ಭಾರತದ ನೆಲದಲ್ಲಿ ಆದೇಷ್ಟೊ ದೇವಾಲಯಗಳನ್ನು ನಿರ್ಮಿಸಲಾಗಿದೆ ಅವುಗಳಲ್ಲಿ ಕೆಲ ದೇವಾಲಯಗಳಲ್ಲಿ ಇರುವ ನಿಗೂಢ ರಹಸ್ಯಗಳು ವಿಸ್ಮಯಗೊಳಿಸುತ್ತವೆ. ಕೆಲ ದೇಗುಲುಗಳ ವಾಸ್ತುಶಿಲ್ಪ ವಿನ್ಯಾಸಗಳು, ಕೊಠಡಿಗಳ ರಚನೆ, ವಿಗ್ರಹಗಳಲ್ಲಿನ ರಹಸ್ಯಗಳು ವಿಜ್ಞಾನಿಗಳಿಗೆ ಅಧ್ಯಯನಕಾರರಿಗೆ ಮತ್ತು ಇತಿಹಾಸಕಾರರಿಗೆ ಪ್ರಶ್ನೆಗಳಾಗಿ ಉಳಿದುಕೊಂಡಿದೆ. ವಿಸ್ಮಯಕಾರಿ ರಹಸ್ಯ ಎನ್ನುವಂತೆ ಮಾನವನಿಂದ ಬೇದಿಸಲು ಸಾಧ್ಯವಾಗದ ಅನೂಹ್ಯವಾದ ವಿಸ್ಮಯ ಹಾಗು ವಿಶೇಷವಾದ ದೇವಾಲಯವೊಂದು ತೆಲಂಗಾಣ ರಾಜ್ಯದಲ್ಲಿ ಇದ್ದು ಅತ್ಯಂತ ಗಮನಾರ್ಹ ಎನ್ನಬಹುದು. ಇದನ್ನು ಮುಲ್ಲೂರು ಶ್ರೀ ನರಸಿಂಹಸ್ವಾಮಿ ದೇವಾಲಯ ಎನ್ನುತ್ತಾರೆ. ತೆಲಂಗಾಣದ ವರಂಗಲ್ ನಗರದಿಂದು ಸುಮಾರು 130 ಕೀ.ಮಿ ದೂರ ಹಾಗು ಭದ್ರಾಚಲಂನಿಂದ ಸುಮಾರು 90 ಕೀ.ಮಿ ದೂರದ ಮುಲುಗು ಜಿಲ್ಲೆಯ ಮಂಗಪೇಟೆ ಮಂಡಲದ ಮುಲ್ಲೂರಿನಲ್ಲಿರುವ ಬೆಟ್ಟಗಳ ಮೇಲೆ ನೆಲೆನಿಂತಿರುವ ಶ್ರೀ ನರಸಿಂಹ ಸ್ವಾಮಿ ದೇವಾಲಯ Hemachala Narasimha Swamy Temple ಇದನ್ನು ಹೇಮಾಚಲ ನರಸಿಂಹ ಸ್ವಾಮಿ ದೇವಾಲಯ ಎಂದು ಕರೆಯಲಾಗುತ್ತದೆ.
ನ್ಯೂಜ್ ಡೆಸ್ಕ್:ಮಲ್ಲೂರಿನಲ್ಲಿರಿನ ಹೇಮಾಚಲ ನರಸಿಂಹಸ್ವಾಮಿ ದೇವಾಲಯ ಹಲವು ವೈಶಿಷ್ಠತೆಗಳನ್ನು ಹೊಂದಿದೆ. ಈ ದೇವಾಲಯದಲ್ಲಿನ ವಿಗ್ರಹದಲ್ಲಿ ರಹಸ್ಯ ಅಡಗಿವೆ. ಇದನ್ನು ಭೇದಿಸಲು ಹಲವರ ಪ್ರಯತ್ನ ಕೈಗೂಡಲಿಲ್ಲವಂತೆ,ನವ ನರಸಿಂಹ ಕ್ಷೇತ್ರಗಳಲ್ಲಿ ಒಂದಾದ ಮುಲ್ಲೂರು ಹೇಮಾಚಲ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ಕ್ಷೇತ್ರದಲ್ಲಿ ಭಾರದ್ವಾಜ ಹಾಗು ಗೌತಮ ಋಷಿಗಳು ಪೂಜಿಸಿದ ಪುಣ್ಯಕ್ಷೇತ್ರವಾಗಿದ್ದು ಶ್ರೀ ಲಕ್ಷ್ಮಿನರಸಿಂಹ ಸ್ವಾಮಿಯ ವಿಗ್ರಹವು ಹತ್ತು ಅಡಿ ಎತ್ತರವಿದೆ.
