ಶ್ರೀನಿವಾಸಪುರ:ದೇವರ ಪೂಜೆ ಹವನ ಹೋಮ ನಮ್ಮ ಹಿರಿಕರು ಹಾಕಿಕೊಟ್ಟ ಸಂಸ್ಕೃತಿ ಎಂದು ಶ್ರೀ ಅನ್ನುಪೂರ್ಣೆಶ್ವರಿ ಮಹಿಳಾ ಮಂಡಳಿ ಪ್ರತಿನಿಧಿಗಳು ಹೇಳುತ್ತಾರೆ ಅವರು ನವರಾತ್ರಿ ಅಂಗವಾಗಿ ತಮ್ಮ ಮಂಡಳಿಯಲ್ಲಿ ದಸರ ಬೊಂಬೆ ಕೂರಿಸಿ ದುರ್ಗಾದೇವಿಯನ್ನು ಪ್ರತಿಷ್ಠಾಪಿಸಿ ಒಂಬತ್ತು ದಿನಗಳ ಕಾಲ ಸಂಪ್ರದಾಯದಂತೆ ನವದುರ್ಗೆ ವೈಭವ ಎನ್ನುವ ರಿತಿಯಲ್ಲಿ ಪ್ರತಿದಿನ ವೈಶಿಷ್ಠವಾಗಿ ವಿವಿಧ ರೂಪದಲ್ಲಿ ಅಲಂಕರಿಸಿ ಪೂಜೆ ಸಲ್ಲಿಸುತ್ತಾರೆ ಅದರಂತೆ ಬಾಲತ್ರಿಪುರ ಸುಂದರಿ ದೇವಿ ರೂಪದಲ್ಲೂ ಪೂಜೆ ಸಲ್ಲಿಸುವುದು ಪದ್ದತಿ ಎಂದು ಮಹಿಳಾ ಮಂಡಳಿ ಪ್ರತಿನಿಧಿ ವಿನಿತಾಶ್ರೀನಿವಾಸನ್ ಹೇಳುತ್ತಾರೆ.
ದುರ್ಗಾದೇವಿಯನ್ನು ತ್ರಿಪುರಸುಂದರಿ, ಬಾಲಾತ್ರಿಪುರ ಸುಂದರಿ, ಮತ್ತು ತ್ರಿಪುರ ಭೈರವಿ ಎಂಬ ಮೂರು ರೂಪಗಳಲ್ಲಿ ಪೂಜಿಸಲಾಗುತ್ತದೆ ತ್ರಿಪುರ ಬಾಲಾ ಸುಂದರಿ ಯುವ ಕನ್ಯೆಯ ದೇವತೆಯ ಪ್ರತಿನಿಧಿಯಾಗಿ ಸಣ್ಣ ವೈಯಸ್ಸಿನ ಹೆಣ್ಮಕ್ಕಳನ್ನು ಕೂರಿಸಿ ಅಲಂಕಾರ ಮಾಡಿ ಬಾಲ ತ್ರಿಪುರ ಸುಂದರಿ ಪ್ರತೀಕ ಎಂದು ಪೂಜೆ ಸಲ್ಲಿಸುವುದು ಹಿರಿಯರು ಹಾಕಿಕೊಟ್ಟಂತ ಆದ್ಯಾತ್ಮಿಕ ಸಂಪ್ರದಾಯ ಎಂದು ವಿವರಿಸುತ್ತಾರೆ.ಅದರಂತೆ ವೈಶಿಷ್ಠತೆಯಿಂದ ಅಲಂಕಾರ ಮಾಡಿದ ಹೆಣ್ಮಗುವನ್ನು ಕೂರಿಸಿ ಆಕೆಯನ್ನು ದೇವರೆಂದು ಪೂಜಿಸಲಾಗುತ್ತದೆ ಹಿರಿಯರಾದಿಯಾಗಿ ಆಕೆಗೆ ಪೂಜೆ ಸಲ್ಲಿಸಿ ಆಶಿರ್ವಾದ ಪಡೆಯುವುದು ವಾಡಿಕೆ.ಪೂಜಾ ಕಾರ್ಯಕ್ರಮದಲ್ಲಿ ಮಹಿಳಾ ಮಂಡಳಿ ಸದಸ್ಯರಾದ ವನಜಾಕ್ಷ್ಮಮ್ಮ,ಮಾಲಿನಿಸುರೇಶ್,ಸಹನಾಶಿವಕುಮಾರ್,ಧನಲಕ್ಷ್ಮಿ ಮುಂತಾದವರು ಇದ್ದರು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27