ಚಿಂತಾಮಣಿ:-ಚಿಂತಾಮಣಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಭೂಕಂಪನ ಆಗಿದ್ದು ಜನತೆ ಬಯಭೀತರಾಗಿ ಮನೆಯಿಂದ ಹೊರಬಂದ ಘಟನೆ ಇಂದು ಮಂಗಳವಾರ ರಾತ್ರಿ ಸುಮಾರು 8.50 ಗಂಟೆ ಸಮಯದಲ್ಲಿ ನಡೆದಿರುತ್ತದೆ.
ಚಿಂತಾಮಣಿ ತಾಲೂಕಿನ ಕೆಂಚರ್ಲಾಹಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಯ ಮಿಟ್ಟಹಳ್ಳಿ,ಅಪ್ಸಾನಹಳ್ಳಿ, ದೊಡ್ಡಹಳ್ಳಿ,ನಂದನಹಳ್ಳಿ, ಗೋನಿಪಲ್ಲಿ,ಅನಪಲ್ಲಿ,ರಾಸಪಲ್ಲಿ ಹಾಗು ಸುತ್ತುಮುತ್ತಲಿನ ಹಲವಾರು ಗ್ರಾಮಗಳಲ್ಲಿ ಭೂಮಿನಡುಗಿದ ಅನುಭವ ಆಗಿದೆ ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಜನರು ಹೊರಗೆ ಬಂದಿರುತ್ತಾರೆ.ಕೆಲವು ಗ್ರಾಮಗಳಲ್ಲಿ ದೊಡ್ಡ ಸದ್ದಿನ ಕಂಪನ ನಡೆದರೆ ಇನ್ನೂ ಕೆಲವು ಗ್ರಾಮಗಳಲ್ಲಿ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ. ಆದರೆ ಯಾವುದೇ ಪ್ರಾಣ ಹಾನಿ ಆಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಭೂಮಿಯ ಕಂಪನದಿಂದ ಮನೆಯಲ್ಲಿನ ಪಾತ್ರೆಗಳು ಅಲ್ಲಾಡಿ ಕೆಳಗೆ ಬಿದ್ದಿದ್ದು ಜನತೆ ಆತಂಕ ಗೊಂಡಿರುತ್ತಾರೆ. ಮನೆಯಿಂದ ಹೊರ ಬಂದ ಜನತೆ ರಸ್ತೆಗಳಲ್ಲಿ ನಿಂತು ಇದು ನಿಜನಾ ಅಥಾವ ಕನಸ ಎಂದು ಆತಂಕದಿಂದ ಪರಸ್ಪರ ಮುಟ್ಟಿನೊಡಿಕೊಂಡು ಅನಿಭವ ಹೇಳಿಕೊಳ್ಳುತ್ತಿದ್ದಾರೆ.
ಮನೆ ಮಂದಿಯಲ್ಲ ಮನೆಯಿಂದ ಹೊರ ಬಂದಿದ್ದು ಈಗ ಮತ್ತೆ ಮನೆಯ ಒಳಗೆ ಹೋಗಲು ಜನತೆಗೆ ಧೈರ್ಯವೇ ಇಲ್ಲವಂತೆ ಹೀಗೆಂದು ನಡು ರಸ್ತೆಯಲ್ಲೇ ನಿಂತ ಗ್ರಾಮಸ್ಥರು ಬೆಡ್ ಶೀಟ್ ಹೊದ್ದಿಕೊಂಡು ಬಿಳುತ್ತಿರುವ ಮಂಜಿನಲ್ಲೆ ನಡುಗುತ್ತ ಹೇಳುತ್ತಾರೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27