ಶ್ರೀನಿವಾಸಪುರ:ಸಣ್ಣ ಸಣ್ಣ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರಗಳು ಕಾಳಜಿ ವಹಿಸಿ ಅಂತಹ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದರೆ ಸಮಾಜದಲ್ಲಿ ಮೂಲಭೂತವಾಗಿ ಕಡೆಗಣಿಸಲ್ಪಟ್ಟಿರುವ ಸಣ್ಣ ಸಣ್ಣ ಸಮುದಾಯಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ ಹೇಳಿದರು.
ಅವರು ಪಟ್ಟಣದ ನಗರೇಶ್ವರ ದೇವಾಯಲದಲ್ಲಿ ಆಯೋದ್ಯ ನಗರದ ಶಿವಚಾರ್ಯ ನಗರ್ತ ವೈಶ್ಯ ಸಂಘದ ಕೇಂದ್ರ ಸಮಿತಿಗೆ ಶ್ರೀನಿವಾಸಪುರ ಕ್ಷೇತ್ರದಿಂದ ನಿರ್ದೇಶಕರಾಗಿ ಆಯ್ಕೆಯಾಗಿರುವ ಬಿ.ಶಿವಕುಮಾರ್ ಅವರನ್ನು ಸನ್ಮಾನಿಸಿ ಮಾತನಾಡಿದರು.
ಸಣ್ಣ ಪುಟ್ಟ ಸಮುದಾಯಗಳ ವೃತ್ತಿಯಾಗಿದ್ದ ಸಣ್ಣ ವ್ಯಾಪಾರ, ವೃತ್ತಿ ಕೌಶಲ್ಯದ ಬದುಕಿಗೆ ಕಾಲದ ಅಣತಿಯ ಜಾಗತಿಕರಣ ಮತ್ತು ಉದಾರಿಕರಣದ ಹೊಡೆತ ಬಿದ್ದಿದೆ ಆ ಸಮುದಾಯಗಳ ಕುಟುಂಬಗಳು ಇನ್ನಿಲ್ಲದ ಸಮಸ್ಯೆಗಳನ್ನು ಅನುಭವಿಸುತ್ತಿವೆ ಇಂತಹ ಸಮುದಾಯಗಳ ಅಭಿವೃದ್ದಿಗೆ ಸರ್ಕಾರಗಳು ವಿಶೇಷ ಕಾಳಜಿ ವಹಿಸಿ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕಾರ್ಯಕ್ರಮಗಳನ್ನು ರೂಪಿಸಬೇಕು ಈ ಬಗ್ಗೆ ಜನಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಿ ಕೊಡುವಂತ ಅಭಿವೃದ್ಧಿ ಕುರಿತಾದ ವಾಗ್ದಾನಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಶ್ರಮಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಮಾಜಿ ನಿರ್ದೇಶಕ ಗೀರಿಶ್, ಮುಖಂಡರಾದ ಕಪಾಲಿಮೋಹನ್,ರಾಜಶೇಖರ್,ಕಪಾಲಿಮಂಜು,ರಾಮಲಿಂಗಪ್ಪ,ಮಂಜುನಾಥ್, ಮಾಡಿ ವೀರಣ್ಣಮಂಜು,ನಗರ್ತ ಮಹಿಳಾ ಸಂಘದ ಮುಖಂಡರಾದ ಅಮುದಾ,ಅನಿತಾ ಆಯೋಧ್ಯ ನಗರದ ನಾಮಧಾರಿ ಸಂಘದ ಸಂಚಾಲಕ ಪಾಳ್ಯಶ್ರೀನಿವಾಸಶೆಟ್ಟಿ,ಪುಟ್ಟರಾಜು,ನಂಬಿಹಳ್ಳಿ ರಮೇಶ್,ಗುರುಮೂರ್ತಿ, ಮುಂತಾದವರು ಇದ್ದರು.
Trending
- ಕರ್ನಾಟಕ ಮಾವು ಆಂಧ್ರ ನಿಷೇದಿಸಿರುವುದು ಒಕ್ಕೂಟ ವ್ಯವಸ್ಥೆಗೆ ಪೆಟ್ಟು ಸಿದ್ದರಾಮಯ್ಯ!
- ಶ್ರೀನಿವಾಸಪುರ:ಮಾವು ದರ ಕುಸಿತ,ಆಂಧ್ರದವರು ಬೇಡ ಅಂದ್ರಾ ಕರ್ನಾಟಕ ಮಾವನ್ನು!
- SRINIVASPUR ಮಾರುಕಟ್ಟೆಯಲ್ಲಿ ಮೋಸ ರೈತರಿಂದ ಲೋಕಾಯುಕ್ತರಿಗೆ ದೂರು
- ಮುಳಬಾಗಿಲು:ದಾಳಿಕೊರರ ಅತಿಕ್ರಮಣ ಕೃಷಿ ಸಂಸ್ಕೃತಿ ಮೇಲೂ ಪರಿಣಾಮ!
- ಶ್ರೀನಿವಾಸಪುರ ಅಭಿವೃದ್ಧಿಗೆ ಕೈಗಾರಿಕೆಗಳು ಸಹಕಾರಿ ವೆಂಕಟಶಿವಾರೆಡ್ಡಿ
- ಶ್ರೀನಿವಾಸಪುರ:ಮಾವು ಬೆಂಬಲ ಬೆಲೆಗೆ ಅಗ್ರಹಿಸಿ ರೈತರಿಂದ ರಸ್ತೆ ತಡೆ! ಬಂದ್ ಎಚ್ಚರಿಕೆ
- ಟೀನೇಜ್ ಗೆಳೆಯ ಗೆಳತಿಯರ “ನ ಲಜ್ಜಾಃ ನ ಭಯಂ” ಬಸ್ಸಿನಲ್ಲೆ ಅತಿರೇಕ!
- ಚಿಂತಾಮಣಿಗೂ ವಕ್ಕರಿಸಿದ ಕೊರೋನಾ! ಆತಂಕ ಬೇಡ
Sunday, June 15