ಶ್ರೀನಿವಾಸಪುರ:ಕಾಂಗ್ರೆಸ್ ನವರಿಗೆ ಸರ್ಕಾರಿ ಶಿಷ್ಟಚಾರದ ಸಬ್ಯತೆ ಗೊತ್ತಿಲ್ಲದ ಅವರದು ಗೂಂಡಾ ಸಂಸೃತಿ ಎಂದು ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಆಶೋಕರೆಡ್ಡಿ ಕಿಡಿಕಾರಿದರು.
ಅವರು ಇಂದು ಪಟ್ಟಣದ ಇಂದಿರಾಭವನ್ ವೃತ್ತದಲ್ಲಿ ರಾಮನಗರದಲ್ಲಿ ನಡೆದಂತ ಸರ್ಕಾರಿ ಕಾರ್ಯಕ್ರಮದಲ್ಲಿ ರಾಜ್ಯ ಮಂತ್ರಿಯನ್ನು ಅಪಮಾನ ಮಾಡಿ ಅದರಲ್ಲೂ ಮುಖ್ಯಮಂತ್ರಿಗಳು ಭಾಗವಹಿಸಿದ್ದ ಸಭೆಯಲ್ಲಿ ಆಗೌರವದಿಂದ ನಡೆದುಕೊಂಡಿರುವ ಸಂಸದ ಡಿ.ಕೆ.ಸುರೇಶ್ ಗೂಂಡಾ ರಿತಿಯಲ್ಲಿ ವರ್ತಿಸಿದ್ದಾರೆ ಎಂದು ಆರೋಪಿಸಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಜಯರಾಮರೆಡ್ಡಿ,ಕೊಟ್ರಗೂಳಿ ನಾರಯಣಸ್ವಾಮಿ,ಪುರಸಭೆ ಸದಸ್ಯ ವಿನೋದ್,ಷಫಿ,ರಮೇಶ್, ರಾಮಾಂಜಿ, ಜಯಣ್ಣ,ಬೈರೆಡ್ಡಿ,ಅಂಕುಶಂ ನಾರಯಣಸ್ವಾಮಿ ಮುಂತಾದವರು ಇದ್ದರು.
ಶ್ರೀನಿವಾಸಪುರ ಬಿಜೆಪಿಗರ ಎಡವಟ್ಟು
ಪ್ರತಿಭಟನೆ ಸಂದರ್ಭದಲ್ಲಿ ಶ್ರೀನಿವಾಸಪುರದ ಬಿಜೆಪಿಗರು ಪಕ್ಷದ ಮುಖಂಡರು ಕಾರ್ಯಕರ್ತರು ಡಿ.ಕೆ. ಸುರೇಶ್ ಗೆ ದಿಕ್ಕಾರ ಕೂಗುವ ಬದಲು ಡಿ.ಕೆ.ರವಿಗೆ ದಿಕ್ಕಾರ ಕೂಗಿ ಎಡವಟ್ಟು ಮಾಡಿ ಸಾರ್ವಜನಿಕವಾಗಿ ಅಪಹಾಸ್ಯಕ್ಕೆ ಒಳಗಾದರು.
ಶ್ರೀನಿವಾಸಪುರದ ಬಿಜೆಪಿಗರ ವಿರುದ್ದ ನೆಟ್ಟಿಗರ ಟ್ರೋಲ್!
