ಚಿಂತಾಮಣಿ:-ಚಿಂತಾಮಣಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಭೂಕಂಪನ ಆಗಿದ್ದು ಜನತೆ ಬಯಭೀತರಾಗಿ ಮನೆಯಿಂದ ಹೊರಬಂದ ಘಟನೆ ಇಂದು ಮಂಗಳವಾರ ರಾತ್ರಿ ಸುಮಾರು 8.50 ಗಂಟೆ ಸಮಯದಲ್ಲಿ ನಡೆದಿರುತ್ತದೆ.
ಚಿಂತಾಮಣಿ ತಾಲೂಕಿನ ಕೆಂಚರ್ಲಾಹಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಯ ಮಿಟ್ಟಹಳ್ಳಿ,ಅಪ್ಸಾನಹಳ್ಳಿ, ದೊಡ್ಡಹಳ್ಳಿ,ನಂದನಹಳ್ಳಿ, ಗೋನಿಪಲ್ಲಿ,ಅನಪಲ್ಲಿ,ರಾಸಪಲ್ಲಿ ಹಾಗು ಸುತ್ತುಮುತ್ತಲಿನ ಹಲವಾರು ಗ್ರಾಮಗಳಲ್ಲಿ ಭೂಮಿನಡುಗಿದ ಅನುಭವ ಆಗಿದೆ ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಜನರು ಹೊರಗೆ ಬಂದಿರುತ್ತಾರೆ.ಕೆಲವು ಗ್ರಾಮಗಳಲ್ಲಿ ದೊಡ್ಡ ಸದ್ದಿನ ಕಂಪನ ನಡೆದರೆ ಇನ್ನೂ ಕೆಲವು ಗ್ರಾಮಗಳಲ್ಲಿ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ. ಆದರೆ ಯಾವುದೇ ಪ್ರಾಣ ಹಾನಿ ಆಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಭೂಮಿಯ ಕಂಪನದಿಂದ ಮನೆಯಲ್ಲಿನ ಪಾತ್ರೆಗಳು ಅಲ್ಲಾಡಿ ಕೆಳಗೆ ಬಿದ್ದಿದ್ದು ಜನತೆ ಆತಂಕ ಗೊಂಡಿರುತ್ತಾರೆ. ಮನೆಯಿಂದ ಹೊರ ಬಂದ ಜನತೆ ರಸ್ತೆಗಳಲ್ಲಿ ನಿಂತು ಇದು ನಿಜನಾ ಅಥಾವ ಕನಸ ಎಂದು ಆತಂಕದಿಂದ ಪರಸ್ಪರ ಮುಟ್ಟಿನೊಡಿಕೊಂಡು ಅನಿಭವ ಹೇಳಿಕೊಳ್ಳುತ್ತಿದ್ದಾರೆ.
ಮನೆ ಮಂದಿಯಲ್ಲ ಮನೆಯಿಂದ ಹೊರ ಬಂದಿದ್ದು ಈಗ ಮತ್ತೆ ಮನೆಯ ಒಳಗೆ ಹೋಗಲು ಜನತೆಗೆ ಧೈರ್ಯವೇ ಇಲ್ಲವಂತೆ ಹೀಗೆಂದು ನಡು ರಸ್ತೆಯಲ್ಲೇ ನಿಂತ ಗ್ರಾಮಸ್ಥರು ಬೆಡ್ ಶೀಟ್ ಹೊದ್ದಿಕೊಂಡು ಬಿಳುತ್ತಿರುವ ಮಂಜಿನಲ್ಲೆ ನಡುಗುತ್ತ ಹೇಳುತ್ತಾರೆ.
Trending
- ಕರ್ನಾಟಕ ಮಾವು ಆಂಧ್ರ ನಿಷೇದಿಸಿರುವುದು ಒಕ್ಕೂಟ ವ್ಯವಸ್ಥೆಗೆ ಪೆಟ್ಟು ಸಿದ್ದರಾಮಯ್ಯ!
- ಶ್ರೀನಿವಾಸಪುರ:ಮಾವು ದರ ಕುಸಿತ,ಆಂಧ್ರದವರು ಬೇಡ ಅಂದ್ರಾ ಕರ್ನಾಟಕ ಮಾವನ್ನು!
- SRINIVASPUR ಮಾರುಕಟ್ಟೆಯಲ್ಲಿ ಮೋಸ ರೈತರಿಂದ ಲೋಕಾಯುಕ್ತರಿಗೆ ದೂರು
- ಮುಳಬಾಗಿಲು:ದಾಳಿಕೊರರ ಅತಿಕ್ರಮಣ ಕೃಷಿ ಸಂಸ್ಕೃತಿ ಮೇಲೂ ಪರಿಣಾಮ!
- ಶ್ರೀನಿವಾಸಪುರ ಅಭಿವೃದ್ಧಿಗೆ ಕೈಗಾರಿಕೆಗಳು ಸಹಕಾರಿ ವೆಂಕಟಶಿವಾರೆಡ್ಡಿ
- ಶ್ರೀನಿವಾಸಪುರ:ಮಾವು ಬೆಂಬಲ ಬೆಲೆಗೆ ಅಗ್ರಹಿಸಿ ರೈತರಿಂದ ರಸ್ತೆ ತಡೆ! ಬಂದ್ ಎಚ್ಚರಿಕೆ
- ಟೀನೇಜ್ ಗೆಳೆಯ ಗೆಳತಿಯರ “ನ ಲಜ್ಜಾಃ ನ ಭಯಂ” ಬಸ್ಸಿನಲ್ಲೆ ಅತಿರೇಕ!
- ಚಿಂತಾಮಣಿಗೂ ವಕ್ಕರಿಸಿದ ಕೊರೋನಾ! ಆತಂಕ ಬೇಡ
Saturday, June 14