ಶ್ರೀನಿವಾಸಪುರ:ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ್ದ ಯುವಕನೊರ್ವ ಮುರೇಡಶ್ವರದ ಬಳಿ ಸಮುದ್ರದ ಪಾಲಾಗಿರುತ್ತಾನೆ.
ಸಮುದ್ರದ ಪಾಲಾಗಿರುವ ಯುವಕನನ್ನು ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೋಳ್ ನಿವಾಸಿ ಕೃಷಿ ಕಾರ್ಮಿಕ ಶೇಖ್ ಅಹ್ಮದ್ ಪಾಷ ಅವರ ಮಗ ಶೇಖ್ ಅರ್ಬಾರ್ ಪಾಷ(26) ಎಂದು ಹೇಳಲಾಗಿದೆ.ಪ್ಯಾರ ಮೆಡಿಕಲ್ ಒದನ್ನು ಇತ್ತಿಚಿಗಷ್ಟೆ ಪುರ್ಣಮಾಡಿಕೊಂಡಿದ್ದು ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದನಂತೆ.
ಬುಧವಾರದಂದು ತಾಡಿಗೋಳ್ ಗ್ರಾಮದ ಅರ್ಬಾರ್ ಸೇರಿದಂತೆ ಸುಮಾರು 12 ಮಂದಿ ಯುವಕರ ತಂಡ ಉತ್ತರ ಕಾರ್ನಾಟಕ ಉಡುಪಿ ಸೇರಿದಂತೆ ಇತರಡೆಗೆ ಟಿಟಿ ವಾಹನದಲ್ಲಿ ಪ್ರವಾಸ ಹೊರಟಿದ್ದು ಗುರುವಾರ ಸಂಜೆ ಮುರುಡೇಶ್ವರದ ಬಳಿ ಸಮುದ್ರಕ್ಕೆ ಇಳಿದಿದ್ದಾರೆ ಇಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ ಈ ಮಾಹಿತಿ ಪ್ರವಾಸಿ ಯುವಕರಿಗೆ ಮಾಹಿತಿ ಇಲ್ಲದ ಕಾರಣ ಸಮುದ್ರದಲ್ಲಿ ಈಜಾಡಿದ್ದಾರೆ ಅಲೆಗಳು ದೊಡ್ದಮಟ್ಟದಲ್ಲಿ ಬಂದಾಗ ಎಚ್ಚೆತ್ತುಕೊಂಡ ಯುವಕರ ದಡ ಸೇರಿದ್ದಾರೆ ಈ ಸಂದರ್ಭದಲ್ಲಿ ಮೂವರು ಯುವಕರು ಸಾಹಸ ಪಟ್ಟು ದಡಕ್ಕೆ ಬರುವ ಪ್ರಯತ್ನ ಮಾಡಿರುತ್ತಾರೆ ಆದರೂ ಬರಲು ಸಾಧ್ಯವಾಗದಾಗ ಸ್ಥಳೀಯ ಮೀನುಗಾರ ಸಹಕಾರದಿಂದ ಇಬ್ಬರು ಯುವಕರು ಪ್ರಯಾಸದಿಂದ ದಡಕ್ಕೆ ಬಂದಿದ್ದು ಅರ್ಬಾರ್ ಈಜು ಬಾರದೆ ದಡ ಮುಟ್ಟಲು ಸಾಧ್ಯವಾಗದೆ ಅಲೆಗಳ ಮದ್ಯ ಕಾಣೆಯಾಗಿರುವುದಾಗಿ ಗ್ರಾಮಸ್ಥರು ಹೇಳುತ್ತಾರೆ.
ಮುರುಡೇಶ್ವರಕ್ಕೆ ಹೋಗಿದ್ದ ಮುಖಂಡ ಕೆ.ಕೆ.ಮಂಜು
ತಾಲ್ಲೂಕಿನ ಯುವ ಮುಖಂಡ ಕೆ.ಕೆ.ಮಂಜು ಸಿಗಂದೂರುಚೌಡೇಶ್ವರಿ ದೇವಾಲಯದ ಪ್ರವಾಸಕ್ಕೆ ತೆರಳಿದ್ದು ಈ ಸಂದರ್ಭದಲ್ಲಿ ತಾಲೂಕಿನ ಯುವಕನೊರ್ವ ಮುರಡೇಶ್ವರದಲ್ಲಿ ಸಮುದ್ರಪಾಲು ಆಗಿರುವ ವಿಷಯ ತಿಳಿದವರೆ ನೇರವಾಗಿ ಘಟನಾ ಸ್ಥಳಕ್ಕೆ ಹೋಗಿ ಅತಂಕದಲ್ಲಿದ್ದ ಯುವಕರನ್ನು ಸಂತೈಸಿ ಅವರಿಗೆ ಸ್ಪಂದಿಸಿರುತ್ತಾರೆ.ಭಟ್ಕಳ ತಾಲೂಕಿಗೆ ಬರುವ ಘಟನ ಸ್ಥಳ ಸಂಬಂದಿಸಿದ ಪೋಲಿಸರು ಹೇಳುವಂತೆ ಅಲೆಗಳ ಮದ್ಯೆ ಕಾಣೆಯಾಗಿರುವ ಯುವಕ ಬದುಕುವುದು ಅಸಾದ್ಯ ಎಂದು ಶಂಕಿಸಿರುತ್ತಾರೆ. ಅರ್ಬಾರ್ ಪಾಷ ಗ್ರಾಮದಲ್ಲಿ ಎಲ್ಲರೊಂದಿಗೂ ಸ್ನೇಹಮಯಿಯಾಗಿ ಬೆರೆಯುತ್ತಿದ್ದ ಸದಾ ಚಟುವಟಿಕೆಯಿಂದ ಕೂಡಿದ್ದ ವ್ಯಕ್ತಿಯಾಗಿದ್ದ ಎಂದು ಗ್ರಾಮದ ಪಂಚಾಯಿತಿ ಸದಸ್ಯ ಮಕ್ಬೂಲ್ ಬರಿದ್ ಮತ್ತು ವಿಜಯ್ ಹೇಳುತ್ತಾರೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Monday, April 28