ಇತಿಹಾಸಕಾರರು ಹೇಳುವಂತೆ ಆರನೇ ಶತಮಾನಕ್ಕೂ ಮೊದಲಿನಿಂದಲೂ ಅಸ್ತಿತ್ವದಲ್ಲಿರುವ ದೇವಾಲಯ ಚೋಳರ ಕಾಲದ್ದು ಎಂದು ಹೇಳುತ್ತಾರೆ.ಇಡೀ ಕ್ಷೇತ್ರ ಅರ್ಧಚಂದ್ರಾಕಾರದಲ್ಲಿದ್ದು ಇಲ್ಲಿನ ಶ್ರೀಲಕ್ಷ್ಮಿ ನರಸಿಂಹ ಸ್ವಾಮಿ ಸ್ವಯಂಭೂ ರೂಪದಲ್ಲಿ ಕಾಣಿಸಿಕೊಂಡಿದ್ದು ಎಂದು ಹೇಳಲಾಗುತ್ತದೆ. ಶಾತವಾಹನರ ರಾಜ ದಿಲೀಪಕರ್ಣಿಗೆ ಕನಸಿನಲ್ಲಿ ದರ್ಶನ ಇತ್ತ ಭಗವಂತ ತಾನು ಗುಹೆಯೊಳಗೆ ಇರುವುದಾಗಿ ಹೇಳಿದ ಹಿನ್ನೆಲೆಯಲ್ಲಿ ರಾಜ 76,000 ಸೈನಿಕರೊಂದಿಗೆ ಅಲ್ಲಿ ಉತ್ಖನನ ನಡೆಸಿದ್ದು ಹಾರೆಯಿಂದ ಭೂಮಿಯನ್ನು ಅಗೆಯುವಾಗ ಭಗವಂತನ ವಿಗ್ರಹದ, ಹೊಕ್ಕುಳ ಭಾಗಕ್ಕೆ ಗಾಯವಾಗಿ ವಿಗ್ರಹವನ್ನು ನೆಲದಡಿಯಿಂದ ಹೊರತೆಗೆದು ಭಕ್ತರ ದರ್ಶನಕ್ಕೆ ಪ್ರತಿಷ್ಠಾಪನೆ ಮಾಡಲಾಗಿ ದೇವಾಲಯ ನಿರ್ಮಿಸಿದ ಎಂದು ಸ್ಥಳ ಪುರಾಣದಲ್ಲಿ ಉಲ್ಲೇಖವಿದಿಯಂತೆ.
ಮಾನವನ ದೇಹದಷ್ಟೆ ಮೃದುವಾದ ಕಲ್ಲಿನ ವಿಗ್ರಹ
ಉತ್ಖನದ ಸಮಯದಲ್ಲಿ ಹೊಕ್ಕುಳ ಬಳಿ ಆದ ಗಾಯದಿಂದ ಈಗಲು ಭಗವಂತನ ವಿಗ್ರಹದ ಹೊಕ್ಕುಳಿನಿಂದ ಪ್ರಸ್ತುತ ದ್ರವ ಸೋರುತ್ತಿದ್ದು ಈ ದ್ರವವನ್ನು ಹೊಕ್ಕುಳ ಚಂದನ ಎಂದು ಕರೆಯಲಾಗುತ್ತದೆ ಇದನ್ನು ಕುಡಿಯುವುದರಿಂದ ಸಂತಾನ ಹೀನರಿಗೆ ಮಕ್ಕಳಾಗುವ ಅದೃಷ್ಟ ಒದಗಿ ಬರುತ್ತದೆ ಎಂದು ನಂಬಿದ್ದಾರೆ.ಇಲ್ಲಿನ ಭಗವಾನ್ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ವಿಗ್ರಹ ಮನುಷ್ಯ ದೇಹದಷ್ಟೇ ಮೃದುವಾಗಿದ್ದು ಅತ್ಯಂತ ಸೂಕ್ಷ್ಮವಾದ ವಿಗ್ರಹವಾಗಿದೆ.
