ಶ್ರೀನಿವಾಸಪುರ:-ದೇವಾಲಯದಲ್ಲಿ ಪ್ರಸಾದ ಸೇವಿಸಿದ ಗ್ರಾಮದ ಎಳೆಯ ಮಕ್ಕಳು ವಯಸ್ಕರು ಸುಮಾರು 100 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದು ಇದರಲ್ಲಿ 19 ಮಕ್ಕಳು 10 ಮಂದಿ ಹಿರಿಯರು ಚಿಕಿತ್ಸೆ ಪಡೆಯಲು ಶ್ರೀನಿವಾಸಪುರ ಸಾರ್ವಜನಿಕ ಆಸ್ಪತ್ರೆ ದಾಖಲಾಗಿದ್ದಾರೆ.ಉಳಿದವರು ಶ್ರೀನಿವಾಸಪುರದ ಖಾಸಗಿ ಆಸ್ಪತ್ರೆ ಇನ್ನೂ ಕೆಲವರು ಕೋಲಾರದ ನರ್ಸಿಂಗ್ ಹೋಂಗಳಲ್ಲಿ ಚಿಕಿತ್ಸೆ ಪಡೆಯಲು ದಾಖಲಾಗಿರುತ್ತಾರೆ. ಇನ್ನೂಳಿದವರು ಚಿಕಿತ್ಸೆ ಪಡೆದುಕೊಂಡು ಊರಿಗೆ ವಾಪಸ್ಸು ಹೋಗಿರುವುದಾಗಿ ಹೇಳಲಾಗಿದೆ.ಅಸ್ವಸ್ಥರಾದವರು ಪ್ರಾಣಪಯದಿಂದ ಪಾರಾಗಿರುವುದಾಗಿ ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿದೆ
ತಾಲೂಕಿನ ಯಲ್ದೂರು ಹೋಬಳಿ ಲಕ್ಷ್ಮೀಸಾಗರ ಪಂಚಾಯಿತಿಯ ಬೀರಗಾನಹಳ್ಳಿಯಲ್ಲಿನ ಗಂಗಮ್ಮ ದೇವಾಲಯದಲ್ಲಿ ಗ್ರಾಮಸ್ಥರು ಕೂಡಿ ಹೊಸ ವರ್ಷ ಆಚರಣೆ ಮಾಡಿರುತ್ತಾರೆ ಈ ಸಂದರ್ಭದಲ್ಲಿ ದೇವಾಲಯದ ಆವರಣದಲ್ಲಿ ವಿಶೇಷ ಪೂಜೆ ಇತರೆ ಧಾರ್ಮಿಕ ಚಟುವಟಿಕೆಗಳು ಹಮ್ಮಿಕೊಂಡು ಇದರ ಸಂಭ್ರಮದಲ್ಲಿ ಸಂಜೆ ಗ್ರಾಮದ ಭಕ್ತರೊಬ್ಬರು ಮಾಡಿಸಿದ್ದ ಚಿತ್ರಾನ್ನ ಹಾಗೂ ಕೇಸರಿಬಾತ್ ಪ್ರಸಾದವನ್ನು ಹಂಚಲಾಗಿದೆ ಇದನ್ನು ಸೇವಿಸಿದ್ದ ಭಕ್ತರು, ತಡ ಸಂಜೆ ಫುಡ್ ಪಾಯಿಸನ್ ರಿಯಾಕ್ಷನ್ ಆಗಿದ್ದು ಒಬ್ಬೊಬ್ಬರಾಗಿ ಬೇದಿ ವಾಂತಿ ಮಾಡಿಕೊಳ್ಳಲು ಆರಂಭಿಸಿ ನಲುಗಿ ಹೋಗಿ ಆಸ್ಪತ್ರೆ ದಾರಿ ಹಿಡಿದಿರುತ್ತಾರೆ.
ಕರೆ ಸ್ವೀಕರಿಸದ ಆರೋಗ್ಯಾಧಿಕಾರಿಗಳು!
ಗ್ರಾಮಸ್ಥರ ಆರೋಗ್ಯ ಮಾಹಿತಿ ಪಡೆಯಲು vcsnewz.com ವರದಿಗಾರ ತಾಲೂಕು ಆರೋಗ್ಯಾಧಿಕಾರಿಗಳ ಮೊಬೈಲ್ ಪೋನಿಗೆ ಕರೆ ಮಾಡಿದರೆ ಕರೆ ಸ್ವೀಕರಿಸಲಿಲ್ಲ ಇದು ತಾಲೂಕು ಆರೋಗ್ಯಾಧಿಕಾರಿಗಳ ಸಾರ್ವಜನಿಕ ಸ್ಪಂದನೆ!
ಇನ್ಸಪೇಕ್ಟರ್ ರವಿಕುಮಾರ್ ರಾತ್ರಿ 11 ಗಂಟೆಯಾದರೂ ಗ್ರಾಮದಲ್ಲೆ ಮೊಕ್ಕಾಂ ಹೂಡಿದ್ದರು.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



