ಶ್ರೀನಿವಾಸಪುರ:ಕಲ್ಲೂರಿನ ಗ್ರಾಮದೇವತೆ ಚೌಡೇಶ್ವರಿದೇವಿ ದರ್ಶನ ಪಡೆದು ಪುನೀತನಾದೆ ಅಮ್ಮನ ದರ್ಶನದಿಂದ ನೆಮ್ಮದಿ ಸಿಕ್ಕಿದಂತಾಗಿದೆ ಇದು ನನ್ನ ಪುಣ್ಯ ಎಂದು ತೋಟಗಾರಿಕೆ ಹಾಗು ಕೋಲಾರ ಜಿಲ್ಲೆ ಉಸ್ತವಾರಿ ಸಚಿವ ಮುನಿರತ್ನ ಹೇಳಿದರು ಅವರು ತಾಲೂಕಿನ ಕಸಬಾ ಹೋಬಳಿ ಕಲ್ಲೂರು ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾತನಾಡಿ ನವೀಕರಣವಾಗುತ್ತಿರುವ ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಬೇಕಾದ ರಸ್ತೆ, ಹೈಮಾಸ್ಕ್ ಲೈಟ್ ಸೇರಿದಂತೆ ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದರು.
ಬೆಂಗಳೂರಿನಲ್ಲಿ ಖ್ಯಾತರಾಗಿರುವ ಎಂಡೋಕ್ರೈನಾಲಜಿ ತಜ್ಞ ವೈದ್ಯ ಕಲ್ಲೂರು ಮೂಲದ ಡಾ.ಸೋಮಶೇಖರರೆಡ್ಡಿ ನಮ್ಮ ಕುಟುಂಬಕ್ಕೆ ಆಪ್ತರು ಅವರು ನೀಡಿದ ಆಹ್ವಾನದ ಮೇರೆಗೆ ಇಂದು ಗ್ರಾಮಕ್ಕೆ ಬೇಟಿ ನೀಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಸಚಿವರನ್ನು ಗೌರವಿಸಿದರು. ತಹಸೀಲ್ದಾರ್ ಶರೀನ್ತಾಜ್,ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್, ಸಚಿವರ ಆಪ್ತ ಡಾ.ಸೋಮಶೇಖರರೆಡ್ಡಿ,ತಾಲೂಕು ಬಿಜೆಪಿ ಅಧ್ಯಕ್ಷ ಅಶೋಕ್ರೆಡ್ಡಿ, ಮುಖಂಡರಾದ ಲಕ್ಷ್ಮಣಗೌಡ,ರಾಮಾಂಜಿ,ರೋಣೂರುಚಂದ್ರು, ಎ.ವೆಂಕಟರೆಡ್ಡಿ, ಕೆ.ಕೆ.ಮಂಜು, ನಿವೃತ್ತ ಉಪನ್ಯಾಸಕ ವಿಚೌಡರೆಡ್ಡಿ ಚಂದ್ರಶೇಖರ್, ಸೀತಾರಾಮರೆಡ್ಡಿ,ಫಾರೆಸ್ಟರ್ಅಶ್ವತ್ಥರೆಡ್ಡಿ ನಾರಾಯಣಸ್ವಾಮಿ, ರತ್ನಪ್ಪ, ರಾಮಕೃಷ್ಣಾರೆಡ್ಡಿ ಮುಂತಾದವರು ಇದ್ದರು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27