ಮುಲಕಲೆಚೆರುವು:- ಅದೊಂದು ಸಣ್ಣ ಹಳ್ಳಿ. ಮುಂಜಾನೆ ಹೊತ್ತಿ ಉರಿಯುತ್ತಿರುವ ಬೆಂಕಿ ಜ್ವಾಲೆಯೊಂದಿಗೆ ಯುವತಿಯೊಬ್ಬಳು ನರಳುತ್ತ ಮನೆಯೊಂದರಿಂದ ಹೋರ ಬರುತ್ತಾಳೆ ಅದೇ ಮನೆಯಲ್ಲಿ ಮೂರು ನಾಯಿಗಳು, ಬೆಕ್ಕು ಮತ್ತು 30 ಕೋಳಿಗಳು ವಿಷಪ್ರಾಷನದಿಂದ ಸಾವನ್ನಪ್ಪಿವೆ. ಈ ಮನ ಕಲಕುವ ಘಟನೆ ನಡೆದಿರುವುದು ಚಿಂತಾಮಣಿ ಮತ್ತು ಶ್ರೀನಿವಾಸಪುರ ತಾಲೂಕಿನ ಗಡಿಯಾಚಗಿನ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮುಲಕಲೆಚೇರುವು ಮಂಡಲದ ಸೋಮಪಲ್ಲೆ ಪಂಚಾಯಿತಿ ವ್ಯಾಪ್ತಿಯ ಗುಟ್ಟುಕಿಂದಪಲ್ಲೆ ಗ್ರಾಮದಲ್ಲಿ,ಎಲ್ಲವೂ ಸರಿಯಾಗಿದ್ದರೆ ಈ ತಿಂಗಳ 25 ರಂದು ಮದುವೆಯಾಗಿ ಮತ್ತೊಬ್ಬರ ಜೀವನದಲ್ಲಿ ಪ್ರವೇಶಿಸಬೇಕಾದ ಮಧುಮಗಳು ಸುಮತಿ ಜೀವ ತೆತ್ತಿದ್ದಾಳೆ. ಸುಮತಿ ಬೆರೋಬ್ಬನನ್ನು ಮದುವೆಯಾಗುತ್ತಿದ್ದಾನೆ ಎಂದು ಸುಮತಿ ಸ್ವಂತ ಅಕ್ಕನ ಗಂಡ ಭಾವ ವೆಂಕಟೇಶ್ ಅಸೂಯೆಯಿಂದ ಕೃತ್ಯ ಎಸಗಿದ್ದು ಆಕೆ ಮಲಗಿದ್ದಾಗ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುತ್ತಾನೆ ಮನೆಯಲ್ಲಿ ಜಾನುವಾರಗಳಿಗೆ ವಿಷವಿಕ್ಕಿದ್ದಾನೆ ಇದರಿಂದ ಮದುವೆ ಸಂಭ್ರಮದಲ್ಲಿರಬೇಕಾದ ಸುಮತಿ ಕುಟುಂಬ ದುರಂತದಲ್ಲಿ ಮುಳುಗಿದೆ. ಈ ಘಟನೆಯಿಂದ ಒಮ್ಮೆಲೆ ಗ್ರಾಮಸ್ಥರು ಭಯಭೀತರಾಗಿದ್ದು. ಸ್ಥಳೀಯರು ಪೂರ್ಣ ತನಿಖೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ಒತ್ತಾಯಿಸಿರುತ್ತಾರೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27