ಶ್ರೀ ನರಸಿಂಹ ಸ್ವಾಮಿಯೊಂದಿಗೆ ಆದಿಲಕ್ಷ್ಮಿ ಮತ್ತು ಚೆಂಚುಲಕ್ಷ್ಮಿ ಇಬ್ಬರು ನೆಲೆನಿಂತಿದ್ದಾರೆ ಇಲ್ಲಿ ಪಂಚಮುಖಾಂಜನೇಯ ಸ್ವಾಮಿ ಮತ್ತು ಶಿಖಾಂಜನೇಯ ಸ್ವಾಮಿ. ಕ್ಷೇತ್ರಾಧಿಪತಿಗಳು ಎನ್ನುತ್ತಾರೆ.
ಮಹಿಮಾನ್ವಿತ ದೇವರು ಎನ್ನುವ ಹೇಮಾಚಲ ನರಸಿಂಹ ಸ್ವಾಮಿಯು ಮಲ್ಲೂರಿನಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ ಬೆಟ್ಟದ ಮೇಲೆ ನೆಲೆಗೊಂಡಿದ್ದು ಮಾನವ ದೇಹದಷ್ಟೇ ಮೃದುವಾದ ನರಸಿಂಹ ದೇವರ ಕಲ್ಲಿನ ವಿಗ್ರಹದ ಎದೆಯ ಮೇಲೂ ಕೂದಲನ್ನು ಇದ್ದು ತೋರು ಬೆರಳಿನಿಂದ ಪ್ರತಿಮೆಯ ಎದೆಯನ್ನು ಮುಟ್ಟಿದರೆ, ಅದು ದೇಹದಂತೆ ನಿಧಾನವಾಗಿ ಒಳಗೆ ಹೋಗುತ್ತದೆ. ಹೊಕ್ಕಳಿನಿಂದ ಹೊರಹೊಮ್ಮುವ ದ್ರವ ಭಗವಂತನು ಮನುಷ್ಯನಂತೆ ಬೆವರುತ್ತಾನೆ, ಮತ್ತು ಅವನ ಹೊಟ್ಟೆಯೂ ಸಹ ಮಾನವ ದೇಹದಂತೆ ಮೃದುವಾಗಿರುತ್ತದೆ.
ಹೊಕ್ಕುಳಿನಿಂದ ಬರುವ ದ್ರವವನ್ನು ಶೇಖರಿಸಲು ಪುರೋಹಿತರು ಅಲ್ಲಿ ಶ್ರೀಗಂಧವನ್ನು ಹಾಕುತ್ತಾರೆ ಈ ಶ್ರೀಗಂಧವನ್ನು ಪ್ರತಿ ಶನಿವಾರ, ಭಾನುವಾರ ಮತ್ತು ಸೋಮವಾರ ಭಕ್ತರಿಗೆ ಪ್ರಸಾದವಾಗಿ ನೀಡಲಾಗುತ್ತದೆ. ಬಂಜೆತನ ನೀವಾರಣೆಗೆ ಗಂಧ ಪ್ರಸಾದ ವರವಾಗುತ್ತದೆ ಎಂದು ಭಕ್ತರು ಆಳವಾಗಿ ನಂಬಿದ್ದಾರೆ.

ಮಕ್ಕಳ ಫಲಕ್ಕೆ ಶನಿವಾರ ಭಾನುವಾರ ಮಾತ್ರ
ಭಗವಂತನ ದರ್ಶನ ಪ್ರತಿ ದಿನ ಇರುತ್ತದೆ ಆದರೆ ಮಕ್ಕಳಿಗಾಗಿ ಹೋಗುವವರು ಶನಿವಾರ ಮತ್ತು ಭಾನುವಾರ ಮಾತ್ರ ಹೋಗಬೇಕು. ಆ ದಿನಗಳಲ್ಲಿ ಮಾತ್ರ ಭಗವಂತನಿಂದ ಹೊಕ್ಕುಳ ದ್ರವವನ್ನು ತೆಗೆದುಕೊಳ್ಳಲಾಗುತ್ತದೆಯಂತೆ ಆ 2 ದಿನಗಳನ್ನು ಹೊರತುಪಡಿಸಿದರೆ ಉಳಿದಂತ ದಿನಗಳಲ್ಲಿ ಅಲ್ಲಿನ ದೇವಸ್ಥಾನದ ಅರ್ಚಕರು ವಿಗ್ರಹವನ್ನು ಮುಟ್ಟಬಾರದಂತೆ ದಂತಕಥೆಯ ಪ್ರಕಾರ, ಭಗವಂತನನ್ನು ಮುಟ್ಟಿದರೆ 25,000 ಬಾರಿ ಜಪಿಸಬೇಕು. ಈ ದ್ರವವನ್ನು ಸೇವಿಸುವವರಿಗೆ 6 ತಿಂಗಳೊಳಗೆ, ಅಥಾವ 13 ವಾರಗಳಲ್ಲಿ ಖಂಡಿತವಾಗಿಯೂ ಮಗುವಿನ ಫಲ ಸಿಗುತ್ತದೆ ಎನ್ನುತ್ತಾರೆ.
