ಶ್ರೀನಿವಾಸಪುರ: ಪ್ರತಿ ವರ್ಷದಂತೆ ಈ ವರ್ಷವೂ ಶ್ರೀನಿವಾಸಪುರ ಪಟ್ಟಣದಲ್ಲಿ ಯುಗಾದಿ ಹಬ್ಬದಂದು ಶ್ರೀನಿವಾಸಪುರದ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ಹಾಗು ಸಪ್ತಮಾತೃಕೆಯರ ಪಲ್ಲಕಿ ಉತ್ಸವಳ ಜಾತ್ರಾ ಮಹೋತ್ಸವದಂದು ರಾತ್ರಿ ಕರಗ ನಡೆಸುವುದು ಇಲ್ಲಿ ಸಂಪ್ರದಾಯವಾಗಿದ್ದು ಈ ಬಾರಿ ಕರಗವನ್ನು ಅದ್ಧೂರಿಯಾಗಿ ಆಚರಿಸಲು ಎಲ್ಲಾ ರೀತಿಯ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ.
ವಿಜೃಂಭಣೆಯಿಂದ ನಡೆದ ಹಸಿ ಕರಗ
ಯುಗಾದಿಯಂದು ನಡೆಯುವ ಹಸಿಕರಗದ ಉತ್ಸವ ಯುಗಾದಿ ಮುನ್ನಾ ದಿನ ರಾತ್ರಿ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ದೇಗುಲದಲ್ಲಿ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಪೂಜೆ ನೆರವೇರಿಸಿ ಆರಂಭವಾಯಿತು ಮಲ್ಲಿಗೆ ಹೂವಿನಿಂದ ಶೃಂಗಾರ ಮಾಡಿದ ಕಳಶದ ಆಕೃತಿಯ ಹಸಿಕರಗಕ್ಕೆ ಕರಗದ ಪೂಜಾರಿಗಳು ಸಂಪ್ರದಾಯದಂತೆ ಪೂಜೆ ಸಲ್ಲಿಸಿದರು ಕರಗ ಹೊರಲಿರುವ ಕರಗದ ಪೂಜಾರಿ ಹೋಳೂರಿನ ವೆಂಕಟೇಶಪ್ಪ ಹಾಗು ಸಂಗಡಿಗರು ಹಸಿ ಕರಗ ಮಡಿಲಲ್ಲಿ ಇರಿಸಿಕೊಂಡು ಮೆರವಣಿಗೆಯಲ್ಲಿ ಸಾಗಿ ಬಂದರು. ಶ್ರೀ ಚೌಡೇಶ್ವರಿ ದೇವಾಲಯದಿಂದ ಆರಂಭವಾದ ಹಸಿ ಕರಗ ಕಟ್ಟೆಕೆಳಗಿನ ಪಾಳ್ಯ ಅಲ್ಲಿನ ಶ್ರೀನಿವಾಸನ ದೇವಸ್ಥಾನ,ವಲ್ಲಭಾಯ್ ರಸ್ತೆ ಶಂಕರಮಠ ವೃತ್ತ ಹಳೇಪೇಟೆ ಮುಳಬಾಗಿಲು ವೃತ್ತ ಎಂ.ಜಿ.ರಸ್ತೆ ಸಾಗಿ ಕನ್ಯಾಕಪರಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಕರಗಧಾರಿಗಳು ತಮಟೆ ಸದ್ದಿಗೆ ಹೆಜ್ಜೆ ಇಡುತ್ತ ಸಂಚರಿಸಿದರು.ಕರಗದ ಮುಂದೆ ಸಾಗಿದ ಕಿಲುಕುದರೆ ,ಆಂಧ್ರಪ್ರದೇಶದ ಬುಟ್ಟ ಬೊಮ್ಮಲು ಗಾರಡಿಗೊಂಬೆಗಳು, ದೇವರ ಮುಖವಾಡಗಳು ಹಾಗಿದ್ದ ಬೊಂಬೆಗಳ ನೃತ್ಯ ಸಂಭ್ರಮ ಜನಾಕರ್ಷಣೆಯಾಗಿತ್ತು.
ಶೃಂಗರಿಸಿದ್ದ ರಸ್ತೆಗಳು
ಹಸಿಕರಗ ಸಾಗಿ ಬಂದ ದಾರಿ ಉದ್ದಕ್ಕೂ ರಂಗೋಲಿ ಹಾಕಿ ವಿದ್ಯತ್ ದೀಪಾಲಂಕಾರ ಮಾಡಿ ತಳಿರು ತೋರಣಗಳಿಂದ ಶೃಂಗರಿಸಿ ಸಾರ್ವಜನಿಕರು ಹಸಿ ಕರಗವನ್ನು ಸ್ವಾಗತಿಸುವ ಮೂಲಕ ಹಸಿ ಕರಗ ಉತ್ಸವ ವಿಜೃಂಭಣೆಯಿಂದ ಜರುಗಿತು.
Trending
- ಕರ್ನಾಟಕ ಮಾವು ಆಂಧ್ರ ನಿಷೇದಿಸಿರುವುದು ಒಕ್ಕೂಟ ವ್ಯವಸ್ಥೆಗೆ ಪೆಟ್ಟು ಸಿದ್ದರಾಮಯ್ಯ!
- ಶ್ರೀನಿವಾಸಪುರ:ಮಾವು ದರ ಕುಸಿತ,ಆಂಧ್ರದವರು ಬೇಡ ಅಂದ್ರಾ ಕರ್ನಾಟಕ ಮಾವನ್ನು!
- SRINIVASPUR ಮಾರುಕಟ್ಟೆಯಲ್ಲಿ ಮೋಸ ರೈತರಿಂದ ಲೋಕಾಯುಕ್ತರಿಗೆ ದೂರು
- ಮುಳಬಾಗಿಲು:ದಾಳಿಕೊರರ ಅತಿಕ್ರಮಣ ಕೃಷಿ ಸಂಸ್ಕೃತಿ ಮೇಲೂ ಪರಿಣಾಮ!
- ಶ್ರೀನಿವಾಸಪುರ ಅಭಿವೃದ್ಧಿಗೆ ಕೈಗಾರಿಕೆಗಳು ಸಹಕಾರಿ ವೆಂಕಟಶಿವಾರೆಡ್ಡಿ
- ಶ್ರೀನಿವಾಸಪುರ:ಮಾವು ಬೆಂಬಲ ಬೆಲೆಗೆ ಅಗ್ರಹಿಸಿ ರೈತರಿಂದ ರಸ್ತೆ ತಡೆ! ಬಂದ್ ಎಚ್ಚರಿಕೆ
- ಟೀನೇಜ್ ಗೆಳೆಯ ಗೆಳತಿಯರ “ನ ಲಜ್ಜಾಃ ನ ಭಯಂ” ಬಸ್ಸಿನಲ್ಲೆ ಅತಿರೇಕ!
- ಚಿಂತಾಮಣಿಗೂ ವಕ್ಕರಿಸಿದ ಕೊರೋನಾ! ಆತಂಕ ಬೇಡ
Saturday, June 14