ ಗ್ರಾಮೀಣ ಸಂಪರ್ಕ ರಸ್ತೆಯನ್ನು ಹಿಂದಿನ ಶಾಸಕರ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿಯ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ದಿ ಇಲಾಖೆ ನಿರ್ಮಿಸಿದ್ದು ಈಗ ರಸ್ತೆ ಹಾಳಾಗಿದೆ, ಗ್ರಾಮೀಣ ರಸ್ತೆಯಲ್ಲಿ ಸೋಮಯಾಜಲಹಳ್ಳಿ ಭಾಗದ ಜಲ್ಲಿಕ್ರಷರ್ ನಿಂದ ಬರುವಂತ ಟಿಪ್ಪರ್ ಲಾರಿಗಳು,ಮರಳು ಟ್ರಾಕ್ಟರಗಳು ಓಡಾಡುವ ಪರಿಣಾಮ ಸಂಪೂರ್ಣವಾಗಿ ಹಾಳಾಗಿದೆ ಮಳೆ ಬಂದರೆ ಗುಂಡಿಗಳಲ್ಲಿ ನೀರು ತುಂಬಿಕೊಂಡು ಗದ್ದೆಯಂತಾಗುತ್ತದೆ ಒಣಗಿದೆ ಮೇಲೆ ಮಣ್ಣಿನ ದೂಳು ದ್ವಿಚಕ್ರ ವಾಹನ ಸವಾರರ ಮುಖಕ್ಕೆ ಬಡಿಯುತ್ತದೆ.ರಸ್ತೆಯ ಬದಿಯ ಮುಳ್ಳುಗಂಟಿಗಳು ರಸ್ತೆ ವರಿಗೂ ಬೆಳೆದು ಬಂದಿವೆ,ರಾತ್ರಿ ವೇಳೆ ಒಡಾಡುವ ದ್ವಿಚಕ್ರ ವಾಹನ ಸವಾರರಿಗೆ ಮುಳ್ಳುಗಂಟಿಗಳಲ್ಲಿ ಅಡಗಿರುವ ಮುಳ್ಳಹಂದಿ, ಮೊಲ,ಕಾಡು ಬೆಕ್ಕುಗಳುವಾಹನದ ಬೆಳಕು ಕಂಡ ತಕ್ಷಣ ಅವು ಗಲಿಬಿಲಿಯಿಂದ ರಸ್ತೆ ದಾಟಿದರೆ ವಾಹನ ಸವಾರರಿಗೆ ಸಮಸ್ಯೆಯಾಗಿ ಕಾಡುತ್ತದೆ ಎನ್ನುವುದು ಇಲ್ಲಿ ಒಡಾಡುವಂತವರ ಅಳಲು. ಈ ರಸ್ತೆಗೆ ಮಣ್ಣು ಹಾಕುವುದು ತೇಪೆ ಹಾಕುವಂತ ಮೇಕಪ್ ಕಾರ್ಯ ಬೇಕಿಲ್ಲ ಅರ್ಜೆಂಟ್ ಆಗಿ ಸಂಪೂರ್ಣವಗಿ ಡಾಂಬರಿಕರಣ ಆಗಬೇಕು ಎನ್ನುವುದು ಅವಲಕುಪ್ಪ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Trending
- ಕರ್ನಾಟಕ ಮಾವು ಆಂಧ್ರ ನಿಷೇದಿಸಿರುವುದು ಒಕ್ಕೂಟ ವ್ಯವಸ್ಥೆಗೆ ಪೆಟ್ಟು ಸಿದ್ದರಾಮಯ್ಯ!
- ಶ್ರೀನಿವಾಸಪುರ:ಮಾವು ದರ ಕುಸಿತ,ಆಂಧ್ರದವರು ಬೇಡ ಅಂದ್ರಾ ಕರ್ನಾಟಕ ಮಾವನ್ನು!
- SRINIVASPUR ಮಾರುಕಟ್ಟೆಯಲ್ಲಿ ಮೋಸ ರೈತರಿಂದ ಲೋಕಾಯುಕ್ತರಿಗೆ ದೂರು
- ಮುಳಬಾಗಿಲು:ದಾಳಿಕೊರರ ಅತಿಕ್ರಮಣ ಕೃಷಿ ಸಂಸ್ಕೃತಿ ಮೇಲೂ ಪರಿಣಾಮ!
- ಶ್ರೀನಿವಾಸಪುರ ಅಭಿವೃದ್ಧಿಗೆ ಕೈಗಾರಿಕೆಗಳು ಸಹಕಾರಿ ವೆಂಕಟಶಿವಾರೆಡ್ಡಿ
- ಶ್ರೀನಿವಾಸಪುರ:ಮಾವು ಬೆಂಬಲ ಬೆಲೆಗೆ ಅಗ್ರಹಿಸಿ ರೈತರಿಂದ ರಸ್ತೆ ತಡೆ! ಬಂದ್ ಎಚ್ಚರಿಕೆ
- ಟೀನೇಜ್ ಗೆಳೆಯ ಗೆಳತಿಯರ “ನ ಲಜ್ಜಾಃ ನ ಭಯಂ” ಬಸ್ಸಿನಲ್ಲೆ ಅತಿರೇಕ!
- ಚಿಂತಾಮಣಿಗೂ ವಕ್ಕರಿಸಿದ ಕೊರೋನಾ! ಆತಂಕ ಬೇಡ
Thursday, June 12