ತಿಲ ತೈಲಾಭಿಷೇಕ
ಇಲ್ಲಿ ಭಗವಂತನಿಗೆ ಮಾಡುವ ಅಭಿಷೇಕವನ್ನು ತಿಲ ತೈಲಾಭಿಷೇಕ ಎಂದು ಕರೆಯಲಾಗುತ್ತದೆ, ಇದನ್ನು ಶನಿವಾರ ಮತ್ತು ಭಾನುವಾರದಂದು ಮಾತ್ರ ಮಾಡಲಾಗುತ್ತದೆ. ಈ ಎರಡು ಪೂಜೆಗಳಿಗೆ ದೇವಸ್ಥಾನದ ಟಿಕೆಟ್ ಅಗತ್ಯವಿದೆ.
ಚಿಂತಾಮಣಿ ಜಲ ಧಾರೆ
ಭಗವಂತನ ಪಾದಗಳಿಂದ ನೀರಿನ ಹೊಳೆ ನಿರಂತರವಾಗಿ ಹರಿಯುತ್ತದೆ.ಇದನ್ನು ಚಿಂತಾಮಣಿ ನೀರಿನ ಬುಗ್ಗೆ ಎಂದು ಕರೆಯಲಾಗುತ್ತದೆ. ಔಷಧೀಯ ಗುಣಗಳಿಂದ ತುಂಬಿರುವ ಈ ತಣ್ಣನೆಯ ಹರಿಯುವ ನೀರನ್ನು ಕುಡಿಯುವವರಿಗೆ ಕಾಯಿಲೆಗಳಿಂದ ಪರಿಹಾರ ಸಿಗುತ್ತದೆ ಎಂಬ ನಂಬಿಕೆ ಇದೆ.
ಇಲ್ಲಿನ ನೀರು ಕಾಶಿಯ ಗಂಗಾ ನದಿಯ ನೀರುಗಿಂತ ಹೆಚ್ಚು ಪವಿತ್ರವಾಗಿದೆ ಎನ್ನು ನಂಬಿಕೆ ಈ ನೀರನ್ನು ನೂರು ದಿನಗಳ ಕಾಲ ನಿಯಮಿತವಾಗಿ ಸೇವಿಸಿದರೆ, ಎಲ್ಲಾ ರೋಗಗಳು ಗುಣವಾಗುತ್ತವೆ ಎಂದು ಹೇಳಲಾಗುತ್ತದೆ. ಇಲ್ಲಿನ ಜಲಪಾತದಲ್ಲಿ ಸ್ನಾನ ಮಾಡುವುದರಿಂದ ಚರ್ಮ ರೋಗಗಳು ಕಡಿಮೆಯಾಗುತ್ತದೆ. ಚಿಂತಾಮಣಿ ಜಲಧಾರೆಯು ಎಲ್ಲಾ ಋತುಗಳಲ್ಲಿ ನಿರಂತರವಾಗಿ ಹರಿಯುತ್ತದೆ. ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಕಾಕತಿಯ ಸಾಮ್ರಾಜ್ಯದ ಮಹಾರಾಣಿ ರುದ್ರಮದೇವಿ ಒಮ್ಮೆ ಚಿಂತಾಮಣಿ ಜಲಧಾರೆಯ ನೀರನ್ನು ಕುಡಿದು ಕಾಯಿಲೆಯಿಂದ ಗುಣಮುಖಳಾದಳು ಎಂದು ಜನ ಹೇಳುತ್ತಾರೆ. ಇಷ್ಟೆ ಅಲ್ಲದೆ ಚಿಂತಾಮಣಿ ಜಲಧಾರೆ ನೀರಿನ್ನು ವಿದೇಶದಲ್ಲಿರುವ ತಮ್ಮ ಸಂಬಂಧಿಕರಿಗೂ ಕಳುಹಿಸುತ್ತಾರಂತೆ.
