ನ್ಯೂಜ್ ಡೆಸ್ಕ್:ಪಾರಿವಾಳಗಳನ್ನು ಸಾಕುವುದನ್ನು ಕೆಲವರು ಹವ್ಯಾಸವಾಗಿಸಿಕೊಂಡಿದ್ದಾರೆ ಇನ್ನೂ ಕೆಲವರು ತಮ್ಮ ಮಹಡಿಗಳ ಮೆಲೆ ಪಾರಿವಾಳಗಳಿಗಾಗಿ ಕಾಳು ಹಾಕುತ್ತ ಸಂಭ್ರಮಿಸುತ್ತಾರೆ ಅದನ್ನು ತಿನ್ನಲು ಬರುವಂತ ನೂರಾರು ಸಂಖ್ಯೆಯ ಪಾರಿವಾಳಗಳು ಮಹಡಿಗಳ ಮತ್ತು ವಿದ್ಯುತ್ ತಂತಿಗಳ ಮೇಲೆ ಬಂದು ಕೂರುತ್ತವೆ ಇದೊಂದು ಮಾನವೀಯ ಕಾರ್ಯ ಎಂದು ಕೆಲವರು ಭಾವಿಸುತ್ತಾರೆ ಆದರೆ ಅದೆ ಪಾರಿವಾಳಗಳಿಂದ ತೀವ್ರ ಉಸಿರಾಟದ ಕಾಯಿಲೆಗಳು ಬರುವ ಅಪಾಯವಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಪಾರಿವಾಳದಲ್ಲಿ ವಿಭಿನ್ನ ಜೈವಿಕ ವೈವಿಧ್ಯವಿದ್ದು ವಿಶೇಷವಾಗಿ ಪಾರಿವಾಳದ ಗರಿಗಳ ಮೇಲೆ,ವಿಶೇಷ ಬ್ಯಾಕ್ಟೀರಿಯಾಗಳಿವೆ. ದೇಹದ ಇತರ ಭಾಗಗಳಲ್ಲಿ ವಿವಿಧ ರೀತಿಯ ವೈರಸ್ ಗಳಿವೆ. ಅವೆಲ್ಲವೂ ಸೋಂಕನ್ನು ಉಂಟುಮಾಡುವ ರೋಗಲಕ್ಷಣಗಳನ್ನು ಹೊಂದಿದ್ದು ಪಾರಿವಾಳದ ಸಂಪರ್ಕದಿಂದ ಮಾನವನ ದೇಹದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಗಳಿವೆ ಇದರಿಂದ ತೀವ್ರ ಅಲರ್ಜಿಗೆ ಕಾರಣವಾಗಬಹುದು ಎಂಬುದು ವೈದ್ಯಕೀಯ ಕ್ಷೇತ್ರದ ಮಾತು.
ಪಾರಿವಾಳಗಳಿಂದ ಬರುವಂತ ರೋಗಗಳು.
ಪಾರಿವಾಳಗಳಿಂದ ವಿವಿಧ ರೀತಿಯ ಶ್ವಾಸಕೋಶದ ಕಾಯಿಲೆಗಳಿಗೆ ಕಾರಣವಾಗಬಹುದು. ಎರಡನೆಯದು ನ್ಯುಮೋನಿಯಾ-ಸಿಟ್ಟಾಕೋಸಿಸ್ಗೆ ಕಾರಣವಾಗಬಹುದು, ಇದು ಬ್ಯಾಕ್ಟೀರಿಯಾದ ಸೋಂಕಾಗಿದೆ ಮತ್ತು ಚಿಕಿತ್ಸೆ ನೀಡದಿದ್ದಲ್ಲಿ 15 ಪ್ರತಿಶತದಷ್ಟು ಜನರು ಸಾವಿಗೆ ಕಾರಣವಾಗಬಹುದು. ಹಿಸ್ಟೋಪ್ಲಾಸ್ಮಾಸಿಸ್ ಸಮಸ್ಯೆ ಕೂಡ ಇದರಿಂದ ಉಂಟಾಗುತ್ತದೆ. ಇದು ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿರುವ ಶಿಲೀಂಧ್ರಗಳ ಸೋಂಕಾಗಿದೆ. ಕ್ರಿಪ್ಟೋಕೊಕಲ್ ಸೋಂಕುಗಳು ಇಮ್ಯುನೊಕೊಪ್ರೊಮೈಸ್ಡ್ ಹೋಸ್ಟ್ ಹೊಂದಿರುವ ಕೆಲವು ಜನರಲ್ಲಿ ಪಲ್ಮನರಿ ಅಥವಾ ಮೆನಿಂಜಿಯಲ್ ಸೋಂಕುಗಳಿಗೆ ಕಾರಣವಾಗಬಹುದು.
ದಕ್ಷಿಣ ಭಾರತದ ಖ್ಯಾತ ನಟಿ ಮೀನಾ ಅವರ ಪತಿಯ ಸಾವಿಗೂ ಪಾರಿವಾಳಕ್ಕೂ ಸಂಬಂಧವಿದೆ ಎನ್ನುವ ಮಾತಿದೆ ಪಾರಿವಾಳದ ಹಿಕ್ಕೆಯಿಂದ ಬಂದ ವಾಸನೆಯಿಂದಾಗಿ ಮೀನಾ ಅವರ ಪತಿಯ ಶ್ವಾಸಕೋಶದ ಸೋಂಕು ಉಂಟಾಗಿ ಅದು ಅವರ ಸಾವಿಗೆ ಕಾರಣವಾಗಿತ್ತು ಎಂದೆಲ್ಲಾ ವರದಿಗಳು ಬಂದಿದ್ದವು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Saturday, April 26