ನ್ಯೂಜ್ ಡೆಸ್ಕ್:ಬಸ್ ಕಂಡಕ್ಟರ್ ವಿರುದ್ಧ ಸೇಡು ತೀರಿಸಿಕೊಳ್ಳಲು ವ್ಯಕ್ತಿಯೊಬ್ಬ ಕಂಡಕ್ಟರ್ ಕೆಲಸ ಮಾಡುವ ಬಸ್ ಅನ್ನು ಅಪಹರಿಸಿಕೊಂಡು ಹೋಗಿ ಕಾಂಕ್ರೀಟ್ ಮಿಕ್ಸರ್ ಲಾರಿಗೆ ಡಿಕ್ಕಿ ಹೋಡೆದಿರುವ ಘಟನೆ ಚೆನ್ನೈ ನಗರದ ಹೋರವಲಯದಲ್ಲಿ ನಡೆದಿರುತ್ತದೆ.
ಬಸ್ ತಗೆದುಕೊಂಡು ಹೋದ ವ್ಯಕ್ತಿಯನ್ನು ಚನೈನ ಗುಡುವಾಂಚೇರಿಯ ಬೆಸೆಂಟ್ ನಗರದ ನಿವಾಸಿ ಅಬ್ರಹಾಂ ಎಂದು ಗುರುತಿಸಲಾಗಿದ್ದು ಇತ ಕಾರಿನ ಇಂಟೀರಿಯರ್ ಡೆಕೊರೇಟರ್ ಆಗಿ ಕೆಲಸ ಮಾಡುತ್ತಿದ್ದಾನೆ.
ಬಸ್ ತಗೆದುಕೊಂಡು ಹೋದ ಆರೋಪಿ ಅಬ್ರಹಾಂಗೂ ಬಸ್ ಕಂಡೆಕ್ಟರ್ ನಡುವೆ ಹಳೆ ವಿವಾದ ಇದ್ದು ಇದಕ್ಕಾಗಿ ಕೆಲವು ದಿನಗಳ ಹಿಂದೆ ತನ್ನೊಂದಿಗೆ ಕಂಡೆಕ್ಟರ್ ಅಸಭ್ಯವಾಗಿ ವರ್ತಿಸಿದ ಎನ್ನುವ ಆರೋಪಿ ಅಬ್ರಹಾಂ ಹೇಳಿದ್ದು ಇದಕ್ಕಾಗಿ ಕಂಡೆಕ್ಟರ್ ಕೆಲಸ ಮಾಡುವ (Chennai Metropolitan Transport Corporation -MTC) ಬಸ್ ಅನ್ನು ಕುಡಿದ ಮತ್ತಿನಲ್ಲಿ ತಿರುವನ್ಮಿಯೂರ್ ಬಸ್ ಟರ್ಮಿಲ್ ರಾತ್ರಿ 2 ಗಂಟೆ ಸಮಯದಲ್ಲಿ ಬ್ರಾಡ್ವೇ ಪ್ರದೇಶದ ಮೂಲಕ ಅಪಹರಿಸಿಕೊಂಡು ಹೋಗುವಾಗ ಅಕ್ಕರೈ ಪ್ರದೇಶದ ಬಳಿ ಲಾರಿಗೆ ಡಿಕ್ಕಿ ಹೊಡೆದಿದ್ದು ಇದರಿಂದಾಗಿ ಎರಡೂ ವಾಹನಗಳಿಗೆ ಹಾನಿ ಉಂಟಾಗಿದೆ.ಅಪಹರಣಕಾರ ಮದ್ಯದ ಅಮಲಿನಲ್ಲಿ ಇದ್ದ ಎನ್ನಲಾಗಿದ್ದು ಸ್ಥಳೀಯ ಪೋಲಿಸರು ಅಬ್ರಾಹಂನನ್ನು ಬಂದಿಸಿದ್ದಾರೆ.
Trending
- ಶ್ರೀನಿವಾಸಪುರ:ಸೂರ್ಯನ ಪ್ರತಾಪಕ್ಕೆ ತತ್ತರಿಸುತ್ತಿರುವ ಜನ!
- ಆಂಧ್ರದ ಅಮರಾವತಿ ದೇಶದ ಮೊದಲ ‘Quantum Valley’!
- ಭಾರತೀಯ ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ! ಪ್ರತಿಭಟನೆ ವ್ಯಕ್ತಪಡಿಸಿದ ಭಾರತ.
- ಪ್ರೊಫೆಷನಲ್ ಕೊರಿಯರ್ಸ್ ವತಿಯಿಂದ “ಪ್ರೊ ಇಎಕ್ಸ್ ಅಲ್ಟ್ರಾ”ಸೇವೆ ಆರಂಭ!
- ಶ್ರೀನಿವಾಸಪುರ:ನಿವೃತ್ತ ಸೈನಿಕನನ್ನು ಸನ್ಮಾನಿಸಿದ ಸಚಿವ ಮುನಿಯಪ್ಪ
- ಆಂಧ್ರದ ರಾಜಧಾನಿ “ಅಮರಾವತಿ” ಕೇಂದ್ರ ಸರ್ಕಾರ ಗೆಜೆಟ್ ಘೋಷಣೆ.
- ಶ್ರೀನಿವಾಸಪುರ:ಜಗಜೀವನರಾಮ್ ಜಯಂತಿ ಮೆರವಣಿಗೆ ಶಾಸಕ ವೆಂಕಟಶಿವಾರೆಡ್ಡಿ ಭಾಗಿ.
- ಶ್ರೀನಿವಾಸಪುರ:ಮಹಿಳಾ ಉದ್ಯಮಿ ರತ್ನಮ್ಮಗೆ ರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ!
Thursday, April 23