ಹೇಮಾಚಲ ಕ್ಷೇತ್ರದ ಬುಡದಲ್ಲಿ, ಅರಣ್ಯ ಗಿಡಮೂಲಿಕೆಗಳಿಂದ ತುಂಬಿದ ಜಲಪಾತವು ವರ್ಷವಿಡೀ ಮರದ ತೊಗಟೆಗಳ ನಡುವೆ ಹರಿಯುತ್ತದೆ. ಹೇಮಾಚಲ ಕ್ಷೇತ್ರಕ್ಕೆ ಭೇಟಿ ನೀಡಲು ಭಕ್ತರು ಹೆಚ್ಚು ಬಂದಂತೆ, ಜಲಪಾತವು ವೇಗವಾಗಿ ಹರಿಯುತ್ತದೆ. ಈ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡುವುದರಿಂದ, ನೆಲದ ಮೇಲಿನ ಒತ್ತಡ ಹೆಚ್ಚಾಗುತ್ತದೆ ಇದರಿಂದ ನೆಲದಿಂದ ನೀರು ಉಕ್ಕುತ್ತದೆ ಎಂದು ಜಲ ತಜ್ಞರ ಅಭಿಪ್ರಾಯ.
ಮಲ್ಲೂರು ದೇವಸ್ಥಾನದ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಔಷಧೀಯ ಸಸ್ಯಗಳ ತೋಪುಗಳನ್ನು ಬೆಳೆಸಲಾಗಿದ್ದು ಪ್ರಕೃತಿ ಸೌಂದರ್ಯ ಮತ್ತು ಹಲವು ವಿಶೇಷ ವೈಶಿಷ್ಟ್ಯಗಳಿಂದ ಕೂಡಿದ ಮಲ್ಲೂರು ದೇವಸ್ಥಾನಕ್ಕೆ ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಿ.
ಸಾರಿಗೆ ಸೌಕರ್ಯ
ಈ ದೇವಾಲಯವನ್ನು 2003 ರಲ್ಲಿ ನಡೆದ ಗೋದಾವರಿ ಪುಷ್ಕರದ ಸಮಯದಲ್ಲಿ ನವೀಕರಿಸಲಾಗಿದ್ದು ದೇವಾಲಯಕ್ಕೆ ಹೋಗಲು ಮಂಗಪೇಟ ಗ್ರಾಮದಿಂದ 4 ಕಿ.ಮೀ ದೂರದಲ್ಲಿ ಎಟುರ್ನಗರಂ-ಭದ್ರಾಚಲಂ ಹೆದ್ದಾರಿಯಲ್ಲಿದೆ. ಪ್ರತಿ ವರ್ಷ ಏಪ್ರಿಲ್-ಮೇ ತಿಂಗಳುಗಳಲ್ಲಿ ಇಲ್ಲಿ ವಾರ್ಷಿಕ ಉತ್ಸವಗಳು ನಡೆಯುತ್ತವೆ. ಅಕ್ಟೋಬರ್-ಜೂನ್ ಅವಧಿಯಲ್ಲಿ ಈ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ. ಭದ್ರಾಚಲಂ ನಿಂದ ಹನುಮಕೊಂಡಕ್ಕೆ (ಎಟುರ್ನಗರಂ, ಮನುಗೂರು ಮೂಲಕ) ಆರ್ಟಿಸಿ ಬಸ್ಗಳಿವೆ, ಅವುಗಳ ಮೂಲಕ ಭಕ್ತರು ಮಂಗಪೇಟೆ ತಲುಪಬಹುದು ಮತ್ತು ಅಲ್ಲಿಂದ ದೇವಾಲಯವನ್ನು ತಲುಪಲು ಆಟೋಗಳಿವೆ. ಮಲ್ಲೂರಿಗೆ ಕೆಲವು ನೇರ ಬಸ್ಸುಗಳಿವೆ.ತೆಲಂಗಾಣದ ಮೆಡಾರ ಜಾತ್ರೆ ನಡೆಯುವ ಪ್ರದೇಶ ಸಹ ಇದಕ್ಕೆ ಹತ್ತಿರವಿದೆ.