ಸಂಸದ ಡಿ.ಕೆ ಸುರೇಶ್ ಹಾಗು ಕೋಲಾರದಲ್ಲಿ ಕ್ರೀಯಾಶೀಲ ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿ.ಕೆ.ರವಿ ಹೆಸರಿನ ನಡುವಿನ ವ್ಯತ್ಯಾಸ ತಿಳಿಯದ ಶ್ರೀನಿವಾಸಪುರ ಬಿಜೆಪಿಗರು ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಶ್ರೀನಿವಾಸಪುರದ ಬಿಜೆಪಿ ಮುಖಂಡರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ಕಾಂಗ್ರೆಸ್ ಆಕ್ರೋಶ
ಸಂಸದ ಡಿ.ಕೆ.ಸುರೆಶ್ ಹೆಸರು ತಿಳಿಯದೆ ಅವರ ವಿರುದ್ದ ಪ್ರತಿಭಟೆನೆಗೆ ಹೋರಟ ಬಿಜೆಪಿಯದು ಎಂತ ಸಂಸೃತಿ ಎಂದು ತಾಲೂಕು ಕಾಂಗ್ರೆಸ್ ಐಟಿ ಸೆಲ್ ಪ್ರಮುಖ ಹರಿಶ್ ಯಾದವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶ್ರೀನಿವಾಸಪುರ ಬಿಜೆಪಿಗರು ದಿಕ್ಕಾರ ಕೂಗಿರುವುದು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದು ಅಲ್ಲದೆ ಕೋಲಾರವನ್ನು ಮಲೆನಾಡು ಮಾಡಬೇಕು ಎನ್ನುವ ಕನಸು ಭಿತ್ತಿದ್ದ ಹೃದಯವಂತ ಜಿಲ್ಲಾಧಿಕಾರಿ ಡಿ.ಕೆ.ರವಿ ಅವರ ವಿರುದ್ದ ಎಂದು ಶ್ರೀನಿವಾಸಪುರ ಬಿಜೆಪಿ ಮುಖಂಡರ ವಿರುದ್ದ ತೀವ್ರಧಾಟಿಯಲ್ಲಿ ಅಸಮಧಾನ ವ್ಯಕ್ತಪಡಿಸಿದರು.
Trending
- ಕರ್ನಾಟಕ ಮಾವು ಆಂಧ್ರ ನಿಷೇದಿಸಿರುವುದು ಒಕ್ಕೂಟ ವ್ಯವಸ್ಥೆಗೆ ಪೆಟ್ಟು ಸಿದ್ದರಾಮಯ್ಯ!
- ಶ್ರೀನಿವಾಸಪುರ:ಮಾವು ದರ ಕುಸಿತ,ಆಂಧ್ರದವರು ಬೇಡ ಅಂದ್ರಾ ಕರ್ನಾಟಕ ಮಾವನ್ನು!
- SRINIVASPUR ಮಾರುಕಟ್ಟೆಯಲ್ಲಿ ಮೋಸ ರೈತರಿಂದ ಲೋಕಾಯುಕ್ತರಿಗೆ ದೂರು
- ಮುಳಬಾಗಿಲು:ದಾಳಿಕೊರರ ಅತಿಕ್ರಮಣ ಕೃಷಿ ಸಂಸ್ಕೃತಿ ಮೇಲೂ ಪರಿಣಾಮ!
- ಶ್ರೀನಿವಾಸಪುರ ಅಭಿವೃದ್ಧಿಗೆ ಕೈಗಾರಿಕೆಗಳು ಸಹಕಾರಿ ವೆಂಕಟಶಿವಾರೆಡ್ಡಿ
- ಶ್ರೀನಿವಾಸಪುರ:ಮಾವು ಬೆಂಬಲ ಬೆಲೆಗೆ ಅಗ್ರಹಿಸಿ ರೈತರಿಂದ ರಸ್ತೆ ತಡೆ! ಬಂದ್ ಎಚ್ಚರಿಕೆ
- ಟೀನೇಜ್ ಗೆಳೆಯ ಗೆಳತಿಯರ “ನ ಲಜ್ಜಾಃ ನ ಭಯಂ” ಬಸ್ಸಿನಲ್ಲೆ ಅತಿರೇಕ!
- ಚಿಂತಾಮಣಿಗೂ ವಕ್ಕರಿಸಿದ ಕೊರೋನಾ! ಆತಂಕ ಬೇಡ
Tuesday, June 17