ಶ್ರೀನಿವಾಸಪುರ:ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿದ್ದ ಸವಾರರು ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಕಮತಂಪಲ್ಲಿ ಕ್ರಾಸ್ ನಲ್ಲಿ ನಡೆದಿರುತ್ತದೆ.
ತಾಲೂಕಿನ ಕಡಪ- ಬೆಂಗಳೂರು ಹೆದ್ದಾರಿಯಲ್ಲಿ ತಾಡಿಗೋಳ್ ನಂತರದ ಕಮತಂಪಲ್ಲಿ ಕ್ರಾಸ್ ನಲ್ಲಿ ನಡೆದಿರುವ ಅಪಘಾತ ನಡೆದಿದ್ದು ಮೃತ ದುರ್ದೈವಿಗಳನ್ನು ತಾ.ಬೈರಗಾನಪಲ್ಲಿ ಗ್ರಾಮದ ಗೋಪಾಲಪ್ಪ(58) ಹಾಗು ಚಿಂತಾಮಣಿ ತಾ.ಕೊನಪ್ಪಲ್ಲಿ ನಿವಾಸಿ ವೆಂಕಟೇಶ್ (45) ಎಂದು ಗುರುತಿಸಲಾಗಿದೆ.ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿರುತ್ತದೆ.
ಬೆಂಗಳೂರು ನೊಂದಣಿ ಹೊಂದಿರುವ ಮಾರುತಿ ಎಸ್ ಕ್ರಾಸ್ ಹೈಬ್ರಿಡ್ ನಿಲಿ ಬಣ್ಣದ ಕಾರು ಚಿಂತಾಮಣಿ ಕಡೆಗೆ ವೇಗವಾಗಿ ಹೋಗುತಿದ್ದು ಚಾಲಕನ ನಿಯಂತ್ರಣ ತಪ್ಪಿ ಚಿಂತಾಮಣಿಯಲ್ಲಿ ಸಂತೆ ಮುಗಿಸಿ ಬೈರಗಾನಪಲ್ಲಿಗೆ ಹೋರಟಿದ್ದ ಇಬ್ಬರಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿಯಾಗಿ ಅಪಘಾತ ನಡೆದಿದೆ ಎನ್ನುಲಾಗಿದ್ದು, ಡಿಕ್ಕಿಯಾದ ರಭಸಕ್ಕೆ ಕಾರು ಮತ್ತು ಸವಾರರ ಸಮೇತ ದ್ವಿಚಕ್ರ ವಾಹನ ಸುಮಾರು 15 ಅಡಿಗಳ ಆಳದ ಕಂದಕಕ್ಕೆ ಬಿದ್ದಿದ್ದು ಹಳ್ಳದಲ್ಲಿದ್ದ ಕಲ್ಲು ಬಂಡೆಗಳಿಗೆ ಬಡಿದು ದ್ವಿಚಕ್ರ ಸವಾರರು ಸ್ಥಳದ್ಲ್ಲೆ ಮೃತಪಟ್ಟಿರುತ್ತಾರೆ.
ರಸ್ತೆ ಮಾರ್ಗ ಸೂಚಿ ಇಲ್ಲದ್ದೆ ಅಪಘಾತಕ್ಕೆ ಕಾರಣ!
ಚಿಂತಾಮಣಿಯ ಮಾಡಿಕೆರೆ ಕ್ರಾಸ್ ನಿಂದ ಆಂಧ್ರದ ಗಡಿಯಂಚಿನ ವರಿಗೂ ಕರ್ನಾಟಕ ಸರ್ಕಾರದ ಕೆ ಶಿಪ್ ರಸ್ತೆ ನಿರ್ಮಾಣವಾಗುತ್ತಿದೆ ರಸ್ತೆ ನಿರ್ಮಾಣದ ಗುತ್ತಿಗೆದಾರ ಸಂಸ್ಥೆ ಅಪಘಾತ ಆಗಿರುವ ಜಾಗದಲ್ಲಿ ತಿರುವು ಇರುವ ಬಗ್ಗೆ ಹಾಗು ಕಂದಕ ಇರುವ ಬಗ್ಗೆ ಮಾರ್ಗ ಸೂಚಿ ಅಳವಡಿಸದೆ ಇರುವುದರಿಂದ ಅಪಘಾತ ನಡೆದಿದೆ ಎನ್ನುತ್ತಾರೆ ಸ್ಥಳಿಯರು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Monday, April 28